Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ ನಂಬಿಗಸ್ಥ ನಾಯಿ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ

ಚೀನಾದ ಲಿಯೊನಿಂಗ್ ಪ್ರಾಂತ್ಯದಲ್ಲಿ ಪಂಜಿಯಾತುನ್ ಎಂಬ ಗ್ರಾಮದಲ್ಲಿ 68 ವರ್ಷದ ಲಾವೊ ಪನ್ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಈ ನಾಯಿಯೊಂದಿಗೆ ಏಕಾಂಗಿಯಾಗಿ ವಾಸವಾಗಿದ್ದರು. ಇಂತಿಪ್ಪ ಲಾವೊ ಪನ್ ಮೊನ್ನೆ ಈ ಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಆದರೆ ಆ ನಾಯಿಯೋ ಯಜಮಾನನ ಸಮಾಧಿ ಬಿಟ್ಟು ಕದಲುತ್ತಿಲ್ಲ. ಏಳು ದಿನಗಳಿಂದಲೂ ಅನ್ನಾಹಾರವಿಲ್ಲದೆ ಯಜಮಾನನಿಗಾಗಿ ಕಣ್ಣೀರು ಹಾಕುತ್ತಿರುವುದು ನೋಡುಗರ ಹೃದಯವನ್ನು ಕಲಕುತ್ತಿದೆ.
ಆಶ್ಚರ್ಯದ ಸಂಗತಿಯೆಂದರೆ, ಈ ನಾಯಿಯ ಗೋಳಾಟ ನೋಡಿ ಗ್ರಾಮದವರು ನಾಯಿಯನ್ನು ಉಪಾಯವಾಗಿ ಊರೊಳಕ್ಕೆ ಕರೆತಂದು ಸಾಕಿಕೊಳ್ಳಲು ಯತ್ನಿಸಿದರು. ಉಹುಃ ಏನೂ ಪ್ರಯೋಜನವಾಗಿಲ್ಲ. ನಾಯಿ ಯಾವುದೋ ಮಾಯದಲ್ಲಿ ಯಜಮಾನನ ಸಮಾಧಿ ಬಳಿಗೆ ಓಡಿಹೋಗಿ ತನ್ನ ಅಚಲ ನಿಷ್ಠೆ ತೋರುತ್ತಿದೆ.
ಬೈರೇಗೌಡರ ಸಾಕುನಾಯಿ ಪ್ರೇಮವೂ ಹೀಗಿತ್ತು: ಯಾಕೋ ಈ ಹೊತ್ತಿನಲ್ಲಿ ಕೋಲಾರದ ವೇಮಗಲ್ ನಲ್ಲಿ ದಶಕದ ಹಿಂದೆ ಕಡುಬಂದ ದೃಶ್ಯವೊಂದು ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿದೆ. ಹಿರಿಯ ರಾಜಕಾರಣಿ, ಕೃಷಿ ಸಚಿವ ಸಿ. ಬೈರೇಗೌಡರು ಮೃತಪಟ್ಟಾಗ ಅವರ ಸಾಕು ನಾಯಿ ಹೀಗೇ ಗೋಳಾಡಿತ್ತು.



Click it and Unblock the Notifications











