Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಇದೇ ಕಾರಣಗಳಿಂದಾಗಿ 'ಮದುವೆ' ಪರಿಕಲ್ಪನೆ ಇನ್ನೂ ಉಳಿದಿರುವುದು
ಆಧುನಿಕ ಜಗತ್ತಿನಲ್ಲಿ ಎಲ್ಲವೂ ಮಾಡರ್ನ್ ಆಗಿ ಬದಲಾಗುತ್ತಿದೆ. ಇದಕ್ಕೆ ಸಂಬಂಧಗಳು ಹೊರತಾಗಿಲ್ಲ. ಪ್ರೀತಿಯನ್ನೇ ನಿರಾಕರಿಸುತ್ತಿದ್ದ ಸಮಾಜ ಇದೀಗ ಲಿವಿಂಗ್ ಟ್ಯೂಗೆದರನ್ನೇ ಒಪ್ಪಿಕೊಂಡು ಮುಂದೆ ಸಾಗುತ್ತಿದೆ. ಆದರೆ ಇವೆಲ್ಲಗಳ ನಡುವೆ ಇನ್ನೂ ಬದಲಾಗದೇ ಇರುವಂತದ್ದು ಅಂದ್ರೆ ಅದು ವಿವಾಹ ಅಥವಾ ಮದುವೆ.
ಜಗತ್ತಿನಲ್ಲಿ ನಾನಾ ಬದಲಾವಣೆಗಳು ಆಗಿದ್ದರೂ ಇನ್ನೂ ತನ್ನ ಸ್ಥಾನವನ್ನು ಭದ್ರವಾಗಿರಿಸಿಕೊಂಡಿದೆ ಈ ಮದುವೆ ಅನ್ನೋ ಬಂಧನ. ಇದು ನಮ್ಮ ಸಮಾಜದ ಅಡಿಪಾಯ ಮಾತ್ರವಲ್ಲ, ವ್ಯಕ್ತಿಗಳು ಮತ್ತು ಕುಟುಂಬಗಳ ನಡುವಿನ ಸಂಪರ್ಕವನ್ನು ಸಹ ಪ್ರತಿನಿಧಿಸುತ್ತದೆ. ಆಧುನಿಕತಾವಾದಿಗಳು ಮದುವೆಯನ್ನು ದುರ್ಬಲ ಪರಿಕಲ್ಪನೆ ಎಂದು ಪರಿಗಣಿಸಿದ್ದರೂ, ಅದು ಸಂಪೂರ್ಣವಾಗಿ ಅಲ್ಲ. ಇಂದಿನ ಜಗತ್ತಿನಲ್ಲಿ ಮದುವೆ ಇನ್ನೂ ಪ್ರಸ್ತುತವಾಗಲು ಕೆಲವು ಕಾರಣಗಳು ಇಲ್ಲಿವೆ.

ಪವಿತ್ರ ಬಂಧ:
ಕೊನೇ ಉಸಿರಿನವರೆಗೂ ಒಟ್ಟಿಗೆ ಇರುವುದಾಗಿ ಭರವಸೆ ನೀಡುವ ವಿವಾಹವು ಗಂಡು ಹೆಣ್ಣಿನ ನಡುವಿನ ಪವಿತ್ರ ಬಂಧವಾಗಿದೆ. ಮದುವೆ ಸಮಯದಲ್ಲಿ ಅಸ್ತಿತ್ವದಲ್ಲಿರುವ ಪವಿತ್ರ ಆಚರಣೆಗಳು ಈ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ವಿವಾಹವೆಂಬುದು ದೇವರಿಂದ ಆಶೀರ್ವದಿಸಲ್ಪಟ್ಟ ನಿರ್ಧಾರವೆಂಬ ನಂಬಿಕೆ ಇದ್ದು, ಸಮಾಜದಲ್ಲಿ ದಂಪತಿಗಳಿಗೆ ಒಂದು ಗೌರವವನ್ನು ತರುತ್ತದೆ. ಆದ್ದರಿಂದ ವಿವಾಹಕ್ಕೆ ಇನ್ನೂ ಮಹತ್ವ ಸಿಗುತ್ತಿರುವುದು.

ನಂಬಿಕೆ ಮತ್ತು ಸ್ನೇಹ:
ಸ್ನೇಹವು ಅನೇಕರ ಜನರ ಪ್ರೀತಿಗೆ ಬುನಾದಿಯಾಗುವುದು ಸಾಮಾನ್ಯ. ಗಂಡ -ಹೆಂಡತಿಯ ನಡುವಿನ ಸಂಬಂಧದಲ್ಲಿ ಸ್ನೇಹವಿದ್ದರೆ ಅಲ್ಲಿ ನಂಬಿಕೆ ತನ್ನಿಂದ ತಾನಾಗಿಯೇ ಬೆಳೆಯುವುದು. ಆದರೆ ಯಾವುದೇ ಗುರುತು ಪರಿಚಯ ಇಲ್ಲದೇ, ಯಾರೋ ಅಪರಿಚಿತನನ್ನು ವರಿಸಿ ಆತನ ಜೊತೆ ದೇಹ ಹಾಗೂ ಮನಸ್ಸು ಹಂಚಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಈ ನಂಬಿಕೆ ಕೊಡುವುದು ಮದುವೆ ಎಂಬ ಬಂಧನ. ಅಲ್ಲಿ ನೀವು ಆ ವ್ಯಕ್ತಿಯೊಂದಿಗೆ ಜೀವನಕ್ಕಾಗಿ ಬಂಧಿತರಾದಾಗ, ಅದು ಅನಿವಾರ್ಯವಾಗುತ್ತದೆ.

ಕುಟುಂಬದ ವಿಸ್ತರಣೆ:
ಮಕ್ಕಳನ್ನು ಪಡೆಯಬೇಕು ಎಂಬ ಬಯಕೆ ಬರುವುದು ಕುಟುಂಬ ವಿಸ್ತರಣೆಗೆ ಕಾರಣವಾಗುತ್ತದೆ.ಬೇರೆ ಯಾವುದೇ ಮಾರ್ಗಕ್ಕಿಂತ ಮಕ್ಕಳನ್ನು ಪಡೆಯಲು ಮದುವೆ ಉತ್ತಮವಾದ ದಾರಿ. ಮದುವೆಯಾಗಿ ಮಕ್ಕಳನ್ನು ಪಡೆಯುವುದು ದಂಪತಿಗಳಿಗೆ ಸ್ಥಾನಮಾನ ಹಾಗೂ ಗೌರವ ತರುವುದು. ಜೊತೆಗೆ ಆ ಮಕ್ಕಳ ಪಾಲನೆ ಪೋಷಣೆ ಮಾಡಿ ಅವರನ್ನು ಒಂದೊಳ್ಳೆ ದಡ ತಲುಪಿಸುವ ಮೂಲಕ ದಂಪತಿಗಳು ದೀರ್ಘಾವಧಿಯವರೆಗೆ ಜೊತೆಯಾಗಿರುವಂತೆ ಮಾಡುವುದು.

ಭದ್ರತೆ:
ನೀವು ಯಾರನ್ನಾದರೂ ಮದುವೆಯಾದಾಗ, ಪವಿತ್ರ ಬಂಧದಿಂದ ಮಾತ್ರ ಅದನ್ನು ಸಮರ್ಥಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಮದುವೆ ನಿಮ್ಗೆ ಸುರಕ್ಷತೆಯ ಭಾವನೆಯನ್ನು ನೀಡುತ್ತದೆ. ಮದುವೆ ಮೂಲಕ ಕಾನೂನಾತ್ಮಕವಾಗಿ ನೀವು ಒಬ್ಬರ ಸೊತ್ತಾಗುತ್ತೀರಿ. ಅಷ್ಟೇ ಅಲ್ಲ, ಅಧಿಕೃತವಾಗಿ ನೀವು ಅವರಿಗೆ ಸೇರುತ್ತಿರಿ.ಇದರಿಂದ ನಿಮಗೆ ಭದ್ರತೆ ಸಿಗುವುದು. ಮದುವೆಯೊಂದಿಗೆ ಹಣಕಾಸಿನ, ಮನೆ, ಜೀವನ ಸುರಕ್ಷತೆಯಂತಹ ಜವಾಬ್ದಾರಿಗಳು ಬರುತ್ತವೆ. ಅದನ್ನು ಗಂಡ ಹೆಂಡತಿ ಸೇರಿ ಎದುರಿಸುವ ಮನಸ್ಸು ನಿಮ್ಮದಾಗುವುದು.

ಅನ್ಯೋನ್ಯತೆ:
ಮದುವೆ ಎಂಬ ಬಲವಾದ ಸಂಬಂಧದಲ್ಲಿ ಇರುವ ಯಾರಿಗಾದರೂ ತಮ್ಮ ಸಂಗಾತಿಯ ಜೊತೆ ಅನ್ಯೋನ್ಯತೆ ಸ್ವಾಭಾವಿಕವಾಗಿ ಬರುತ್ತದೆ. ಸದಾ ಅವರ ಜೊತೆಯಲ್ಲಿಯೇ ಕಾಲ ಕಳೆಯುವುದರಿಂದ ನಮ್ಮೆಲ್ಲ ಸುಖ ಕಷ್ಟಗಳಲ್ಲಿ ಪಾಲು ಪಡೆಯುವುದರಿಂದ ಅನ್ಯೋನ್ಯತೆ ಎಂಬುದು ಬಂದೇ ಬರುವುದು. ಆದರೆ ಅದನ್ನು ಕಾಪಾಡಿಕೊಳ್ಳಲು ಗಂಡ ಹೆಂಡತಿ ಇಬ್ಬರೂ ಎಷ್ಟು ಪ್ರಯತ್ನಗಳನ್ನು ಮಾಡುತ್ತೀರಿ ಎಂಬುದು ಮುಖ್ಯ ವಿಷಯ.



Click it and Unblock the Notifications
