Just In
- 8 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 10 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೀತಾ ನವಮಿ 2022: ಸೀತಾ ದೇವಿ ಕುರಿತ ಆಸಕ್ತಿಕರ ಸಂಗತಿಗಳು
ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದ ಸೀತೆ ಸಾಕಷ್ಟು ವಿಚಾರಗಳಲ್ಲಿ ಇಂದಿನ ಮಹಿಳೆಗೆ ಮಾದರಿ. ಸೀತಾ ಮಾತೆಯ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ, ಶುದ್ಧತೆ, ಸಹನೆ, ವಿನಯತೆ ಮತ್ತು ಪತಿಭಕ್ತಿಯು ಜಗತ್ತಿಗೆ ಸಂದೇಶ ಸಾರುವ ಧರ್ಮವಾಗಿದೆ. ಜನಕ ರಾಜನ ದತ್ತುಪುತ್ರಿ ಸೀತಾ ಮಾತೆ ತನ್ನ ಸಹನೆ ಮತ್ತು ಪತಿ ಶ್ರೀರಾಮನ ಕಡೆಗಿನ ಅದಮ್ಯ ಒಲವಿನಿಂದಲೇ ಲೋಕಮಾತೆಯಾಗಿ ಹೆಸರುಗಳಿಸಿದವಳು.
ಇಂಥಾ ಲೋಕಮಾತೆ ಸೀತಾ ದೇವಿಯ ಸೀತಾ ನವಮಿ 2022ರಲ್ಲಿ ಮೇ 9ರಂದು ಅಂದರೆ ಸೋಮವಾರ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಸೀತಾ ದೇವಿ ಕುರಿತು ನೀವು ಈವರೆಗೂ ತಿಳಿದಿರದ ಕೆಲವು ಸತ್ಯಸಂಗತಿಗಳನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ:
1. ಸೀತಾ ದೇವಿ ಜನನ
* ಸೀತಾ ದೇವಿಯು ವೈಶಾಖ ತಿಂಗಳ ಶುಕ್ಲ ಪಕ್ಷದ ನವಮಿ ದಿನದಂದು ಜನಿಸಿದಳು.
* ಸೀತಾ ಮಾತೆಯ ಹುಟ್ಟಿದ ಸ್ಥಳದ ಕುರಿತು ಸಾಕಷ್ಟು ವದಂತಿಗಳಿವೆ. ನೇಪಾಳದ ದಕ್ಷಿಣದಲ್ಲಿರುವ ಮಿಥಿಲಾದ ಜಾನಕಪುರ ಆಕೆಯ ಜನ್ಮಸ್ಥಳ ಎಂಬುದಾಗಿ ಕೆಲವರು ಹೇಳಿದರೆ, ಬಿಹಾರದಲ್ಲಿರುವ ಸೀತಾಮರಾಹಿ ಎಂಬುದಾಗಿ ಇನ್ನು ಕೆಲವರು ಹೇಳುತ್ತಾರೆ.
2. ಸೀತೆ ಭೂತಾಯಿಯ ಮಗಳು
* ಸೀತಾ ಎಂಬ ಪದವು ಸಂಸ್ಕೃತದಿಂದ ವಿಭಜನೆಗೊಂಡಿದ್ದು, ತನ್ನ ತಂದೆಗೆ ಭೂಮಿಯನ್ನು ಉಳುತ್ತಿರುವಾಗ ದೊರಕಿದ ಮಗಳಾಗಿದ್ದಾಳೆ ಸೀತೆ. ಭೂಮಿಯ ಫಲವತ್ತತೆಯ ಸಂಕೇತವಾಗಿ ಆಕೆಯನ್ನು ಬಣ್ಣಿಸಲಾಗಿದೆ.
* ಭೂ ತಾಯಿಯ ಮಗಳು ಎಂಬುದಾಗಿ ಕೂಡ ಸೀತೆ ಪುರಾಣದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ, ಆದ್ದರಿಂದ ಭೂಮಿಜೆ ಎಂಬ ಹೆಸರೂ ಕೂಡ ಆಕೆಗಿದೆ. ತನ್ನ ಪತಿ ಶ್ರೀರಾಮನೊಂದಿಗೆ ಆಕೆ ವನವಾಸವನ್ನು ಅನುಭವಿಸುತ್ತಿದ್ದಾಗ "ವೈದೇಹಿ" ಎಂಬುದಾಗಿ ಕೂಡ ಆಕೆಯನ್ನು ಕರೆದಿದ್ದಾರೆ.
* ಮಾರ್ಗಶೀರ್ಷ ತಿಂಗಳ ಶುಕ್ಲ ಪಕ್ಷದ ಐದನೇ ದಿನದಂದು ಶ್ರೀ ರಾಮ ಮತ್ತು ಸೀತಾ ಮಾತೆ ವಿವಾಹವಾದರು ಎಂದು ತುಳಸಿದಾಸರು ಬರೆದಿದ್ದಾರೆ. ಆದರೆ ವಾಲ್ಮೀಕಿ ರಾಮಾಯಣದ ಪ್ರಕಾರ, ಸೀತಾ ದೇವಿಯು ಸ್ವಯಂವರಕ್ಕಿಂತ ಮದುವೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ. ಇದರ ಪ್ರಕಾರ, ಅವರು ಕೇವಲ 6 ವರ್ಷ ಚಿಕ್ಕವರಿದ್ದಾಗಲೇ ವಿವಾಹವಾದರೂ ಎಂದು ಹೇಳಲಾಗುತ್ತದೆ.
3. ಸೀತೆ ತಂದೆ ಮನೆಗೆ ಏಕೆ ಹೋಗಲಿಲ್ಲ
* ಸೀತಾ ದೇವಿಯು ಕೇವಲ 18ನೇ ವಯಸ್ಸಿನಲ್ಲಿ ಶ್ರೀರಾಮನೊಂದಿಗೆ ವನವಾಸಕ್ಕೆ ತೆರಳುತ್ತಾಳೆ ಎಂದು ಹೇಳಲಾಗಿದೆ. ತಾಯಿ ಸೀತೆ ಮದುವೆಯ ನಂತರ ಎಂದಿಗೂ ತನ್ನ ತಾಯಿಯ ಮನೆಯಾದ ಜಾನಕಪುರಕ್ಕೆ ಹೋಗಲಿಲ್ಲ. ವನವಾಸಕ್ಕೆ ತೆರಳುವ ಮೊದಲು ತಂದೆ ಜನಕ ಮಹಾರಾಜನು ಸೀತಾ ದೇವಿಯನ್ನು ಜಾನಕಪುರಕ್ಕೆ ಬರುವಂತೆ ಕೇಳಿಕೊಂಡರು. ಆದರೆ, ಸೀತೆ ನಾನು ನನ್ನ ಪತಿ ಧರ್ಮವನ್ನು ಬಿಟ್ಟು ಎಲ್ಲಿಗೂ ಬರುವುದಿಲ್ಲವೆಂದು ಹೇಳಿ ಪತಿಯೊಂದಿಗೆ ಕಾಡಿಗೆ ತೆರಳುತ್ತಾಳೆ.
* ವಾಲ್ಮೀಕಿ ರಾಮಾಯಣದ ಪ್ರಕಾರ, ರಾವಣನು ತಾಯಿ ಸೀತೆಯನ್ನು ಚಿನ್ನದಿಂದ ಮಾಡಿದ ದೈವಿಕ ರಥದಲ್ಲಿ ಕುಳಿಸಿಕೊಂಡು ಅಪಹರಿಸಿದನು ಎಂದು ಉಲ್ಲೇಖ ಮಾಡಿದ್ದರೆ. ಆದರೆ ತುಳಸಿದಾಸರ ರಾಮಚರಿತ ಮಾನಸದ ಪ್ರಕಾರ ರಾವಣನು ಸೀತಾ ದೇವಿಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿದನು ಎಂದು ಉಲ್ಲೇಖಿಸಲಾಗಿದೆ.
4. ಸೀತೆ ವೇದಾವತಿಯ ಪುನರ್ಜನ್ಮ
* ರಾಮಾಯಣದ ಕೆಲವು ಆವೃತ್ತಿಗಳು ಸೀತೆ ವೇದಾವತಿಯ ಪುನರ್ಜನ್ಮ ಎಂದು ಸೂಚಿಸುತ್ತವೆ. ರಾವಣನು ವೇದಾವತಿಗೆ ಕಿರುಕುಳ ನೀಡಲು ಪ್ರಯತ್ನಿಸಿದನು ಮತ್ತು ಅವಳು ವಿಷ್ಣುವಿನ ಪತ್ನಿಯಾಗಲು ತಪಸ್ಸು ಮಾಡುತ್ತಿದ್ದಾಗ ರಾವಣನ ವಿಮೋಚನೆಯನ್ನು ಮೀರಿ ಅವಳ ಪರಿಶುದ್ಧತೆಯು ಹಾಳಾಗಿತು. ವೇದಾವತಿಯು ರಾವಣನ ಕಾಮದಿಂದ ಪಾರಾಗಲು ಚಿತೆಗೆ ಅಗ್ನಿಸ್ಪರ್ಶ ಮಾಡಿದಳು, ಇನ್ನೊಂದು ಯುಗದಲ್ಲಿ ಹಿಂತಿರುಗಿ ರಾವಣನ ವಿನಾಶಕ್ಕೆ ಕಾರಣವಾಗುವುದಾಗಿ ಪ್ರತಿಜ್ಞೆ ಮಾಡಿದಳು. ಅವಳು ಸೀತೆಯಾಗಿ ಮರುಜನ್ಮ ಪಡೆದಳು.
* ರಾವಣನು ಸೀತಾ ದೇವಿಯನ್ನು ಅಪಹರಿಸಿಕೊಂಡು ಹೋಗಿ ಲಂಕಾಗೆ ಕರೆದೊಯ್ಯುತ್ತಾನೆ. ಆ ನಂತರ ಜಾನಕಿ ಒಟ್ಟು 435 ದಿನಗಳ ಕಾಲ ಲಂಕಾದಲ್ಲಿ ಇರಬೇಕಾಯಿತು. ಸೀತಾ ದೇವಿಯು ಲಂಕಾದಿಂದ ಹಿಂದಿರುಗಿದಾಗ, ಅವಳಿಗೆ 33 ವರ್ಷ. ಆದರೆ ಇಲ್ಲಿ ಅಚ್ಚರಿಯ ವಿಷಯವೇನೆಂದರೆ ರಾವಣ ಸೀತೆಯನ್ನು ಅಪಹರಿಸಿಕೊಂಡು ಲಂಕಾಗೆ ಹೋದರು ಕೂಡ ಆತನೊಂದಿಗೆ ಸೀತಾ ದೇವಿಯ ನೈಜ ರೂಪ ಇರಲಿಲ್ಲ. ಮಾಹಿತಿಯ ಪ್ರಕಾರ, ಸೀತಾ ದೇವಿ ಲಂಕಾದಲ್ಲಿ ವಾಸಿಸುತ್ತಿದ್ದವರೆಗೂ, ಅವಳ ನಿಜವಾದ ರೂಪ ಅಗ್ನಿ ದೇವನೊಂದಿಗೆ ಇದ್ದಿತ್ತು ಎಂದು ಹೇಳಲಾಗಿದೆ.
5. ಇಂದ್ರ ದೇವನ ಪಾಯಸ
* ವಾಲ್ಮೀಕಿ ರಾಮಾಯಣದ ಪ್ರಕಾರ, ಸೀತೆಯ ಅಪಹರಣದ ನಂತರ, ದೇವರಾಜ ಇಂದ್ರನು ವಿಶೇಷವಾದ ಪಾಯಸ ಮಾಡಿ ತಾಯಿ ಸೀತಾಗೆ ಆಹಾರವನ್ನು ಕೊಟ್ಟನು. ಇದರಿಂದಾಗಿ ಸೀತಾ ದೇವಿಗೆ ಲಂಕಾದ ಸೆರೆಮನೆಯಲ್ಲಿದ್ದಷ್ಟು ದಿನ ಹಸಿವು ಮತ್ತು ಬಾಯಾರಿಕೆ ಇರಲಿಲ್ಲ. ಸೀತಾ ದೇವಿ ಲಂಕಾದಲ್ಲಿ ವಾಸಿಸುವವರೆಗೂ ಇದು ಆಕೆಗೆ ಶಕ್ತಿಯನ್ನು ನೀಡುತ್ತಿತ್ತು.
* ವಾಲ್ಮೀಕಿ ಆಶ್ರಮದಲ್ಲಿ ತಾಯಿ ಸೀತೆ ಲವ ಮತ್ತು ಕುಶ ಎನ್ನುವ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಆ ಸಮಯದಲ್ಲಿ ಅವರ ಕಿರಿಯ ಸಹೋದರ ಶತ್ರುಘ್ನ ಕೂಡ ಅದೇ ಆಶ್ರಮದಲ್ಲಿದ್ದರು. ಇದಲ್ಲದೆ, ಶ್ರೀರಾಮ ಜಲ ಸಮಾಧಿ ತೆಗೆದುಕೊಂಡ ನಂತರ ತನ್ನ ದೇಹವನ್ನು ತ್ಯಾಗ ಮಾಡಿದ್ದಾನೆ ಎಂದು ತಿಳಿದುಬಂದಿದೆ.
* ಒಂದು ಸಂದರ್ಭದಲ್ಲಿ ಸೀತೆಯು ಗೋವು, ಕಾಗೆ, ಕೇತಕಿ ಹೂ, ತುಳಸಿ ಗಿಡ ಮತ್ತು ಪುರೋಹಿತನಿಗೆ ಶಾಪ ನೀಡಿದ್ದಳು ಎಂದು ಹೇಳಲಾಗಿದೆ.
6. ಮಣಿವತಿಯ ಸೇಡು
* ಒಂಬತ್ತನೇ ಶತಮಾನದ ಗುಣಭದ್ರನ ಉತ್ತರ ಪುರಾಣದ ಪ್ರಕಾರ, ರಾವಣನು ಅಲ್ಕಾಪುರಿಯ ಅಮಿತವೇಗದ ಮಗಳು ಮಣಿವತಿಯ ತಪಸ್ಸಿಗೆ ಅಡ್ಡಿಪಡಿಸುತ್ತಾನೆ ಮತ್ತು ಅವಳು ರಾವಣನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾಳೆ. ಮಣಿವತಿ ನಂತರ ರಾವಣ ಮತ್ತು ಮಂಡೋದರಿಯ ಮಗಳಾಗಿ ಮರುಜನ್ಮ ಪಡೆಯುತ್ತಾಳೆ.
* ದೇವಿ ಸೀತಾ ರಾವಣ ಮತ್ತು ಮಂಡೋದರಿಯ ಮೊದಲ ಜನನ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಂಡೋದರಿಯ ಮೊದಲ ಜನ್ಮವೇ ಅವನ ಸಂಪೂರ್ಣ ವಂಶದ ನಾಶಕ್ಕೆ ಕಾರಣ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. ಆದ್ದರಿಂದ, ರಾವಣನು ಅವಳನ್ನು ತ್ಯಜಿಸಿದನು ಮತ್ತು ಮಗುವನ್ನು ದೂರದ ಭೂಮಿಯಲ್ಲಿ ಹೂಳಲು ಆದೇಶಿಸಿದನು, ನಂತರ ರಾಜ ಜನಕ ಮತ್ತು ಅವನ ಹೆಂಡತಿಯು ಮಿಥಿಲೆಯ ರಾಜಕುಮಾರಿಯಾಗಿ ಬೆಳೆಸಲು ಕಂಡುಹಿಡಿದನು.
* ಸೀತೆಯ ಬಗ್ಗೆ ಇನ್ನೊಂದು ಅಜ್ಞಾತ ಸತ್ಯವೆಂದರೆ, ರಾಮಾಯಣದ ಕೆಲವು ಆವೃತ್ತಿಗಳಲ್ಲಿ, ಮಾಯಾ ಸೀತೆಯ (ದೇವಿ ಸೀತೆಯ ಭ್ರಮೆಯ ಆವೃತ್ತಿ) ಉಲ್ಲೇಖವಿದೆ. ಇವುಗಳ ಪ್ರಕಾರ, ಮಾಯಾ ಸೀತೆಯನ್ನು ವಾಸ್ತವವಾಗಿ ರಾವಣನಿಂದ ಅಪಹರಿಸಲಾಯಿತು, ಆದರೆ ನಿಜವಾದ ಸೀತೆ ಅಗ್ನಿ ದೇವತೆ ಅಗ್ನಿಯೊಂದಿಗೆ ಆಶ್ರಯ ಪಡೆದರು, ಅವರು ಪಾರ್ವತಿ ದೇವಿಯ ನಿವಾಸಕ್ಕೆ ಕರೆದೊಯ್ದರು.