Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ತೂಕ ಇಳಿಸುವ ಟಿಪ್ಸ್-ಇದು ಪಕ್ಕಾ ಆಯುರ್ವೇದ ವಿಧಾನ
ಬೆಳಗ್ಗೆದ್ದು ಪ್ರಥಮ ಆಹಾರವಾಗಿ ಲಿಂಬೆರಸ ಮತ್ತು ಕೊಂಚ ಜೇನನ್ನು ಸೇರಿಸಿ ಕುಡಿಯುವ ಮೂಲಕ ತೂಕ ಇಳಿಕೆಗೆ ಸಹಕಾರಿಯಾಗಿರುವುದು ಎಲ್ಲರೂ ತಿಳಿದುಕೊಂಡಿರುವ ಸತ್ಯವಾಗಿದೆ. ಈ ನೀರನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಫಲಕಾರಿಯಾಗಿಸಲು ಕೆಲವರು ಕೆಲವು ಮಸಾಲೆಗಳನ್ನು ಸೇರಿಸುತ್ತಾರೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ
ದಾಲ್ಚಿನ್ನಿ ಪುಡಿ, ಕಾಳುಮೆಣಸಿನ ಪುಡಿ, ಗಿಡಮೂಲಿಕೆಗಳಾದ ತುಳಸಿ ಇತ್ಯಾದಿ. ಕೆಲವರು ಈ ಪೇಯವನ್ನು ಕೊಂಚ ಬಿಸಿಮಾಡಿ ಸೇವಿಸುತ್ತಾರೆ. ಆದರೆ ಇವುಗಳಲ್ಲಿ ಯಾವ ವಿಧಾನ ಶ್ರೇಷ್ಠ? ಇದನ್ನು ಹೇಳುವುದು ಕೊಂಚ ಕಷ್ಟಕರ. ಏಕೆಂದರೆ ಪ್ರತಿಯೊಂದರಲ್ಲೂ ತನ್ನದೇ ಆದ ಪ್ರಯೋಜನಗಳಿವೆ.

ತೂಕ ಇಳಿಸುವ ವಿಷಯ ಬಂದಾಗ ಏಲಕ್ಕಿ, ತುಳಸಿಗೆ ಇಲ್ಲಿ ಅಷ್ಟೇನು ಕೆಲಸವಿಲ್ಲ. ಏಕೆಂದರೆ ಇವುಗಳ ಕಾರ್ಯಕ್ಕೆ ಕೊಬ್ಬನ್ನು ದಹಿಸಬೇಕಾಗಿ ಬರುವುದಿಲ್ಲ. ಆದರೆ ಬದಲಿಗೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇವುಗಳಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಈ ಪೇಯ ಹೊಂದಿದ್ದರೆ ಪರೋಕ್ಷವಾಗಿ ಉಪಕಾರವನ್ನೇ ಮಾಡುವ ಕಾರಣ ಇವುಗಳನ್ನು ತೂಕ ಇಳಿಸುವ ಪೇಯಗಳಲ್ಲಿ ಬಳಸುವುದೇ ಒಳ್ಳೆಯದು.
ಅಲ್ಲದೇ ಕೊಂಚ ಬಿಸಿನೀರಿನಲ್ಲಿ ಲಿಂಬೆ, ಜೇನು, ತುಳಸಿ ಎಳೆಗಳು, ಶುಂಠಿ, ದಾಲ್ಚಿನ್ನಿಪುಡಿ, ಏಲಕ್ಕಿ ಸೇರಿಸಿ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೇ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ.
ಆದರೆ ತೂಕ ಇಳಿಸುವ ವಿಷಯ ಬಂದರೆ ಇದಕ್ಕೆ ಕೇವಲ ಬಿಸಿನೀರು ಮತ್ತು ಲಿಂಬೆ ಸಾಕು. ಲಿಂಬೆಯಲ್ಲಿರುವ ಪೆಕ್ಟಿನ್ ಎಂಬ ನಾರನ್ನು ಕರಗಿಸಲು ದೇಹ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಅಲ್ಲದೇ ಇದು ಹಸಿವನ್ನು ಹತ್ತಿಕ್ಕುವ ಮೂಲಕ ಇನ್ನೂ ಹೆಚ್ಚು ಆಹಾರ ಸೇವನೆಗೆ ಕಡಿವಾಣ ಹಾಕುತ್ತದೆ. ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!
ಉತ್ತಮ ಪರಿಣಾಮ ಪಡೆಯಬೇಕೆಂದರೆ ಬಿಸಿನೀರಿನಲ್ಲಿ ಲಿಂಬೆರಸವನ್ನು ಸೇರಿಸಿ ಕೊಂಚಕೊಂಚವಾಗಿ ಇಡಿಯ ದಿನ ಸೇವಿಸುತ್ತಿರಬೇಕು. ಇದೊಂದು ಅದ್ಭುತ ದ್ರವವಾಗಿದ್ದು ತೂಕ ಇಳಿಸುವ ಜೊತೆಗೇ ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಚರ್ಮದ ಕಾಂತಿ ಹೆಚ್ಚಿಸುವುದು, ಜಠರದಲ್ಲಿ ಕ್ಷಾರೀಯತೆ ಹೆಚ್ಚಿಸಿ ದೇಹದ ಪಿಎಚ್ ಮಟ್ಟವನ್ನು ಸಂತುಲಿತಗೊಳಿಸುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆರವನ್ನು ನೀಡುತ್ತದೆ.
ಆದರೆ ಈ ಗುಣಗಳನ್ನು ಪೂರ್ಣಪ್ರಮಾಣದಲ್ಲಿ ಪಡೆಯಬೇಕಾದರೆ ಈ ದ್ರವಕ್ಕೆ ಸಕ್ಕರೆ ಹಾಕಬಾರದು, ಹುಳಿಯಾಗಿಯೇ ಸೇವಿಸಬೇಕು. ಆದರೆ ಕೇವಲ ಬಿಸಿ ಲಿಂಬೆನೀರು ಸೇವಿಸುವುದು ಮಾತ್ರ ಸಾಕಾಗದು, ನಿಮ್ಮ ತೂಕ ಇಳಿಸುವ ಇತರ ಪ್ರಯತ್ನಗಳೂ, ಕೊಬ್ಬು ಹೆಚ್ಚಿರುವ ಆಹಾರ ಸೇವಿಸದಿರಲು ಮನಸ್ಸನ್ನು ನಿಗ್ರಹಿಸುವುದೂ ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

