Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕೈತೋಟದಲ್ಲಿ ಘಮ್ಮನೆ ಸುವಾಸನೆ ಸುಳಿಯಲಿ

ಸುಗಂಧ ಸೂಸುವ ಸಸಿ ಮತ್ತು ಪೋಷಿಸುವ ವಿಧಾನ:
* ಮರುಗ: ಮರುಗದ ಗಿಡವನ್ನು ತೋಟದಲ್ಲಿ ಬೆಳೆಸಿದರೆ ಖಂಡಿತ ನಿಮ್ಮ ಮನೆ ತೋಟ ಘಮ್ಮೆನ್ನುತ್ತೆ. ಸುವಾಸನೆ ಬೀರುವ ಮರುಗದ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು ಅಥವಾ ನೆಲದಲ್ಲೂ ಹಾಕಬಹುದು. ಕೆಂಪು ಮಣ್ಣು ಈ ಮರುಗಕ್ಕೆ ಸೂಕ್ತ. ಮಣ್ಣು ಒಣಗಿದಂತೆ ಕಂಡಾಗ ಮಾತ್ರ ಗಿಡಕ್ಕೆ ನೀರು ಹಾಕಬೇಕು. ಮರುಗ ಬೆಳೆಯುವುದರಿಂದ ಇರುವ ಇನ್ನೊಂದು ಲಾಭವೆಂದರೆ ಇದರ ವಾಸನೆ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.
* ತುಳಸಿ: ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ತುಳಸಿ ಬೀಜಗಳನ್ನು ಹಾಕುವುದರಿಂದ ಗಿಡವನ್ನು ಬೆಳೆಸಬಹುದು. ತುಳಸಿಯಲ್ಲಿ ಎರಡು ವಿಧವಿದೆ. ಒಂದು ಹಸಿರು ಗಿಡ ಇನ್ನೊಂದು ಕೃಷ್ಣ ತುಳಸಿ (ಕೆಂಪು ತುಳಸಿ). ದಿನವೂ ಈ ಗಿಡಕ್ಕೆ ನೀರುಣಿಸಬೇಕು. ತುಳಸಿಗೆ ಸೂರ್ಯನ ಕಿರಣದ ಅವಶ್ಯಕತೆಯಿರುವುದರಿಂದ ಕನಿಷ್ಠ ಪಕ್ಷ 6 ಗಂಟೆಯಾದರೂ ಸೂರ್ಯನ ಕಿರಣವಿರುವ ಜಾಗದಲ್ಲಿ ತುಳಸಿ ಗಿಡ ನೆಡಬಹುದು.
* ದವನ: ಕಂಪನ್ನು ಸೂಸುವ ದವನ ಎಲ್ಲರಿಗೂ ಚಿರಪರಿಚಿತ. ದವನ ಬೆಳೆಸುವುದೂ ತುಂಬಾ ಸುಲಭ. ಬೀಜ ಅಥವಾ ಸಸಿಯನ್ನು ಸ್ವಲ್ಪ ಕತ್ತರಿಸಿ ತಂದು ಮಣ್ಣಿನಲ್ಲಿ ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡಕ್ಕೆ ದಿನನಿತ್ಯವೂ ನೀರು ಹಾಕಿದರೆ ಉತ್ತಮ. ಉತ್ಕೃಷ್ಟ ಕಂಪನ್ನು ಬೀರುವ ದವನ ಎಲ್ಲರನ್ನೂ ಒಂದು ಕ್ಷಣ ನಿಮ್ಮ ತೋಟದ ಕಡೆ ನೋಡುವಂತೆ ಮಾಡುತ್ತೆ.
* ವೀಳ್ಯೆದೆಲೆ: ಪೂಜೆ, ಪುನಸ್ಕಾರಗಳಿಗೆ ಹೆಚ್ಚು ಬಳಕೆಯಲ್ಲಿರುವ ವೀಳ್ಯೆದೆಲೆಯನ್ನು ನಿಮ್ಮ ಮನೆಯಲ್ಲೂ ಬಳ್ಳಿಯಂತೆ ಹಬ್ಬಿಸಿದರೆ ನೋಡಲೂ ಚೆಂದ. ಸುವಾಸನೆಯೂ ಸುಳಿಯುತ್ತದೆ. ಇದನ್ನು ಪಾಟ್ ಗಳಲ್ಲಿಯೂ ಬೆಳೆಯಬಹುದು ಅಥವಾ ಫಲವತ್ತಾಗಿರುವ ಮಣ್ಣಲ್ಲೂ ಬೆಳೆಯಬಹುದು. ವೀಳ್ಯೆಗೆ ರಾಸಾಯನಿಕ ಗೊಬ್ಬರಕ್ಕಿಂತ ನೈಸರ್ಗಿಕ ಅಥವಾ ಮನೆಯಲ್ಲೇ ತಯಾರಿಸಿದ ಗೊಬ್ಬರ ಬಳಸಿದರೆ ಸೊಂಪಾಗಿ ಹರಡುತ್ತದೆ.



Click it and Unblock the Notifications