Just In
- 42 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
Don't Miss
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Movies Sharth Padmnabha ; ಅನಿಮಾ ಚಿತ್ರಕ್ಕೆ ನಾಯಕನಾದ ನಟ ಶರತ್ ಪದ್ಮನಾಭ್..!
- News Mukhtar Ansari: ಗ್ಯಾಂಗ್ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಸಾವು
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2019 ಮಹಾಶಿವರಾತ್ರಿ: ನೀವು ಅನುಸರಿಸಬೇಕಾದ ಪೂಜಾ ವಿಧಿ ವಿಧಾನಗಳು
ಹಿಂದೂ ಪಂಚಾಂಗದ ಚಂದ್ರಸೂರ್ಯ ಮಾಸದಲ್ಲಿ ಶಿವರಾತ್ರಿಯು ಪ್ರತೀ ವರ್ಷ ಬರುವುದು. ಅದಾಗ್ಯೂ, ಉತ್ತರ ಭಾರತೀಯ ಕ್ಯಾಲೆಂಡರ್ ನ ಪ್ರಕಾರ ಫಾಲ್ಗುಣ ಮಾಸದಲ್ಲಿ ಮಹಾಶಿವರಾತ್ರಿ ಆಚರಿಸಲಾಗುತ್ತದೆ. ದಕ್ಷಿಣ ಭಾರತೀಯ ಪಂಚಾಂಗದ ಪ್ರಕಾರ ಶಿವರಾತ್ರಿಯು ಕೃಷ್ಣ ಪಕ್ಷದ ಮಘ ಮಾಸದ ಚತುದರ್ಶಿ ತಿಥಿಯಯಲ್ಲಿ ಬರುವುದು. ತಿಂಗಳುಗಳ ಉಲ್ಲೇಖವು ಭಿನ್ನವಾಗಿದ್ದರೂ ನಾವು ಆಚರಿಸುವಂತ ಮಹಾಶಿವರಾತ್ರಿ ಮಾತ್ರ ಒಂದೇ ಆಗಿರುವುದು. ಹಿಂದೂಗಳು ಹೆಚ್ಚಾಗಿ ಮಹಾಶಿವರಾತ್ರಿಯಂದು ಜಾಗರಣೆ ಕುಳಿತು ಶಿವ ಭಜನೆ ಮಾಡುವರು. ಈ ವರ್ಷ ಶಿವರಾತ್ರಿ ಮಾರ್ಚ್ 4 ರಂದು ಬಂದಿದೆ.
ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.
ಅಲ್ಲದೆ, ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತದ ಸಮಯದಲ್ಲಿ ಆಹಾರವಿಲ್ಲದೆ ಕಟ್ಟುನಿಟ್ಟಾಗಿ ದೇವರಲ್ಲಿ ಐಕ್ಯಗೊಳ್ಳಬೇಕು. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ವಿಶೇಷ ವ್ರತ ಆಹಾರಗಳಾದ ವ್ರತದ ಅನ್ನ, ಬೀಜಗಳು, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ವ್ರತ ಸಂಪನ್ನಗೊಳಿಸುವಾಗ ಪ್ರಸಾದ ಇಲ್ಲವೇ, ಶಿವನಿಗೆ ಅರ್ಪಿಸಿದ ಆಹಾರವನ್ನು ಮೊದಲು ತೆಗೆದುಕೊಳ್ಳಬೇಕು.
ಮಹಾಶಿವರಾತ್ರಿ ಪೂಜೆಯು ಬೆಳಗ್ಗೆ ಬೇಗನೆ ಆರಂಭವಾಗುವುದು
ಸಾಮಾನ್ಯವಾಗಿ ಮಹಾಶಿವರಾತ್ರಿ ಪೂಜೆಯು ಬೆಳಗ್ಗೆ ಬೇಗನೆ ಆರಂಭವಾಗುವುದು. ಈ ದಿನ ಭಕ್ತರು ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡುವರು, ಹೊಸ ಬಟ್ಟೆ ಧರಿಸಿ, ಶಿವನ ಮಂದಿರಕ್ಕೆ ಭೇಟಿ ನೀಡುವರು. ಸಾಂಪ್ರದಾಯಿಕವಾಗಿ ನೀರು, ಹಾಲು, ಬಿಲ್ವ ಪತ್ರೆ, ಹಣ್ಣುಗಳೊಂದಿಗೆ ವ್ರತವನ್ನು ಆಚರಿಸುವಂತಹ ಮಹಿಳೆಯರಿಗೆ ಈ ದಿನವು ತುಂಬಾ ವಿಶೇಷವಾಗಿರುವುದು. ಇವರು ಶಿವಲಿಂಗಕ್ಕೆ 3ರಿಂದ 7 ಸುತ್ತು ಬರುವರು ಮತ್ತು ಇದರ ಬಳಿಕ ಲಿಂಗಕ್ಕೆ ನೀರು ಮತ್ತು ಹಾಲಿನ ಅಭಿಷೇಕ ಮಾಡಿ, ಬಳಿಕ ಬಿಲ್ವ ಪತ್ರೆಗಳು, ಹಣ್ಣುಗಳು, ಹೂವು ಅರ್ಪಿಸುವರು. ಇದರ ಬಳಿಕ ಅಗರಬತ್ತಿ ಬಳಸಿಕೊಂಡು ಪೂಜೆ ಮಾಡುವರು.
ಮಹಾಶಿವರಾತ್ರಿ ಪೂಜೆ ಮಾಡುವ ವೇಳೆ ಆರು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಪ್ರತಿಯೊಂದಕ್ಕೂ ಅದರದ್ದೇ ಆಗಿರುವಂತಹ ಮಹತ್ವವಿದೆ.
• ಶಿವ ಲಿಂಗವನ್ನು ನೀರು, ಹಾಲಿನಿಂದ ಅಭಿಷೇಕ ಮಾಡಿದ ಬಳಿಕ ಬಿಲ್ವ ಪತ್ರೆ ಅರ್ಪಿಸುವುದು, ಆತ್ಮದ ಶುದ್ಧೀಕರಣಕ್ಕಾಗಿ.
• ಸ್ನಾನದ ಬಳಿಕ ವಿಭೂತಿ ಇಡುವುದು ಮೌಲ್ಯದ ಸಂಕೇತವಾಗಿದೆ.
• ಹಣ್ಣುಗಳನ್ನು ಅರ್ಪಣೆ ಮಾಡುವುದು ಆಕಾಂಕ್ಷೆ ಮತ್ತು ದೀರ್ಘಾಯುಷ್ಯದ ಪ್ರಾರ್ಥನೆಗಾಗಿ.
• ಸಂಪತ್ತನ್ನು ಕೇಳಲು ಅಗರಬತ್ತಿ ಹಚ್ಚಿಡಲಾಗುತ್ತದೆ.
•ಬಿಲ್ವ ಪತ್ರೆ ಅರ್ಪಣೆ ಮಾಡುವುದು ಲೌಕಿಕ ಆಕಾಂಕ್ಷೆಗಳ ಸಂತೃಪ್ತಿಗಾಗಿ.
ಮಂದಿರಗಳಲ್ಲಿ ರಾತ್ರಿಯಿಡಿ ಶಿವನ ಪೂಜೆ ಮಾಡುವುದು ಈ ದಿನದ ಪ್ರಾಮುಖ್ಯತೆಯಾಗಿದೆ. ಇದರಿಂದಾಗಿ ಹೆಚ್ಚಿನ ಭಕ್ತರು ಈ ದಿನ ಜಾಗರಣೆ ಮಾಡುವರು. ಈ ದಿನ ರಾತ್ರಿ ಶಿವ ಮಂದಿರಗಳಲ್ಲಿ ಓಂ ನಮಃ ಶಿವಾಯ ಮಂತ್ರಾಕ್ಷರಿಯನ್ನು ಪಠಿಸಲಾಗುತ್ತದೆ. ಭಜನೆ ಹಾಗೂ ನೃತ್ಯ ಮಾಡುವ ಮೂಲಕವೂ ಜಾಗರಣೆ ಮಾಡಲಾಗುತ್ತದೆ.
Most
Read:
ಮಹಾಶಿವರಾತ್ರಿಗೆ
ಸಿಹಿ
ಗೆಣಸು
ಹೋಳಿಗೆ
ಶಿವರಾತ್ರಿಯಂದು ಉಪವಾಸ(ವ್ರತ ವಿಧಾನ) ಮಾಡುವುದು ಹೇಗೆ?
ಮಹಾಶಿವರಾತ್ರಿಯಂದು ವ್ರತ ವಿಧಾನವು ಸಂಪೂರ್ಣ ದಿನ ಉಪವಾಸ ಮಾಡುವುದು. ಶಿವರಾತ್ರಿ ವ್ರತ ಆಚರಣೆ ಮಾಡುವ ಮೊದಲು ಒಂದು ಸಲ ಮಾತ್ರ ಆಹಾರ ಸೇವನೆ ಮಾಡಬಹುದು. ಮಹಾಶಿವರಾತ್ರಿಯಂದು ಭಕ್ತರು ಕಠಿಣ ಉಪವಾಸ ವ್ರತ ಮಾಡುವಂತಹ ಸಂಕಲ್ಪ ಅಥವಾ ವಚನ ತೆಗೆದುಕೊಳ್ಳಬೇಕು. ಮರುದಿನ ಆಹಾರ ಸೇವನೆ ಮಾಡಬಹುದು. ಶಿವ ದೇವರ ಆಶೀರ್ವಾದ ಪಡೆಯಲು ಬಯಸುವಂತಹವರು ತುಂಬಾ ಶಕ್ತಿ ಹಾಗೂ ಬದ್ಧತೆಯಿಂದ ಮಹಾಶಿವರಾತ್ರಿ ವ್ರತವನ್ನು ಯಾವುದೇ ಅಡೆತಡೆಗಳು ಇಲ್ಲದೆ ಪೂರೈಸಬೇಕು.
ಶಿವರಾತ್ರಿಯಂದು ಉಪವಾಸ(ವ್ರತ ವಿಧಾನ) ಮಾಡುವುದು ಹೇಗೆ?
ಮಹಾಶಿವರಾತ್ರಿ ಪೂಜೆಯನ್ನು ರಾತ್ರಿ ವೇಳೆ ಮಾಡಬೇಕು ಮತ್ತು ಮರುದಿನ ಬೆಳಗ್ಗೆ ಸ್ನಾನ ಮಾಡಿದ ಬಳಿಕ ವ್ರತವನ್ನು ಕೊನೆಗೊಳಿಸಬೇಕು. ಸೂರ್ಯಾಸ್ತದ ವೇಳೆ ಯಾವಾಗ ಬೇಕಿದ್ದರೂ ವ್ರತವನ್ನು ಬಿಡಬಹುದು ಮತ್ತು ಚತುದರ್ಶಿ ತಿಥಿಯು ಪೂರ್ಣಗೊಳ್ಳುವ ಮೊದಲು ವ್ರತ ಮುಗಿಸಿದರೆ ಅದರಿಂದ ಅತ್ಯಧಿಕ ಲಾಭವು ಸಿಗುವುದು.
Most
Read:
ಶಿವರಾತ್ರಿ
ವಿಶೇಷ-ಕನ್ಯೆಯರಿಗೂ
ಕಾದಿದೆ,
ಸಿಹಿ
ಸುದ್ದಿ!
ಶಿವರಾತ್ರಿಯಂದು ಉಡುಗೊರೆ
ಹಿತ್ತಾಳೆ ಬಿಡಿಭಾಗಗಳಾದ ಹಿತ್ತಾಳೆ ಡಿಯಾಸ್, ಡಿಯಾಯಾ ಸ್ಟ್ಯಾಂಡ್, ರುದ್ರಕ್ಷ ಮಾಲಾ, ರಿಹಲ್ ಮತ್ತು ಮೇಣದಬತ್ತಿಯ ಹಿಡಿಕೆಯನ್ನು ಮಂಗಳಕರವಾಗಿ ಪರಿಗಣಿಸಲಾಗುತ್ತದೆ. ಈ ದಿನದಲ್ಲಿ ಶಿವ ಅಥವಾ ಶಿವಲಿಂಗನ ವಿಗ್ರಹವನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸುವುದು ಕುಟುಂಬಕ್ಕೆ ಉತ್ತಮ ಅದೃಷ್ಟವನ್ನು ಸೂಚಿಸುತ್ತದೆ. ನೀವು ಸಮಯ ಮತ್ತು ಉಡುಗೊರೆಗಳನ್ನು ನವೀನತೆಯಿಂದ ಉಳಿಸಿಕೊಂಡು ಅಂತಹ ಉಡುಗೊರೆಗಳನ್ನು ನೀಡಲು ಬಯಸಿದರೆ, ಶಿವ ಭಜನೆ, ಶಿವನ ಹಾಡುಗಳು ಮತ್ತು ಪ್ರಾರ್ಥನೆಗಳನ್ನು ಒಳಗೊಂಡಿರುವ ಕಥಾ ಪುಸ್ತಕಗಳು ಅಥವಾ ಸಿಡಿಗಳು ಲಭ್ಯವಾಗುವ ಸುಗಂಧದ ಮೇಣದಬತ್ತಿಗಳನ್ನು ನೀವು ಯಾವಾಗಲೂ ನೀಡಬಹುದಾಗಿದೆ. ಈ ಬಗೆಯ ಉಡುಗೊರೆಯಿಂದ ವ್ಯಕ್ತಿಯು ಸಂತೋಷನ್ನು ಪಡೆಯುವುದು ಮಾತ್ರವಲ್ಲದೆ ನಿಮಗಿದು ಆಂತರಿಕ ಶಾಂತಿ ಮತ್ತು ಸಂತೋಷವನ್ನು ನೀಡುತ್ತದೆ. ಈ ಹಬ್ಬವನ್ನು ರಾಷ್ಟ್ರದಾದ್ಯಂತ ತುಂಬಾ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾಶಿವರಾತ್ರಿಯಂದು ಶಿವ ದೇವರ ಆರಾಧನೆಯಲ್ಲಿ ಸುತ್ತಲಿನ ವಾತಾವರಣವು ತುಂಬಿರುವುದು. ಹೆಚ್ಚಿನ ಶಿವ ಭಕ್ತರು ತುಂಬಾ ಶ್ರದ್ಧಾಭಕ್ತಿ ಹಾಗೂ ಬದ್ಧತೆಯಿಂದ ಶಿವ ದೇವರ ಆರಾಧನೆ ಮಾಡುವರು. ಎಲ್ಲರಿಗೂ ಬೋಲ್ಡ್ ಸ್ಕೈ ವತಿಯಿಂದ ಮಹಾಶಿವರಾತ್ರಿಯ ಶುಭಾಶಯಗಳು.