Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಅಪ್ಪಿ-ತಪ್ಪಿಯೂ ತುಳಸಿ ಸುತ್ತ ಇವುಗಳನ್ನು ಇಡಬೇಡಿ, ಕೆಟ್ಟ ಕಾಲ ಶುರುವಾಗೋದು ಗ್ಯಾರಂಟಿ!
ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಇದು ಲಕ್ಷ್ಮಿಯ ವಾಸಸ್ಥಾನ ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಜನರು ಇದನ್ನು ತಮ್ಮ ಮನೆಗಳಲ್ಲಿ ನೆಡುವುದು. ಶಾಸ್ತ್ರಗಳ ಪ್ರಕಾರ ತುಳಸಿ ಗಿಡ ಹಸಿರಾಗಿರುವ ಮನೆಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಇರುತ್ತದೆ. ಅದೇ ರೀತಿ, ಧರ್ಮಗ್ರಂಥಗಳ ಪ್ರಕಾರ ಕೆಲವು ವಸ್ತುಗಳನ್ನು ತುಳಸಿಯ ಸುತ್ತ ಇಡುವುದರಿಂದ ಮನೆ-ಕುಟುಂಬಕ್ಕೆ ಕೆಟ್ಟ ಕಾಲ ಶುರುವಾಗುತ್ತದೆ. ಹಾಗಾದರೆ, ಅಂತಹ ವಸ್ತುಗಳಾವುವು ನೋಡೋಣ.
ತುಳಸಿಯ ಸುತ್ತ ಇಡಬಾರದ ವಸ್ತುಗಳನ್ನು ಈ ಕೆಳಗೆ ನೀಡಲಾಗಿದೆ:

ತುಳಸಿ ಹೀಗಾಗದಂತೆ ನೋಡಿಕೊಳ್ಳಿ:
ತುಳಸಿ ಗಿಡದ ಸುತ್ತಲಿನ ಪ್ರದೇಶವು ತುಂಬಾ ಸ್ವಚ್ಛವಾಗಿರಬೇಕು. ತುಳಸಿ ಒಣಗುತ್ತಿದ್ದರೆ ಅಥವಾ ಬಾಡುತ್ತಿದ್ದರೆ, ಅದು ಅಶುದ್ಧತೆಯ ಕಾರಣದಿಂದಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ತುಳಸಿಯ ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು.

ತುಳಸಿಯ ಸುತ್ತ ಇವುಗಳಿರಬಾರದು:
ತುಳಸಿಯ ಸುತ್ತ ಯಾವುದೇ ಪಾದರಕ್ಷೆ, ಪೊರಕೆ ಅಥವಾ ಕಸ ಇರಬಾರದು. ಇಂತಹ ವಸ್ತುಗಳೇನಾದರೂ ಕಂಡುಬಂದರೆ, ತಕ್ಷಣವೇ ಅದನ್ನು ತೆಗೆದುಹಾಕಿ. ಜೊತೆಗೆ ಇತರ ಹೂವುಗಳು ಮತ್ತು ಎಲೆಗಳ ಜೊತೆ ತುಳಸಿ ಗಿಡಗಳನ್ನು ನೆಡಬಾರದು. ವಾಸ್ತವವಾಗಿ, ತುಳಸಿ ಗಿಡವನ್ನು ನೆಟ್ಟ ಅದೇ ಕುಂಡದಲ್ಲಿ ಇನ್ನೊಂದು ಗಿಡವನ್ನು ನೆಡುವುದು ಸೂಕ್ತವಲ್ಲ.

ತುಳಸಿ ಚೆನ್ನಾಗಿ ಬೆಳೆಯಲು ಹೀಗೆ ಮಾಡಿ:
ತುಳಸಿ ಬೆಳೆಯಲು ನೀರು ಹಾಕುವುದು ಸಾಮಾನ್ಯ. ಇದರಿಂದ ತುಳಸಿ ಬೆಳೆಯುವುದು ನಿಜ. ಆದರೆ, ತುಳಸಿ ಸದಾ ಹಸಿರಾಗಿರಲು ತುಳಸಿಗೆ, ಹಾಲನ್ನು ಬೆರೆಸಿ ನೀರು ಹಾಕಿದರೆ ತುಳಸಿ ಹಸಿರಾಗುತ್ತದೆ.

ತುಳಸಿ ಆರಾಧನೆಯಲ್ಲಿ ಇದು ಬೇಡ:
ಅನೇಕ ಬಾರಿ ಜನರು ಸಂಜೆ ತುಳಸಿಯ ದೀಪವಿಟ್ಟು ನೀರು ಹಾಕುತ್ತಾರೆ. ಆದರೆ, ಸಂಜೆ ತುಳಸಿಗೆ ನೀರನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದಲ್ಲದೇ ತುಳಸಿ ಬಳಿ ನೀರು ತುಂಬಿದ ಪಾತ್ರೆ ಇಡಬಾರದು. ಹಾಗೆಯೇ ದೀಪವನ್ನು ಬೆಳಗಿದ ನಂತರ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಬೇಕು, ಏಕೆಂದರೆ ತುಳಸಿಯ ಕೆಳಗೆ ದೀಪ ನಂದುವುದು ಅಶುಭವೆಂದು ಪರಿಗಣಿಸಲಾಗಿದೆ.

ತುಳಸಿಗೆ ಚುನರಿಯ ಅಲಂಕಾರ:
ಮನೆಯಲ್ಲಿ ತುಳಸಿ ಗಿಡವನ್ನು ಇಡುವಾಗ ಅದಕ್ಕೆ ಚುನರಿಯನ್ನು ತೊಡಿಸಿ. ಒಮ್ಮೆ ತೊಡಿಸಿದ ಚುನರಿಯು ಹಳೆಯದಾದಾಗ, ಅದನ್ನು ಏಕಾದಶಿ ಅಥವಾ ಇನ್ನಾವುದೇ ಶುಭ ಮುಹೂರ್ತದಲ್ಲೇ ಬದಲಾಯಿಸಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

ನೀರೆರೆಯುವಾಗ ಇದನ್ನು ಗಮನಿಸಿ:
ಮಹಿಳೆಯರು ಸ್ನಾನದ ನಂತರ ಕೂದಲನ್ನು ಬಿಟ್ಟುಕೊಂಡು ತುಳಸಿ ನೀರನ್ನು ಹೆಚ್ಚಾಗಿ ಅರ್ಪಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಮುಡಿಯನ್ನು ಕಟ್ಟಿ ಹಣೆಗೆ ಸಿಂಧೂರ ಹಚ್ಚಿ ಮಾತ್ರ ತುಳಸಿಗೆ ನೀರನ್ನು ಅರ್ಪಿಸಬೇಕು.



Click it and Unblock the Notifications