Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಶನಿ ಜಯಂತಿ 2022: ಶನಿ ಸಾಡೇಸಾತಿ, ಶನಿ ಧೈಯ್ಯಾದ ಸೂಚನೆಗಳಿವು, ಶನಿ ದೋಷಕ್ಕೆ ಪರಿಹಾರವೇನು?
ಸೌರಮಂಡಲದಲ್ಲಿ ಅತ್ಯಂತ ನಿಧಾನಗತಿಯಲ್ಲಿ ಸಾಗುವ ಗ್ರಹವೆಂದರೆ ಅದು ಶನಿ. ಜ್ಯೊತಿಷ್ಯ ಪ್ರಕಾರ ಶನಿಯ ನಮ್ಮ ಕರ್ಮಗಳಿಗೆ ಅನುಸಾರ ಫಲವನ್ನು ನೀಡುವ ದೇವ. ಒಳ್ಳೆಯ ಕಾರ್ಯ ಮಾಡಿದರೆ ಶನಿಯ ಕೃಪೆ ಸಿಗುವುದು, ಅದೇ ಕೆಟ್ಟ ಕಾರ್ಯಗಳಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಇನ್ನು ಪ್ರತಿಯೊಬ್ಬರ ಜೀವಿತಾವಧಿಯಲ್ಲಿ ಶನಿ ಸಾಡೇಸಾತಿ ಒಮ್ಮೆ ಬಂದೇ ಬರುತ್ತದೆ, ಶನಿ ದೈಯ್ಯಾ ಕೂಡ. ಈ ಸಮಯದಲ್ಲಿ ಹುಷಾರಾಗಿರಬೇಕು. ಈ ಅವಧಿಯಲ್ಲಿ ಶನಿಯನ್ನು ಪೂಜಿಸಿ ಹಾಗೂ ಅವನು ಮೆಚ್ಚುವ ಕಾರ್ಯಗಳನ್ನು ಮಾಡಿದರೆ ಶನಿಯ ಕೆಟ್ಟ ಪ್ರಭಾವ ತಗ್ಗಿಸಬಹುದು.

ಶನಿಯ ರಾಶಿ ಬದಲಾವಣೆ
ಪ್ರತೀ ಎರಡೂವರೆ ವರ್ಷಕ್ಕೊಮ್ಮೆ ಶನಿಯು ತನ್ನ ರಾಶಿ ಬದಲಾಯಿಸುತ್ತಾನೆ, ಆಗ ರಾಶಿಗಳ ಮೇಲೆ ಶನಿಯ ಪ್ರಭಾವ ಉಂಟಾಗುವುದು. ಕೆಲವೊಂದು ರಾಶಿಗಳು ಶನಿ ಸಾಡೇಸಾತಿಯಿಂದ ಬಿಡುಗಡೆಯಾದರೆ ಇನ್ನು ಕೆಲವು ರಾಶಿಗಳಲ್ಲಿ ಶುರುವಾಗುವುದು. ಇದೀಗ ಶನಿಯು ಕುಂಭ ರಾಶಿಯಲ್ಲಿದ್ದಾನೆ.

ಈಗ ಯಾವೆಲ್ಲಾ ರಾಶಿಗೆ ಶನಿ ಸಾಡೇಸಾತಿ ಹಾಗೂ ಶನಿ ಧೈಯ್ಯಾ ಇದೆ?
ಏಪ್ರಿಲ್ 29, 2022ಕ್ಕೆ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಿತ್ತು. ಇದರ ಪ್ರಭಾವದಿಂದಾಗಿ ಮೀನ, ಮಕರ ಮತ್ತು ಕುಂಭ ರಾಶಿಯಲ್ಲಿ ಶನಿ ಸಾಡೇಸಾತಿ ಇದೆ.
ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿ ಶನಿ ಧೈಯ್ಯಾ ಇದೆ.

ಶನಿ ಸಾಡೇಸಾತಿ ಎಂದರೇನು?
ಶನಿಯು ಏಕ ಕಾಲದಲ್ಲಿ ಮೂರು ರಾಶಿಗಳಲ್ಲಿ ಸೇರಿದಾಗ ಶನಿ ಸಾಡೇಸಾತಿ ಉಂಟಾಗುತ್ತದೆ. ಯಾವಾಗ ಶನಿಯು ತನ್ನ ರಾಶಿ ಬದಲಾಯಿಸುತ್ತಾನೆ ಆಗ ದ್ವಾದಶ ರಾಶಿಗಳಲ್ಲಿ ಮೂರು ರಾಶಿಗಳಲ್ಲಿ ಶನಿ ಸಾಡೇಸಾತಿ ಪ್ರಾರಂಭವಾಗುತ್ತದೆ. ಆಗ ಶನಿಯ ಕಾಟ ಪ್ರಾರಂಭವಾಗುವುದು. ಈ ಶನಿ ಸಾಡೇಸಾತಿಗೆ ಶನಿಯ ಏಳರಾಟವೆಂದೂ ಕೂಡ ಕೂಡ ಕರೆಯಲಾಗುವುದು.

ಶನಿ ಸಾಡೇಸಾತಿಯೆಂದರೆ ಜನ ಭಯ ಬೀಳುತ್ತಾರೆ ಏಕೆ?
ಶನಿ ಸಾಡೇಸಾತಿ ಎಂದರೆ ಸಾಕು ಜನ ಭಯ ಬೀಳುತ್ತಾರೆ, ಏಕೆಂದರೆ ಅದರ ಪ್ರಭಾವ ಆ ರೀತಿ ಇರುತ್ತದೆ. ಒಂದರ ಹಿಂದೆ ಒಂದು ಹೊಡೆತ ಬೀಳುವುದು ಎಂದು ಹೇಳ್ತಾರಲ್ಲಾ ಅದು ಶನಿ ಸಾಡೇಸಾತಿ ಇರುವಾಗ ಅನುಭವಕ್ಕೆ ಬರುತ್ತದೆ. ಈ ಸಮಯದಲ್ಲಿ ಹಣದ ತೊಂದರೆ, ಕುಟುಂಬದಲ್ಲಿ ಸಮಸ್ಯೆ, ಅವಮಾನ, ಆರೋಗ್ಯ ಸಮಸ್ಯೆ ಹೀಗೆ ಒಂದಾ-ಎರಡಾ ಸಮಸ್ಯೆಗಳು ಸುರಿಮಳೆ. ಒಮ್ಮೆ ಈ ಶನಿ ಸಾಡೇಸಾತಿ ಮುಗಿದರೆ ಸಾಕು ಎಂದು ಬೇಡಿಕೊಳ್ಳುವಷ್ಟರ ಮಟ್ಟಿಗೆ ಬಸವಳಿದು ಬಿಡುತ್ತಾನೆ ಮನುಷ್ಯ.

ಶನಿ ಸಾಡೇಸಾತಿ ಪ್ರಾರಂಭವಾಗುವ 7 ತಿಂಗಳ ಮುಂದೆಯೇ ಸಿಗುವುದು ಮುನ್ಸೂಚನೆ
ಶನಿ ಸಾಡೇಸಾತಿ ಪ್ರಾರಂಭವಾಗುವ ಏಳು ತಿಂಗಳ ಮುಂಚೆಯೇ ಆ ರಾಶಿಯವರಿಗೆ ಸೂಚನೆ ಸಿಗುವುದು. ಶನಿಯು ನಿಧಾನಕ್ಕೆ ಚಲಿಸುವ ಗ್ರಹವಾಗಿದೆ, ಅದರಂತೆ ಕಷ್ಟಗಳು ಕೂಡ ನಿಧಾನಕ್ಕೆ ಹೆಚ್ಚುವುದು.

ಶನಿ ಸಾಡೇಸಾತಿ ಮತ್ತು ಶನಿ ಧೈಯ್ಯಾ ನೀಡುವ ಎಚ್ಚರಿಕೆಯ ಸೂಚನೆಗಳೇನು?
* ನಿಮ್ಮ ಪಾದಗಳು ಹಾಗೂ ಚಪ್ಪಲಿ ಸೂಚನೆ ನೀಡುತ್ತದೆ: ಶನಿ ಸಾಡೇಸಾತಿ ಸಮಯದಲ್ಲಿ ಪಾದಗಳಲ್ಲಿ ಬಿರುಕು ಕಂಡು ಬರುತ್ತದೆ ಹಾಗೂ ಪದೇ ಪದೇ ಚಪ್ಪಲಿ ಕಟ್ ಆಗುವುದು
* ಮನಸ್ಸಿನಲ್ಲಿ ಭಯ ತುಂಬಿಕೊಳ್ಳುವುದು
* ವ್ಯಕ್ತಿ ವಾಸ್ತವದಲ್ಲಿ ಇರುವುದೇ ಇಲ್ಲ, ಭವಿಷ್ಯದ ಭಯ ತುಂಬಾ ಕಾಡಲಾರಂಭಿಸುವುದು.
* ಆರೋಗ್ಯ ಸಮಸ್ಯೆಗಳು ಉಂಟಾಗುವುದು. ನರಕ್ಕೆ ಸಂಬಂಧಿಸಿದ ಉಂಟಾಗುವುದು
* ಕಾನೂನು ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಾರೆ
* ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವುದು
* ಆರ್ಥಿಕ ಸಂಕಷ್ಟ ಎದುರಾಗುವುದು.

ಶನಿಯ ಕೆಟ್ಟ ಪ್ರಭಾವಗಳಿಂದ ಪಾರಾಗುವುದು ಹೇಗೆ?
* ಶನಿ ದೇವಾಲಯ ಅಥವಾ ಕಾಳಿಯ ದೇವಾಲಯಕ್ಕೆ ಭೇಟಿ ನೀಡಿ ತ ಹಣ್ಣುಗಾಯಿ ಅರ್ಪಿಸಿ.
* ತಂತ್ರೋಕ್ತ ದೇವಿ ಸೂಕ್ತಮ್ ಪಠಿಸಿ, ಪ್ರತಿದಿನ ಸಾಧ್ಯವಾಗದಿದ್ದರೆ ಶನಿವಾರ ಪಠಿಸಿ.
* ಶನಿ ಮಂತ್ರಗಳನ್ನು ಪಠಿಸಿ
* ಓಂ ಶನಿಶ್ಚರಾಯ ನಮಃ ಮಂತ್ರ ಪಠಿಸಿ.
* ಭವಿಷ್ಯದ ಚಿಂತೆ ಬಿಡಿ, ವಾಸ್ತವದ ಕಡೆ ಗಮನ ನೀಡಿ, ಸಮಸ್ಯೆಗಳು ಶಾಶ್ವತವಲ್ಲ ಶನಿ ಸಾಡೇಸಾತಿ ಮುಗಿದ ಬಳಿಕ ಎಲ್ಲವೂ ಸರಿಹೋಗುವುದು, ಧೈರ್ಯ ತೆಗೆದುಕೊಳ್ಳಿ.

ಶನಿ ಗಾಯತ್ರಿ ಮಂತ್ರ
ಓಂ ಶನೈಶ್ಚರಾಯ ವಿದ್ಮಯೇ
ಸೂರ್ಯಪುತ್ರಾಯ ದಹಿಮಹಿ
ತನ್ನೊ ಮಂಡಾ ಪ್ರಚೋದಾಯತ್



Click it and Unblock the Notifications