Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಶಿಕ್ಷಕರ ದಿನಾಚರಣೆ 2019 ವಿಶೇಷ: ಒಂದು ಸವಿ ನೆನಪು

ವಂದೇ ಮಾತರಂ ಪ್ರಾಥನೆ ಮುಗಿಸಿ ಶಾಲಾ ಕೊಠಡಿಯೊಳಗೆ ಅನಾಸಕ್ತಿಯಿಂದ ನಾನು ಮತ್ತು ಸ್ನೇಹಿತ ಸುನೀಲ ಪ್ರವೇಶಿಸಿದಾಗ ನಮ್ಮಿಬ್ಬರ ಕೈಗೆ ಒಂದೊಂದು ಬಿಂದಿಗೆ ಕೊಟ್ಟು ತೆಂಗಿನ ಮರಕ್ಕೆ ನೀರು ಹಾಕುವ ಕೆಲಸಕ್ಕೆ ಹಚ್ಚಿದಾಗ ನಮ್ಮಿಬ್ಬರಿಗೆ ಜೇನುಂಡೆ ತಿಂದಷ್ಟೇ ಖುಷಿ.
ಹನ್ನೆರಡು ತೆಂಗಿನ ಮರಕ್ಕೆ ನೀರು ಹಾಕಿ, ಶಾಲೆಯ ಬೇಲಿ ಆಚೆಗಿನ ಮನೆಯವರ ನೆಲ್ಲಿ ಕಾಯಿ ಮರಕ್ಕೆ ಹತ್ತಿ ಕಿಸೆತುಂಬಾ ನೆಲ್ಲಿಕಾಯಿ ತುಂಬಿಸಿಕೊಂಡು ಕ್ಲಾಸಿನೊಳಗೆ ಬಂದು ಕುಳಿತೆವು. ಎಲ್ಲಾ ಮಕ್ಕಳು ಶೇಷಮ್ಮ ಟೀಚರಿಗೆ ಕಾಪಿ ಪುಸ್ತಕ ತೋರಿಸುತ್ತಿದ್ದರು.
ನನ್ನ ಹೆಸರು ಕರೆದಾಗ ಬ್ಯಾಗಿನೊಳಗಿನಿಂದ ಎಷ್ಟೇ ಹುಡುಕಿದರೂ ಕಾಪಿ ಪುಸ್ತಕ ಸಿಗಲೇ ಇಲ್ಲ. ಪೆಚ್ಚು ಮೋರೆ ಹಾಕಿಕೊಂಡು ಟೀಚರ್ ಉಗ್ರ ಮುಖ ನೋಡಿದಾಗಲೇ ಅಳು ಬಂತು. ಮೇಜಿನ ಮೇಲಿಟ್ಟ ಒರಟು ಬೆತ್ತವನ್ನೇ ಭಯದಿಂದ ವಾರೆಗಣ್ಣಿನಿಂದ ನೋಡುತ್ತಿದ್ದೆ.
ನನ್ನನ್ನು ಎದುರಿಗೆ ಕರೆದವರೇ ನನ್ನ ಬ್ಯಾಗ್ ತರಿಸಿ ಅದನ್ನು ಮೇಜು ಮೇಲೆ ಸುರಿದರು. ಅದರಲ್ಲಿ ಕಾಗದದ ಉಂಡೆಗಳು, ಬಾಲಮಂಗಳ, ಚಿತ್ರಕಥೆಗಳು, ಮುರಿದ ಸ್ಲೇಟು, ವಿಶಿಲ್ ಎಲ್ಲವೂ ರಾಶಿ ಬಿದ್ದವು. ಇವನ ಬ್ಯಾಗಿನಲ್ಲಿ ಪಾಠ ಪುಸ್ತಕಕ್ಕಿಂತ ಕಸವೇ ಜಾಸ್ತಿ ಅನ್ನುತ ಕೈ ಮುಂದೆ ಚಾಚಲು ಹೇಳಿ ಬೆತ್ತ ಕೈಗೆತ್ತಿಕೊಂಡರು.
ಪೆಟ್ಟು ತಿಂದ ಮೇಲೆ ಸಿಂಬಳ ಸುರಿಸುತ್ತ ಅಳುತ್ತ ಕುಳಿತ ನನ್ನ ಬಳಿ ಬಂದ ಟೀಚರು ಸ್ಲೇಟಿನಲ್ಲಿ ದೊಡ್ಡದಾಗಿ ಅ ಆ ಇ ಈ ಬರೆದು ಬೆನ್ನು ಸವರಿದರು. ನಾನು ಅಳು ನಿಲ್ಲಿಸಿ ಆ ಅಕ್ಷರಗಳನ್ನು ದಪ್ಪ ಮಾಡುತ್ತ ಕುಳಿತೆ.
ಹೀಗೆ ಒಂದನೆ ತರಗತಿಯಲ್ಲಿ ಕಲಿತ ಅ ಆ ಇ ಈಯಿಂದ ಹಿಡಿದು ಬದುಕಿನ ಎಬಿಸಿಡಿ ಕಲಿಯುತ್ತಿರುವ ಇಲ್ಲಿನವರೆಗೆ ನನ್ನ ಜೀವನದಲ್ಲಿ ಹಲವು ಗುರುಗಳು ಬಂದಿದ್ದಾರೆ. ವಿದ್ಯಾ ಬುದ್ದಿ ಕಲಿಸಿದ, ಕಲಿಸುವ ಗುರುಗಳಿಗೆಲ್ಲ ಶಿಕ್ಷಕರ ದಿನದ ಶುಭಾಶಯಗಳು.



Click it and Unblock the Notifications












