Just In
- 29 min ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 14 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 14 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
Don't Miss
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Movies ತಾತನಿಗೆ ಧನ್ಯಾ ರಾಮ್ಕುಮಾರ್ ಟ್ರಿಬ್ಯೂಟ್; ಕಿಶನ್ ಜೊತೆ ಡ್ಯುಯೆಟ್
- News Summer Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.. ಇಲ್ಲಿವೆ ಸಲಹೆಗಳು
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Finance ಝಿಲಿಂಗೋನ ಸಹ-ಸಂಸ್ಥಾಪಕ ಹಾಗೂ ಮಾಜಿ ಸಿಒಒ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ ಅಂಕಿತಿ ಬೋಸ್
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Nag Panchami 2021: ನಾಗರ ಪಂಚಮಿ ಪೂಜಾ ಸಮಯ, ಪೂಜೆ ಮಾಡುವ ವಿಧಾನ ಹಾಗೂ ಮಹತ್ವ
ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಲ್ಲಿ ನಾಗಪಂಚಮಿ ಸಹ ಮುಖ್ಯವಾದದ್ದು. 2021ನೇ ಸಾಲಿನಲ್ಲಿ ನಾಗ ಪಂಚಮಿ ಶ್ರಾವಣ ಮಾಸದಲ್ಲಿ ಬರುತ್ತಿರುವ ಮೊದಲ ಹಬ್ಬವಾಗಿದೆ ಹಾಗೂ ಆಗಸ್ಟ್ 13ರಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ನಾಗದೇವರನ್ನು ಪೂಜಿಸುವ ಈ ನಾಗಪಂಚಮಿ ಹಿಂದೂಗಳಿಗೆ ಬಹಳ ಮಹತ್ವದ್ದಾಗಿದೆ. ನಾಗ ದೇವತೆಯ ಕೃಪೆಗೆ ಪಾತ್ರರಾಗಲು ಪವಿತ್ರ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬದಂದು ನಾಗ ದೇವತೆಯನ್ನು ಹೇಗೆ ಪೂಜಿಸಬೇಕು, ಶುಭ ಮುಹೂರ್ತ ಯಾವುದು, ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು, ಸಾಂಪ್ರದಾಯಿಕ ಆಚರಣೆಗಲೇನು, ಹಬ್ಬದ ಮಹತ್ವವೇನು ಮುಂದೆ ತಿಳಿಯೋಣ:
ಪೂಜಾ ಸಮಯ
ಪೂಜೆಗೆ ಶುಭ ಮುಹೂರ್ತ: ಬೆಳಗ್ಗೆ 6.07ರಿಂದ ಬೆಳಗ್ಗೆ 8.38ರ ವರೆಗೆ
ಪಂಚಮಿ ತಿಥಿ ಆರಂಭವಾಗುವುದು: ಆಗಸ್ಟ್ 12ರಂದು ಸಂಜೆ 3.24ರಿಂದ
ಪಂಚಮಿ ತಿಥಿ ಅಂತ್ಯವಾಗುವುದು: ಆಗಸ್ಟ್ 13ರಂದು ಮಧ್ಯಾಹ್ನ 1.42ರವರೆಗೆ
ನಾಗ ಪಂಚಮಿಯಂದು ಮನೆಯಲ್ಲೇ ಪೂಜೆ ಮಾಡುವುದು ಹೇಗೆ?
* ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ, ಶುಚಿರ್ಭೂತರಾಗಿ ಮಡಿ ವಸ್ತ್ರ ಧರಿಸಿ.
* ಮಣ್ಣಿನಿಂದ ತಯಾರಿಸಿದ ಹಾವಿನ ಮೂರ್ತಿಗಳನ್ನು ಹಾಲು, ಅರಿಶಿನ, ಹುಲ್ಲು, ಕುಂಕುಮ, ಗರಿಕೆ, ಶ್ರೀಗಂಧ, ಅಕ್ಷತೆ ಮತ್ತು ಹೂವುಗಳಿಂದ ಅಲಂಕರಿಸಿ.
* ಮೋದಕ ಅಥವಾ ನಾಗದೇವನಿಗೆ ನೈವೇದ್ಯಕ್ಕೆ ಇನ್ನಿತರ ಖಾದ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ.
* ದೇವರ ಕೋಣೆಯಲ್ಲಿ ನಾಗರ ಪ್ರತಿಮೆ ಅಥವಾ ಹಸುವಿನ ಸಗಣಿಯಿಂದ ಮಾಡಿದ ನಾಗರ ಪ್ರತಿಮೆಯನ್ನು ಇಟ್ಟು ಪೂಜಿಸಿ.
* ತೆಂಗಿನಕಾಯಿಯ ಸಿಹಿತಿಂಡಿಗಳು, ಪಾಯಸ ಮತ್ತು ಕಪ್ಪು ಎಳ್ಳಿನ ಸಿಹಿಯನ್ನು ತಯಾರಿಸಿ ನಾಗ ದೇವರಿಗೆ ಅರ್ಪಿಸಬೇಕು.
* ಕೆಂಪು ದಾಸವಾಳ ಹೂವುಗಳನ್ನು ಸಾಮಾನ್ಯವಾಗಿ ಹಾವು ದೇವರ ಪೂಜೆಗೆ ಬಳಸಲಾಗುತ್ತದೆ. ಅವುಗಳನ್ನು ವಿಗ್ರಹದ ಬುಡದಲ್ಲಿ ಇರಿಸಲಾಗುತ್ತದೆ.
* ನಾಗದೇವತೆಯ ಮಂತ್ರಗಳನ್ನು ಜಪಿಸುತ್ತಾ ಹಾಲಿನ ಅಭಿಷೇಕ ಮಾಡಿ.
* ತಯಾರಿಸಿದ ಸಿಹಿತಿಂಡಿಗಳನ್ನು ನಾಗ ದೇವರಿಗೆ ಅರ್ಪಿಸಿ ನಂತರ ಪ್ರಸಾದವಾಗಿ ವಿತರಿಸಿ. ಹಾಲನ್ನು ವಿಗ್ರಹಕ್ಕೆ ಸ್ನಾನ ಮಾಡಲು ಬಳಸಲಾಗುತ್ತದೆ. ಶ್ರೀಗಂಧದ ಸುಗಂಧವು ಹಾವಿನ ದೇವರನ್ನು ತುಂಬಾ ಸಂತೋಷಪಡಿಸುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಇದರ ಬಳಕೆ ಬಹಳ ಅವಶ್ಯಕವಾಗಿದೆ.
* ಕೆಲವರು ಮನೆಯ ಮುಖ್ಯ ದ್ವಾರದ ಬಳಿ ಕೆಂಪು ಮಣ್ಣಿನಿಂದ ಅಥವಾ ಹಾವಿನ ದೇವರ ಸಗಣಿಯಿಂದ ಮಾಡಿದ ಶಿಲ್ಪವನ್ನು ಇಡುವ ಸಂಪ್ರದಾಯವಿದೆ.
ಹುತ್ತಕ್ಕೆ ನಾಗ ಪಂಚಮಿ ಪೂಜೆ
ಹುತ್ತದ ಬಳಿ ಹೋಗಿ ಹೂಗಳು ಮತ್ತು ಹಾಲನ್ನು ಹಾವುಗಳು ವಾಸಿಸುವ ಬಿಲಗಳು ಮತ್ತು ರಂಧ್ರಗಳ ಬಳಿ ಇರಿಸಲಾಗುತ್ತದೆ. ಹಾವುಗಳಿಗೆ ಹಾನಿಯಾಗದಂತೆ ಜನರು ಈ ದಿನ ಉಳುಮೆ ಮತ್ತು ಹೊಲವನ್ನು ಅಗೆಯುವುದನ್ನು ತಪ್ಪಿಸುತ್ತಾರೆ. ಹಾವುಗಳಿಗೆ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಜನರು ಹೊಲಗಳಲ್ಲಿ ಯಾವುದೇ ಕತ್ತರಿಸುವಿಕೆಯನ್ನು ಸಹ ಮಾಡುವುದಿಲ್ಲ.
ನಾಗ ಪಂಚಮಿಯಂದು ಉಪವಾಸ
ನಾಗದೇವನನ್ನು ಮೆಚ್ಚಿಸಲು ನಾಗ ಪಂಚಮಿಯ ದಿನದಂದು ಉಪವಾಸ ಆಚರಿಸುವ ವಾಡಿಕೆ ಇದೆ. ವಿವಾಹಿತ ಮಹಿಳೆಯರು ತಮ್ಮ ತವರು ಮನೆಗೆ ಭೇಟಿ ನೀಡುತ್ತಾರೆ ಮತ್ತು ಅವಿವಾಹಿತ ಹೆಣ್ಣುಮಕ್ಕಳು ಉತ್ತಮ ಜೀವನ ಸಂಗಾತಿ ಸಿಗಲಿ ಎಂದು ಉಪವಾಸ ಮಾಡುತ್ತಾರೆ. ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗಿ ಮತ್ತು ಸೂರ್ಯಾಸ್ತದವರೆಗೂ ಮುಂದುವರಿಯುತ್ತದೆ. ನಂತರ ಹಾವಿಗೆ ಪಾಯಸ ಅರ್ಪಿಸುವ ಮೂಲಕ ಉಪವಾಸವನ್ನು ಮುರಿಯಲಾಗುತ್ತದೆ. ಈ ದಿನ ಹುರಿದ ಮತ್ತು ಖಾರದ ಆಹಾರವನ್ನು ಸೇವಿಸುವಂತಿಲ್ಲ. ಕೆಲವರು ಉಪವಾಸವನ್ನು ಹಿಂದಿನ ದಿನದಿಂದಲೇ ಆರಂಭಿಸುತ್ತಾರೆ.
ನಾಗ ದೇವರಿಗೆ ಹಾಲನ್ನು ಅರ್ಪಿಸುವುದು
ಸಂಪ್ರದಾಯದಂತೆ ಹಾವಿಗೆ ಹಾಲನ್ನು ನೀಡಲಾಗುತ್ತದೆ. ಹಾವು ಹಾಲು ಕುಡಿದರೆ ನೀವು ತುಂಬಾ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಕೊಳಲಿನ ಸದ್ದಿನೊಂದಿಗೆ ಅಥವಾ ನಾಗದದೇವತೆಯ ಹಾಡು ಮಂತ್ರಗಳನ್ನು ಹೇಳುವ ಮೂಲಕ ಮಹಿಳೆಯರು ಹಾವಿಗೆ/ ಹುತ್ತಕ್ಕೆ ಹಾಲನ್ನು ನೀಡುತ್ತಾರೆ.
ನಾಗ ಪಂಚಮಿ ಹಬ್ಬದ ಮಹತ್ವ
ಹಳೆಯ ಕಾಲದಲ್ಲಿ ಹಾವುಗಳಿಂದ ಕಚ್ಚುವುದನ್ನು ತಪ್ಪಿಸಲು ಜನರು ಈ ಹಬ್ಬವನ್ನು ಹಳ್ಳಿಗಳಲ್ಲಿ ಹೆಚ್ಚಾಗಿ ಆಚರಿಸುತ್ತಿದ್ದರು. ಅವರು ನಾಗದೇವತೆಯನ್ನು ಮೆಚ್ಚಿಸಲು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಲು ಈ ಪೂಜೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ಇದನ್ನು ದೇಶದ ಇತರ ಭಾಗಗಳಲ್ಲಿ ಮತ್ತು ನೇಪಾಳದಲ್ಲಿ ಸಹ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ನಾಗ ಪಂಚಮಿ ಆಚರಣೆಗಳು ವಿಭಿನ್ನವಾಗಿವೆ, ಹುತ್ತ, ನಾಗರ ಕಲ್ಲಿಗೆ ಪೂಜೆಸಲ್ಲಿಸುತ್ತಾರೆ.
ಜನರು ಈ ಹಬ್ಬವನ್ನು ಶ್ರದ್ಧೆ, ನಂಬಿಕೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಜೀವನದಲ್ಲಿ ನಾಗದೇವರ ಆಶೀರ್ವಾದ ಪಡೆಯುವುದು ಒಳ್ಳೆಯದು. ಹಾವುಗಳನ್ನು ಪೂಜಿಸುವ ಮೂಲಕ ನೀವು ಪ್ರಕೃತಿ ಮತ್ತು ಪ್ರಾಣಿಗಳತ್ತ ಗಮನ ಹರಿಸುತ್ತೀರಿ.