Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕಪ್ಪಾಗಿರುವ ತೊಡೆಗೆ ಉತ್ತಮ ಮನೆಮದ್ದುಗಳು
ಸೌಂದರ್ಯವೆಂದರೆ ಅದು ಸಂಪೂರ್ಣ ದೇಹವನ್ನು ಅವಲಂಬಿಸಿರುವುದು. ಇದರಲ್ಲಿ ಯಾವುದೇ ಒಂದು ಭಾಗವು ಅದಕ್ಕೆ ವ್ಯತಿರಿಕ್ತವಾಗಿದ್ದರೆ, ಆಗ ಅದನ್ನು ಪರಿಪೂರ್ಣ ಸೌಂದರ್ಯ ಎಂದು ಹೇಳಲು ಆಗದು. ಮುಖ, ಕುತ್ತಿಗೆ ಹಾಗೂ ಕೈಕಾಲುಗಳಂತೆ ಕೆಲವೊಂದು ಅಂಗಗಳು ತುಂಬಾ ಮಹತ್ವದ್ದಾಗಿರುವುದು. ಆದರೆ ಇವು ಯಾವಾಗಲೂ ಮುಚ್ಚಲ್ಪಟ್ಟಿರುವ ಕಾರಣದಿಂದಾಗಿ ಹೆಚ್ಚಿನವರು ಇದರ ಕಡೆಗೆ ಕಾಳಜಿ ವಹಿಸಲ್ಲ.

ಮುಖ್ಯವಾಗಿ ತೊಡೆಸಂಧುಗಳು ಕಪ್ಪಾಗುವುದು ಕೇವಲ ಮಹಿಳೆಯರು ಮಾತ್ರವಲ್ಲದೆ, ಪುರುಷರಲ್ಲಿ ಕಂಡುಬರುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ತೊಡೆ ಒಳಭಾಗವು ಕಪ್ಪಾಗಲು ಹಲವಾರು ಕಾಣಗಳು ಇರಬಹುದು. ಇದರಲ್ಲಿ ಮುಖ್ಯವಾಗಿ ಚರ್ಮದ ಉಜ್ಜುವಿಕೆ, ಹಾರ್ಮೋನ್ ಅಸಮತೋಲನ ಹಾಗೂ ಬೊಜ್ಜು ಉಲ್ಲೇಖಿಸಬಹುದಾದ ಕೆಲವು ಕಾರಣಗಳು.
ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮತ್ತು ಯಾವುದೇ ಪರಿಹಾರ ಬಯಸಿದ್ದರೆ ಆಗ ನೀವು ಕಪ್ಪು ಕಲೆಗಳನ್ನು ಬಿಳಿಯಾಗಿಸುವಂತಹ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಳ್ಳಬೇಕು. ಅಂತಹ ಮನೆಮದ್ದುಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.

ತೆಂಗಿನೆಣ್ಣೆ ಮತ್ತು ಲಿಂಬೆರಸ
ವರ್ಣ ಕುಂದಿರುವುದನ್ನು ನಿವಾರಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. ದರಲ್ಲಿ ಇರುವಂತಹ ವಿಟಮಿನ್ ಸಿ ಅದ್ಭುತವಾಗಿ ಕೆಲಸ ಮಾಡುವುದು. ಹಾನಿಗೀಡಾಗಿರುವ ಚರ್ಮದ ಅಂಗಾಂಶಗಳನ್ನು ಇದು ಸರಿಪಡಿಸುವುದು. ತೆಂಗಿನೆಣ್ಣೆ ಜತೆಗೆ ಲಿಂಬೆರಸ ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಸ್ನಾನ ಮಾಡಿ.

ಅಡುಗೆ ಸೋಡಾ
ಉಜ್ಜುವಿಕೆಯಿಂದಾಗಿ ಚರ್ಮವು ತುಂಬಾ ಗಡುಸಾಗುವುದು. ಇದಕ್ಕಾಗಿ ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಳ್ಳಬಹುದು. ಇದು ಚರ್ಮದ ಮೇಲ್ಪದರವನ್ನು ಕಿತ್ತುಹಾಕುವುದು. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ. ಕೆಲವೊಂದು ಚರ್ಮಕ್ಕೆ ಅಡುಗೆ ಸೋಡಾವು ವ್ಯತಿರಿಕ್ತ ಪರಿಣಾಮ ಬೀರಬಹುದು.

ಅಲೋವೆರಾ
ಅಲೋವೆರಾವು ಚರ್ಮಕ್ಕೆ ಅದ್ಭುತವನ್ನು ಉಂಟು ಮಾಡಲಿದೆ. ಇದು ಕಿರಿಕಿರಿ ಉಂಟು ಮಾಡುವ ಸಮಸ್ಯೆ ನಿವಾರಿಸುವುದು. ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ ಮತ್ತು ಹಾಗೆ ನೆನೆಯಲಿ. ಲೋಳೆಯಲ್ಲಿ ಅಲೊಯಿನ್ ಎನ್ನುವ ಅಂಶವಿದೆ ಮತ್ತು ಇದು ಚರ್ಮದ ಬಣ್ಣವನ್ನು ಕಾಂತಿಯುತವಾಗಿಸುವುದು. ಇದನ್ನು ನೀವು ನಿಯಮಿತವಾಗಿ ಬಳಕೆ ಮಾಡಿ.

ಆಲೂಗಡ್ಡೆ ತುಂಡು
ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಅದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಕಾಲ ಹಾಗೆ ಉಜ್ಜಿಕೊಳ್ಳಿ. ಆಲೂಗಡ್ಡೆಯಲ್ಲಿ ಕ್ಯಾಟೆಕೊಲೇಸ್ ಎನ್ನುವ ಅಂಶಿದೆ ಮತ್ತು ಇದು ಚರ್ಮದ ವಿನ್ಯಾಸವನ್ನು ಉತ್ತಮಪಡಿಸಲು ನೆರವಾಗುವುದು.

ಮಸೂರ (ಬೇಳೆ ಕಾಳು)
ಮಸೂರವನ್ನು ನೀವು ರಾತ್ರಿಯಿಡಿ ಹಾಗೆ ನೆನಸಲು ಹಾಕಿ. ಇದರ ಬಳಿಕ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿ. ಈ ಪೇಸ್ಟ್ ನ್ನು ಹಚ್ಚಿಕೊಂಡು 15-20 ನಿಮಿಷ ಹಾಗೆ ಬಿಡಿ. ಇದರ ಬಳಿಕ ತೊಳೆಯಿರಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಚರ್ಮಕ್ಕೆ ಕಾಂತಿ ನೀಡುವುದು.



Click it and Unblock the Notifications