Latest Updates
-
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸದಿದ್ದರೆ ಕಾದಿದೆ ದೊಡ್ಡ ಅಪಾಯ!
ಕಪ್ಪಾಗಿರುವ ತೊಡೆಗೆ ಉತ್ತಮ ಮನೆಮದ್ದುಗಳು
ಸೌಂದರ್ಯವೆಂದರೆ ಅದು ಸಂಪೂರ್ಣ ದೇಹವನ್ನು ಅವಲಂಬಿಸಿರುವುದು. ಇದರಲ್ಲಿ ಯಾವುದೇ ಒಂದು ಭಾಗವು ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಆಗ ಅದನ್ನು ಪರಿಪೂರ್ಣ ಸೌಂದರ್ಯ ಎಂದು ಹೇಳಲು ಆಗದು. ಮುಖ, ಕುತ್ತಿಗೆ ಹಾಗೂ ಕೈಕಾಲುಗಳಂತೆ ಕೆಲವೊಂದು ಅಂಗಗಳು ತುಂಬಾ ಮಹತ್ವದ್ದಾಗಿರುವುದು. ಆದರೆ ಇವು ಯಾವಾಗಲೂ ಮುಚ್ಚಲ್ಪಟ್ಟಿರುವ ಕಾರಣದಿಂದಾಗಿ ಹೆಚ್ಚಿನವರು ಇದರ ಕಡೆಗೆ ಕಾಳಜಿ ವಹಿಸಲ್ಲ.

ಮುಖ್ಯವಾಗಿ ತೊಡೆಸಂಧುಗಳು ಕಪ್ಪಾಗುವುದು ಕೇವಲ ಮಹಿಳೆಯರು ಮಾತ್ರವಲ್ಲದೆ, ಪುರುಷರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ತೊಡೆ ಒಳಭಾಗವು ಕಪ್ಪಾಗಲು ಹಲವಾರು ಕಾಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಚರ್ಮದ ಉಜ್ಜುವಿಕೆ, ಹಾರ್ಮೋನ್ ಅಸಮತೋಲನ ಹಾಗೂ ಬೊಜ್ಜು ಉಲ್ಲೇಖಿಸಬಹುದಾದ ಕೆಲವು ಕಾರಣಗಳು.
ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಯಾವುದೇ ಪರಿಹಾರ ಬಯಸಿದ್ದರೆ ಆಗ ನೀವು ಕಪ್ಪು ಕಲೆಗಳನ್ನು ಬಿಳಿಯಾಗಿಸುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳಬೇಕು. ಅಂತಹ ಮನೆಮದ್ದುಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.

ತೆಂಗಿನೆಣ್ಣೆ ಮತ್ತು ಲಿಂಬೆರಸ
ವರ್ಣ ಕುಂದಿರುವುದನ್ನು ನಿವಾರಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. ದರಲ್ಲಿ ಇರುವಂತಹ ವಿಟಮಿನ್ ಸಿ ಅದ್ಭುತವಾಗಿ ಕೆಲಸ ಮಾಡುವುದು. ಹಾನಿಗೀಡಾಗಿರುವ ಚರ್ಮದ ಅಂಗಾಂಶಗಳನ್ನು ಇದು ಸರಿಪಡಿಸುವುದು. ತೆಂಗಿನೆಣ್ಣೆ ಜತೆಗೆ ಲಿಂಬೆರಸ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಸ್ನಾನ ಮಾಡಿ.

ಅಡುಗೆ ಸೋಡಾ
ಉಜ್ಜುವಿಕೆಯಿಂದಾಗಿ ಚರ್ಮವು ತುಂಬಾ ಗಡುಸಾಗುವುದು. ಇದಕ್ಕಾಗಿ ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಳ್ಳಬಹುದು. ಇದು ಚರ್ಮದ ಮೇಲ್ಪದರವನ್ನು ಕಿತ್ತುಹಾಕುವುದು. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ. ಕೆಲವೊಂದು ಚರ್ಮಕ್ಕೆ ಅಡುಗೆ ಸೋಡಾವು ವ್ಯತಿರಿಕ್ತ ಪರಿಣಾಮ ಬೀರಬಹುದು.

ಅಲೋವೆರಾ
ಅಲೋವೆರಾವು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಇದು ಕಿರಿಕಿರಿ ಉಂಟು ಮಾಡುವ ಸಮಸ್ಯೆ ನಿವಾರಿಸುವುದು. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ನೆನೆಯಲಿ. ಲೋಳೆಯಲ್ಲಿ ಅಲೊಯಿನ್ ಎನ್ನುವ ಅಂಶವಿದೆ ಮತ್ತು ಇದು ಚರ್ಮದ ಬಣ್ಣವನ್ನು ಕಾಂತಿಯುತವಾಗಿಸುವುದು. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡಿ.

ಆಲೂಗಡ್ಡೆ ತುಂಡು
ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ಹಾಗೆ ಉಜ್ಜಿಕೊಳ್ಳಿ. ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎನ್ನುವ ಅಂಶಿದೆ ಮತ್ತು ಇದು ಚರ್ಮದ ವಿನ್ಯಾಸವನ್ನು ಉತ್ತಮಪಡಿಸಲು ನೆರವಾಗುವುದು.

ಮಸೂರ (ಬೇಳೆ ಕಾಳು)
ಮಸೂರವನ್ನು ನೀವು ರಾತ್ರಿಯಿಡಿ ಹಾಗೆ ನೆನಸಲು ಹಾಕಿ. ಇದರ ಬಳಿಕ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಕಾಂತಿ ನೀಡುವುದು.



Click it and Unblock the Notifications