Just In
- 32 min ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 1 hr ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
Don't Miss
- Movies ಇದಪ್ಪ ವರಸೆ ಅಂದರೆ ; ನಿಜ ಜೀವನದಲ್ಲಿ ಕಬೀರ್ ಸಿಂಗ್ ಆಗಿ ಬದಲಾದ ಶಾಹಿದ್ ಕಪೂರ್..!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿಕ್ಷಕರ ದಿನಾಚರಣೆ 2019 ವಿಶೇಷ: ಒಂದು ಸವಿ ನೆನಪು
ವಂದೇ ಮಾತರಂ ಪ್ರಾಥನೆ ಮುಗಿಸಿ ಶಾಲಾ ಕೊಠಡಿಯೊಳಗೆ ಅನಾಸಕ್ತಿಯಿಂದ ನಾನು ಮತ್ತು ಸ್ನೇಹಿತ ಸುನೀಲ ಪ್ರವೇಶಿಸಿದಾಗ ನಮ್ಮಿಬ್ಬರ ಕೈಗೆ ಒಂದೊಂದು ಬಿಂದಿಗೆ ಕೊಟ್ಟು ತೆಂಗಿನ ಮರಕ್ಕೆ ನೀರು ಹಾಕುವ ಕೆಲಸಕ್ಕೆ ಹಚ್ಚಿದಾಗ ನಮ್ಮಿಬ್ಬರಿಗೆ ಜೇನುಂಡೆ ತಿಂದಷ್ಟೇ ಖುಷಿ.
ಹನ್ನೆರಡು ತೆಂಗಿನ ಮರಕ್ಕೆ ನೀರು ಹಾಕಿ, ಶಾಲೆಯ ಬೇಲಿ ಆಚೆಗಿನ ಮನೆಯವರ ನೆಲ್ಲಿ ಕಾಯಿ ಮರಕ್ಕೆ ಹತ್ತಿ ಕಿಸೆತುಂಬಾ ನೆಲ್ಲಿಕಾಯಿ ತುಂಬಿಸಿಕೊಂಡು ಕ್ಲಾಸಿನೊಳಗೆ ಬಂದು ಕುಳಿತೆವು. ಎಲ್ಲಾ ಮಕ್ಕಳು ಶೇಷಮ್ಮ ಟೀಚರಿಗೆ ಕಾಪಿ ಪುಸ್ತಕ ತೋರಿಸುತ್ತಿದ್ದರು.
ನನ್ನ ಹೆಸರು ಕರೆದಾಗ ಬ್ಯಾಗಿನೊಳಗಿನಿಂದ ಎಷ್ಟೇ ಹುಡುಕಿದರೂ ಕಾಪಿ ಪುಸ್ತಕ ಸಿಗಲೇ ಇಲ್ಲ. ಪೆಚ್ಚು ಮೋರೆ ಹಾಕಿಕೊಂಡು ಟೀಚರ್ ಉಗ್ರ ಮುಖ ನೋಡಿದಾಗಲೇ ಅಳು ಬಂತು. ಮೇಜಿನ ಮೇಲಿಟ್ಟ ಒರಟು ಬೆತ್ತವನ್ನೇ ಭಯದಿಂದ ವಾರೆಗಣ್ಣಿನಿಂದ ನೋಡುತ್ತಿದ್ದೆ.
ನನ್ನನ್ನು ಎದುರಿಗೆ ಕರೆದವರೇ ನನ್ನ ಬ್ಯಾಗ್ ತರಿಸಿ ಅದನ್ನು ಮೇಜು ಮೇಲೆ ಸುರಿದರು. ಅದರಲ್ಲಿ ಕಾಗದದ ಉಂಡೆಗಳು, ಬಾಲಮಂಗಳ, ಚಿತ್ರಕಥೆಗಳು, ಮುರಿದ ಸ್ಲೇಟು, ವಿಶಿಲ್ ಎಲ್ಲವೂ ರಾಶಿ ಬಿದ್ದವು. ಇವನ ಬ್ಯಾಗಿನಲ್ಲಿ ಪಾಠ ಪುಸ್ತಕಕ್ಕಿಂತ ಕಸವೇ ಜಾಸ್ತಿ ಅನ್ನುತ ಕೈ ಮುಂದೆ ಚಾಚಲು ಹೇಳಿ ಬೆತ್ತ ಕೈಗೆತ್ತಿಕೊಂಡರು.
ಪೆಟ್ಟು ತಿಂದ ಮೇಲೆ ಸಿಂಬಳ ಸುರಿಸುತ್ತ ಅಳುತ್ತ ಕುಳಿತ ನನ್ನ ಬಳಿ ಬಂದ ಟೀಚರು ಸ್ಲೇಟಿನಲ್ಲಿ ದೊಡ್ಡದಾಗಿ ಅ ಆ ಇ ಈ ಬರೆದು ಬೆನ್ನು ಸವರಿದರು. ನಾನು ಅಳು ನಿಲ್ಲಿಸಿ ಆ ಅಕ್ಷರಗಳನ್ನು ದಪ್ಪ ಮಾಡುತ್ತ ಕುಳಿತೆ.
ಹೀಗೆ ಒಂದನೆ ತರಗತಿಯಲ್ಲಿ ಕಲಿತ ಅ ಆ ಇ ಈಯಿಂದ ಹಿಡಿದು ಬದುಕಿನ ಎಬಿಸಿಡಿ ಕಲಿಯುತ್ತಿರುವ ಇಲ್ಲಿನವರೆಗೆ ನನ್ನ ಜೀವನದಲ್ಲಿ ಹಲವು ಗುರುಗಳು ಬಂದಿದ್ದಾರೆ. ವಿದ್ಯಾ ಬುದ್ದಿ ಕಲಿಸಿದ, ಕಲಿಸುವ ಗುರುಗಳಿಗೆಲ್ಲ ಶಿಕ್ಷಕರ ದಿನದ ಶುಭಾಶಯಗಳು.