Just In
- 55 min ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 1 hr ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 2 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 3 hrs ago ಶುಕ್ರ ಮೀನ ರಾಶಿಗೆ ಸಂಚರಿಸಿದಾಗ ಈ 5 ರಾಶಿಗಳ ಮೇಲೆ ಬೀರಲಿದೆ ಒಳ್ಳೆಯ ಪ್ರಭಾವ
Don't Miss
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆ. 24ಕ್ಕೆ ಸಂಕಷ್ಟಿ ಗಣೇಶ ಚತುರ್ಥಿ: ಪೂಜೆಗೆ ಶುಭ ಮುಹೂರ್ತ ಯಾವಾಗ?
ಗಣೇಶ ವ್ರತಕ್ಕೆ ಸಂಕಷ್ಟರ ಚತುರ್ಥಿ, ಸಂಕಷ್ಟಿ ಗಣೇಶ ಚತುರ್ಥಿ, ಸಂಕಷ್ಟ ವಿನಾಯಕ ಚೌತಿ ಈ ದಿನ ತುಂಬಾ ಶುಭವಾಗಿದೆ. ಪ್ರತಿ ತಿಂಗಳು ಕೃಷ್ಣ ಪಕ್ಷದಲ್ಲಿ ಸಂಕಷ್ಟಿ ಚತುರ್ಥಿ ಆಚರಿಸಲಾಗುವುದು. 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ದಿನಾಂಕ 24, ಶುಕ್ರವಾರದಂದು ಆಚರಿಸಲಾಗುವುದು.
ಈ ಚತುರ್ಥಿಯನ್ನು ವಿಘ್ನರಾಜ ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುವುದು. ಚತುರ್ಥಿ ತಿಥಿಯು ತಿಂಗಳಿಗೆ ಎರಡು ಬಾರಿ ಬರುತ್ತದೆ, ಈ ದಿನಗಳಲ್ಲಿ ವಿಘ್ನ ನಿವಾರಕನನ್ನು ಆರಾಧಿಸಲಾಗುವುದು. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಗಣೇಶ ಚತುರ್ಥಿ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುವುದು. ಅಶ್ವಿನ್ ಮಾಸದ ಸಂಕಷ್ಟ ಚತುರ್ಥಿಯ ನಿಖರವಾದ ದಿನಾಂಕ ಮತ್ತು ಚಂದ್ರನನ್ನು ನೋಡುವ ಸಮಯದ ಬಗ್ಗೆ ನಮಗೆ ತಿಳಿಸಿ.
ಸಂಕಷ್ಟಿ ಚತುರ್ಥಿ ತಿಥಿ ಪ್ರಾರಂಭ (bold)
ಹಿಂದೂ ಪಂಚಾಂಗದ ಪ್ರಕಾರ ಅಶ್ವಿನ್ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿ ಸೆಪ್ಟೆಂಬರ್ 24, ಶುಕ್ರವಾರ, ಬೆಳಗ್ಗೆ 08.29 ಕ್ಕೆ ಆರಂಭವಾಗುತ್ತದೆ.
ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ
ಸೆಪ್ಟೆಂಬರ್ 25 ರ ಶನಿವಾರ ಬೆಳಗ್ಗೆ 10.36 ಕ್ಕೆ ಮುಕ್ತಾಯವಾಗುವುದು.
ಚತುರ್ಥಿಯಂದು ಗಣೇಶನ ಆರಾಧನೆಯನ್ನು ಮಧ್ಯಾಹ್ನ ಮಾಡಲಾಗುತ್ತದೆ, ಆದರೆ ರಾಹುಕಾಲದಲ್ಲಿ ಮಾಡಬೇಡಿ.
ಸಂಕಷ್ಟಿ ಚತುರ್ಥಿ 2021ರ ಪೂಜೆಗೆ ಶುಭ ಮುಹೂರ್ತ
ಸಂಕಷ್ಟ ಚತುರ್ಥಿಯ ದಿನದಂದು ಸರ್ವಾರ್ಥ ಸಿದ್ದಿ ಯೋಗವು ರೂಪುಗೊಳ್ಳುತ್ತಿದೆ.
ಸೆಪ್ಟೆಂಬರ್ 24 ರಂದು ಸರ್ವಾರ್ಥಿ ಸಿದ್ಧಿ ಯೋಗ
ಬೆಳಗ್ಗೆ 06:10- 08:54 ರವರೆಗೆ
ರಾಹುಕಾಲ
ಬೆಳಿಗ್ಗೆ 10:42 ರಿಂದ-ಮಧ್ಯಾಹ್ನ 12.13 ರವರೆಗೆ
ಈ ದಿನ ನೀವು ಅಭಿಜಿತ್ ಮುಹೂರ್ತ ಅಥವಾ ವಿಜಯ್ ಮುಹೂರ್ತದಲ್ಲಿ ಗಣೇಶನನ್ನು ಪೂಜಿಸಬಹುದು. ಈ ದಿನ ಅಭಿಜಿತ್ ಮುಹೂರ್ತವು ಬೆಳಗ್ಗೆ 11.49 ರಿಂದ ಮಧ್ಯಾಹ್ನ 12.37 ರವರೆಗೆ ಇರುತ್ತದೆ. ಅದೇ ಸಮಯದಲ್ಲಿ, ವಿಜಯ್ ಮುಹೂರ್ತವು ಮಧ್ಯಾಹ್ನ 02.14 ರಿಂದ ಮಧ್ಯಾಹ್ನ 03.02 ರವರೆಗೆ ಇರುತ್ತದೆ.
ಸಂಕಷ್ಟಿ ಚತುರ್ಥಿ 2021 ಚಂದ್ರ ದರ್ಶನ ಸಮಯಗಳು
ಅಶ್ವಿನ್ ಮಾಸದ ಸಂಕಷ್ಟಿ ಚತುರ್ಥಿಯ ದಿನದಂದು ಚಂದ್ರನಿಗೆ ಆರ್ಘ್ಯ ಅರ್ಪಿಸಿ ಚಂದ್ರನನ್ನು ನೋಡಬೇಕು.
ಸೆಪ್ಟೆಂಬರ್ 24 ರಂದು ಚಂದ್ರೋದಯದ ಸಮಯ ರಾತ್ರಿ 08:20ಕ್ಕೆ. ಈ ಸಮಯದ ಬಳಿಕ ಚಂದ್ರನನ್ನು ನೋಡಿ ಆಹಾರ ಸೇವಿಸಬಹುದು.
ಸಂಕಷ್ಟಿ ಚತುರ್ಥಿ ಮಹತ್ವ
ಪ್ರತೀ ತಿಂಗಳು ಉಪವಾಸವಿದ್ದು ವಿಘ್ನ ನಿವಾರಕನನ್ನು ಆರಾಧಿಸಿದರೆ ಜೀವನದಲ್ಲಿರುವ ಕಷ್ಟಗಳು, ಸವಾಲುಗಳು ದೂರಾಗುವುದು. ಗಣೇಶನ ಕೃಪೆಯಿದ್ದರೆ ಬದುಕಿನಲ್ಲಿ ಸಂತೋಷ, ನೆಮ್ಮದಿ ಇರುತ್ತದೆ, ಅಲ್ಲದೆ ಮನದಲ್ಲಿ ಸಂಕಲ್ಪ ತೆಗೆದುಕೊಂಡು ಗಣೇಶ ವ್ರತ ಮಾಡಿದರೆ ಆ ಇಚ್ಛೆ ನೆರವೇರುವುದು.
ಸಂಷ್ಟಿ ಚತುರ್ಥಿಯಂದು ಪಠಿಸಬೇಕಾದ ಮಂತ್ರ
ಓಂ ಶ್ರೀ ಗಣೇಶಾಯ ನಮಃ
ಓಂ ಏಕದಂತಾಯ ನಮಃ
ಓಂ ಸುಮುಖಾಯ ನಮಃ
ಓಂ ಕ್ಷಿಪ್ರ ಪ್ರಸಾದಾಯ ನಮಃ
ಓಂ ಬಾಲಚಂದ್ರಾಯ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ವಿನಾಯಕಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ವಿಘ್ನನಾಶಾಯ ನಮಃ
ಓಂ ಲಂಬೋಧರಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಕಪಿಲಾಯ ನಮಃ
ಓಂ ವಿಕ್ತ್ರಾಯ ನಮಃ