Just In
Don't Miss
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೀಪಾವಳಿ ಹಬ್ಬದ ಆಚರಣೆ- ನೀವು ತಿಳಿದಿರದ ಸತ್ಯಾಸತ್ಯತೆಗಳು
ದೀಪಗಳ
ಹಬ್ಬ
ದೀಪಾವಳಿಯನ್ನು
ನಾಡಿನಾದ್ಯಂತ
ಸಡಗರ
ಸಂಭ್ರಮದಿಂದ
ಆಚರಿಸಲಾಗುತ್ತದೆ.
ಜನರು
ಹಬ್ಬವನ್ನು
ಇನ್ನಷ್ಟು
ಮೆರುಗನ್ನಾಗಿ
ಮಾಡಲು
ಜನರು
ದೀಪಗಳನ್ನು
ಮನೆಯ
ಸುತ್ತಲೂ
ಹಚ್ಚಿ
ಪಟಾಕಿಗಳನ್ನು
ಸಿಡಿಸಿ
ಹಬ್ಬದೂಟವನ್ನೇ
ಮಾಡಿ
ಆನಂದದಿಂದ
ಹಬ್ಬವನ್ನು
ಆಚರಿಸುತ್ತಾರೆ.
ಆದರೆ
ದೀಪಗಳ
ಹಬ್ಬ
ದೀಪಾವಳಿ
ಕೂಡ
ತನ್ನದೇ
ಪ್ರಾಮುಖ್ಯತೆಯನ್ನು
ಹೊಂದಿದ್ದು
ಅದೇನು
ಎಂಬುದನ್ನೇ
ಇಂದಿನ
ಲೇಖನದಲ್ಲಿ
ತಿಳಿಸಿಕೊಡಲಿದ್ದೇವೆ.
ಹಬ್ಬವನ್ನು
ಸುಮ್ಮನೇ
ಆಚರಣೆ
ಮಾಡುವುದಕ್ಕಿಂತಲೂ
ಅದರ
ಮಹತ್ವವನ್ನು
ಅರಿತುಕೊಂಡು
ಆಚರಿಸಿದರೆ
ದೀಪಾವಳಿಗಿರುವ
ಪ್ರಮುಖಾಂಶಗಳನ್ನು
ನಾವು
ಅರಿತುಕೊಂಡು
ಇನ್ನಷ್ಟು
ವಿಭಿನ್ನವಾಗಿ
ಆಚರಿಸುವ
ಉತ್ಸಾಹ
ನಮ್ಮಲ್ಲಿ
ಮೂಡುತ್ತದೆ.
ಬನ್ನಿ
ಹಾಗಿದ್ದರೆ
ಆ
ಅಂಶಗಳೇನು
ಎಂಬುದನ್ನು
ಕಂಡುಕೊಳ್ಳೋಣ.
ಮಹತ್ವ
ಜನರ ಆಚರಣೆ ಮತ್ತು ನಂಬಿಕೆಗೆ ಅನುಸಾರವಾಗಿ ದೇಶದ ಬೇರೆ ಬೇರೆ ಕಡೆಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಜನರು ಭಿನ್ನ ಭಿನ್ನವಾಗಿ ದೀಪಾವಳಿಯನ್ನು ಆಚರಿಸುತ್ತಾರೆ.
ರಾಮಾಯಣ ಮತ್ತು ಮಹಾಭಾರತದ ಪ್ರಾಮುಖ್ಯತೆ
ಜನರು ಹಬ್ಬದ ಆಚರಣೆಯನ್ನು ಭಿನ್ನವಾಗಿ ಮಾಡುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಮಹತ್ವಗಳಿಗೆ ಅನುಗುಣವಾಗಿ ಜನರು ದೀಪಾವಳಿಯನ್ನು ಆಚರಿಸುತ್ತಾರೆ. ಕೆಲವರು ರಾಮನ ವನವಾಸದ ಹಿಂತಿರುಗುವಿಕೆಯ ಗುರುತಾಗಿ ದೀಪಾವಳಿಯನ್ನು ಕಂಡರೆ ಇನ್ನು ಕೆಲವರು 12 ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಪೂರೈಸಿರುವ ಗುರುತಾಗಿ ದೀಪಾವಳಿಯನ್ನು ಕಾಣುತ್ತಾರೆ.
ಕಾಳಿ ಮಾತೆಯ ಆರಾಧನೆ
ದೀಪಾವಳಿಯಂದು ಲಕ್ಷ್ಮೀಯ ಆರಾಧನೆ ಪ್ರಮುಖವಾಗಿರುತ್ತದೆ. ಆದರೆ ಭಾರತದ ಪೂರ್ವ ಭಾಗದಲ್ಲಿ ಕಾಳಿ ಮಾತೆಯನ್ನು ಆರಾಧಿಸುತ್ತಾರೆ. ಜೀವನದ ಮಹತ್ವ ಸಾಧನೆಗಳನ್ನು ಸಾಧಿಸುವ ಸಲುವಾಗಿ ಶಕ್ತಿಯನ್ನು ತುಂಬುವ ಮಾತೆ ಎಂದಾಗಿ ಕಾಳಿ ಮಾತೆಯನ್ನು ಪೂಜಿಸುತ್ತಾರೆ. ಕೆಟ್ಟ ದುಷ್ಟ ಶಕ್ತಿಯ ವಿರುದ್ಧ ಉತ್ತಮ ಅಂಶಗಳ ಗೆಲುವು ಎಂಬುದಾಗಿ ಇದನ್ನು ಕಾಣಲಾಗುತ್ತದೆ. ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ
ಹೊಸ ವರ್ಷ
ಭಾರತದ ಕೆಲವು ಸ್ಥಳಗಳಲ್ಲಿ ದೀಪಾವಳಿಯನ್ನು ಹೊಸ ವರ್ಷ ಎಂಬುದಾಗಿ ಕೂಡ ಪರಿಗಣಿಸಲಾಗಿದೆ. ಲಕ್ಷ್ಮೀಯೊಂದಿಗೆ ವಿಘ್ನ ವಿನಾಶಕ ಗಣಪನನ್ನೂ ಪೂಜಿಸಿ ಸ್ಮರಿಸಲಾಗುತ್ತದೆ. ಹಿಂದೂ ಹೊಸ ವರ್ಷದ ಆರಂಭದ ಸಲುವಾಗಿ ಗಣಪನನ್ನು ಪೂಜಿಸಲಾಗುತ್ತದೆ.
ಜೈನ ಧರ್ಮದಲ್ಲಿ ದೀಪಾವಳಿಯ ಮಹತ್ವ
ಜೈನ ಧರ್ಮದಲ್ಲಿ ಕೂಡ ದೀಪಾವಳಿ ಮಹತ್ವದ್ದಾಗಿದೆ. ಭಗವಾನ್ ಮಹಾವೀರನು ಕಾರ್ತಿಕ ಚತುರ್ದಶಿಯಂದು ಮೋಕ್ಷವನ್ನು ಪಡೆದರೆಂದು ನಂಬಿದ್ದು, ದೀಪಾವಳಿಯ ಆರನೆಯ ದಿನ ಮಹತ್ವದ್ದಾಗಿದೆ. ಭಗವಾನ್ ಮಹಾವೀರನಿಗೆ ಜ್ಞಾನೋದಯವಾಗಿದ್ದು 15 ನೇ ಅಕ್ಟೋಬರ್, 527 ಬಿಸಿಯಂದಾಗಿದೆ ಈ ದಿನ ಕಾರ್ತಿಕ ಚತುರ್ದಶಿಯಾಗಿದೆ.
ಸಿಖ್ಖರಿಗೆ ದೀಪಾವಳಿ ಏಕೆ ಪ್ರಾಮುಖ್ಯವಾದುದು
ಬಂದಿ ಖೋರ್ ದಿವಸ್ ಸಿಖ್ಖರಿಗೆ ಅತಿ ಮಹತ್ವದ್ದಾಗಿದೆ. ದೀಪಾವಳಿಯಂದೇ ಇದನ್ನು ಆಚರಿಸಲಾಗುತ್ತದೆ. ಗುರು ಹರ್ ಗೋಬಿಂದ್ ಸಿಂಗ್ ತಮ್ಮನ್ನು ತಾವೇ ಬಿಡುಗಡೆ ಮಾಡಿದ್ದು ಮತ್ತು ಸೆರೆಯಿಂದ ಹಿಂದೂ ರಾಜರುಗಳನ್ನು ಬಂಧಮುಕ್ತಗೊಳಿಸಿದ ದಿನ ಇದಾಗಿದೆ. ರಾಜ ಜಹಾಂಗೀರನು ಈ ರಾಜರುಗಳನ್ನು ಬಂಧಿಸಿದ್ದನು ಮತ್ತು ಗ್ವಾಲಿಯರ್ನಲ್ಲಿ ಕೂಡಿ ಹಾಕಿದ್ದನು. ಅದೂ ದೀಪಾವಳಿಯ ಸಮಯವೇ ಆಗಿದೆ. ಗುರು ಗೋಬಿಂದ್ ಸಿಂಗ್ ಈ ರಾಜರುಗಳನ್ನು ಸರೆಯಿಂದ ಬಿಡಿಸಿದ್ದರು. ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ