Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮುಟ್ಟಿನ ನೋವಿಗೆ ಈ ಆಹಾರಗಳ ಸಂಯೋಜನೆ ಉತ್ತಮ ಮನೆಮದ್ದು
ಬಹುತೇಕ ಹೆಣ್ಣುಮಕ್ಕಳು ತಿಂಗಳಲ್ಲಿ ಋತುಚಕ್ರದ ಅವಧಿಯ ಮೂರು ದಿನ ನಮ್ಮದಲ್ಲ ಎಂದು ಭಾವಿಸಿ ನೋವು ಅನುಭವಿಸುತ್ತಾರೆ. ಎಷ್ಟೋ ಹೆಣ್ಣುಮಕ್ಕಳು ನೋವನ್ನು ತಾಳಲಾರದೆ ಈ ದಿನ ಕೆಲಸ, ಶಾಲೆ-ಕಾಲೇಜು ಎಲ್ಲಕ್ಕು ರಜೆ ಹಾಕಿ ಸಂಪೂರ್ಣ ವಿಶ್ರಾಂತಿ ಮಾಡುವವರು ಇದ್ದಾರೆ.
ಇದಕ್ಕೆ ಕಾರಣದ ಗರ್ಭಾಶಯದ ಸ್ನಾಯುಗಳು ಮುಟ್ಟಿನ ಅವಧಿಯಲ್ಲಿ ಸಂಕುಚಿತ ಮತ್ತು ವಿಕಸನಗೊಳ್ಳುತ್ತದೆ. ಅದು ನಿರ್ಮಿಸಿದ ಒಳಪದರವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ರೀತಿಯ ಸ್ನಾಯುಗಳ ಸೆಳೆತವು, ವಾಕರಿಕೆ, ವಾಂತಿ, ತಲೆನೋವು ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.
ಋತುಚಕ್ರದ ಅವಧಿಯಲ್ಲಿ ನೋವಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಆಹಾರ ಸಂಯೋಜನೆಗಳನ್ನು ಆಹಾರ ತಜ್ಞರು ಸೂಚಿಸುತ್ತಾರೆ. ಯಾವೆಲ್ಲಾ ಆಹಾರಗಳು ಮುಂದೆ ನೋಡೋಣ:

1. ಬಾದಾಮಿ ಮತ್ತು ಬಾಳೆಹಣ್ಣುಗಳು ಸ್ಮೂಥಿ
ಈ ಸ್ಮೂಥಿಯು ಮುಟ್ಟಿನ ಅವಧಿಯ ಸೆಳೆತಕ್ಕೆ ಉತ್ತಮವಾಗಿದೆ, ಅಲ್ಲದೆ ಇದು ಉತ್ತಮ ರುಚಿಯನ್ನು ಸಹ ನೀಡುತ್ತದೆ.
ಪಾಕವಿಧಾನ
ಹಣ್ಣಾದ ಬಾಳೆಹಣ್ಣು, 350 ಮಿಲಿ ಹಾಲು, ಎರಡು ಚಮಚ ಮೊಸರು, ಒಂದು ಚಮಚ ಬಾದಾಮಿ ಬೆಣ್ಣೆ, ಎರಡು ಚಮಚ ಅಗಸೆ ಬೀಜಗಳು ಮತ್ತು ಒಂದು ಪಿಂಚ್ ದಾಲ್ಚಿನ್ನಿ ಪುಡಿಯನ್ನು ಮಿಕ್ಸಿ ಮಾಡಿ ತಕ್ಷಣ ಕುಡಿಯಿರಿ. ಮುಟ್ಟಿನ ಸೆಳೆತವನ್ನು ನಿವಾರಿಸಲು ಇದನ್ನು ಪ್ರತಿದಿನ ಸೇವಿಸಿ.

2. ಈ ಸಂಯೋಜನೆಯು ನಿಮ್ಮ ಋತುಚಕ್ರದ ಸಮಯದಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಏಕೆಂದರೆ.
- ಬಾದಾಮಿಯು ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಸ್ನಾಯು ಸೆಳೆತಕ್ಕೆ ಸಹಾಯ ಮಾಡುತ್ತದೆ.
- ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಅಧಿಕವಾಗಿದೆ, ಇದು ಅವಧಿಯ ಸೆಳೆತ ಮತ್ತು ಒಟ್ಟಾರೆ ಸ್ನಾಯುವಿನ ವಿಶ್ರಾಂತಿಗೆ ಸಹಾಯ ಮಾಡುತ್ತದೆ.
- ರಕ್ತದ ಸಕ್ಕರೆಯ ಸ್ಥಿರೀಕರಣದ ಮೇಲೆ ಗುಣಮಟ್ಟದ ದಾಲ್ಚಿನ್ನಿಯ ಪ್ರಬಲ ಪರಿಣಾಮಗಳನ್ನು ಹೆಚ್ಚು ಸಂಶೋಧಿಸಲಾಗಿದೆ.
- ಅಗಸೆ ಬೀಜಗಳು ಹಾರ್ಮೋನ್ ಸಮತೋಲನದಲ್ಲಿ ಸಹಾಯ ಮಾಡುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ತೆಗೆದುಹಾಕುತ್ತದೆ, ಇದು ನೋವಿನ ಸೆಳೆತಕ್ಕೆ ಸಂಬಂಧಿಸಿರಬಹುದು.

3 . ರಾಸ್ಪೆಬರಿ ಎಲೆ ಮತ್ತು ಶುಂಠಿ ಚಹಾ
ಚಹಾದಲ್ಲಿನ ಉರಿಯೂತದ ಗುಣಲಕ್ಷಣಗಳು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸೆಳೆತಕ್ಕೆ ಕಾರಣವಾಗಬಹುದು.
ಬೋಗುಣಿಯಲ್ಲಿ ಅರ್ಧದಷ್ಟು ನೀರಿನ್ನು ತುಂಬಿಸಿ ರಾಸ್ಪೆಬರಿ ಎಲೆ ಮತ್ತು ಶುಂಠಿ ಬೇಕಿದ್ದರೆ ಬೆಲ್ಲ ಸೇರಿಸಿ ನೀರನ್ನು ಕುದಿಸಿ. ಕಡಿಮೆ ಶಾಖದಲ್ಲಿ ಸುಮಾರು ಮೂರರಿಂದ ಐದು ನಿಮಿಷ ಬೇಯಿಸಿ. ತಣ್ಣಗಾದ ನಂತರ ಸೋಸಿ ಚಹಾ ಸೇವಿಸಿ.

4. ಈ ಸಂಯೋಜನೆಯು ಸಹಾಯ ಮಾಡುತ್ತದೆ ಏಕೆಂದರೆ:
- ರಾಸ್ಪ್ಬೆರಿ ಎಲೆಯು ಮಹಿಳೆಯರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮೂಲಿಕೆಯಾಗಿದೆ.
- ಶುಂಠಿಯು ಉರಿಯೂತದ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ, ಇದು ಉಬ್ಬುವುದು ಮತ್ತು ನೋವಿಗೆ ಸಹಾಯ ಮಾಡುತ್ತದೆ



Click it and Unblock the Notifications











