Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಈ ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ

ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ ಪಂಜಿಯಾತುನ್ ಎಂಬ ಗ್ರಾಮದಲ್ಲಿ 68 ವರ್ಷದ ಲಾವೊ ಪನ್ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಈ ನಾಯಿಯೊಂದಿಗೆ ಏಕಾಂಗಿಯಾಗಿ ವಾಸವಾಗಿದ್ದರು. ಇಂತಿಪ್ಪ ಲಾವೊ ಪನ್ ಮೊನ್ನೆ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಆ ನಾಯಿಯೋ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ. ಏಳು ದಿನಗಳಿಂದಲೂ ಅನ್ನಾಹಾರವಿಲ್ಲದೆ ಯಜಮಾನನಿಗಾಗಿ ಕಣ್ಣೀರು ಹಾಕುತ್ತಿರುವುದು ನೋಡುಗರ ಹೃದಯವನ್ನು ಕಲಕುತ್ತಿದೆ.
ಆಶ್ಚರ್ಯದ ಸಂಗತಿಯೆಂದರೆ, ಈ ನಾಯಿಯ ಗೋಳಾಟ ನೋಡಿ ಗ್ರಾಮದವರು ನಾಯಿಯನ್ನು ಉಪಾಯವಾಗಿ ಊರೊಳಕ್ಕೆ ಕರೆತಂದು ಸಾಕಿಕೊಳ್ಳಲು ಯತ್ನಿಸಿದರು. ಉಹುಃ ಏನೂ ಪ್ರಯೋಜನವಾಗಿಲ್ಲ. ನಾಯಿ ಯಾವುದೋ ಮಾಯದಲ್ಲಿ ಯಜಮಾನನ ಸಮಾಧಿ ಬಳಿಗೆ ಓಡಿಹೋಗಿ ತನ್ನ ಅಚಲ ನಿಷ್ಠೆ ತೋರುತ್ತಿದೆ.
ಬೈರೇಗೌಡರ ಸಾಕುನಾಯಿ ಪ್ರೇಮವೂ ಹೀಗಿತ್ತು: ಯಾಕೋ ಈ ಹೊತ್ತಿನಲ್ಲಿ ಕೋಲಾರದ ವೇಮಗಲ್ ನಲ್ಲಿ ದಶಕದ ಹಿಂದೆ ಕಡುಬಂದ ದೃಶ್ಯವೊಂದು ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿದೆ. ಹಿರಿಯ ರಾಜಕಾರಣಿ, ಕೃಷಿ ಸಚಿವ ಸಿ. ಬೈರೇಗೌಡರು ಮೃತಪಟ್ಟಾಗ ಅವರ ಸಾಕು ನಾಯಿ ಹೀಗೇ ಗೋಳಾಡಿತ್ತು.



Click it and Unblock the Notifications