Just In
- 13 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 12 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 12 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಮನವಮಿ ಹಿನ್ನೆಲೆ ರಾಮನ ಕುರಿತ ಆಸಕ್ತಿಕರ ಸಂಗತಿಗಳು
ಸೂರ್ಯವಂಶ, ರಘುವಂಶ ಅಥವಾ ಇಕ್ಷ್ವಾಕು ವಂಶದ ಶ್ರೀರಾಮಚಂದ್ರ ಅಂದರೆ ಶ್ರೀಮಹಾವಿಷ್ಣುವಿನ ಅವತಾರ.ಹಿಂದೂಗಳಿಗೆ ಪವಿತ್ರ ಗ್ರಂಥಗಳಲ್ಲಿ ರಾಮಾಯಣವು ಒಂದು. ಅಯೋಧ್ಯೆಯಲ್ಲಿ ನಡೆದದ್ದೆಲ್ಲವೂ ಕೂಡ ಇತಿಹಾಸ ಮತ್ತು ಇಂದಿಗೂ ಜನಜನಿತ. ರಾಮನ ಬಗ್ಗೆ ಹೆಚ್ಚಿನವರಿಗೆ ಕೆಲವು ಕುತೂಹಲಕಾರಿ ವಿಚಾರಗಳು ತಿಳಿದೇ ಇಲ್ಲ.
ನಾವಿಲ್ಲಿ ರಾಮನ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ 10 ಪ್ರಮುಖ ಅಂಶಗಳನ್ನು ತಿಳಿಸಿಕೊಡುತ್ತಿದ್ದೇವೆ. ಈ ವಿಚಾರಗಳನ್ನು ನೀವು ತಿಳಿದು ನಿಮ್ಮವರಿಗೆ ತಿಳಿಸುವುದನ್ನು ಮರೆಯಬೇಡಿ.
1) ಹಿಂದೂ ದೇವರಾದ ಭಗವಾನ್ ಶ್ರೀರಾಮ ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಸಿದ್ಧ ಮತ್ತು ರಾಮಾಯಣ ಪುಸ್ತಕದ ನಾಯಕ. ಲಿಖಿತ ರೂಪದಲ್ಲಿ ಈ ಕಥೆಯು ಜನಜನಿತವಾಗುವ ಮೊದಲೇ ಪೀಳಿಗೆಯಿಂದ ಪೀಳಿಗೆಗೆ ರವಾನಿಸಲಾಗಿದೆ.ಹಾಗಾಗಿ ಹಿಂದೂ ಧರ್ಮದಲ್ಲಿ ರಾಮಾಯಣವು ಎಲ್ಲರೂ ಭಕ್ತಿಯಿಂದ ಪೂಜಿಸುವ ಗ್ರಂಥವೆನಿಸಿದೆ.
2) ವಿಷ್ಣುವಿನ 7ನೇ ಅವತಾರ ಶ್ರೀರಾಮ ಮತ್ತು ನಂತರ ಕೃಷ್ಣ. ರಾಮನ ಅವತಾರವು ಶ್ರೀವಿಷ್ಣುವಿನ ಪ್ರಮುಖವಾದ ಅವತಾರ ಎಂದು ಪರಿಗಣಿಸಲಾಗುತ್ತದೆ. (ದೇವತೆಯ ಅಭಿವ್ಯಕ್ತಿ).
3) ರಾಮನನ್ನು ಪರಿಪೂರ್ಣ ವ್ಯಕ್ತಿ ಎಂದು ಹೇಳಲಾಗುತ್ತದೆ. ಅದು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಕೂಡ ಆತನೊಬ್ಬ ಪರಿಪೂರ್ಣ ವ್ಯಕ್ತಿ.
4) ಹೆಚ್ಚಿನ ಹಿಂದೂಗಳು ರಾಮನು 1.2 ಮಿಲಿಯನ್ ವರ್ಷಗಳ ಹಿಂದೆ ಬದುಕಿದ್ದ ಎಂದು ನಂಬುತ್ತಾರೆ. ಅಂದ್ರೆ ತ್ರೇತಾಯುಗ. ಆದರೆ ಪುಸ್ತಕವು 7th-4th BC ಎಂದು ನಮೂದಿಸುತ್ತದೆ.
5) ರಾಮನ ತತ್ವ ಭಕ್ತ ಹನುಮಂತ.ಇದು ಭಕ್ತಿ ಮತ್ತು ಸರಿಯಾದ ಕ್ರಿಯೆಯ ಸಂಕೇತವಾಗಿದೆ.
6) ತಂದೆಯನ್ನು ಗೌರವಿಸುವ ಸಲುವಾಗಿ ರಾಮನು ತನ್ನ ಹೆಂಡತಿ ಸೀತೆಯ ಮತ್ತು ಸಹೋದರ ಲಕ್ಷ್ಮಣ ಸಹಿತ 14 ವರ್ಷಗಳ ವನವಾಸವನ್ನು ಸ್ವೀಕರಿಸಿದ.
7) ರಾಮಾಯಣದ ಸಂಪೂರ್ಣ ಕಥೆ ಲಂಕಾದ ಅಧಿಪತಿ ದುಷ್ಟ ರಾಜ ರಾವಣನಿಂದ ಕದ್ದ ತನ್ನ ಹೆಂಡತಿಯನ್ನು ವಾಪಸ್ ತೆಗೆದುಕೊಳ್ಳುವ ರಾಮನ ಪ್ರಯಾಣವಾಗಿರುತ್ತದೆ. ರಾಮ (ವಿಷ್ಣು) ಮತ್ತು ಸೀತಾ (ಲಕ್ಷ್ಮಿಯ ಅವತಾರ) ಸಾರ್ವಕಾಲಿಕ ಹಳೆಯ ಮತ್ತು ಪ್ರಸಿದ್ಧ ಪ್ರೇಮಕಥೆಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
8) ರಾಮನ ಬಿಲ್ಲು ಎಷ್ಟು ಶಕ್ತಿಶಾಲಿಯಾಗಿತ್ತೆಂದರೆ ಸಂಪೂರ್ಣ ಸೈನ್ಯವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿತ್ತು ಮತ್ತು ಅದು ಹಾಗೆಯೇ ಮಾಡಿದ್ದೂ ಕೂಡ ನಿಜ.
9) ದುಷ್ಟ ರಾವಣನನ್ನು ವಧಿಸಿದ ನಂತರ ರಾಮನು 11,000 ವರ್ಷಗಳ ಸಂಪೂರ್ಣ ಶಾಂತಿ ಮತ್ತು ಸಮೃದ್ಧಿಗಾಗಿ ತನ್ನ ರಾಜ್ಯ ಅಯೋಧ್ಯೆಯನ್ನು ಆಳಿದ.
10) ರಾವಣನ ಮೇಲೆ ರಾಮನು ವಿಜಯ ಸಾಧಿಸಿದ ದಿನವನ್ನು ದಸರಾ ಎಂದು ಕರೆಯಲ್ಪಡುವ 10 ದಿನಗಳ ಉತ್ಸವದಲ್ಲಿ ಆಚರಿಸಲಾಗುತ್ತದೆ. ರಾಮನು ರಾಜ್ಯಕ್ಕೆ ವಾಪಾಸಾದ ಮತ್ತು ಪಟ್ಟಾಭಿಷೇಕಕ್ಕೆ ಮರಳಿದ ದಿನವನ್ನು ದೀಪಾವಳಿ ದೀಪಗಳ ಹಬ್ಬವಾಗಿ ಆಚರಣೆ ಮಾಡಲಾಗುತ್ತದೆ.