Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಲೆಹೊಟ್ಟು ನಿವಾರಣೆಗೆ ಲೋಳೆಸರದ ಮ್ಯಾಜಿಕ್ ಚಿಕಿತ್ಸೆ
ತಲೆಹೊಟ್ಟಿಗೆ ಪ್ರಮುಖ ಕಾರಣ ಶಿಲೀಂಧ್ರಗಳ ಸೋಂಕಿನಿಂದ ತಲೆಯ ಚರ್ಮ ತೀರಾ ಒಣಗಿ ಹೊರಪದರ ಪಕಳೆಯಂತೆ ನಿಧಾನವಾಗಿ ಏಳುವುದು. ಇದು ಪೂರ್ತಿಯಾಗಿ ಏಳದೇ ಕೊಂಚವೇ ಎದ್ದು ಉಳಿದ ಭಾಗ ಚರ್ಮಕ್ಕೆ ಅಂಟಿಕೊಂಡೇ ಇರುವುದು ತುರಿಕೆ ತರಿಸುತ್ತದೆ. ನಾಲ್ಕು ಜನರ ನಡುವೆ ಇದ್ದಾಗ ಈ ತುರಿಕೆ ಅಸಾಧ್ಯ ಮುಜುಗರ ತರಿಸುತ್ತದೆ. ಅಲ್ಲದೇ ಸಡಿಲಗೊಂಡ ಪಕಳೆಗಳು ನಿಧಾನವಾಗಿ ಕೂದಲ ಮೇಲೆಲ್ಲಾ ಆವರಿಸಿ ಭುಜದ ಮೇಲೆ, ಗಾಳಿಗೆ ಹಾರಾಡತೊಡಗುತ್ತವೆ. ಇದನ್ನು ಕಂಡವರು ತೋರುವ ಅಸಹ್ಯ ಸಹಾ ಮುಜುಗರಕ್ಕೀಡುಮಾಡಬಹುದು. ಥತ್ ! ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?
ತಲೆಹೊಟ್ಟಿನ ಕಾರಣ ಚರ್ಮಕ್ಕೆ ಅಗತ್ಯ ಪೋಷಣೆ ದೊರಕದೇ ಕೂದಲ ಬುಡಗಳೂ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ತಲೆದೋರುತ್ತದೆ. ತಲೆಗೂದಲು ಬೆಳೆಯುವುದು ನಿಂತುಹೋಗಿ ಕೂದಲ ಬುಡದಲ್ಲಿ ಸತ್ತ ಚರ್ಮದ ಜೀವಕೋಶಗಳು ತುಂಬಿ ಮುಂದೆ ಇಲ್ಲಿಂದ ಕೂದಲು ಹುಟ್ಟುವ ಸಾಧ್ಯತೆಯನ್ನೇ ಕಡಿಮೆ ಮಾಡುತ್ತವೆ. ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂ ಮತ್ತು ಇತರ ರಾಸಾಯನಿಕ ಆಧಾರಿತ ಪ್ರಸಾಧನಗಳಿವೆ. ಆದರೆ ನಿಸರ್ಗದಲ್ಲಿ ಈ ಸಮಸ್ಯೆಗೆ ಅತ್ಯಂತ ಸಮರ್ಪಕವಾದ ಉತ್ತರವಿದೆ.

ಇದೇ ಲೋಳೆಸರ ಅಥವಾ ಆಲೋವೆರಾ. ಇದರ ಸ್ನಿಗ್ಧ ದ್ರವವನ್ನು ನೇರವಾಗಿ ತಲೆಗೂದಲ ಬುಡಕ್ಕೆ ಹಚ್ಚಿಕೊಂಡಾಗ ತಲೆಹೊಟ್ಟು ನಿವಾರಣೆಯಾಗುವುದು ಮಾತ್ರವಲ್ಲ, ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಆರೋಗ್ಯಕರ ಮತ್ತು ಕಾಂತಿಯುಕ್ತ ಕೂದಲ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಆದರೆ ಇದನ್ನು ಬಳಸುವುದು ಹೇಗೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇಂದು ಈ ಲೋಳೆಯ ಸಮರ್ಪಕ ಬಳಕೆಯ ವಿಧಾನದ ಕುರಿತು ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ..
ಲೋಳೆಸರದ ಕೋಡಿನಿಂದ ಹಿಂಡಿ ತೆಗೆದ ತಾಜಾ ರಸ
ಒಂದು ಲೋಳೆಸರದ ಕೋಡಿನ ಸುಮಾರು ಮೂರು ಇಂಚಿನಷ್ಟು ಉದ್ದದ ತುಂಡನ್ನು ಕತ್ತರಿಸಿ ತೆಗೆಯಿರಿ. ಈ ಕೋಡನು ಉದ್ದಕ್ಕೆ ಸೀಳಿ ಬಿಡಿಸಿದಾಗ ಒಳಭಾಗದಲ್ಲಿ ಸ್ನಿಗ್ಧ ದ್ರವವಿರುವುದು ಕಂಡುಬರುತ್ತದೆ. ಈ ರಸವೇ ತಲೆಹೊಟ್ಟು ನಿವಾರಣೆಗೆ ಸಮರ್ಥವಾದ ದ್ರವವಾಗಿದೆ. ಬೆರಳಿನಿಂದ ಅಥವಾ ಚಮಚದಿಂದ ಕೋಡಿನ ಒಳಭಾಗದ ತಿರುಳನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ದ್ರವವನ್ನು ನೇರವಾಗಿ ತಲೆಯ ಮೇಲೆ, ಕೂದಲ ಬುಡಕ್ಕೆ ತಾಕುವಂತೆ ಹಚ್ಚಿ.
ಎಷ್ಟು ಸಾಧ್ಯವೋ ಅಷ್ಟು ತಿರುಳನ್ನು ಸಂಗ್ರಹಿಸಿ ನಯವಾದ ಮಸಾಜ್ ಮೂಲಕ ಇಡಿಯ ತಲೆಯನ್ನು ಆವರಿಸುವಂತೆ ಮಾಡಿ. ಬಳಿಕ ನಯವಾದ ಮಸಾಜ್ ಮುಂದುವರೆಸಿ. ಕೂದಲ ತುದಿಯವರೆಗೂ ಹಚ್ಚುವ ಅಗತ್ಯವಿಲ್ಲ, ಕೂದಲ ಬುಡಕ್ಕೆ ಮಾತ್ರ ಹಚ್ಚಿದರೆ ಸಾಕು. ಬಳಿಕ ಇದನ್ನು ಹಾಗೇ ಒಣಗಲು ಬಿಡಿ. ಸಂಜೆಯ ಹೊತ್ತು ಹಚ್ಚಿ ಇಡಿಯ ರಾತ್ರಿ ಬಿಟ್ಟು ಮರುದಿನ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿಕೊಳ್ಳಿ.
ಲೋಳೆಸರ ಮತ್ತು ಟೀ ಟ್ರೀ ಎಣ್ಣೆ (tea tree oil)
ಒಂದು ವೇಳೆ ತಲೆಯಲ್ಲಿ ತುರಿಕೆ ಮತ್ತು ಸೋಂಕು ಉಂಟಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಮೂರು ಚಿಕ್ಕ ಚಮಚದಷ್ಟು ಲೋಳೆಸರದ ತಿರುಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ ಚೆನ್ನಾಗಿ ಕಿವುಚಿ. ಇದಕ್ಕೆ ಸುಮಾರು ಐದರಿಂದ ಏಳು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಆವರಿಸುವಂತೆ ಇಡಿಯ ತಲೆಗೆ ಹಚ್ಚಿ. ಬಳಿಕ ಕೊಂಚ ಹೊತ್ತು ನಯವಾಗಿ ಮಸಾಜ್ ಮಾಡಿ. ಸಂಜೆ ಹಚ್ಚಿದ ಬಳಿಕ ಇಡಿಯ ರಾತ್ರಿ ಹಾಗೇ ಇರಲಿ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ. ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'
ಲೋಳೆಸರ ಮತ್ತು ಬೇವಿನ ಎಣ್ಣೆ
ಲೋಳೆಸರ ಮತ್ತು ಲಿಂಬೆರಸ
ಒಂದು ವೇಳೆ ತಲೆಯ ಚರ್ಮದಲ್ಲಿ ಕ್ಷಾರೀಯತೆ ಹೆಚ್ಚಾಗಿದ್ದರೆ ತಲೆಹೊಟ್ಟಿನ ಜೊತೆಗೇ ಕೊಂಚ ಉರಿಯೂ ಆವರಿಸಿರುತ್ತದೆ. ವಿಶೇಷವಾಗಿ ತಲೆಗೆ ಬಾಚಣಿಗೆ ತಾಗಿಸಿದಾದ ನೋವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಲೋಳೆಸರ ಮತ್ತು ಲಿಂಬೆರಸದ ಬಳಕೆ ಸೂಕ್ತವಾಗಿದೆ. ಲಿಂಬೆರಸ ಆಮ್ಲೀಯವಾಗಿದ್ದು ಕ್ಷಾರೀಯ ತಲೆಹೊಟ್ಟಿನ ಪ್ರಭಾವವನ್ನು ಕಡಿಮೆಗೊಳಿಸಿ ಪಿಎಚ್ ಮಟ್ಟವನ್ನು ಸರಿದೂಗಿಸುತ್ತದೆ. ಅಲ್ಲದೇ ಮುಕ್ಕಾಲು ಪಾಲು ಚರ್ಮದ ಪಕಳೆ ಎದ್ದಿದ್ದು ಕೊಂಚವೇ ಚರ್ಮಕ್ಕೆ ಅಂಟಿಕೊಂಡಿದ್ದವನ್ನೆಲ್ಲಾ ಸಡಿಲಗೊಳಿಸಿ ನಿವಾರಣೆಯಾಗಲು ಸಹಕರಿಸುತ್ತದೆ. ಅಲ್ಲದೇ ಕೂದಲ ಕಾಂತಿಯೂ ಹೆಚ್ಚುತ್ತದೆ.
ಇದಕ್ಕಾಗಿ ಮೂರು ಚಿಕ್ಕ ಚಮಚ ಲೋಳೆಸರದ ದ್ರವ ಮತ್ತು ಎರಡು ಚಿಕ್ಕ ಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಇದನ್ನು ಕೂಡಲೇ ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಇಡಿಯ ತಲೆ ಆವರಿಸುವಂತೆ ಮಾಡಿ. ಬಳಿಕ ಕೊಂಚ ಹೊತ್ತು ಮಸಾಜ್ ಮುಂದುವರೆಸಿ. ಸಂಜೆಯ ಹೊತ್ತು ಈ ದ್ರವವನ್ನು ಹಚ್ಚಿ ರಾತ್ರಿಯಿಡೀ ಒಣಗಲು ಬಿಡಿ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.



Click it and Unblock the Notifications


