Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕಾಮಕ್ಯ ದೇವಿ ಮುಟ್ಟಾದರೆ ಬ್ರಹ್ಮಪುತ್ರಾ ಕೆಂಪಾಗುವುದು!
ಶಕ್ತಿ ಪೀಠವೆಂದು ಗುರುತಿಸಲಾಗಿರುವ ಕಾಮಕ್ಯ ದೇವಾಲಯ ಗೌಹಾಟಿಯಲ್ಲಿದೆ. ಈ ದೇವಾಲಯದ ವಿಶೇಷವೆಂದರೆ ಕಾಮಕ್ಯ ದೇವಿ ರಕ್ತಸ್ರಾವ ದೇವತೆ ಎಂದು ಪ್ರಸಿದ್ಧಿಯಾಗಿದ್ದಾಳೆ! ಈ ದೇವಾಲಯವೂ ನೀಲಾಚಲಾ ಗಿರಿಯಲ್ಲಿದೆ. ಗೌಹಾಟಿ ರೈಲ್ವೆ ನಿಲ್ದಾಣದಿಂದ 8 ಕಿ. ಮೀ ದೂರದಲ್ಲಿದೆ. ಇಲ್ಲಿ ದೇವಿಯ ಹತ್ತು ರೂಪಗಳ ಮೂರ್ತಿಗಳನ್ನು ಕಾಣಬಹುದು.
ರಕ್ತ ಪೀಠ ದೇವಾಲಯದ ಉಗಮದ ಕತೆ
ಈ ಕಾಮಕ್ಯ ದೇವಾಲಯದ ಉಗಮದ ಕತೆ ತುಂಬಾ ಆಸಕ್ತಿಕರವಾಗಿದೆ. ಇಲ್ಲಿ 108 ಶಕ್ತಿ ಪೀಠಗಳಿವೆ. ಈ ಶಕ್ತಿ ಪೀಠಗಳ ಬಗ್ಗೆ ಹೇಳುವ ಕತೆಯೆಂದರೆ ಪಾರ್ವತಿ ತನ್ನ ಗಂಡನಾದ ಶಿವನನ್ನು ತನ್ನ ತಂದೆ ನಡೆಸುತ್ತಿರುವ ಯಾಗಕ್ಕೆ ಹೋಗಲು ಹೇಳುತ್ತಾಳೆ. ಶಿವ ಹೋಗಲ್ಲ ಎಂದಾಗಒತ್ತಾಯ ಮಾಡಿ ಶಿವನನ್ನು ಅಲ್ಲಿಗೆ ಹೋಗುವಂತೆ ಮಾಡುತ್ತಾಳೆ. ಯಾಗಕ್ಕೆ ಬಂದ ಶಿವನನ್ನು ಸತಿಯ ತಂದೆ ಅವಮಾನಿಸುತ್ತಾನೆ. ಇದರಿಂದ ಬೇಜಾರುಗೊಂಡ ಸತಿ ಬೆಂಕಿಗೆ ಹಾರಿ ಪ್ರಾಣ ಬಿಡುತ್ತಾಳೆ. ಶಿವನಿಗೆ ಪತ್ನಿ ತೀರಿಹೋದ ಸುದ್ದಿ ಕೇಳಿ ತುಂಬಾ ಆಘಾತವಾಗುತ್ತದೆ.

ಪತ್ನಿಯ ಸಾವಿನಿಂದ ಕೋಪಗೊಂಡ ಶಿವ ಪಾರ್ವತಿಯ ಶವವನ್ನು ಎತ್ತಿಕೊಂಡು ತಾಂಡವ ನೃತ್ಯ ಪ್ರಾರಂಭಿಸುತ್ತಾನೆ. ಇದನ್ನು ನೋಡಿದ ವಿಷ್ಣು, ಶಿವನ ನೃತ್ಯದಿಂದ ಎಲ್ಲವೂ ಸರ್ವನಾಶವಾಗುತ್ತದೆ ಎಂದು ತಿಳಿದು ತನ್ನ ಸುದರ್ಶನ ಚಕ್ರ ಬಿಟ್ಟು ಸತಿಯ ಶರೀರ ಕತ್ತರಿಸುತ್ತಾನೆ. ಸತಿಯ ದೇಹ ನೂರೆಂಟು ತುಂಡುಗಳಾಗಿ ಬೀಳುತ್ತದೆ. ಅವುಗಳೇ ಶಕ್ತಿ ಪೀಠಗಳಾದವು.
ಕಾಮಕ್ಯ ಹೆಸರು ಹೇಗೆ ಬಂತು?
ಕಾಮದೇವ ತನ್ನ ಪುರುಷತ್ವವನ್ನು ಶಾಪದಿಂದಾಗಿ ಕಳೆದುಕೊಂಡನು. ಸತಿಯ ದೇಹದ ಭಾಗ ಕಂಡು ಹಿಡಿದರೆ ಅವನು ಆ ಶಾಪದಿಂದ ಮುಕ್ತನಾಗಬಹುದಿತ್ತು. ಸತಿಯ ದೇಹದ ಭಾಗವನ್ನು ಹುಡುಕಿಕೊಂಡು ಬಂದ ಕಾಮದೇವನಿಗೆ ಸತಿಯ ದೇಹದ ಗರ್ಭಕೋಶ ಈ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಅಲ್ಲಿಂದ ಈ ಸ್ಥಳವನ್ನು ಕಾಮಕ್ಯ, ದೇವಿಯನ್ನು ಕಾಮಕ್ಯ ದೇವಿಯೆಂದು ಎಂದು ಕರೆಯಲಾಯಿತು.
ರಕ್ತಸ್ರಾವದ ದೇವಿ
ದೇವಿಯ ಗರ್ಭಕೋಶ ಹಾಗೂ ಜನನೇಂದ್ರೀಯ ಈ ಭಾಗದಲ್ಲಿ ಬಿದ್ದ ಕಾರಣ ಪ್ರತೀ ವರ್ಷ ಆಷಾಡ ತಿಂಗಳಿನಲ್ಲಿ ದೇವಿ ಮುಟ್ಟಾಗುತ್ತಾಳೆ. ಕಾಮಕ್ಯ ದೇಗುಲದ ಹತ್ತಿರದ ಆಗ ಬ್ರಹ್ಮ ಪುತ್ರಾ ನದಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆಗ ದೇವಾಲಯವನ್ನು 3 ದಿನಗಳವರೆಗೆ ಮುಚ್ಚಲಾಗುತ್ತದೆ. 3 ದಿನಗಳ ಬಳಿಕ ಭಕ್ತರಿಗೆ ತೀರ್ಥ ನೀರನ್ನು ಕೊಡಲಾಗುವುದು.
ನದಿ ಏಕೆ ಕೆಂಪು ಬಣ್ಣಕ್ಕೆ ತಿರುಗುತ್ತದೆ ಅನ್ನುವುದು ವೈಜ್ಞಾನಿಕವಾಗಿ ಇದುವರೆಗೆ ಸಾಬೀತಾಗಿಲ್ಲ.



Click it and Unblock the Notifications











