Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಪ್ಪಾಗಿರುವ ತೊಡೆಗೆ ಉತ್ತಮ ಮನೆಮದ್ದುಗಳು
ಸೌಂದರ್ಯವೆಂದರೆ ಅದು ಸಂಪೂರ್ಣ ದೇಹವನ್ನು ಅವಲಂಬಿಸಿರುವುದು. ಇದರಲ್ಲಿ ಯಾವುದೇ ಒಂದು ಭಾಗವು ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಆಗ ಅದನ್ನು ಪರಿಪೂರ್ಣ ಸೌಂದರ್ಯ ಎಂದು ಹೇಳಲು ಆಗದು. ಮುಖ, ಕುತ್ತಿಗೆ ಹಾಗೂ ಕೈಕಾಲುಗಳಂತೆ ಕೆಲವೊಂದು ಅಂಗಗಳು ತುಂಬಾ ಮಹತ್ವದ್ದಾಗಿರುವುದು. ಆದರೆ ಇವು ಯಾವಾಗಲೂ ಮುಚ್ಚಲ್ಪಟ್ಟಿರುವ ಕಾರಣದಿಂದಾಗಿ ಹೆಚ್ಚಿನವರು ಇದರ ಕಡೆಗೆ ಕಾಳಜಿ ವಹಿಸಲ್ಲ.

ಮುಖ್ಯವಾಗಿ ತೊಡೆಸಂಧುಗಳು ಕಪ್ಪಾಗುವುದು ಕೇವಲ ಮಹಿಳೆಯರು ಮಾತ್ರವಲ್ಲದೆ, ಪುರುಷರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ತೊಡೆ ಒಳಭಾಗವು ಕಪ್ಪಾಗಲು ಹಲವಾರು ಕಾಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಚರ್ಮದ ಉಜ್ಜುವಿಕೆ, ಹಾರ್ಮೋನ್ ಅಸಮತೋಲನ ಹಾಗೂ ಬೊಜ್ಜು ಉಲ್ಲೇಖಿಸಬಹುದಾದ ಕೆಲವು ಕಾರಣಗಳು.
ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಯಾವುದೇ ಪರಿಹಾರ ಬಯಸಿದ್ದರೆ ಆಗ ನೀವು ಕಪ್ಪು ಕಲೆಗಳನ್ನು ಬಿಳಿಯಾಗಿಸುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳಬೇಕು. ಅಂತಹ ಮನೆಮದ್ದುಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.

ತೆಂಗಿನೆಣ್ಣೆ ಮತ್ತು ಲಿಂಬೆರಸ
ವರ್ಣ ಕುಂದಿರುವುದನ್ನು ನಿವಾರಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. ದರಲ್ಲಿ ಇರುವಂತಹ ವಿಟಮಿನ್ ಸಿ ಅದ್ಭುತವಾಗಿ ಕೆಲಸ ಮಾಡುವುದು. ಹಾನಿಗೀಡಾಗಿರುವ ಚರ್ಮದ ಅಂಗಾಂಶಗಳನ್ನು ಇದು ಸರಿಪಡಿಸುವುದು. ತೆಂಗಿನೆಣ್ಣೆ ಜತೆಗೆ ಲಿಂಬೆರಸ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಸ್ನಾನ ಮಾಡಿ.

ಅಡುಗೆ ಸೋಡಾ
ಉಜ್ಜುವಿಕೆಯಿಂದಾಗಿ ಚರ್ಮವು ತುಂಬಾ ಗಡುಸಾಗುವುದು. ಇದಕ್ಕಾಗಿ ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಳ್ಳಬಹುದು. ಇದು ಚರ್ಮದ ಮೇಲ್ಪದರವನ್ನು ಕಿತ್ತುಹಾಕುವುದು. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ. ಕೆಲವೊಂದು ಚರ್ಮಕ್ಕೆ ಅಡುಗೆ ಸೋಡಾವು ವ್ಯತಿರಿಕ್ತ ಪರಿಣಾಮ ಬೀರಬಹುದು.

ಅಲೋವೆರಾ
ಅಲೋವೆರಾವು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಇದು ಕಿರಿಕಿರಿ ಉಂಟು ಮಾಡುವ ಸಮಸ್ಯೆ ನಿವಾರಿಸುವುದು. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ನೆನೆಯಲಿ. ಲೋಳೆಯಲ್ಲಿ ಅಲೊಯಿನ್ ಎನ್ನುವ ಅಂಶವಿದೆ ಮತ್ತು ಇದು ಚರ್ಮದ ಬಣ್ಣವನ್ನು ಕಾಂತಿಯುತವಾಗಿಸುವುದು. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡಿ.

ಆಲೂಗಡ್ಡೆ ತುಂಡು
ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ಹಾಗೆ ಉಜ್ಜಿಕೊಳ್ಳಿ. ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎನ್ನುವ ಅಂಶಿದೆ ಮತ್ತು ಇದು ಚರ್ಮದ ವಿನ್ಯಾಸವನ್ನು ಉತ್ತಮಪಡಿಸಲು ನೆರವಾಗುವುದು.

ಮಸೂರ (ಬೇಳೆ ಕಾಳು)
ಮಸೂರವನ್ನು ನೀವು ರಾತ್ರಿಯಿಡಿ ಹಾಗೆ ನೆನಸಲು ಹಾಕಿ. ಇದರ ಬಳಿಕ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಕಾಂತಿ ನೀಡುವುದು.



Click it and Unblock the Notifications