Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
2019 ಮಾರ್ಚ್ ತಿಂಗಳಲ್ಲಿ ಬರುವ ವಿಶೇಷ ದಿನಗಳು-ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಹಿಂದೂ ಪಂಚಾಂಗದ ಪ್ರಕಾರ ಪ್ರತಿದಿನ ಹಾಗೂ ಪ್ರತಿ ಘಳಿಗೆಯೂ ಮನುಕುಲಕ್ಕೆ ವಿಶೇಷವಾದ ಸಂಗತಿಯಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಸುತ್ತಲೂ ವಿಶೇಷವಾದ ಋಣಾತ್ಮಕ ಪ್ರಭೆಯು ಸುತ್ತುವರಿದಿರುತ್ತದೆ. ಈ ಪ್ರಭೆಯ ಪ್ರಕಾರವೇ ವ್ಯಕ್ತಿ ಒಳ್ಳೆಯ ಹಾಗೂ ಕೆಟ್ಟಕೆಲಸಗಳನ್ನು ಮಾಡುವನು. ಅದರ ಪ್ರತಿಫಲವನ್ನು ಅಹ ಅವನೇ ಅನುಭವಿಸುತ್ತಾನೆ ಎಂದು ಹೇಳಲಾಗುವುದು. ವ್ಯಕ್ತಿಯಲ್ಲಿ ಕೆಟ್ಟ ಚಿಂತನೆಗಳಿಗಿಂತ ಒಳ್ಳೆಯ ಚಿಂತನೆ ಹೆಚ್ಚಾಗಿ ಇರಬೇಕು. ಆಗಲೇ ತನ್ನ ನಡೆ ನುಡಿಗಳಲ್ಲಿ ಧನಾತ್ಮಕ ವರ್ತನೆಯನ್ನು ತೋರುತ್ತಾನೆ.
ವ್ಯಕ್ತಿ ತನ್ನ ವರ್ತನೆಯಿಂದ ಇತರರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗದೆ ಇದ್ದರೂ ಚಿಂತೆಯಿಲ್ಲ. ಆದರೆ ಕೆಟ್ಟದ್ದನ್ನು ಹಾಗೂ ಇತರರ ಮನಸ್ಸಿಗೆ ನೋವನ್ನುಂಟುಮಾಡಬಾರದು ಎಂದು ಹೇಳಲಾಗುವುದು. ವ್ಯಕ್ತಿ ತನ್ನ ವರ್ತನೆಯಲ್ಲಿ ಒಳ್ಳೆಯ ಸಂಗತಿಯನ್ನು ರೂಢಿಸಿಕೊಳ್ಳಬೇಕು ಎಂದರೆ ಅವನಲ್ಲಿ ದೈವ ಶಕ್ತಿಯ ಬಗ್ಗೆ ನಂಬಿಕೆ ಹಾಗೂ ಆಚರಣೆಯ ಮಹತ್ವ ತಿಳಿದಿರಬೇಕು. ಆಗಲೇ ಅವನು ತಾನು ತೋರುವ ನಡೆ-ನುಡಿಯಲ್ಲಿ ವಿನಯತೆಯನ್ನು ತೋರುತ್ತಾನೆ. ಜೊತೆಗೆ ಇತರರೊಂದಿಗೆ ಹೊಂದಿಕೊಂಡು ಬಾಳುತ್ತಾನೆ. ಜೀವನದಲ್ಲಿ ಅತ್ಯಂತ ಸಂತೋಷದ ಸಮಯವನ್ನು ಅನುಭವಿಸುತ್ತಾನೆ ಎನ್ನಲಾಗುವುದು.

ನಾವು ಆಚರಿಸುವ ವಿಧಿ-ವಿಧಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಮನಸ್ಸಿನ ಮೇಲೆ ಮಹತ್ತರವಾದ ಪ್ರಭಾವ ಬೀರುತ್ತವೆ. ಈ ಹಿನ್ನೆಲೆಯಲ್ಲಿಯೇ ಪುರಾಣ ಇತಿಹಾಸಗಳ ಕಾಲದಿಂದಲೂ ನಿತ್ಯವೂ ಒಂದೊಂದು ವಿಶೇಷ ಧಾರ್ಮಿಕ ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕಾಲಗಳಿಗೆ ಅನುಗುಣವಾಗಿ ಹಾಗೂ ಮಾಸಗಳಿಗೆ ಅನುಗುಣವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಧಾರ್ಮಿಕ ಆಚರಣೆಗಳು ಇರುತ್ತವೆ. ಅವು ನಮಗೆ ಹಾಗೂ ಸಮುದಾಯಕ್ಕೆ ಧನಾತ್ಮಕ ಚಿಂತನೆಗಳನ್ನು ಪಸರಿಸುವುದರ ಮೂಲಕ ಭವಿಷ್ಯದಲ್ಲಿ ಒಳ್ಳೆಯದನ್ನು ಸೃಷ್ಟಿಸುವುದು. ಈ ಹಿನ್ನೆಲೆಯಲ್ಲಿಯೇ ಮಾರ್ಚ್ ತಿಂಗಳಲ್ಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅಥವಾ ಆಚರಣೆಗಳು ಬರುತ್ತವೆ. ಅವುಗಳ ಆಚರಣೆಯ ವಿಶೇಷ ಹಾಗೂ ಯಾವ ದಿನದಂದು ಬಂದಿದೆ ಎನ್ನುವಂತಹ ವಿವಿಧ ಸಂಗತಿಗಳ ಕುರಿತು ನೀವು ತಿಳಿದುಕೊಳ್ಳುವ ಕುತೂಹಲವನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಮಾರ್ಚ್ 8 - ಫುಲೆರಾ ದೋಜ್ ಮತ್ತು ರಾಮಕೃಷ್ಣ ಜಯಂತಿ
ಫುಲೇರಾ ದೋಜ್ ಮತ್ತು ರಾಮಕೃಷ್ಣ ಜಯಂತಿಯನ್ನು ಮಾರ್ಚ್ 8ರಂದು ಆಚರಿಸಲಾಗುವುದು. ಫುಲೇರಾ ದೋಜ್ ಮಾರ್ಚ್ 8 ರಂದು ನಡೆಯುತ್ತದೆ. ದ್ವಿತೀಯ ತಿಥಿ ಮಾರ್ಚ್ 7 ರಂದು 11.43 ಕ್ಕೆ ಪ್ರಾರಂಭವ ಗಿ ಮಾರ್ಚ್ 9 ರಂದು 1.34 ಕ್ಕೆ ಕೊನೆಗೊಳ್ಳುತ್ತದೆ. ಸಂತ ರಾಮಕೃಷ್ಣ ಅವರ ಜನ್ಮ ದಿನಾಚರಣೆ ಮಾರ್ಚ್ 8 ರಂದು ನಡೆಯತ್ತದೆ. ಅವರು 19 ನೇ ಶತಮಾನದ ಸಂತರಾಗಿದ್ದರು. ಈ ದಿನದಂದು ಚಂದ್ರ ದರ್ಶನ್ ಸಹ ವೀಕ್ಷಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.

ಮಾರ್ಚ್ 10 - ವಿನಾಯಕ ಚತುರ್ಥಿ
ಮಾರ್ಚ್ 10 ರಂದು ಗಣೇಶನಿಗೆ ಮೀಸಲಾದ ದಿನವಾಗಲಿದೆ. ಏಕೆಂದರೆ ಅಂದು ವಿನಾಯಕ ಚತುರ್ಥಿಯನ್ನು ಆಚರಿಸಲಾಗುವುದು. ಈ ದಿನದ ಪೂಜೆಯ ಸಮಯ ಮುಂಜಾನೆ 11.21 ರಿಂದ ಮಧ್ಯಾಹ್ನ 1.42 ರವರೆಗೆ ಇರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಕ್ರಮವಾಗಿ ಸಾಯಂಕಾಲ 6.41 ರಿಂದ ಸಾಯಂಕಾಲ 6.22 ರವರೆಗೆ ಇರುತ್ತದೆ. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.

ಮಾರ್ಚ್ 12 - ಸ್ಕಂದ ಶಶ್ತಿ ಮತ್ತು ಮಾಸಿಕ್ ಕಾರ್ತಿಗೈ
ಕಾರ್ತಿಗೈ ಪೂಜಿಸುವ ಸ್ಕಂದ ಶಶ್ತಿ ಅನ್ನು ಮಾರ್ಚ್ 12 ರಂದು ಆಚರಿಸಲಾಗುತ್ತದೆ. ಅದೇ ಉತ್ಸವವನ್ನು ಭಾರತದ ಕೆಲವು ದಕ್ಷಿಣ ಭಾಗಗಳಲ್ಲಿ ಮಸಿಕ್ ಕಾರ್ತಿಗೈ ಎಂದು ಕರೆಯಲಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಮುಂಜಾನೆ 6.39 ರಿಂದ ಸಾಯಂಕಾಲ 6.24 ರವರೆಗೆ ಇರುತ್ತದೆ. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.

ಮಾರ್ಚ್ 13 - ಫಾಲ್ಗುನ್ ಅಷ್ಟಾನಿಕ ಮತ್ತು ರೋಹಿಣಿ ವ್ರತ
ರೋಹಿಣಿ ವ್ರತ ಮಾರ್ಚ್ 13 ರಂದು ಆಚರಿಸಲಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತವು ಕ್ರಮವಾಗಿ ಮುಂಜಾನೆ 6.37 ರಿಂದ ಸಾಯಂಕಾಲ 6.24 ರವರೆಗೆ ಇರುತ್ತದೆ. ಜೈನ ಸಮುದಾಯದ ಒಂಬತ್ತು ದಿನಗಳ ಉತ್ಸವವೂ ಸಹ ಫಲ್ಗುನ್ ಅಷ್ಟಾನಿಕಾ ದಲ್ಲಿಯೇ ನಡೆಯುವುದು. ಇದು ಮಾರ್ಚ್ 13 ರಂದು ಪ್ರಾರಂಭವಾಗುತ್ತದೆ. ಜೊತೆಗೆ ರೋಹಿಣಿ ವ್ರತ ವು ಅಂದೇ ಆಚರಿಸಲಾಗುವುದು. ಜೈನ ಮಹಿಳೆಯರು ಈ ದಿನದಂದೇ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ ಎನ್ನಲಾಗುವುದು.

ಮಾರ್ಚ್ 14 - ಮಸೀಕ್ ದು ರ್ಗಾಷ್ಟಮಿ ಮತ್ತು ಕಾರ್ಡಿಯಾನ್ ನಂಬು:
ಮಾರ್ಚ್ 14 ರಂದು ದುರ್ಗಾ ದೇವಿಗೆ ಉಪವಾಸ ದಿನ ಎಂದು ಆಚರಿಸಲಾಗುವುದು. ಅದನ್ನು ಮಾಸೀಕ್ ದುರ್ಗಾಷ್ಠಮಿ ಎಂದು ಸಹ ಕರೆಯುತ್ತಾರೆ. ಅದೇ ದಿನದಂದು ಕಾರ್ಡಿಯಾನ್ ನಂಬು ಉತ್ಸವವನ್ನು ಸಹ ಆಚರಿಸಲಾಗುತ್ತದೆ. ಈ ಹಬ್ಬವು ವಾಸ್ತವವಾಗಿ ಗಂಡಂದಿರ ದೀರ್ಘಾಯುಷ್ಯ ಅಥವಾ ದೀರ್ಘಾವಧಿಯ ಜೀವನವನ್ನು ಕೋರಿ ಉಪವಾಸ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ ಎನ್ನಲಾಗುವುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ಕ್ರಮವಾಗಿ ಮುಂಜಾನೆ 6.36 ರಿಂದ ಸಾಯಂಕಾಲ 6.25 ರವರೆಗೆ ಇರುತ್ತದೆ.

ಮಾರ್ಚ್ 15 - ಮೀನ ಸಂಕ್ರಾಂತಿ
ಹಿಂದೂ ಪಂಚಾಂಗದ ಪ್ರಕಾರ ಈ ದಿನವನ್ನು ಹನ್ನೆರಡನೆಯ ತಿಂಗಳ ಪ್ರಾರಂಭವನ್ನು ಸೂಚಿಸುತ್ತದೆ. ಈ ದಿನವನ್ನು ಸೂರ್ಯ ದೇವರನ್ನು ಪೂಜಿಸುವ ಮತ್ತು ದೇಣಿಗೆ ನೀಡುವ ಎಂದು ಪರಿಗಣಿಸಲಾಗುವುದು. ಇದು ಹಿಂದೂಗಳಿಗೆ ಅತ್ಯಂತ ಮಂಗಳಕರವಾದ ದಿನ ಎಂದು ಹೇಳುತ್ತಾರೆ. ಈ ದಿನದ ಮಹಾ ಪುಣ್ಯಕಾಲದ ಮುಹೂರ್ತ ಎಂದರೆ ಮುಂಜಾನೆ 6.35 ರಿಂದ ಮುಂಜಾನೆ 8.34 ರವರೆಗೆ ಇರುತ್ತದೆ. ಪೂನಿಕಲ್ ಮುಹೂರ್ತ ಮಧ್ಯಾಹ್ನ 12.30 ರವರೆಗೆ ವಿಸ್ತರಿಸುತ್ತದೆ.

ಮಾರ್ಚ್ 17 - ಅಮಲಕಿ ಏಕಾದಶಿ
ಅಮಲಕಿ ಏಕಾದಶಿ ಯನ್ನು ವಿಶೇಷವಾದ ಏಕಾದಶಿ ಎಂದು ಪರಿಗಣಿಸಲಾಗುವುದು. ಅಮಲಕಿ ಏಕಾದಶಿ ಮಾರ್ಚ್ 18 ರಂದು ನಡೆಯಲಿದೆ. ಏಕಾದಶಿ ತಿಥಿ ಮಾರ್ಚ್ 16 ರಂದು ಮಧ್ಯಾಹ್ನ 11.33 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 17 ರಂದು ಸಂಜೆ 8.51 ಕ್ಕೆ ಕೊನೆಗೊಳ್ಳುತ್ತದೆ. ಪ್ಯಾರಾ ಸಮಯವು ಮಾರ್ಚ್ 18 ರಂದು ಮುಂಜಾನೆ 6.32 ರಿಂದ ಮುಂಜಾನೆ 8.55 ರವರೆಗೆ ಇರುತ್ತದೆ. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.

ಮಾರ್ಚ್18 - ನರಸಿಂಹ ದ್ವಾದಶಿ ಮತ್ತು ಪ್ರದೋಶ್ ವ್ರತ
ನರಸಿಂಹ ದ್ವಾದಶಿ ಮಾರ್ಚ್ 18 ರಂದು ಬರುತ್ತದೆ. ವಿಷ್ಣು ಮನುಷ್ಯ ಮತ್ತು ಸಿಂಹನ ಅವತಾರವನ್ನು ತಾಳಿದ ದಿನ. ವಿಷ್ಣುವಿನ ಈ ಅವತಾರ ದುಷ್ಟ ಶಕ್ತಿಯ ನಿಗ್ರಹ ಹಾಗೂ ಶಿಷ್ಟ ಶಕ್ತಿಯ ಪಾಲನೆಗಾಗಿ ಅವತರಿಸಿ ಬಂದಿರುವುದಾಗಿದೆ. ಈ ದಿನದಂದು ನರಸಿಂಹ ದೇವರನ್ನು ಪೂಜಿಸಲಾಗುತ್ತದೆ. ಸೂರ್ಯೋದಯವು ಮುಂಜಾನೆ 6.46 ಕ್ಕೆ ಮತ್ತು ಸೂರ್ಯಾಸ್ತ 6.19 ಕ್ಕೆ ನಡೆಯುತ್ತದೆ.

ಮಾರ್ಚ್ 20 - ಫಾಲ್ಗುಣ ಚೌಮಾಸಿ ಚೌಡಾಸ್, ಛೋಟಿ ಹೋಳಿ, ಹೋಳಿಕಾ ದಹಾನ್, ಫಾಲ್ಗುಣ ಪೂರ್ಣಿಮ ವ್ರತ
ಫಲ್ಗುಣ ಚೌಮಾಸಿ ಚೌಡಾಸ್, ಛೋಟಿ ಹೋಳಿ (ಹೋಳಿಗೆ ಮುಂಚಿತವಾಗಿ), ಪೂರ್ಣಿಮ ಎಲ್ಲವನ್ನೂ ಮಾರ್ಚ್ 20 ರಂದು ಆಚರಿಸಲಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯ ಕ್ರಮವಾಗಿ ಮುಂಜಾನೆ 6.29 ರಿಂದ ಸಾಯಂಕಾಲ 6.28 ರವರೆಗೆ ಇರುತ್ತದೆ.

ಮಾರ್ಚ್ 21 - ಹೋಳಿ, ವಸಂತ ಪೂರ್ಣಿಮ, ಫಾಲ್ಗುಣ ಪೂರ್ಣಿಮಾ, ಲಕ್ಷ್ಮಿ ಜಯಂತಿ, ಪಂಗೂನಿ ಉಧಿರಾಮ್, ಡಾಲ್ ಪೂರ್ಣಿಮಾ, ಫಾಲ್ಗುನ್ ಅಷ್ಟಾನಿಕಾ ಎಂಡ್ಸ್, ಚೈತನ್ಯ ಮಹಾಪ್ರಭು ಜಯಂತಿ
ಹೋಳಿ ಲಕ್ಷ್ಮಿ ಜಯಂತಿ ಮತ್ತು ಚೈತನ್ಯ ಮಹಾಪ್ರಭು ಜಯಂತಿ ಅವರೊಂದಿಗೆ ಮಾರ್ಚ್ 21 ರಂದು ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಜೈನ ಉತ್ಸವವಾದ ಫಾಲ್ಗುಣ ಅಹ್ಸ್ಥಾನಿಕಾ ಈ ದಿನವೂ ಕೊನೆಗೊಳ್ಳುತ್ತದೆ. ಸೂರ್ಯನ ಸ್ಥಾನದಲ್ಲಿ ಬದಲಾವಣೆಗೆ ಸಂಬಂಧಿಸಿದ ಫಂಗೂನಿ ಉಥೀರಮ್ ತಮಿಳು ಉತ್ಸವವೂ ಈ ದಿನದಂದು ಬರುತ್ತದೆ. ಸೂರ್ಯನು ಮುಂಜಾನೆ 6.28 ಗಂಟೆಗೆ ಏರುತ್ತಾನೆ ಮತ್ತು ಸಾಯಂಕಾಲ 6.29 ಕ್ಕೆ ಸಂಚರಿಸುತ್ತಾನೆ. ಅದೇ ದಿನದಂದು ಪ್ರದೋಶ ವ್ರತವನ್ನು ಸಹ ಆಚರಿಸಲಾಗುವುದು.

ಮಾರ್ಚ್ 22 - ಬಾಯಿ ದೋಜ್
ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 22ರಂದು ಬಾಯಿ ದೋಜ್ ಆಚರಣೆಯನ್ನು ಆಚರಿಸಲಾಗುವುದು. ಇದು ಪ್ರತಿ ವರ್ಷವೂ ಹೋಳಿ ಹಬ್ಬದ ಮರುದಿನ ಬರುವುದು ಎಂದು ಹೇಳುತ್ತಾರೆ. ದ್ವಿತೀಯ ತಿಥಿ ಮಾರ್ಚ್ 22 ರಂದು 3.52 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 23 ರಂದು ಮುಂಜಾನೆ 00.55 ಕ್ಕೆ ಕೊನೆಗೊಳ್ಳುತ್ತದೆ. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.

ಮಾರ್ಚ್ 24 - ಬಾಲಚಂದ್ರ ಸಂಕಷ್ಟಿ ಚತುರ್ಥಿ:
ಬಾಲಚಂದ್ರ ಸಂಕಷ್ಟಿ ಚತುರ್ಥಿಯು ಗಣೇಶನಿಗೆ ಅರ್ಪಿತವಾಗಿದೆ. ವಿಶೇಷವಾದ ಗಣೇಶ ಚತುರ್ಥಿಯ ತಿಥಿ ಮಾರ್ಚ್ 23 ರಂದು ಮಧ್ಯಾಹ್ನ 10.32 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 24 ರಂದು ಮಧ್ಯಾಹ್ನ 8.51 ಕ್ಕೆ ಕೊನೆಗೊಳ್ಳುತ್ತದೆ. ಇದನ್ನು ಉಪವಾಸ ದಿನವೆಂದು ಪರಿಗಣಿಸಲಾಗುತ್ತದೆ. ಅಂದು ಉಪವಾಸ ಕೈಗೊಳ್ಳುವುದರ ಮೂಲಕ ಜನರು ಪುಣ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.

ಮಾರ್ಚ್ 25 - ರಂಗ ಪಂಚಮಿ:
ರಂಗ ಪಂಚಮಿ ಭಾರತದ ಕೆಲವು ಭಾಗಗಳಲ್ಲಿ ಹೋಳಿ ಹೋಲುವ ರೀತಿಯಲ್ಲಿ ಆಚರಿಸಲಾಗುತ್ತದೆ. ಮಾರ್ಚ್ 24 ರಂದು ಸಂಜೆ 8.51 ಕ್ಕೆ ಪಂಚಮಿ ತಿಥಿ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 25 ರಂದು ಸಂಜೆ 7.59 ಕ್ಕೆ ಕೊನೆಗೊಳ್ಳುತ್ತದೆ. ವಿಭಿನ್ನ ಆಚರಣೆಯ ಮೂಲಕ ಸಾಕಷ್ಟು ಧಾರ್ಮಿಕ ಕೆಲಸವನ್ನು ಕೈಗೊಳ್ಳಲಾಗುವುದು. ಜೊತೆಗೆ ಜನರು ಸಹ ಈ ದಿನದಂದು ಹೆಚ್ಚು ಸಂತೋಷವನ್ನು ಅನುಭವಿಸುವರು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮಾರ್ಚ್ 28 - ಕಾಲಾಷ್ಟಮಿ, ಬಸೋಡಾ ಮಾರ್ಚ್ 28, ಶೀತಲ ಅಷ್ಟಮಿ, ವರ್ಷಿತಪ ಆರಂಭ:
ಬಸೊಡಾ ಅಥವಾ ಶೀತಾಲ ಅಷ್ಟಮಿ ಮಾರ್ಚ್ 28, 2019 ರಂದು ಬೀಳುತ್ತದೆ. ಕಾಲಾಷ್ಟಮಿ ಯ ದಿನದಂದು ಕಾಳ ಭೈರವ ದೇವರನ್ನು ಆರಾಧಿಸಲಾಗುವುದು. ಅತ್ಯಂತ ಶಕ್ತಿಶಾಲಿಯಾದ ಈ ದೇವರ ಪೂಜೆಯಿಂದ ಜೀವನದಲ್ಲಿ ಸಾಕಷ್ಟು ಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ವರ್ಷಿತಪ ಆರಂಭ ಜೈನ ಆಚರಣೆಯಾಗಿದ್ದು, ಇದು ಸಹ ಮಾರ್ಚ್ 28ರಂದೇ ಆಚರಿಸಲಾಗುವುದು. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.

ಮಾರ್ಚ್31 - ಪಂಪೋಚ್ಚಿನಿ ಏಕಾದಶಿ
ಚೋಪ್ರಾ ನವರಾತ್ರಿ ಮತ್ತು ಹೋಳಿಕಾ ದಹಾನ್ ನಡುವೆ ಬರುವ ಏಕಾದಶಿಯನ್ನು ಪಂಪೋಚ್ಚಿನಿ ಏಕಾದಶಿ ಎಂದು ಕರೆಯಲಾಗುವುದು. ಇದು ಮಾರ್ಚ್ 31 ರಂದು ನಡೆಯಲಿದೆ. ಏಕಾದಶಿ ತಿಥಿ ಮಾರ್ಚ್ 31 ರಂದು ಮುಂಜಾನೆ 3.23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 1 ರಂದು ಮುಂಜಾನೆ 6.04 ಕ್ಕೆ ಕೊನೆಗೊಳ್ಳುತ್ತದೆ. ಈ ಆಚರಣೆಯು ಸಹ ಧಾರ್ಮಿಕವಾಗಿ ಅತ್ಯಂತ ಪಾವಿತ್ರ್ಯತೆಯನ್ನು ಪಡೆದುಕೊಂಡಿದೆ.



Click it and Unblock the Notifications











