Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶ್ರಾವಣ ಮಾಸದಲ್ಲಿ ತಪ್ಪದೇ ಮಾಡಿ ಈ ಕೆಲಸವ, ಶಿವ ಖುಷಿ ಪಡುವನು
ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸವನ್ನು ಪವಿತ್ರ ತಿಂಗಳು ಎಂದು ಪರಿಗಣಿಸಿದ್ದಾರೆ. ಈ ತಿಂಗಳಲ್ಲಿ ಶಿವನ ಆರಾಧನೆ ಬಹಳ ಶ್ರೇಷ್ಠವಾದದ್ದು. ಸಾಮಾನ್ಯ ದಿನಗಳಲ್ಲಿ ಶಿವನ ಪೂಜೆ ಮಾಡುವುದಕ್ಕಿಂತ, ಶ್ರಾವಣ ಮಾಸದಲ್ಲಿ ಒಂದು ಸಾರಿ ಪೂಜೆ ಮಾಡುವುದು 108 ಪಟ್ಟು ಹೆಚ್ಚು ಶ್ರೇಷ್ಠವಾದದ್ದು ಎನ್ನಲಾಗುತ್ತದೆ. ಭಗವಂತನ ಆರಾಧನೆ ಮಾಡಿ ಪುಣ್ಯ ಗಳಿಸಿದರೆ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎನ್ನುವ ನಂಬಿಕೆ ಇದೆ.
ಅನೇಕ ಹಬ್ಬ ಹರಿದಿನಗಳು, ವ್ರತದ ಆಚರಣೆಯನ್ನು ಈ ತಿಂಗಳಲ್ಲೇ ನಡೆಯುತ್ತದೆ. ಕೆಲವು ಶಾಸ್ತ್ರ ಪುರಾಣಗಳ ಪ್ರಕಾರ ಶ್ರಾವಣ ತಿಂಗಳಲ್ಲಿ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುವುದು. ಜೊತೆಗೆ ಕುಟುಂಬ ಸದಸ್ಯರನ್ನು ರಕ್ಷಿಸಿ, ಎಲ್ಲರಿಗೂ ಶುಭವಾಗುವಂತೆ ಮಾಡುವುದು. ಮುಂದಿನ ತಿಂಗಳೇ ಶ್ರಾವಣ ಮಾಸವಾದ್ದರಿಂದ ಈ ವಿಷಯಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ...

ಭಸ್ಮ
ಭಸ್ಮ ಶಿವನಿಗೆ ಶ್ರೇಷ್ಠವಾದದ್ದು. ಶ್ರಾವಣ ಮಾಸದಲ್ಲಿ ದೇವಸ್ಥಾನ ಅಥವಾ ಮನೆಯಲ್ಲಿರುವ ಶಿವನ ಮೂರ್ತಿ/ಚಿತ್ರದ ಮುಂದೆ ಭಸ್ಮವನ್ನು ಇಡಬೇಕು. ಆಗ ಪುಣ್ಯ ಲಭಿಸುವುದು.

ಬೆಳ್ಳಿ ಅಥವಾ ತಾಮ್ರದ ಬಸವ
ಶ್ರಾವಣ ಮಾಸದಲ್ಲಿ ಬೆಳ್ಳಿ ಅಥವಾ ತಾಮ್ರದ ಬಸವನ ಮೂರ್ತಿಯನ್ನು ವಾರ್ಡ್ರೋಬ್ನಲ್ಲಿ ತಂದು ಇರಿಸಬೇಕು. ಹಣಕಾಸಿನ ಹರಿವು ಹೆಚ್ಚುವುದು. ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಫಲಿತಾಂಶ ದೊರೆಯುವುದು.

ರುದ್ರಾಕ್ಷಿ ಮಣಿ
ಯಾವುದೇ ಆಕಾರದಲ್ಲಿರುವ ಒಂದು ರುದ್ರಾಕ್ಷಿ ಮಣಿಯನ್ನು ಮನೆಯ ಮುಖ್ಯ ಶಯನ ಕೋಣೆಯಲ್ಲಿ ಇರಿಸಬೇಕು. ಅದೃಷ್ಟವು ಒಲಿಯುವುದು.

ಗಂಗಾ ಜಲ
ಗಂಗಾ ಜಲದ ಗಿಂಡಿ ಅಥವಾ ಬಾಟಲ್ ಅನ್ನು ಅಡುಗೆ ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುವುದು.

ನಾಗರ ಹೆಡೆ
ಶಿವನ ಕುತ್ತಿಗೆಯಲ್ಲಿ ಹಾವು ಇರುವುದನ್ನು ನಾವು ನೋಡುತ್ತೇವೆ. ನಾಗರ ಹಾವಿನ ತಾಮ್ರ ಅಥವಾ ಬೆಳ್ಳಿ ನಾಗರ ಹೆಡೆಯನ್ನು ಮನೆಯ ಪ್ರಧಾನ ಗೇಟಿನ ಕೆಳಗೆ ಹೂತಿಡಬೇಕು. ಹೀಗೆ ಮಾಡುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುವುದು.

ತಾಮ್ರ ಚೊಂಬು
ಮನೆಯಲ್ಲಿ ಸದಸ್ಯರೊಂದಿಗೆ ಕುಳಿತು, ಹೆಚ್ಚು ಸಮಯ ಕಳೆಯುವ ಜಾಗದಲ್ಲಿ ನೀರು ತುಂಬಿದ ತಾಮ್ರದ ಚೊಂಬನ್ನು ಇಡಬೇಕು. ಇದು ಸುತ್ತಲು ಪ್ರೀತಿ ಮತ್ತು ಸಂತೋಷದ ವಾತಾವರಣವಿರುವಂತೆ ಮಾಡುತ್ತದೆ.

ಡಮರು
ಮಕ್ಕಳ ಕೋಣೆಯಲ್ಲಿ ಡಮರನ್ನು ಇಡಬೇಕು. ಅದು ಮಕ್ಕಳಿಗೆ ಜೀವನದ ಬಗ್ಗೆ ಹೆಚ್ಚು ಏಕಾಗ್ರತೆ ಬೆಳೆಯುವಂತೆ ಮಾಡುತ್ತದೆ. ಅಲ್ಲದೆ ಮಕ್ಕಳನ್ನು ಸದಾ ರಕ್ಷಿಸುತ್ತದೆ.

ತ್ರಿಶೂಲ
ಬೆಳ್ಳಿ ಅಥವಾ ತಾಮ್ರದ ತ್ರಿಶೂಲವನ್ನು ಮನೆಯ ಪ್ರವೇಶಾಂಗಣದಲ್ಲಿ ಇಡಬೇಕು. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯ ಒಳಗೆ ಪ್ರವೇಶಿಸದಂತೆ ಕಾಯುತ್ತದೆ. ಜೊತೆಗೆ ಮನೆಯ ತೇಜಸ್ಸನ್ನು ಹೆಚ್ಚಿಸುತ್ತದೆ.



Click it and Unblock the Notifications