Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಬಾಲ ಗಂಗಾಧರ್ ತಿಲಕ್ 165ನೇ ಜನ್ಮ ದಿನಾಚರಣೆ: ಅವರ ಪ್ರಸಿದ್ಧ ಕೋಟ್ಸ್ ಇಲ್ಲಿವೆ
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡದೇ ತೀರುತ್ತೇನೆ' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಹುಲಿ ಬಾಲ ಗಂಗಾಧರ್ ತಿಲಕ್. ಇವರ ಈ ಮಾತುಗಳನ್ನು ಇಂದಿಗೂ ಕೇಳಿದಾಗ ನಮ್ಮೆಲ್ಲರ ಮನದಲ್ಲಿ ಒಂದು ರೀತಿಯ ಆವೇಶ, ದೇಶ ಭಕ್ತಿ ಉಕ್ಕಿ ಬರುವುದು.
ಬಾಲ ಗಂಗಾಧರ್ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರು.
1856 ಜುಲೈ 23ರಂದು ಬಾಲ ಗಂಗಾಧರ್ ತಿಲಕರು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇಂದು ಅವರ 165ನೇ ಜನ್ಮ ದಿನಾಚರಣೆ. ನಾವಿಲ್ಲಿ ಈ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನುಡಿದ ಮುತ್ತಿನಂಥ ಮಾತುಗಳ ಕೋಟ್ಸ್ ಇಲ್ಲಿ ನೀಡಿದ್ದೇವೆ ನೋಡಿ:

1. 'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ'
ಬಾಲ ಗಂಗಾಧರ್ ತಿಲಕ್
2. 'ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದು ನನಗೆ ಸಿಗಲೇಬೇಕು'
ಬಾಲ ಗಂಗಾಧರ್ ತಿಲಕ್
3. 'ಸಮಸ್ಯೆಯೆಂಬುವುದು ಸಂಪನ್ಮೂಲ ಅಥವಾ ಸಾಮರ್ಥ್ಯದ ಕೊರತೆಯಲ್ಲ, ಬದಲಿಗೆ ಇಚ್ಛಾಶಕ್ತಿಯ ಕೊರತೆಯಾಗಿದೆ'
ಬಾಲ ಗಂಗಾಧರ್ ತಿಲಕ್
4. 'ಅಸ್ಪೃಶ್ಯತೆ ಎಂಬುವುದು ದೇವರಿಗಿದ್ದರೆ, ಅವನನ್ನು ದೇವರು ಎಂದು ನಾನು ಕರೆಯಲ್ಲ'
ಬಾಲ ಗಂಗಾಧರ್ ತಿಲಕ್
5. 'ಧರ್ಮ ಹಾಗೂ ಜೀವನ ಬೇರೆಯಲ್ಲ. ಸನ್ಯಾಸವನ್ನು ಸ್ವೀಕರಿಸುವುದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದಸ್ಪೂರ್ತಿಯಾಗಿದೆ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ದೇವರ ಕಾರ್ಯಕ್ಕೆ ಸಮ'
ಬಾಲ ಗಂಗಾಧರ್ ತಿಲಕ್
6. 'ಜೀವನ ಎಂಬುವುದು ಕಾರ್ಡ್ ಗೇಮ್ನಂತೆ. ಯಾವ ಕಾರ್ಡ್ ಸಿಗುತ್ತೆ ಎಂಬುವುದು ನಮ್ಮ ಕೈಯಲ್ಲಿಲ್ಲ, ಆದರೆ ಸಿಕ್ಕ ಕಾರ್ಡ್ ಅನ್ನು ಬಳಸಿಕೊಂಡು ಹೇಗೆ ಆಡುತ್ತೇವೆ ಎಂಬುವುದರಲ್ಲಿ ಯಶಸ್ಸು ಅಡಗಿದೆ'
ಬಾಲ ಗಂಗಾಧರ್ ತಿಲಕ್
7. 'ಧೈರ್ಯ ಎಂಬುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ'
ಬಾಲ ಗಂಗಾಧರ್ ತಿಲಕ್



Click it and Unblock the Notifications





