Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ರಾಮನವಮಿ ಹಿನ್ನೆಲೆ ರಾಮನ ಕುರಿತ ಆಸಕ್ತಿಕರ ಸಂಗತಿಗಳು
ಸೂರ್ಯವಂಶ, ರಘುವಂಶ ಅಥವಾ ಇಕ್ಷ್ವಾಕು ವಂಶದ ಶ್ರೀರಾಮಚಂದ್ರ ಅಂದರೆ ಶ್ರೀಮಹಾವಿಷ್ಣುವಿನ ಅವತಾರ.ಹಿಂದೂಗಳಿಗೆ ಪವಿತ್ರ ಗ್ರಂಥಗಳಲ್ಲಿ ರಾಮಾಯಣವು ಒಂದು. ಅಯೋಧ್ಯೆಯಲ್ಲಿ ನಡೆದದ್ದೆಲ್ಲವೂ ಕೂಡ ಇತಿಹಾಸ ಮತ್ತು ಇಂದಿಗೂ ಜನಜನಿತ. ರಾಮನ ಬಗ್ಗೆ ಹೆಚ್ಚಿನವರಿಗೆ ಕೆಲವು ಕುತೂಹಲಕಾರಿ ವಿಚಾರಗಳು ತಿಳಿದೇ ಇಲ್ಲ.

ನಾವಿಲ್ಲಿ ರಾಮನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ 10 ಪ್ರಮುಖ ಅಂಶಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ವಿಚಾರಗಳನ್ನು ನೀವು ತಿಳಿದು ನಿಮ್ಮವರಿಗೆ ತಿಳಿಸುವುದನ್ನು ಮರೆಯಬೇಡಿ.
1) ಹಿಂದೂ ದೇವರಾದ ಭಗವಾನ್ ಶ್ರೀರಾಮ ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಸಿದ್ಧ ಮತ್ತು ರಾಮಾಯಣ ಪುಸ್ತಕದ ನಾಯಕ. ಲಿಖಿತ ರೂಪದಲ್ಲಿ ಈ ಕಥೆಯು ಜನಜನಿತವಾಗುವ ಮೊದಲೇ ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ.ಹಾಗಾಗಿ ಹಿಂದೂ ಧರ್ಮದಲ್ಲಿ ರಾಮಾಯಣವು ಎಲ್ಲರೂ ಭಕ್ತಿಯಿಂದ ಪೂಜಿಸುವ ಗ್ರಂಥವೆನಿಸಿದೆ.
2) ವಿಷ್ಣುವಿನ 7ನೇ ಅವತಾರ ಶ್ರೀರಾಮ ಮತ್ತು ನಂತರ ಕೃಷ್ಣ. ರಾಮನ ಅವತಾರವು ಶ್ರೀವಿಷ್ಣುವಿನ ಪ್ರಮುಖವಾದ ಅವತಾರ ಎಂದು ಪರಿಗಣಿಸಲಾಗುತ್ತದೆ. (ದೇವತೆಯ ಅಭಿವ್ಯಕ್ತಿ).
3) ರಾಮನನ್ನು ಪರಿಪೂರ್ಣ ವ್ಯಕ್ತಿ ಎಂದು ಹೇಳಲಾಗುತ್ತದೆ. ಅದು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ಆತನೊಬ್ಬ ಪರಿಪೂರ್ಣ ವ್ಯಕ್ತಿ.
4) ಹೆಚ್ಚಿನ ಹಿಂದೂಗಳು ರಾಮನು 1.2 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಎಂದು ನಂಬುತ್ತಾರೆ. ಅಂದ್ರೆ ತ್ರೇತಾಯುಗ. ಆದರೆ ಪುಸ್ತಕವು 7th-4th BC ಎಂದು ನಮೂದಿಸುತ್ತದೆ.
5) ರಾಮನ ತತ್ವ ಭಕ್ತ ಹನುಮಂತ.ಇದು ಭಕ್ತಿ ಮತ್ತು ಸರಿಯಾದ ಕ್ರಿಯೆಯ ಸಂಕೇತವಾಗಿದೆ.
6) ತಂದೆಯನ್ನು ಗೌರವಿಸುವ ಸಲುವಾಗಿ ರಾಮನು ತನ್ನ ಹೆಂಡತಿ ಸೀತೆಯ ಮತ್ತು ಸಹೋದರ ಲಕ್ಷ್ಮಣ ಸಹಿತ 14 ವರ್ಷಗಳ ವನವಾಸವನ್ನು ಸ್ವೀಕರಿಸಿದ.
7) ರಾಮಾಯಣದ ಸಂಪೂರ್ಣ ಕಥೆ ಲಂಕಾದ ಅಧಿಪತಿ ದುಷ್ಟ ರಾಜ ರಾವಣನಿಂದ ಕದ್ದ ತನ್ನ ಹೆಂಡತಿಯನ್ನು ವಾಪಸ್ ತೆಗೆದುಕೊಳ್ಳುವ ರಾಮನ ಪ್ರಯಾಣವಾಗಿರುತ್ತದೆ. ರಾಮ (ವಿಷ್ಣು) ಮತ್ತು ಸೀತಾ (ಲಕ್ಷ್ಮಿಯ ಅವತಾರ) ಸಾರ್ವಕಾಲಿಕ ಹಳೆಯ ಮತ್ತು ಪ್ರಸಿದ್ಧ ಪ್ರೇಮಕಥೆಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
8) ರಾಮನ ಬಿಲ್ಲು ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಸಂಪೂರ್ಣ ಸೈನ್ಯವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿತ್ತು ಮತ್ತು ಅದು ಹಾಗೆಯೇ ಮಾಡಿದ್ದೂ ಕೂಡ ನಿಜ.
9) ದುಷ್ಟ ರಾವಣನನ್ನು ವಧಿಸಿದ ನಂತರ ರಾಮನು 11,000 ವರ್ಷಗಳ ಸಂಪೂರ್ಣ ಶಾಂತಿ ಮತ್ತು ಸಮೃದ್ಧಿಗಾಗಿ ತನ್ನ ರಾಜ್ಯ ಅಯೋಧ್ಯೆಯನ್ನು ಆಳಿದ.
10) ರಾವಣನ ಮೇಲೆ ರಾಮನು ವಿಜಯ ಸಾಧಿಸಿದ ದಿನವನ್ನು ದಸರಾ ಎಂದು ಕರೆಯಲ್ಪಡುವ 10 ದಿನಗಳ ಉತ್ಸವದಲ್ಲಿ ಆಚರಿಸಲಾಗುತ್ತದೆ. ರಾಮನು ರಾಜ್ಯಕ್ಕೆ ವಾಪಾಸಾದ ಮತ್ತು ಪಟ್ಟಾಭಿಷೇಕಕ್ಕೆ ಮರಳಿದ ದಿನವನ್ನು ದೀಪಾವಳಿ ದೀಪಗಳ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ.



Click it and Unblock the Notifications




