Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕೈತೋಟದಲ್ಲಿ ಘಮ್ಮನೆ ಸುವಾಸನೆ ಸುಳಿಯಲಿ

ಸುಗಂಧ ಸೂಸುವ ಸಸಿ ಮತ್ತು ಪೋಷಿಸುವ ವಿಧಾನ:
* ಮರುಗ: ಮರುಗದ ಗಿಡವನ್ನು ತೋಟದಲ್ಲಿ ಬೆಳೆಸಿದರೆ ಖಂಡಿತ ನಿಮ್ಮ ಮನೆ ತೋಟ ಘಮ್ಮೆನ್ನುತ್ತೆ. ಸುವಾಸನೆ ಬೀರುವ ಮರುಗದ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು ಅಥವಾ ನೆಲದಲ್ಲೂ ಹಾಕಬಹುದು. ಕೆಂಪು ಮಣ್ಣು ಈ ಮರುಗಕ್ಕೆ ಸೂಕ್ತ. ಮಣ್ಣು ಒಣಗಿದಂತೆ ಕಂಡಾಗ ಮಾತ್ರ ಗಿಡಕ್ಕೆ ನೀರು ಹಾಕಬೇಕು. ಮರುಗ ಬೆಳೆಯುವುದರಿಂದ ಇರುವ ಇನ್ನೊಂದು ಲಾಭವೆಂದರೆ ಇದರ ವಾಸನೆ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.
* ತುಳಸಿ: ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ತುಳಸಿ ಬೀಜಗಳನ್ನು ಹಾಕುವುದರಿಂದ ಗಿಡವನ್ನು ಬೆಳೆಸಬಹುದು. ತುಳಸಿಯಲ್ಲಿ ಎರಡು ವಿಧವಿದೆ. ಒಂದು ಹಸಿರು ಗಿಡ ಇನ್ನೊಂದು ಕೃಷ್ಣ ತುಳಸಿ (ಕೆಂಪು ತುಳಸಿ). ದಿನವೂ ಈ ಗಿಡಕ್ಕೆ ನೀರುಣಿಸಬೇಕು. ತುಳಸಿಗೆ ಸೂರ್ಯನ ಕಿರಣದ ಅವಶ್ಯಕತೆಯಿರುವುದರಿಂದ ಕನಿಷ್ಠ ಪಕ್ಷ 6 ಗಂಟೆಯಾದರೂ ಸೂರ್ಯನ ಕಿರಣವಿರುವ ಜಾಗದಲ್ಲಿ ತುಳಸಿ ಗಿಡ ನೆಡಬಹುದು.
* ದವನ: ಕಂಪನ್ನು ಸೂಸುವ ದವನ ಎಲ್ಲರಿಗೂ ಚಿರಪರಿಚಿತ. ದವನ ಬೆಳೆಸುವುದೂ ತುಂಬಾ ಸುಲಭ. ಬೀಜ ಅಥವಾ ಸಸಿಯನ್ನು ಸ್ವಲ್ಪ ಕತ್ತರಿಸಿ ತಂದು ಮಣ್ಣಿನಲ್ಲಿ ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡಕ್ಕೆ ದಿನನಿತ್ಯವೂ ನೀರು ಹಾಕಿದರೆ ಉತ್ತಮ. ಉತ್ಕೃಷ್ಟ ಕಂಪನ್ನು ಬೀರುವ ದವನ ಎಲ್ಲರನ್ನೂ ಒಂದು ಕ್ಷಣ ನಿಮ್ಮ ತೋಟದ ಕಡೆ ನೋಡುವಂತೆ ಮಾಡುತ್ತೆ.
* ವೀಳ್ಯೆದೆಲೆ: ಪೂಜೆ, ಪುನಸ್ಕಾರಗಳಿಗೆ ಹೆಚ್ಚು ಬಳಕೆಯಲ್ಲಿರುವ ವೀಳ್ಯೆದೆಲೆಯನ್ನು ನಿಮ್ಮ ಮನೆಯಲ್ಲೂ ಬಳ್ಳಿಯಂತೆ ಹಬ್ಬಿಸಿದರೆ ನೋಡಲೂ ಚೆಂದ. ಸುವಾಸನೆಯೂ ಸುಳಿಯುತ್ತದೆ. ಇದನ್ನು ಪಾಟ್ ಗಳಲ್ಲಿಯೂ ಬೆಳೆಯಬಹುದು ಅಥವಾ ಫಲವತ್ತಾಗಿರುವ ಮಣ್ಣಲ್ಲೂ ಬೆಳೆಯಬಹುದು. ವೀಳ್ಯೆಗೆ ರಾಸಾಯನಿಕ ಗೊಬ್ಬರಕ್ಕಿಂತ ನೈಸರ್ಗಿಕ ಅಥವಾ ಮನೆಯಲ್ಲೇ ತಯಾರಿಸಿದ ಗೊಬ್ಬರ ಬಳಸಿದರೆ ಸೊಂಪಾಗಿ ಹರಡುತ್ತದೆ.



Click it and Unblock the Notifications
