Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಲ ಗಂಗಾಧರ್ ತಿಲಕ್ 165ನೇ ಜನ್ಮ ದಿನಾಚರಣೆ: ಅವರ ಪ್ರಸಿದ್ಧ ಕೋಟ್ಸ್ ಇಲ್ಲಿವೆ
'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡದೇ ತೀರುತ್ತೇನೆ' ಎಂದು ಬ್ರಿಟಿಷರ ವಿರುದ್ಧ ಘರ್ಜಿಸಿದ ಹುಲಿ ಬಾಲ ಗಂಗಾಧರ್ ತಿಲಕ್. ಇವರ ಈ ಮಾತುಗಳನ್ನು ಇಂದಿಗೂ ಕೇಳಿದಾಗ ನಮ್ಮೆಲ್ಲರ ಮನದಲ್ಲಿ ಒಂದು ರೀತಿಯ ಆವೇಶ, ದೇಶ ಭಕ್ತಿ ಉಕ್ಕಿ ಬರುವುದು.
ಬಾಲ ಗಂಗಾಧರ್ ತಿಲಕರು ಭಾರತೀಯ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸ್ವಾತಂತ್ರ್ಯ ಹೋರಾಟಗಾರರು.
1856 ಜುಲೈ 23ರಂದು ಬಾಲ ಗಂಗಾಧರ್ ತಿಲಕರು ಮಹಾರಾಷ್ಟ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇಂದು ಅವರ 165ನೇ ಜನ್ಮ ದಿನಾಚರಣೆ. ನಾವಿಲ್ಲಿ ಈ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ನುಡಿದ ಮುತ್ತಿನಂಥ ಮಾತುಗಳ ಕೋಟ್ಸ್ ಇಲ್ಲಿ ನೀಡಿದ್ದೇವೆ ನೋಡಿ:

1. 'ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಹಾಗೂ ಅದನ್ನು ನಾನು ಪಡದೇ ತೀರುತ್ತೇನೆ'
ಬಾಲ ಗಂಗಾಧರ್ ತಿಲಕ್
2. 'ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದು ನನಗೆ ಸಿಗಲೇಬೇಕು'
ಬಾಲ ಗಂಗಾಧರ್ ತಿಲಕ್
3. 'ಸಮಸ್ಯೆಯೆಂಬುವುದು ಸಂಪನ್ಮೂಲ ಅಥವಾ ಸಾಮರ್ಥ್ಯದ ಕೊರತೆಯಲ್ಲ, ಬದಲಿಗೆ ಇಚ್ಛಾಶಕ್ತಿಯ ಕೊರತೆಯಾಗಿದೆ'
ಬಾಲ ಗಂಗಾಧರ್ ತಿಲಕ್
4. 'ಅಸ್ಪೃಶ್ಯತೆ ಎಂಬುವುದು ದೇವರಿಗಿದ್ದರೆ, ಅವನನ್ನು ದೇವರು ಎಂದು ನಾನು ಕರೆಯಲ್ಲ'
ಬಾಲ ಗಂಗಾಧರ್ ತಿಲಕ್
5. 'ಧರ್ಮ ಹಾಗೂ ಜೀವನ ಬೇರೆಯಲ್ಲ. ಸನ್ಯಾಸವನ್ನು ಸ್ವೀಕರಿಸುವುದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ. ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಎಲ್ಲರೂ ಒಟ್ಟಾಗಿ ದುಡಿಯುವುದೇ ನಿಜವಾದಸ್ಪೂರ್ತಿಯಾಗಿದೆ, ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೆ ದೇವರ ಕಾರ್ಯಕ್ಕೆ ಸಮ'
ಬಾಲ ಗಂಗಾಧರ್ ತಿಲಕ್
6. 'ಜೀವನ ಎಂಬುವುದು ಕಾರ್ಡ್ ಗೇಮ್ನಂತೆ. ಯಾವ ಕಾರ್ಡ್ ಸಿಗುತ್ತೆ ಎಂಬುವುದು ನಮ್ಮ ಕೈಯಲ್ಲಿಲ್ಲ, ಆದರೆ ಸಿಕ್ಕ ಕಾರ್ಡ್ ಅನ್ನು ಬಳಸಿಕೊಂಡು ಹೇಗೆ ಆಡುತ್ತೇವೆ ಎಂಬುವುದರಲ್ಲಿ ಯಶಸ್ಸು ಅಡಗಿದೆ'
ಬಾಲ ಗಂಗಾಧರ್ ತಿಲಕ್
7. 'ಧೈರ್ಯ ಎಂಬುವುದು ನಿಮ್ಮೊಳಗಿದ್ದರೆ ಅದೇ ನಿಮ್ಮ ವ್ಯಕ್ತಿತ್ವದ ಆಸ್ತಿ'
ಬಾಲ ಗಂಗಾಧರ್ ತಿಲಕ್



Click it and Unblock the Notifications





