Just In
- 6 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 7 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 7 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 8 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಗವಂತನ ಪೂಜೆಗೆ ಬಳಸುವ ವಸ್ತುಗಳು ನೈಸರ್ಗಿಕವಾಗಿರಬೇಕು ಏಕೆ?
ನಾವು ಭಗವಂತನಿಗೆ ಪೂಜೆ ಮಾಡುವ ಸಮಯದಲ್ಲಿ ದೇವರಿಗೆ ಕಟ್ಟುನಿಟ್ಟಿನ ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸಬೇಕಾಗಿಲ್ಲ ಎಂದೇ ನಂಬುತ್ತೇವೆ. ನಿಜವಾದ ಭಕ್ತಿಯ ಶಕ್ತಿಗೆ ಆ ಭಗವಂತ ಒಲಿಯುತ್ತಾರೆ ಎಂಬ ನಂಬಿಕೆ ನಮಗಿರುತ್ತದೆ. ಇದು ನಿಜವಾದರೂ ಕೆಲವು ಸಂದರ್ಭಗಳಲ್ಲಿ ನಾವು ದೇವರಿಗೆ ಮಾಡುವ ಪೂಜೆಯಲ್ಲಿ ಗೊತ್ತಿಲ್ಲದೆಯೇ ಯಾವುದೇ ರೀತಿಯ ಹಾನಿಗಳನ್ನು ಮಾಡಬಾರದು. ಪೂಜಾ ಸಮಯದಲ್ಲಿ ಲೋಹದ ವಸ್ತುಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಆ ಬಗೆಯಾಗಿ ಕೆಲವೊಂದು ಮುಂಜಾಗ್ರತೆಗಳನ್ನು ಅನುಸರಿಸಬೇಕಾಗುತ್ತದೆ. ಋಣಾತ್ಮಕ ಶಕ್ತಿಗಳನ್ನು ಕೆಲವು ಲೋಹಗಳು ಆಕರ್ಷಿಸಲಿದ್ದು ಇದು ಧನಾತ್ಮಕ ಅಂಶವನ್ನು ನಾಶಗೊಳಿಸುತ್ತದೆ. ಇದರಿಂದ ಭಕ್ತರಿಗೆ ಹಾನಿಯುಂಟಾಗುತ್ತದೆ ಎಂಬುದು ನಂಬಿಕೆಯಾಗಿದೆ. ಇದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ಮನುಸ್ಮೃತಿ
ಮನುಸ್ಮೃತಿ ಎಂಬುದು ಅನಾದಿ ಕಾಲದಿಂದಲೂ ಹಿಂದೂ ಶಾಸ್ತ್ರ ಸಂಪ್ರದಾಯಗಳನ್ನು ವಿವರಿಸಿರುವ ಗ್ರಂಥವಾಗಿದೆ. ವಿಶ್ವದಲ್ಲಿರುವ ಮಾನವರ ಮೌಲ್ಯ, ನೀತಿ ಮತ್ತು ಆಯ್ಕೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಮೂರು ವರ್ಣಗಳ ಪ್ರಕಾರ ಸಮಾಜದಲ್ಲಿ ಮಾನವರ ವರ್ಗೀಕರಣವನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಇದರಲ್ಲಿ ತಿಳಿಸಲಾಗಿದೆ. ಯುದ್ಧದ ನೀತಿಯನ್ನು ಇದರಲ್ಲಿ ವಿವರಿಸಲಾಗಿದೆ. ಮಹಿಳೆಯರ ಹಕ್ಕುಗಳು, ಮಾನವನ ನಡತೆಗಳು ಮತ್ತು ಗುಣಗಳನ್ನು ಈ ಗ್ರಂಥದಲ್ಲಿ ಕಂಡು ಕೊಳ್ಳಬಹುದಾಗಿದೆ. ದಿನನಿತ್ಯದ ಪೂಜೆಯಲ್ಲಿ ಯಾವ ರೀತಿಯ ನಿಯಮಗಳನ್ನು ನಾವು ಪಾಲಿಸಬೇಕು ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ. ಮನುಸ್ಮೃತಿಯಲ್ಲಿ ಪೂಜಾ ಸಮಯದಲ್ಲಿ ಬಳಸಬಹುದಾದ ಕೆಲವು ಲೋಹಗಳನ್ನು ನಿಷೇಧಿಸಲಾಗಿದೆ. ಅಲ್ಯುಮಿನಿಯಂ, ಕಬ್ಬಿಣ ಅಥವಾ ಕೃತಕ ಲೋಹಗಳನ್ನು ಬಳಸಬಾರದು ಎಂದು ಮನುಸ್ಮೃತಿಯಲ್ಲಿ ಹೇಳಿದೆ.
ಅಲ್ಯುಮಿನಿಯಂ
ತೊಂಬತ್ತರ ದಶಕದಿಂದ ಪ್ರಾರಂಭವಾದ ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಮನೆಯ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳನ್ನೆಲ್ಲಾ ಅಟ್ಟಕ್ಕೇರಿಸಿ ವಿವಿಧ ರೂಪದಲ್ಲಿ ವಿರಾಜಿಸಿದವು. ಕುಕ್ಕರ್, ಕೈಪಾತ್ರೆ, ದೊಡ್ಡ ಪಾತ್ರೆ, ಇಡ್ಲಿ ಪಾತ್ರೆ, ಕಾವಲಿ, ಅಷ್ಟೇ ಏಕೆ ಒಳಗೆ ಕಪ್ಪಗಿನ ಪದರವನ್ನು ಹಚ್ಚಿಸಿಕೊಂಡು ನಾನ್ ಸ್ಟಿಕ್ ರೂಪದಲ್ಲಿಯೂ ಲಭ್ಯವಾಗತೊಡಗಿದವು. ಅಲ್ಯುಮಿನಿಯಂ ಅನ್ನು ಉಜ್ಜಿದಾಗ ಅದು ಕಪ್ಪಗಿನ ಹುಡಿಯನ್ನು ನೀಡುತ್ತದೆ. ಈ ಹುಡಿಯನ್ನು ಪೂಜೆಯ ವೇಳೆಯಲ್ಲಿ ಅಪಶಕುನ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಈ ಲೋಹವನ್ನು ಬಳಸಬಾರದು.
ಕಬ್ಬಿಣ
ನೀರು ಮತ್ತು ಗಾಳಿಯ ಸಂಪರ್ಕಕ್ಕೆ ಬಂದಾದ ಕಬ್ಬಿಣವು ತುಕ್ಕು ಹಿಡಿಯುತ್ತದೆ. ತುಕ್ಕನ್ನು ಪೂಜೆಯ ಸಮಯದಲ್ಲಿ ಅಮಂಗಳ ಎಂದು ಭಾವಿಸಲಾಗಿದೆ. ಆದ್ದರಿಂದ ಪೂಜೆಯ ವೇಳೆಯಲ್ಲಿ ಈ ವಸ್ತುವನ್ನು ಬಳಸಬಾರದು ಎಂದಾಗಿ ಹೇಳಲಾಗಿದೆ.
ಸ್ಟೀಲ್
ವಾತಾವರಣದಲ್ಲಿರುವ ಸಾತ್ವಿಕ ಶಕ್ತಿಯನ್ನು ಸ್ಟೀಲ್ ಸುಲಭವಾಗಿ ಹೀರಿಕೊಳ್ಳುವುದಿಲ್ಲ. ಇದು ಹೆಚ್ಚು ವೇಗವಾಗಿ ಋಣಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಪೂಜೆಯ ಸಮಯದಲ್ಲಿ ಈ ಲೋಹವನ್ನು ಬಳಸಬಾರದಾಗಿದೆ. ಕೃತಕ ವಸ್ತುಗಳಿಂದ ತಯಾರಿಸಲಾದ ಯಾವುದೇ ವಸ್ತುಗಳನ್ನು ಪೂಜೆಗೆ ಬಳಸಬಾರದು ಎಂದು ಮನುಸ್ಮೃತಿಯಲ್ಲಿ ತಿಳಿಸಲಾಗಿದೆ. ನೈಸರ್ಗಿಕವಾಗಿ ಬಂದಿರುವ ವಸ್ತುಗಳನ್ನೇ ಪೂಜೆಯ ಸಮಯದಲ್ಲಿ ಬಳಸಬೇಕು ಎಂಬುದಾಗಿ ತಿಳಿಸಲಾಗಿದೆ. ಇವುಗಳು ಋಣಾತ್ಮಕ ಅಂಶವನ್ನು ಹೆಚ್ಚು ನೀಡುತ್ತವೆ ಮತ್ತು ವಾತಾವರಣದಲ್ಲಿರುವ ಸಾತ್ವಿಕ ಶಕ್ತಿಯನ್ನು ಬಳಸಿಕೊಳ್ಳಲಾರವು. ಬದಲಿಗೆ ಹಿತ್ತಾಳೆ, ತಾಮ್ರವನ್ನು ಪೂಜೆಯ ಸಮಯದಲ್ಲಿ ಬಳಸಬಹುದಾಗಿದೆ. ಮಣ್ಣು, ಮಣ್ಣಿನ, ಬೆಳ್ಳಿ, ತಾಮ್ರ, ಅಥವಾ ಚಿನ್ನದಿಂದ ಮಾಡಿದ ವಸ್ತುಗಳನ್ನು ಬಳಸಿಕೊಂಡು ಪೂಜೆಯಲ್ಲಿ ಉಪಯೋಗಿಸಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳು ಸುಲಭವಾಗಿ ಧನಾತ್ಮಕ ಅಲೆಗಳನ್ನು ಪಡೆಯಬಹುದು. ಬೆಳ್ಳಿ ಮತ್ತು ಬೆಳ್ಳಿಯ ಬೆಲೆಗಳು ದುಬಾರಿಯಾಗಿರುವುದರಿಂದ, ತಾಮ್ರ, ಹಿತ್ತಾಳೆ ಅಥವಾ ಕಲ್ಲಿನ ವಸ್ತುಗಳನ್ನು ಬಳಸಿ ಪೂಜೆ ಮಾಡುವುದು ಒಳ್ಳೆಯ ಆಯ್ಕೆಯಾಗಿದೆ.
ಹಳೆಯ ವಸ್ತುಗಳು ಹೆಚ್ಚು ಮಂಗಳಕರವಾಗಿರುತ್ತದೆ
ಮತ್ತೊಂದು ವಿಷಯವೆಂದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ಇನ್ನೊಂದು ಅಂಶವೆಂದರೆ ಹಳೆಯ ವಸ್ತುಗಳನ್ನು (ಪೂಜೆಯಲ್ಲಿ ಬಳಸಲಾಗುವ ಪೂಜಾ ಪಾತ್ರೆ) ಇದು ಉತ್ತಮವಾಗಿದೆ. ಪೂಜೆಗಾಗಿ ಬಳಸಿದ ಯಾವುದೇ ವಸ್ತುವು ಧಾರ್ಮಿಕ ದೈವಿಕ ಅಲೆಗಳನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ, ಇದು ಪೂಜಾ ಕೊಠಡಿಯಲ್ಲಿ ಹೊರಹೊಮ್ಮುತ್ತದೆ. ದೈನಂದಿನ ಪ್ರಾರ್ಥನೆಗಳು ಮತ್ತು ಧಾರ್ಮಿಕ ಕ್ರಿಯೆಗಳಿಗೆ ಕಾರಣವಾಗುವ ಕಾರಣ ದೇವತೆಯ ವಿಗ್ರಹವು ಕೆಲವು ದೈವಿಕ ಶಕ್ತಿಯನ್ನು ಪಡೆಯುತ್ತದೆ. ಹೀಗಾಗಿ, ಅಲ್ಲಿ ಯಾವುದೇ ವಸ್ತುವನ್ನು ಇರಿಸುವುದು, ಅದು ದೈವಿಕವೂ ಆಗುತ್ತದೆ. ಆದ್ದರಿಂದ, ನಾವು ಪೂಜೆಯ ಸಮಯದಲ್ಲಿ ಹಳೆಯ ಲೋಹಗಳನ್ನು ಇರಿಸಿಕೊಳ್ಳಬೇಕು ಮತ್ತು ಬಳಸಬೇಕು. ಉದಾಹರಣೆಗೆ, ದೇವತೆ ಸರಸ್ವತಿಯ ಮುಂದೆ ಬಳಸಿದ ದೀಪವನ್ನು, ಉದಾಹರಣೆಗೆ ಗಣೇಶನಿಗಾಗಿ ಬಳಸಲಾಗುತ್ತದೆ, ಈ ದೀಪವು ದೇವಿಯ ಸಾತ್ವಿಕ ಶಕ್ತಿಯನ್ನು ಹೊಂದಿರುತ್ತದೆ, ಆದರೆ ದೇವತೆ ಸರಸ್ವತಿ ಅಥವಾ ಗಣೇಶನ ನಿರ್ದಿಷ್ಟ ಅಂಶವನ್ನು ಹೊಂದಿರುವುದಿಲ್ಲ ಎಂದು ನಂಬಲಾಗಿದೆ. ಆದ್ದರಿಂದ ಒಂದು ದೇವರಿಗೆ ಬಳಸಿದ ಪೂಜಾ ಪರಿಕರಗಳನ್ನು ಇನ್ನೊಂದು ದೇವರಿಗೆ ಬಳಸಬಾರದು ಎಂದು ಹೇಳಲಾಗಿದೆ.
ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬೇಡಿ
ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಬಾರದು ಹೀಗೆ ಮಾಡುವುದರಿಂದ ಅನಾರೋಗ್ಯ ಮತ್ತು ದಾರಿದ್ರ್ಯ ಆವರಿಸುತ್ತದೆ. ಪ್ರತಿ ದೀಪವನ್ನು ಹಚ್ಚಲು ಬೇರೆ ಕಡ್ಡಿಯನ್ನೇ ಉಪಯೋಗಿಸಬೇಕು, ಒಂದೇ ಕಡ್ಡಿಯಿಂದ ಹಲವಾರು ದೀಪಗಳನ್ನು ಹಚ್ಚಬಹುದು. ನೆನಪಿಡಿ ಪೂಜಾಗೃಹದಲ್ಲಿ ದೀಪವನ್ನು ಎಂದಿಗೂ ದಕ್ಷಿಣಾಭಿಮುಖವಾಗಿ ಇರಿಸಬಾರದು. .
ಪೂಜೆಯ ಸಮಯದಲ್ಲಿ ಆದಷ್ಟು ಇಂತಹ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
*ಅಮೃತದಷ್ಟೇ
ಪಂಚಾಮೃತವೂ
ಪವಿತ್ರ
ಎಂದು
ಶಾಸ್ತ್ರಗಳು
ತಿಳಿಸುತ್ತವೆ.
ಆದ್ದರಿಂದ
ಪೂಜೆಯ
ಸಮಯದಲ್ಲಿ
ಪಂಚಾಮೃತವನ್ನು
ಬಳಸುವುದು
ಉತ್ತಮ.
ಅಲ್ಲದೇ
ದೇವರಿಗೂ
ಪಂಚಾಮೃತ
ಇಷ್ಟವಾಗಿದ್ದು
ದೇವರ
ಅನುಗ್ರಹವನ್ನು
ಪಡೆಯಲು
ಪೂಜೆಯಲ್ಲಿ
ಪಂಚಾಮೃತವನ್ನು
ಸದಾ
ಬಳಸಬೇಕು.
*ಶಂಖದ
ಸದ್ದಿನಿಂದ
ಪೂಜಾಗೃಹ
ಹಾಗೂ
ಮನೆಯಲ್ಲಿರುವ
ಋಣಾತ್ಮಕ
ಶಕ್ತಿಗಳನ್ನು
ಹೊಡೆದೋಡಿಸಲು
ಸಾಧ್ಯವಾಗುತ್ತದೆ
ಹಾಗೂ
ಈ
ಸ್ಥಳದಲ್ಲಿ
ಧನಾತ್ಮಕ
ಕಂಪನಗಳನ್ನು
ಉತ್ಪತ್ತಿಮಾಡುತ್ತದೆ.
ಇದೇ
ಕಾರಣಕ್ಕೆ
ದೇವಸ್ಥಾನಗಳಲ್ಲಿ
ಶಂಖವನ್ನು
ಪೂಜಾಸಮಯದಲ್ಲಿ
ಮೊಳಗಿಸಲಾಗುತ್ತದೆ.
ಅಲ್ಲದೇ
ಶಂಖನಾದದಿಂದ
ಲಕ್ಷ್ಮೀದೇವಿಯೂ
ಪ್ರಸನ್ನಳಾಗುತ್ತಾಳೆ.
*ವಿಷ್ಣುದೇವರ
ಪೂಜೆಯ
ಸಮಯದಲ್ಲಿ
ದೇವರಿಗೆ
ಹಳದಿ
ವಸ್ತ್ರಗಳನ್ನು
ಅರ್ಪಿಸಬೇಕು
ಹಾಗೂ
ಪೂಜಾಸಮಯದಲ್ಲಿ
ಸಾಧ್ಯವಾದಷ್ಟೂ
ಮಟ್ಟಿಗೆ
ಹಳದಿ
ಬಣ್ಣದ
ಬಟ್ಟೆಗಳನ್ನೇ
ತೊಡಬೇಕು.
*
ಪ್ರತಿ
ಪೂಜೆಯ
ಸಮಯದಲ್ಲಿಯೂ
ಭಗವಂತ
ಗಣೇಶ,
ಸೂರ್ಯ,
ವಿಷ್ಣು,
ಶಿವ
ಹಾಗೂ
ದೇವತೆ
ದುರ್ಗೆಯ
ಹೆಸರನ್ನು
ಪ್ರಸ್ತಾಪಿಸಬೇಕು
ಹಾಗೂ
ಸ್ತುತಿಸಬೇಕು.
ಈ
ಐವರು
ದೇವರನ್ನು
ಪಂಚದೇವರೆಂದು
ಕರೆಯಲಾಗುತ್ತದೆ
ಹಾಗೂ
ಪ್ರತಿ
ಪೂಜೆಯಲ್ಲಿಯೂ
ಪಂಚದೇವರ
ಸ್ತುತಿ
ಕಡ್ಡಾಯವಾಗಿದೆ
ಎಂದು
ಹಿಂದೂ
ಶಾಸ್ತ್ರಗಳು
ವಿವರಿಸುತ್ತವೆ