Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕೊಡಗಿನಲ್ಲಿಂದು ಹುತ್ತರಿ ಹಬ್ಬದ ಸಡಗರ
ಇಂದು ಕೊಡಗಿನಲ್ಲಿ ಹುತ್ತರಿ/ಪುತ್ತರಿ ಹಬ್ಬ. ಕೊಡವ ಭಾಷೆಯಲ್ಲಿ ‘ಪುದಿಯ ಅರಿ' ಎಂದರೆ ಹೊಸ ಅಕ್ಕಿ ಎಂದರ್ಥ. ಈ ದಿನ ರಾತ್ರಿ ಗದ್ದೆಯಿಂದ ಕದಿರು ತಂದು ಆ ಹೊಸ ಅಕ್ಕಿಯಿಂದ ತಂಬಿಟ್ಟು, ಪಾಯಸವನ್ನು ತಯಾರಿಸಲಾಗುವುದು. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿಯೆಂದು ಈ ಹಬ್ಬವನ್ನು ಆಚರಿಸಲಾಗುವುದು. ಈ ಸಮಯ ಕದಿರು ತರಲು ಸೂಕ್ತ ಕಾಲವೆಂದು ಭಾವಿಸಲಾಗಿದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯೆಂದು ಈ ಹಬ್ಬವನ್ನು ಆಚರಿಸುತ್ತಾರೆ.
ಕದಿರು ತೆಗೆಯಲು ತೀರ್ಮಾನಿಸಿದ ದಿನ ಮನೆಮಂದಿಯೆಲ್ಲಾ ಗದ್ದೆಗೆ ಬರುತ್ತಾರೆ. ಕೊಡವರಲ್ಲಿ ಐನ್ ಮನೆ ಅಂತ ಇರುತ್ತದೆ. ಕುಟುಂಬದ ಪ್ರತಿ ಸದಸ್ಯನೂ ಈ ಹಬ್ಬದಂದು ಐನ್ ಮನೆಗೆ ಬರಲೇಬೇಕು. ದೂರ ಮೇಯಲು ಬಿಟ್ಟ ದನ-ಕರುಗಳು ಕೂಡ ಮನೆಯಲ್ಲಿರಬೇಕೆಂಬ ಕಟ್ಟಳೆ ಇದೆ.

ಈ ಹಬ್ಬದಲ್ಲಿ ಮೊದಲು ಇಗ್ಗುತ್ತತ್ತಪ್ಪ ದೇವಾಸ್ಥಾನದ ಗದ್ದೆಯಲ್ಲಿ 7.45ಕ್ಕೆ ಪೂಜೆಯನ್ನು ಪ್ರಾರಂಭಿಸುತ್ತಾರೆ. ಈ ಸಮಯಕ್ಕೆ ಮನೆಮಂದಿಯೆಲ್ಲಾ ಸೇರಿಕೊಂಡು ತಮ್ಮ ಗದ್ದೆಗೆ ಬರುತ್ತಾರೆ. ಮನೆಯವರಲ್ಲಿ ಒಬ್ಬ ಒಬ್ಬ ಕುತ್ತಿ ಮತ್ತೊಬ್ಬ ಕೋವಿ ಹಿಡಿದಿರುತ್ತಾನೆ. ಅವರಲ್ಲಿ ಕುತ್ತಿ ತೆಗೆದವನು ಬೆಳೆಯನ್ನು ಪೂಜಿಸಿ "ಪೊಲಿ ಪೊಲಿ ದೇವಾ!" ಎಂದು ಗಟ್ಟಿಯಾಗಿ ಪ್ರಾರ್ಥಿಸುತ್ತಾನೆ. ಆಗ ಕೋವಿಯನ್ನೆತ್ತಿಕೊಂಡವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುವನು. ಆಗ ಗದ್ದೆಯಲ್ಲಿ ನೆರೆದವರೆಲ್ಲರೂ "ಪೊಲಿ ಪೊಲಿ ದೇವಾ!" ಎಂದು ಉಚ್ಚ ಕಂಠದಲ್ಲಿ ಹೇಳುತ್ತಾರೆ.
ಕುತ್ತಿಯವನು ಮೊದಲು ಪೈರನ್ನು ಕತ್ತರಿಸಿ ಪಕ್ಕದಲ್ಲಿರುವವನಿಗೆ ಕೊಡುತ್ತಾನೆ, ನಂತರ ಅಲ್ಲಿ ನೆರೆವರಿಗೆಲ್ಲಾ ಕೊಡುತ್ತಾರೆ. ಈ ಸಮಯದಲ್ಲಿ ಗುಂಡಿನ ಶಬ್ದ, ಪಟಾಕಿ ಶಬ್ದ, ಜನರು 'ಪೊಲಿ ಪೊಲಿ ದೇವಾ' ಎಂದು ಹೇಳುವುದು ಇವುಗಳಿಂದ ಹಬ್ಬದ ಸಡಗರ ಮತ್ತಷ್ಟು ಹೆಚ್ಚಾಗುತ್ತದೆ.
ನಂತರ ಹೊಸ ಅಕ್ಕಿಯ ಕಾಳುಗಳನ್ನು ಬಿಡಿಸಿ ಅದನ್ನು ಅಕ್ಕಿ ಪಾಯಸ ಮಾಡುವಾಗ ಹಾಕಿ ತಯಾರಿಸಲಾಗುವುದ. ಈ ಹಬ್ಬಕ್ಕೆ ಅಕ್ಕಿ ಪಾಯಸ, ತಂಬಿಟ್ಟು ಪ್ರಮುಖವಾದ ಅಡುಗೆಯಾಗಿದೆ. ಈ ಹಬ್ಬದಲ್ಲಿ ಕೆಲವರು ತಂಬಿಟ್ಟನ್ನು ಮನೆಯಿಂದ ಮಾಡಿ ತಂದು ಪಾಯಸವನ್ನು ಗದ್ದೆ ಬದಿಯಲ್ಲಿ ಬೆಂಕಿ ಹಾಕಿ ಪಾಯಸ ಮಾಡಿ ಅಲ್ಲಿದ್ದವರಿಗೆಲ್ಲಾ ಹಂಚುತ್ತಾರೆ.
ನಂತರ ಕಿತ್ತ ಪೈರನ್ನು ತಂದು ಪ್ರತಿಯೊಂದು ಮನೆಯ ಮುಂದೆ ಕಟ್ಟುತ್ತಾರೆ. ಈ ರೀತಿ ಕಟ್ಟಿದರೆ ಮನೆಯ ಐಶ್ವರ್ಯ ಹೆಚ್ಚಾಗುವುದು ಎಂಬ ನಂಬಿಕೆಯಿಂದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಯನ್ನು ಪ್ರಾರ್ಥಿಸುತ್ತಾ ಇದನ್ನು ಕಟ್ಟುತ್ತಾರೆ.
ಈ ಹಬ್ಬದಲ್ಲಿ ಪಾಯಸ, ತಂಬಿಟ್ಟು, ಕಜ್ಜಾಯ ಈ ರೀತಿಯ ಅಡುಗೆಯ ಜೊತೆಗೆ ಹುತ್ತರಿ ಗೆಣಸು ಕೂಡ ಇರುತ್ತದೆ. ಈ ಹಬ್ಬದ ನಂತರವೇ ಬೇಳೆ ಕುಯ್ಯುವ ಕೆಲಸವನ್ನು ಪ್ರಾರಂಭಿಸುತ್ತಾರೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಕುಯ್ದು ಮನೆಗೆ ತರುವ ಸಮಯವಾಯಿತು ಅನ್ನುವ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲಾಗುವುದು.



Click it and Unblock the Notifications











