Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕರ ಸಂಕ್ರಾಂತಿ 2023-ಸೂರ್ಯದೇವನನ್ನು ಒಲಿಸಿಕೊಳ್ಳಲು ಕೆಲವು ಅಮೂಲ್ಯ ಸಲಹೆಗಳು
ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ಜನವರಿ ಹದಿನಾಲ್ಕರಂದು ಆಚರಿಸಲಾಗುತ್ತದೆ. ಆದರೆ ಈ ವರ್ಷ ಈ ಹಬ್ಬ ಜನವರಿ ಹದಿನೈದರಂದು ಆಚರಿಸಲಾಗುವುದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗುವಾಗ ಈ ಹಬ್ಬ ಆಗಮಿಸುತ್ತದೆ. ಈ ವರ್ಷ ಜನವರಿ ಹದಿನಾಲ್ಕರ ಸಂಜೆ ಏಳು ಗಂಟೆ ಐವತ್ತು ನಿಮಿಷಕ್ಕೆ ಸರಿಯಾಗಿ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ಈ ಸಂದರ್ಭ ಅಂದಿನ ದಿನದ ಅವಧಿ ಕಳೆದ ಬರುವ ಕಾರಣ ಹಾಗೂ ಹಿಂದೂ ಧರ್ಮದಲ್ಲಿ ಸೂರ್ಯನ ಚಲನೆಯನ್ನು ಆಧರಿಸಿದ ವೇಳಾಪಟ್ಟಿಯನ್ನು ಅನುಸರಿಸುವ ಕಾರಣ ಸೂರ್ಯಾಸ್ತದ ಬಳಿಕ ಎದುರಾಗುವ ಸಂದರ್ಭಗಳನ್ನು ಮರುದಿನ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಈ ವರ್ಷ ಜನವರಿ ಹದಿನೈದರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಸೂರ್ಯನನ್ನು ಆರಾಧಿಸುವ ಮೂಲಕ ಸೂರ್ಯದೇವನ ಕೃಪೆಯನ್ನು ಪಡೆಯಬಹುದು ಎಂಬ ನಂಬಿಕೆ ಈ ದಿನವನ್ನು ಪವಿತ್ರವನ್ನಾಗಿಸಿದೆ.
ಸೂರ್ಯದೇವನಿಗೆ ಕಾಣಿಕೆ ಎಂದರೆ ತುಂಬಾ ಇಷ್ಟ. ಈ ದಿನ ಬಡವರಿಗೆ ಚಳಿಯಿಂದ ರಕ್ಷಣೆ ಪಡೆಯಲು ಉಣ್ಣೆಯ ಬಟ್ಟೆಗಳು ಹಾಗೂ ಇತರ ವಸ್ತುಗಳನ್ನು ನೀಡುವ ಮೂಲಕ ಸೂರ್ಯದೇವನ ಕೃಪಗೆ ಒಳಗಾಗಬಹುದು. ಇದರ ಹೊರತಾಗಿ, ಈ ದಿನ ಸೂರ್ಯದೇವನ ಕೃಪೆಗೆ ಒಳಗಾಗಲು ಅನುಸರಿಸಬಹುದಾದ ಇತರ ಸಲಹೆಗಳನ್ನು ನೀಡಲಾಗಿದೆ. ಬನ್ನಿ, ಇವು ಯಾವುವು ಎಂದು ನೋಡೋಣ....

ಜಲತರ್ಪಣ
ಸೂರ್ಯದೇವನನ್ನು ಒಲಿಸಿಕೊಳ್ಳಲು ಯಾವುದೇ ದಿನದಲ್ಲಿ ಜಲವನ್ನು ಅರ್ಪಿಸಬಹುದಾದರೂ ಮಕರ ಸಂಕ್ರಾಂತಿಯಂದು ಜಲ ಅರ್ಪಿಸುವುದು ಒಂದು ಅತ್ಯುತ್ತಮ ವಿಧಾನವಾಗಿದೆ. ಈ ದಿನ ಸೂರ್ಯದೇವನಿಗೆ ಜಲವನ್ನು ಅರ್ಪಿಸುವ ಮೂಲಕ ಸೂರ್ಯದೇವನ ಆಶೀರ್ವಾದ ಪಡೆದು ಯಶಸ್ಸು ಪಡೆಯಬಹುದು.

ಸೂರ್ಯ ಯಂತ್ರ
ಸೂರ್ಯ ಯಂತ್ರವನ್ನು ಧರಿಸಿಕೊಳ್ಳಲು ಮಕ್ರ ಸಂಗ್ರಾಂತಿ ಅತ್ಯುತ್ತಮ ದಿನವಾಗಿದೆ. ಇದೊಂದು ತಾಮ್ರದ ಪದಕವಾಗಿದೆ ಹಾಗೂ ಇದರ ಮೇಲೆ ಸೂರ್ಯದೇವನ ಮುಖದ ಚಿತ್ರವಿರುತ್ತದೆ. ಈ ಪದಕವನ್ನು ಕೆಂಪು ದಾರದ ಮೂಲಕ ಕುತ್ತಿಗೆಯಲ್ಲಿ ಧರಿಸಿ ಕೊಂಡರೆ ಈ ದಿನ ಸೂರ್ಯದೇವನ ಸ್ಥಾನ ಗ್ರಹಗಳ ನಡುವೆ ಅತ್ಯಂತ ಸೂಕ್ತ ಸ್ಥಳದಲ್ಲಿದ್ದು ಗರಿಷ್ಟ ಪ್ರಯೋಜನ ದೊರಕಲಿದೆ. ಅಲ್ಲದೇ ಯಾರ ಪಂಚಾಂಗದಲ್ಲಿ ಸೂರ್ಯನ ಸ್ಥಾನ ಸೂಕ್ತ ಸ್ಥಾನದಲ್ಲಿರದ ವ್ಯಕ್ತಿಗಳಿಗೆ ಈ ಪದಕ ಅತಿ ಹೆಚ್ಚಿನ ಪ್ರಯೋಜನ ಒದಗಿಸಲಿದೆ. ಅಲ್ಲದೇ ಸಾಲಭಾರ ಮತ್ತು ಕಣ್ಣು ಹಾಗೂ ತ್ವಚೆಯ ತೊಂದರೆ ಇರುವ ವ್ಯಕ್ತಿಗಳಿಗೂ ಶೀಘ್ರವೇ ಪರಿಹಾರ ದೊರಕಲಿದೆ.

ಕೇಸರಿ ತಿಲಕ
ಮಕರ ಸಂಕ್ರಾಂತಿಯಂದು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಬೇಕು. ಬಳಿಕ ಸೂರ್ಯದೇವನನ್ನು ಪೂಜಿಸಿ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಕೊಂಚ ಕೇಸರಿ ಮತ್ತು ಗುಲಾಬಿನೀರನ್ನು ಬೆರೆಸಿ ಈ ಮಿಶ್ರಣವನ್ನು ಹಣೆಗೆ ಧರಿಸಿ ಕೊಳ್ಳಬೇಕು. ಈ ತಿಲಕವನ್ನು ಸಂರಕ್ಷಿಸಿಕೊಂಡು ಮುಂದಿನ ದಿನಗಳಲ್ಲಿ ನಿತ್ಯವೂ ಧರಿಸಿದರೆ ಇನ್ನೂ ಉತ್ತಮ. ಈ ಮೂಲಕ ಉತ್ತಮ ಉದ್ಯೋಗ ಹಾಗೂ ಬಡ್ತಿ ಶೀಘ್ರವೇ ಒಲಿಯುತ್ತದೆ. ವಿಶೇಷವಾಗಿ ಉದ್ಯೋಗದ ಸಂದರ್ಶನಕ್ಕೆ ಹೋಗುವವರು ಈ ತಿಲಕ ಧರಿಸಿದರೆ ಹೆಚ್ಚು ಪ್ರಯೋಜನವಾಗಲಿದೆ.

ಆದಿತ್ಯ ಹೃದಯ ಸ್ತೋತ್ರ
ಮಕರ ಸಂಕ್ರಾಂತಿಯ ದಿನದಂದು ಪ್ರಾರಂಭಿಸಿ ಮುಂದಿನ ನೂರಾ ಒಂದು ದಿನಗಳವರೆಗೆ ಸತತವಾಗಿ ಪ್ರತಿದಿನವೂ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದು ಉತ್ತಮ ಅಭ್ಯಾಸವಾಗಿದೆ. ಈ ಮೂಲಕ ಸಾಮಾಜಿಕ ಪ್ರತಿಷ್ಥೆ ಹಾಗೂ ಗೌರವ ಪ್ರಾಪ್ತವಾಗುತ್ತದೆ. ಜೊತೆಗೇ ಸೂರ್ಯದೇವನ ಅನುಗ್ರಹವೂ ದೊರಕಿ ಹೆಚ್ಚಿನ ಸಮೃದ್ದಿಯೂ ದೊರಕುತ್ತದೆ.



Click it and Unblock the Notifications