Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'
ವಿಜಯ ದಶಮಿಯ ಈ ಶುಭ ಸಮಾರಂಭದಲ್ಲಿ ನವಶಕ್ತಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಮಹತ್ತರ ಯಶಸ್ಸನ್ನು ಸಾಧಿಸಬಹುದಾಗಿದೆ. ಅಕ್ಟೋಬರ್ 10 ರಿಂದ ಆರಂಭಗೊಂಡು 18 ಕ್ಕೆ ಸಮಾಪ್ತಿಯಾಗಲಿರುವ ನವರಾತ್ರಿಯಲ್ಲಿ ದೇವಿಯು ಒಂಭತ್ತು ಅವತಾರಗಳಲ್ಲಿ ಕಾಣಿಸಿಕೊಂಡು ಭಕ್ತರನ್ನು ಪೊರೆಯಲಿದ್ದಾರೆ.
ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ, ಕೆಡುಕುಗಳನ್ನು ದುರ್ಗಾ ಮಾತೆ ನಿವಾರಣೆ ಮಾಡಿ ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ ಮಧುರಾಮೃತವನ್ನು ತುಂಬಲಿದ್ದಾರೆ. ಜ್ಞಾನವೆಂಬ ಭಕ್ತಿಯನ್ನು ನಮ್ಮ ಮನದಲ್ಲಿ ತುಂಬಲಿದ್ದಾರೆ. ಅಹಂಕಾರ, ಮತ್ಸರ, ಹಗೆತನ ಮತ್ತು ಮನುಕುಲಕ್ಕೆ ಕಳಂಕವನ್ನುಂಟು ಮಾಡುತ್ತಿರುವ ಕೆಟ್ಟ ಶಕ್ತಿಗಳನ್ನು ಮಾತೆ ಬಡಿದೋಡಿಸಲಿದ್ದಾರೆ.
ಇಂತಹ ಶಕ್ತಿ ದೇವತೆಯನ್ನು ಮೆಚ್ಚಿಸುವುದು ಕಷ್ಟವಲ್ಲದಿದ್ದರೂ ಅಂತಃಕರಣದಲ್ಲಿ ಭಕ್ತಿ ಇರಬೇಕು. ನಿಮ್ಮ ಮನಸ್ಸಿನಲ್ಲಿ ಪ್ರೀತಿ ತುಂಬಿದ್ದರೆ ಮಾತ್ರವೇ ಆಕೆ ತಾಯಾಗಿ ಬಂದು ನಿಮ್ಮನ್ನು ಮಗುವಿನಿಂತೆ ಪೊರೆಯುತ್ತಾರೆ. ಈ ಒಂಭತ್ತು ದಿನಗಳ ಕಾಲ ಉಪವಾಸವನ್ನು ಕೈಗೊಂಡು ಆಕೆಯನ್ನು ಹೂವು, ಸೀರೆ, ತೆಂಗಿನ ಕಾಯಿ ಮತ್ತು ಇನ್ನಿತರ ಪೂಜಾ ಸಾಮಾಗ್ರಿಗಳೊಂದಿಗೆ ಪೂಜಿಸಬೇಕು. ಆಕೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಮಂತ್ರವನ್ನು ಪಠಿಸಬೇಕು.
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಲೋಚನಾಯಾತ್ರಾ ಸ್ನುಕ್ತಮ್ ಪದಮೇಂದು ಸಾದ್ಯ ಶನಯಮ್
ಧ್ಯಾನ ಮಂತ್ರವಾಗಿರುವ ಇದು ಪೂಜೆಯ ಸಮಯದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಕಲಿಕೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಈ ಮಂತ್ರವನ್ನು ಪಠಿಸಿ ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ದುರ್ಗಾ ಶತ್ರು ಶಾಂತಿ ಮಂತ್ರ
ರಿಪವಾಹ ಸಂಕ್ಷ್ಯಾಮ್ ಯಂತಿ ಕಲ್ಯಾಣಮ್ ಚಾಪ್ ಪಾದಾಯತೇ
ನಂದತೇ ಚ ಕುಲಮ್ ಪುನಾಸಮ್ ಮಹಾತ್ಮಮಮ್ ಮಾ ಶ್ರೀನು ಯಾನ್ಮನ್
ಇದು ದುರ್ಗಾ ಶತ್ರು ಶಾಂತಿ ಮಂತ್ರವಾಗಿದ್ದು ಯಾವುದೇ ದುರುದ್ದೇಶಗಳನ್ನು ಭಕ್ತರು ಹೊಂದಿದ್ದರೆ ಅದನ್ನು ಸೋಲಿಸಲು ಪಠಿಸುವುದಾಗಿದೆ. ನಿಮ್ಮ ಬಗ್ಗೆ ಮತ್ಸರ ಹೊಂದಿರುವವರಿಂದ ಸಂರಕ್ಷಣೆ ಪಡೆಯಲು ಈ ಮಂತ್ರ ಸಹಕಾರಿ ಜೊತೆಗೆ ದುಷ್ಟ ಶಕ್ತಿಯನ್ನು ತೊಡೆದು ಹಾಕುತ್ತದೆ.
Most Read:ಗುಪ್ತ ನವರಾತ್ರಿಯನ್ನು ರಹಸ್ಯವಾಗಿ ಆಚರಿಸಬೇಕಂತೆ! ಯಾಕೆ ಗೊತ್ತೇ?
ಸರ್ವ ಬಾಧಾ ಮುಕ್ತಿ ಮಂತ್ರ
ಸರ್ವ ಬಾಧಾ ವಿನಿರ್ಮುಕ್ತೊ ಧನ ಧ್ಯಾನ ಸುತನ್ವಿತಃ
ಮನುಷ್ಯೊ ಮತಪ್ರಸಾದಿನ್ ಭವಿಷ್ಯತಿ ನ ಸನ್ಶಯಃ
ಈ ಮಂತ್ರವನ್ನು ಸರ್ವ ಬಾಧಾ ಮುಕ್ತಿ ಮಂತ್ರವೆಂದು ಕರೆಯಲಾಗುತ್ತದೆ. ಭಕ್ತರ ಜೀವನದಲ್ಲಿರುವ ಸಕಲ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಈ ಮಂತ್ರಕ್ಕಿದೆ. ನಿಮಗೆ ಮಕ್ಕಳಾಗಬೇಕೆಂಬ ಉದ್ದೇಶವಿದ್ದು ಆದರೆ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ ಎಂದಾದಲ್ಲಿ ಈ ಮಂತ್ರವನ್ನು ಪಠಿಸಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಶಾಂತಿ ಮತ್ತು ಉನ್ನತಿಯನ್ನು ಪಡೆದುಕೊಳ್ಳಲು ಈ ಮಂತ್ರವನ್ನು ಪಠಿಸಬೇಕು.
Most Read:ಈ ಊರಿನಲ್ಲಿ 'ನವರಾತ್ರಿ' ದಿನ ದೇವಿಗೆ ಪ್ರಾಣಿ ಬಲಿ ಕೊಡುತ್ತಾರಂತೆ!
ದುರ್ಗಾ ದುಸ್ವಪ್ನ ನಿವಾರಣೆ ಮಂತ್ರ
ಶಾಂತಿ ಕರ್ಮಣಿ ಸರ್ವತ್ರ ತ ದುಃಸ್ವಪ್ನ ದರ್ಶನೆ
ಗೃಹ ಪೀಡಸು ಚೊಗ್ರಾಸು ಮಹಾತ್ಮಯಾನ್ ಶ್ರೀನು ಯಾನ್ಮಮ್
ಈ ಮಂತ್ರವನ್ನು ದುಃಸ್ವಪ್ನ ನಿವಾರಣೆ ಮಂತ್ರವೆಂದು ಕರೆಯಲಾಗುತ್ತದೆ ಮತ್ತು ಕೆಟ್ಟ ಕನಸುಗಳಿಂದ ಮುಕ್ತಿ ಹೊಂದಲು ಈ ಮಂತ್ರವನ್ನು ಪಠಿಸಬೇಕು. ನಿಮ್ಮ ಜನ್ಮ ಕುಂಡಲಿಯಲ್ಲಿ ಗ್ರಹಗಳ ಗತಿ ನಿಮಗೆ ಪ್ರಯೋಜನಕರವಾಗಿಲ್ಲದಿದ್ದರೆ ಈ ಮಂತ್ರದ ಶಕ್ತಿಯಿಂದ ನಿವಾರಣೆಯಾಗುತ್ತದೆ. ನಿಮಗೆ ಆತ್ಮವಿಶ್ವಾಸವನ್ನು ನೀಡಿ ಭಯ ದೂರಾಗುತ್ತದೆ. ನಿಮ್ಮ ಜೀವನದಲ್ಲಿ ಸಮಸ್ಯೆಗಳಿದ್ದರೆ ಈ ಮಂತ್ರವನ್ನು ಪಠಿಸಿ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ.