Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕೈತೋಟದಲ್ಲಿ ಘಮ್ಮನೆ ಸುವಾಸನೆ ಸುಳಿಯಲಿ

ಸುಗಂಧ ಸೂಸುವ ಸಸಿ ಮತ್ತು ಪೋಷಿಸುವ ವಿಧಾನ:
* ಮರುಗ: ಮರುಗದ ಗಿಡವನ್ನು ತೋಟದಲ್ಲಿ ಬೆಳೆಸಿದರೆ ಖಂಡಿತ ನಿಮ್ಮ ಮನೆ ತೋಟ ಘಮ್ಮೆನ್ನುತ್ತೆ. ಸುವಾಸನೆ ಬೀರುವ ಮರುಗದ ಗಿಡವನ್ನು ಕುಂಡದಲ್ಲೂ ಬೆಳೆಸಬಹುದು ಅಥವಾ ನೆಲದಲ್ಲೂ ಹಾಕಬಹುದು. ಕೆಂಪು ಮಣ್ಣು ಈ ಮರುಗಕ್ಕೆ ಸೂಕ್ತ. ಮಣ್ಣು ಒಣಗಿದಂತೆ ಕಂಡಾಗ ಮಾತ್ರ ಗಿಡಕ್ಕೆ ನೀರು ಹಾಕಬೇಕು. ಮರುಗ ಬೆಳೆಯುವುದರಿಂದ ಇರುವ ಇನ್ನೊಂದು ಲಾಭವೆಂದರೆ ಇದರ ವಾಸನೆ ಕ್ರಿಮಿ ಕೀಟಗಳು ಬರದಂತೆ ತಡೆಯುತ್ತದೆ.
* ತುಳಸಿ: ತುಳಸಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ತುಳಸಿ ಬೀಜಗಳನ್ನು ಹಾಕುವುದರಿಂದ ಗಿಡವನ್ನು ಬೆಳೆಸಬಹುದು. ತುಳಸಿಯಲ್ಲಿ ಎರಡು ವಿಧವಿದೆ. ಒಂದು ಹಸಿರು ಗಿಡ ಇನ್ನೊಂದು ಕೃಷ್ಣ ತುಳಸಿ (ಕೆಂಪು ತುಳಸಿ). ದಿನವೂ ಈ ಗಿಡಕ್ಕೆ ನೀರುಣಿಸಬೇಕು. ತುಳಸಿಗೆ ಸೂರ್ಯನ ಕಿರಣದ ಅವಶ್ಯಕತೆಯಿರುವುದರಿಂದ ಕನಿಷ್ಠ ಪಕ್ಷ 6 ಗಂಟೆಯಾದರೂ ಸೂರ್ಯನ ಕಿರಣವಿರುವ ಜಾಗದಲ್ಲಿ ತುಳಸಿ ಗಿಡ ನೆಡಬಹುದು.
* ದವನ: ಕಂಪನ್ನು ಸೂಸುವ ದವನ ಎಲ್ಲರಿಗೂ ಚಿರಪರಿಚಿತ. ದವನ ಬೆಳೆಸುವುದೂ ತುಂಬಾ ಸುಲಭ. ಬೀಜ ಅಥವಾ ಸಸಿಯನ್ನು ಸ್ವಲ್ಪ ಕತ್ತರಿಸಿ ತಂದು ಮಣ್ಣಿನಲ್ಲಿ ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ. ಗಿಡಕ್ಕೆ ದಿನನಿತ್ಯವೂ ನೀರು ಹಾಕಿದರೆ ಉತ್ತಮ. ಉತ್ಕೃಷ್ಟ ಕಂಪನ್ನು ಬೀರುವ ದವನ ಎಲ್ಲರನ್ನೂ ಒಂದು ಕ್ಷಣ ನಿಮ್ಮ ತೋಟದ ಕಡೆ ನೋಡುವಂತೆ ಮಾಡುತ್ತೆ.
* ವೀಳ್ಯೆದೆಲೆ: ಪೂಜೆ, ಪುನಸ್ಕಾರಗಳಿಗೆ ಹೆಚ್ಚು ಬಳಕೆಯಲ್ಲಿರುವ ವೀಳ್ಯೆದೆಲೆಯನ್ನು ನಿಮ್ಮ ಮನೆಯಲ್ಲೂ ಬಳ್ಳಿಯಂತೆ ಹಬ್ಬಿಸಿದರೆ ನೋಡಲೂ ಚೆಂದ. ಸುವಾಸನೆಯೂ ಸುಳಿಯುತ್ತದೆ. ಇದನ್ನು ಪಾಟ್ ಗಳಲ್ಲಿಯೂ ಬೆಳೆಯಬಹುದು ಅಥವಾ ಫಲವತ್ತಾಗಿರುವ ಮಣ್ಣಲ್ಲೂ ಬೆಳೆಯಬಹುದು. ವೀಳ್ಯೆಗೆ ರಾಸಾಯನಿಕ ಗೊಬ್ಬರಕ್ಕಿಂತ ನೈಸರ್ಗಿಕ ಅಥವಾ ಮನೆಯಲ್ಲೇ ತಯಾರಿಸಿದ ಗೊಬ್ಬರ ಬಳಸಿದರೆ ಸೊಂಪಾಗಿ ಹರಡುತ್ತದೆ.



Click it and Unblock the Notifications