Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಹೃದಯಾಘಾತದ ನಂತರ, ಹೃದಯವನ್ನು ಮಗುವಿನಂತೆ ನೋಡಿಕೊಳ್ಳಿ
ಮಾನವ ಜೀವನ ಹೆಚ್ಚು ಅಮೂಲ್ಯವಾದುದು. ಆದರೆ ಇತ್ತೀಚೆಗೆ ಕಾಡುತ್ತಿರುವ ಕೆಲವೊಂದು ರೋಗಗಳಿಂದ ನಿತ್ಯವೂ ಉಳಿವಿಗಾಗಿ ಹೋರಾಟ ನಡೆಯುತ್ತಿದೆ. ಎಷ್ಟೊಂದು ಕಾಳಜಿಯನ್ನು ನಾವು ನಮ್ಮ ಬಗ್ಗೆ ತೆಗೆದುಕೊಂಡರೂ ಒಂದಿಲ್ಲೊಂದು ಸಣ್ಣ ತಪ್ಪಿನಿಂದ ನಾವು ರೋಗಗ್ರಸ್ಥರಾಗುತ್ತೇವೆ. ಮೊದಲೆಲ್ಲಾ ಅಪರೂಪಕ್ಕೆ ಬರುತ್ತಿದ್ದ ಕೆಲವು ಕಾಯಿಲೆಗಳು ಈಗ ದಿನನಿತ್ಯ ಕಾಡಿ ನಮ್ಮನ್ನು ಗೋಳಾಡಿಸುತ್ತಿದೆ. ಅದರಲ್ಲೂ ನಮ್ಮ ಬದಲಾಗುತ್ತಿರುವ ಜೀವನ ಶೈಲಿಯಿಂದ ನಾವು ಇಂದಿಗೂ ಕೇಳರಿಯದೇ ಇರುವ ಕೆಲವೊಂದು ರೋಗಗಳಿಗೆ ದಾಸರಾಗುತ್ತಿದ್ದೇವೆ.
ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರನ್ನು ಕಾಡುತ್ತಿರುವ ಕಾಯಿಲೆಯಾಗಿದೆ ಹೃದಯಾಘಾತ. ಹೃದಯಸ್ತಂಭನದಂತಹ ಈ ಭಯಾನಕ ರೋಗವು ಮೃತ್ಯುಕೂಪವಾಗಿಯೇ ಪರಿಣಮಿಸಿದೆ. ನೀವು ಸೂಕ್ತ ಕಾಳಜಿಯನ್ನು ವಹಿಸದೇ ಇದ್ದಲ್ಲಿ ಈ ರೋಗವು ನಿಮ್ಮನ್ನು ಮರಣಕೂಪಕ್ಕೆ ತಳ್ಳಿಬಿಡುತ್ತದೆ. ಒಂದು ಬಾರಿಯ ಹೃದಯಾಘಾತದ ಸಂದರ್ಭದಲ್ಲಿಯೇ ವೈದ್ಯರು ರೋಗಿಗೆ ಮತ್ತು ಮನೆಯವರಿಗೆ ಹೆಚ್ಚು ಕಾಳಜಿ ವಹಿಸುವಂತೆ ಸಲಹೆಯನ್ನು ನೀಡುತ್ತಾರೆ. ಇವರುಗಳು ವೈದ್ಯರ ನಿರ್ದೇಶನವಿಲ್ಲದೆ ಏನನ್ನೂ ಮಾಡುವ ಹಾಗಿಲ್ಲ.
ವ್ಯಾಯಾಮವನ್ನು ಮಾಡಿದರೂ ಅದಕ್ಕೆ ವೈದ್ಯರು ಸಲಹೆಯನ್ನು ನೀಡಬೇಕಾಗುತ್ತದೆ. ನೀವು ಮೊದಲಿನಂತೆ ಇರುವುದಕ್ಕೆ ಕೆಲವೊಂದು ಜೀವನ ಶೈಲಿಗಳನ್ನು ಬದಲಾಯಿಸಿಕೊಂಡರೆ ಈ ರೋಗವಿದ್ದರೂ ನೀವು ಸಾಮಾನ್ಯವಾಗಿಯೇ ಜೀವನ ನಡೆಸಬಹುದಾಗಿದೆ. ನಿಮ್ಮ ಹೃದಯಕ್ಕೆ ಒತ್ತಡವನ್ನು ನೀಡುವ ಕೆಲಸಗಳನ್ನು ನೀವು ಮಾಡಬಾರದು. ನೀವು ಮಾಡುತ್ತಿರುವ ಉದ್ಯೋಗದಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ಬೀಳುತ್ತಿದ್ದರೆ ಆ ಉದ್ಯೋಗವನ್ನು ಬಿಟ್ಟು ಬಿಡಿ. ಇಂದಿನ ಲೇಖನದಲ್ಲಿ ಇಂತಹುದೇ ಕೆಲವೊಂದು ಸಲಹೆಗಳನ್ನು ನಾವು ನೀಡಿದ್ದು, ನಿಮ್ಮ ಹೃದಯವನ್ನು ಮಗುವಿನಂತೆ ಜೋಪಾನ ಮಾಡುವ ಸಮಯ ಬಂದಿದೆ ಎಂದೇ ಇದರ ಅರ್ಥವಾಗಿದೆ...

ಆತಂಕವನ್ನು ನಿರೀಕ್ಷಿಸಬಹುದು
ನೀವು ಆತಂಕ, ನೋವು ಮತ್ತು ಗೊಂದಲದ ಕಾರಣದಿಂದ ವಿಶೇಷವಾಗಿ ಕಷ್ಟಕರ ಸಮಯವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ರಕ್ತವನ್ನು ತೆಳುಮಾಡಲು ಮತ್ತು ರಕ್ತದೊತ್ತಡ ಔಷಧಿಗಳನ್ನು ಸರಿಯಾದ ರಕ್ತದ ಹರಿವನ್ನು ಪುನಃಸ್ಥಾಪಿಸಲು ತಕ್ಷಣವೇ ನಿರ್ವಹಿಸಲಾಗುವುದು. ಹೃದಯಾಘಾತದಿಂದ ನೀವು ನಿರೀಕ್ಷಿಸಬಹುದು ಸಾಮಾನ್ಯ ವಿಷಯ ಇದಾಗಿದೆ.

ನಿಮ್ಮ ಡಿಸ್ಚಾರ್ಜ್ ಸಮ್ಮರಿಯನ್ನು ಓದಿಕೊಳ್ಳಿ
ಆಸ್ಪತ್ರೆಯಿಂದ ಮನೆಗೆ ಬರುವಂತಹ ಸಂದರ್ಭದಲ್ಲಿ ನಿಮ್ಮ ಡಿಸ್ಚಾರ್ಜ್ ಸಮ್ಮರಿಯ ಕುರಿತು ವೈದ್ಯರು ಮತ್ತು ದಾದಿಯೊಂದಿಗೆ ಚರ್ಚಿಸಿ. ಮುಂದಿನ ಸಲದ ಚೆಕಪ್, ನೀವು ತೆಗೆದುಕೊಳ್ಳಬೇಕಾದ ಔಷಧಿ, ಅನುಸರಿಸಬೇಕಾದ ವಿಧಾನಗಳನ್ನು ನೀವು ಅವರನ್ನು ಕೇಳಿ ತಿಳಿದುಕೊಳ್ಳಬೇಕು.

ಹೆಚ್ಚಿನ ಚಿಕಿತ್ಸೆಯ ಬಗ್ಗೆ ಆಲೋಚಿಸಿ
ಕಾರ್ಡಿಯಾಕ್ ಮರುಸ್ಥಾಪನೆಯ ಬಗ್ಗೆ ನೀವು ಯೋಚಿಸಬೇಕು. ಮೇಲ್ವೀಚಾರಣೆಯ ಕೌನ್ಸಲಿಂಗ್ ಮತ್ತು ತರಬೇತಿ ಕಾರ್ಯಕ್ರಮವು ನಿಮ್ಮ ಆರೋಗ್ಯವನ್ನು ವರ್ಧಿಸಲು ನೆರವನ್ನೀಯುತ್ತದೆ ಮತ್ತು ಚೇತರಿಕೆಯನ್ನು ಪಡೆಯುವ ಸಂದರ್ಭದಲ್ಲಿ ಇದು ನೆರವು ನೀಡುತ್ತದೆ.

ಡಯೆಟ್ ಮತ್ತು ವ್ಯಾಯಾಮ ಮುಖ್ಯವಾಗಿದೆ
ಕಾರ್ಡಿಯಾಕ್ ರಿಹಾಬ್ ಕಾರ್ಯಕ್ರಮಗಳು ನಿಮಗೆ ಕೆಲವೊಂದು ಸೂಚನೆಗಳನ್ನು ಪಡೆದುಕೊಳ್ಳಲು ನೆರವನ್ನೀಯುತ್ತದೆ. ನೀವು ಈ ಕಾರ್ಯಕ್ರಮದ ಭಾಗವಾಗಿ ನ್ಯೂಟ್ರಿಶಿಯನಿಸ್ಟ್ ಜೊತೆ ಮಾತನಾಡಬಹುದು

ಸಾಮಾನ್ಯ ಚಟುವಟಿಕೆಗಳತ್ತ ಯಾವಾಗ ಗಮನ ಹರಿಸಬೇಕು
ನಿಮ್ಮ ಸಾಮಾನ್ಯ ಚಟುವಟಿಕೆಗಳಾದ ನಡಿಗೆ, ಪ್ರಯಾಣ ಇಲ್ಲವೇ ಲೈಂಗಿಕ ಕ್ರಿಯೆಗಳನ್ನು ಯಾವಾಗ ನಡೆಸಬೇಕು ಎಂಬುದರ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಿ. ಸಹಾಯಕ್ಕಾಗಿ ನಿಮ್ಮನ್ನು ನೋಡಿಕೊಳ್ಳುವವರೊಂದಿಗೆ ಸಮಾಲೋಚಿಸಿ.

ಮನಸ್ಸಿನ ಸ್ವಾಸ್ಥ್ಯ ಮುಖ್ಯ
ಹೃದಯಾಘಾತದ ನಂತರ ನಿಮ್ಮ ಮನಸ್ಸಿಗೂ ನೀವು ಗಮನ ಹರಿಸಬೇಕು. ನೀವು ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಿ ಅವರೊಂದಿಗೆ ಸಮಾಲೋಚನೆಯನ್ನು ನಡೆಸಬೇಕು. ಇದರಿಂದ ಹೃದಯಾಘಾತದ ನಂತರವೂ ನಿಮ್ಮ ಜೀವನವನ್ನು ಹೇಗೆ ಎದುರಿಸಬೇಕು ಎಂಬ ಧೈರ್ಯ ನಿಮ್ಮಲ್ಲಿ ಮೂಡುತ್ತದೆ.

ಔಷಧಿಗಳನ್ನು ನಿಯಮಿತವಾಗಿ ಸೇವಿಸಿ
ನಿಮಗೆ ಔಷಧಗಳು ಮತ್ತು ಸೂಚನೆಗಳನ್ನು ಒಳಗೊಂಡಿರುವ ದೊಡ್ಡ ಪಟ್ಟಿಯನ್ನೇ ನೀಡಿರಬಹುದು. ಆದರೆ ಇವುಗಳನ್ನು ನೀವು ಪಾಲಿಸಬೇಕು. ಔಷಧ ಸೇವನೆ ಕಷ್ಟಕರವಾಗಿರಬಹುದು. ಆದರೆ ನಿಮ್ಮ ಹೃದಯವನ್ನು ಆರೈಕೆ ಮಾಡುವ ಅಂಶಗಳನ್ನು ಈ ಔಷಧಗಳು ಒಳಗೊಂಡಿವೆ ಎಂಬುದನ್ನು ಮರೆಯಬೇಡಿ. ನಿಮ್ಮ ಕೊಲೆಸ್ಟ್ರಾಲ್ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಮಾಪನ ಮಾಡುವ ಅಂಶ ಇದರಲ್ಲಿದೆ. ನಿಮ್ಮನ್ನು ಬೇಗನೇ ಚೇತರಿಸುವ ಗುಣ ಈ ಔಷಧಗಳಲ್ಲಿವೆ.



Click it and Unblock the Notifications











