Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಲ ಗಂಗಾಧರ್ ತಿಲಕ್ 165ನೇ ಜನ್ಮ ದಿನಾಚರಣೆ: ಅವರ ಪ್ರಸಿದ್ಧ ಕೋಟ್ಸ್ ಇಲ್ಲಿವೆ
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡದೇ ತೀರುತ್ತೇನೆ' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಹುಲಿ ಬಾಲ ಗಂಗಾಧರ್ ತಿಲಕ್. ಇವರ ಈ ಮಾತುಗಳನ್ನು ಇಂದಿಗೂ ಕೇಳಿದಾಗ ನಮ್ಮೆಲ್ಲರ ಮನದಲ್ಲಿ ಒಂದು ರೀತಿಯ ಆವೇಶ, ದೇಶ ಭಕ್ತಿ ಉಕ್ಕಿ ಬರುವುದು.
ಬಾಲ ಗಂಗಾಧರ್ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರು.
1856 ಜುಲೈ 23ರಂದು ಬಾಲ ಗಂಗಾಧರ್ ತಿಲಕರು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇಂದು ಅವರ 165ನೇ ಜನ್ಮ ದಿನಾಚರಣೆ. ನಾವಿಲ್ಲಿ ಈ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನುಡಿದ ಮುತ್ತಿನಂಥ ಮಾತುಗಳ ಕೋಟ್ಸ್ ಇಲ್ಲಿ ನೀಡಿದ್ದೇವೆ ನೋಡಿ:

1. 'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ'
ಬಾಲ ಗಂಗಾಧರ್ ತಿಲಕ್
2. 'ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದು ನನಗೆ ಸಿಗಲೇಬೇಕು'
ಬಾಲ ಗಂಗಾಧರ್ ತಿಲಕ್
3. 'ಸಮಸ್ಯೆಯೆಂಬುವುದು ಸಂಪನ್ಮೂಲ ಅಥವಾ ಸಾಮರ್ಥ್ಯದ ಕೊರತೆಯಲ್ಲ, ಬದಲಿಗೆ ಇಚ್ಛಾಶಕ್ತಿಯ ಕೊರತೆಯಾಗಿದೆ'
ಬಾಲ ಗಂಗಾಧರ್ ತಿಲಕ್
4. 'ಅಸ್ಪೃಶ್ಯತೆ ಎಂಬುವುದು ದೇವರಿಗಿದ್ದರೆ, ಅವನನ್ನು ದೇವರು ಎಂದು ನಾನು ಕರೆಯಲ್ಲ'
ಬಾಲ ಗಂಗಾಧರ್ ತಿಲಕ್
5. 'ಧರ್ಮ ಹಾಗೂ ಜೀವನ ಬೇರೆಯಲ್ಲ. ಸನ್ಯಾಸವನ್ನು ಸ್ವೀಕರಿಸುವುದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದಸ್ಪೂರ್ತಿಯಾಗಿದೆ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ದೇವರ ಕಾರ್ಯಕ್ಕೆ ಸಮ'
ಬಾಲ ಗಂಗಾಧರ್ ತಿಲಕ್
6. 'ಜೀವನ ಎಂಬುವುದು ಕಾರ್ಡ್ ಗೇಮ್ನಂತೆ. ಯಾವ ಕಾರ್ಡ್ ಸಿಗುತ್ತೆ ಎಂಬುವುದು ನಮ್ಮ ಕೈಯಲ್ಲಿಲ್ಲ, ಆದರೆ ಸಿಕ್ಕ ಕಾರ್ಡ್ ಅನ್ನು ಬಳಸಿಕೊಂಡು ಹೇಗೆ ಆಡುತ್ತೇವೆ ಎಂಬುವುದರಲ್ಲಿ ಯಶಸ್ಸು ಅಡಗಿದೆ'
ಬಾಲ ಗಂಗಾಧರ್ ತಿಲಕ್
7. 'ಧೈರ್ಯ ಎಂಬುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ'
ಬಾಲ ಗಂಗಾಧರ್ ತಿಲಕ್



Click it and Unblock the Notifications





