Latest Updates
-
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ?
ಶರದ್ ಪೂರ್ಣಿಮಾ 2021: ಸಂತೋಷ-ಸಂಪತ್ತು ವೃದ್ಧಿಗಾಗಿ ಲಕ್ಷ್ಮಿದೇವಿಯನ್ನು ಈ ರೀತಿ ಪೂಜಿಸಿ
ಇದೇ ಅಕ್ಟೋಬರ್ 19ರಂದು ಶರದ್ ಪೂರ್ಣಿಮಾ. ಪ್ರತಿ ತಿಂಗಳ ಹುಣ್ಣಿಮೆಯು ಮಂಗಳಕರವೆಂದು ಪರಿಗಣಿಸಲಾಗಿದ್ದರೂ, ವರ್ಷದ ಕೆಲವು ಹುಣ್ಣಿಮೆಗಳು ಅತ್ಯಂತ ಮಂಗಳಕರ ಮತ್ತು ಸಮೃದ್ಧವೆನಿಸಿಕೊಂಡಿವೆ. ಅಂತಹುಗಳಲ್ಲಿ ಒಂದು ಈ ಶರದ್ ಪೂರ್ಣಿಮಾ.
ಅಶ್ವಿನ್ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಪೂಜೆ ಹಾಗೂ ಚಂದ್ರನ ಪೂಜೆಗೆ ಪ್ರಾಶಸ್ತ್ಯವಾದ ಈ ಹುಣ್ಣಿಮೆಯನ್ನು ಶ್ರೀಮಂತ ಹುಣ್ಣಿಮೆಯೆಂದು ಪರಿಗಣಿಸಲಾಗಿದ್ದು, ಈ ದಿನ ಆಕಾಶದಿಂದ ಅಮೃತ ಮಳೆ ಬೀಳುವುದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುವುದು ಎಂದು ನಂಬಿಕೆಯಿದೆ. ಜತೆಗೆ ಚಳಿಗಾಲದ ಆರಂಭವನ್ನು ಈ ಹುಣ್ಣಿಮೆಯು ಸೂಚಿಸುತ್ತದೆ. ಇಷ್ಟು ಮಹತ್ವವಾಗಿರುವ ಈ ಈ ದಿನದ ಮಹತ್ವ, ಪೂಜಾ ವಿಧಾನ ಮತ್ತು ಶುಭ ಮುಹೂರ್ತಗಳ ಬಗ್ಗೆ ಇಲ್ಲಿ ನೋಡೋಣ.

ಶರದ್ ಪೂರ್ಣಿಮಾ 2021ರ ಶುಭ ಮುಹೂರ್ತ:
ಶರದ್ ಪೂರ್ಣಿಮಾ ದಿನಾಂಕ 2021 ರ ಅಕ್ಟೋಬರ್ 19, ಮಂಗಳವಾರ
ಪೂರ್ಣಿಮಾ ತಿಥಿ ಆರಂಭ: ಅಕ್ಟೋಬರ್ 19 ರಂದು ಸಂಜೆ 7 ಗಂಟೆಯಿಂದ
ಪೂರ್ಣಿಮಾ ತಿಥಿ ಅಂತ್ಯ: ಅಕ್ಟೋಬರ್ 20 ರಂದು ರಾತ್ರಿ 8.20 ರವರೆಗೆ

ಶರದ್ ಪೂರ್ಣಿಮಾ ಪೂಜಾವಿಧಾನ:
- ಶರದ್ ಪೂರ್ಣಿಮಾ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಇದು ಸಾಧ್ಯವಾಗದಿದ್ದರೆ, ಮನೆಯಲ್ಲಿ ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ.
- ಮರದ ಹಲಗೆ ಅಥವಾ ಪೀಠದ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹರಡಿ ಮತ್ತು ಗಂಗಾಜಲದಿಂದ ಆ ಸ್ಥಳವನ್ನು ಪವಿತ್ರಗೊಳಿಸಿ.
- ಈ ಪೀಠದ ಮೇಲೆ ಲಕ್ಷ್ಮಿ ದೇವಿಯ ವಿಗ್ರಹವನ್ನು ಸ್ಥಾಪಿಸಿ ಮತ್ತು ಕೆಂಪು ಬಟ್ಟೆಯಿಂದ ಅಲಂಕರಿಸಿ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕನ್ನು ಸಂಪತ್ತಿನ ವಲಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಈ ದಿಕ್ಕಿನಲ್ಲಿ ಲಕ್ಷ್ಮಿ ಆರಾಧನೆಯು ಉತ್ತಮವಾಗಿದೆ.
- ದೇವಿಗೆ ಧೂಪ, ದೀಪ, ನೈವೇದ್ಯ ಮತ್ತು ವೀಳ್ಯದೆಲೆ ಇತ್ಯಾದಿಗಳನ್ನು ಅರ್ಪಿಸಿ.
- ನಂತರ ಲಕ್ಷ್ಮಿ ದೇವಿಯನ್ನು ಧ್ಯಾನ ಮಾಡಬೇಕು ಮತ್ತು ಪೂಜಿಸಬೇಕು ಜೊತೆಗೆ ಲಕ್ಷ್ಮಿ ಚಾಲೀಸಾವನ್ನು ಪಠಿಸಬೇಕು.
- ಸಂಜೆ ವಿಷ್ಣುವನ್ನು ಪೂಜಿಸಿ ಮತ್ತು ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದರೊಂದಿಗೆ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ. ಅದರ ನಂತರ ಅಕ್ಕಿ ಮತ್ತು ಹಸುವಿನ ಹಾಲಿನಿಂದ ಪಾಯಸವನ್ನು ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡಿ. ಕೆಲವು ಸಮಯಗಳ ನಂತರ ಆ ಪಾಯಾಸವನ್ನು ತಂದು ಮನೆಯ ಸದಸ್ಯರಿಗೆ ಪ್ರಸಾದದ ರೂಪದಲ್ಲಿ ವಿತರಿಸಿ.
- ಈ ದಿನ ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ, ಇಲ್ಲದಿದ್ದರೆ ನೀವು ಹಣಕಾಸಿನ ತೊಂದರೆಗೆ ಸಿಲುಕಬಹುದು.
- ಹಣದ ವಹಿವಾಟುಗಳನ್ನು ಮಾಡಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ.
- ಈ ದಿನದಂದು ಬ್ರಹ್ಮಚರ್ಯವನ್ನು ಅನುಸರಿಸಬೇಕು, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತದೆ.
- ಸೂರ್ಯಾಸ್ತದ ಮೊದಲು ದಾನ ಮಾಡಬೇಕೇ ವಿನಃ ಸೂರ್ಯಾಸ್ತದ ನಂತರ ಮಾಡಿದರೆ ಬಡತನ ಬರುತ್ತದೆ.
- ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಹಾಗೆ ಮಾಡುವುದು ಅಶುಭವೆನಿಸುತ್ತದೆ.

ಲಕ್ಷ್ಮಿ ದೇವಿಯ ಮಂತ್ರ:
''ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ''
ಶರದ್ ಪೂರ್ಣಿಮಾ ಮಹತ್ವ:
ಪೌರಾಣಿಕ ನಂಬಿಕೆಗಳ ಪ್ರಕಾರ, ಶರದ್ ಪೂರ್ಣಿಮೆಯ ದಿನ, ಲಕ್ಷ್ಮಿ ದೇವಿಯು ಸಮುದ್ರ ಮಂಥನದಿಂದ ಜನಿಸಿದಳು ಎಂದು ನಂಬಿಕೆಯಿದೆ. ಆದ್ದರಿಂದ ಈ ದಿನ ಲಕ್ಷ್ಮಿ ದೇವಿಯು ಭೂಮಿಗೆ ಭೇಟಿ ನೀಡುತ್ತಾಳೆ ಮತ್ತು ರಾತ್ರಿ ಭಜನೆ ಮಾಡಿ, ಲಕ್ಷ್ಮಿ ದೇವಿಯನ್ನು ಆವಾಹನೆ ಮಾಡುವವರು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ.
ಈ ಹುಣ್ಣಿಮೆಯ ರಾತ್ರಿ, ಇಡೀ ಭೂಮಿಯು ಚಂದ್ರನ ಬೆಳಕಿನಲ್ಲಿ ತೇವವಾಗಿರುತ್ತದೆ ಮತ್ತು ಅಮೃತ ಮಳೆಯಾಗುತ್ತದೆ. ಈ ನಂಬಿಕೆಗಳ ಆಧಾರದ ಮೇಲೆ, ರಾತ್ರಿ ಚಂದ್ರನ ಬೆಳಕಿನಡಿಯಲ್ಲಿ ಖೀರ್ ಅನ್ನು ಇಡುವುದರಿಂದ, ಅದರಲ್ಲಿ ಅಮೃತವು ಸೇರಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.




Click it and Unblock the Notifications