Latest Updates
-
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು
ದಾಂಪತ್ಯದಲ್ಲಿ ಅರಿತು ಬಾಳಿದರೆ ಬಾಳು ಬಂಗಾರ
ಮದುವೆಗಳು ಸ್ವರ್ಗದಲ್ಲಿಯೇ ನಡೆಯುತ್ತವೆ ಎಂದು ಹೇಳುತ್ತಾರೆ. ಆದರೆ ಸಂಬಂಧಗಳು ಮಾತ್ರ ಈ ಭೂಮಿಯ ಮೇಲೇ ಆಗುತ್ತವೆ. ಆದರೆ ಎಲ್ಲಾ ಸಂಬಂಧಗಳು ಪ್ರಾರಂಭದಲ್ಲಿ ಕಂಡಂತೆ ರೋಚಕವಾಗಿಲ್ಲದೇ ದಿನಗಳೆದಂತೆ ಹಳಸುವುದನ್ನು ಕಾಣಬಹುದು.
ಇದಕ್ಕೆ ಮುಖ್ಯ ಕಾರಣವೆಂದರೆ ಪರಸ್ಪರರ ನಡುವೆ ಮೂಡಿರುವ ಭಿನ್ನಾಭಿಪ್ರಾಯ, ವಿಶ್ವಾಸದ ಕೊರತೆ, ಸಮಯಾವಕಾಶವಿಲ್ಲದಿರುವುದು, ಸಂಬಂಧಕ್ಕೆ ಬೆಲೆ ನೀಡದೇ ಇರುವುದು ಇತ್ಯಾದಿಗಳನ್ನು ಇದಕ್ಕೆ ಉದಾಹರಿಸಬಹುದು. ಒಂದು ವೇಳೆ ಸಂಬಂಧ ಹಳಸದೇ ಇರಬೇಕಾದರೆ ಸಂಬಂಧದಲ್ಲಿ ಇರಬೇಕಾದ ಕೆಲವು ವಿಷಯಗಳನ್ನು ಇಬ್ಬರೂ ಅರಿತುಕೊಂಡಿದ್ದರೆ ಮಾತ್ರ ಸಾಧ್ಯ. ಬನ್ನಿ, ಈ ನಿಟ್ಟಿನಲ್ಲಿ ಕೆಲವು ಕುತೂಹಲಕರ ಸಂಗತಿಗಳನ್ನು ನೋಡೋಣ:

ಮುಕ್ತಮನಸ್ಸಿನಿಂದ ಮಾತು
ಯಾವುದೇ ಸಂಬಂಧ ಸುಖಮಯವಾಗಿ ಮುಂದುವರೆಯಬೇಕಾದರೆ ಇಬ್ಬರೂ ಪರಸ್ಪರ ಮುಕ್ತಮನಸ್ಸಿನಿಂದ ಮಾತನಾಡಬೇಕು. ಎಲ್ಲಾ ವಿಷಯಗಳನ್ನು, ಅದು ಎಷ್ಟೇ ಚಿಕ್ಕದಿರಲಿ ಅಥವಾ ಗಹನವಾಗಿರಲಿ, ಇಬ್ಬರೂ ಸಮಾನವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕು. ಇದರಿಂದ ಇಬ್ಬರಿಗೂ ಇನ್ನೊಬ್ಬರ ಮನಸ್ಸಿನಲ್ಲಿ ಏನಿದೆ ಎಂಬುದು ಅರಿವಾಗಿ ಆ ಪ್ರಕಾರ ಮುನ್ನಡೆಯಲು ಪ್ರೇರಣೆ ಸಿಗುತ್ತದೆ. ಅಲ್ಲದೇ ಯಾವ ವಿಷಯ ಇಷ್ಟವಿಲ್ಲವೋ ಅದನ್ನು ಅನುಸರಿಸದಿರುವ ಮೂಲಕ ವಿಶ್ವಾಸ ಪಡೆಯಲು ಮತ್ತು ಬದ್ದತೆ ಸಾಧ್ಯವಾಗುತ್ತದೆ. ದಾಂಪತ್ಯದಲ್ಲಿ ಹೀಗೆಲ್ಲಾ ಆದರೆ, ಸಂಬಂಧಕ್ಕೆ ಬೆಲೆ ಎಲ್ಲಿ?
ಸುಖದ-ದುಃಖ ಸಮಾನರಾಗಿ ಹಂಚಿಕೊಳ್ಳಿ
ಆರೋಗ್ಯಕರ ಸಂಬಂಧಕ್ಕಾಗಿ ಜೀವನದ ಸುಖದ ಅಥವಾ ದುಃಖದ ಕ್ಷಣಗಳನ್ನು ಸಮಾನರಾಗಿ ಹಂಚಿಕೊಳ್ಳಬೇಕು. ನಿಮ್ಮ ವಿಚಾರ, ಅಭಿಪ್ರಾಯಗಳನ್ನೂ ಹಂಚಿಕೊಳ್ಳಬೇಕು. ಆಗ ಮಾತ್ರ ಸಂಬಂಧ ಮುಂದುವರೆಯಲು ಸಾಧ್ಯ.
ಪ್ರೀತಿಗೆ ಬೆಲೆ ಇರಲಿ
ಆರೋಗ್ಯಕರ ಸಂಬಂಧ ಎಂದಿಗೂ ಬಲವಂತವಾಗಿ ಆಗಲು ಸಾಧ್ಯವಿಲ್ಲ. ಒಂದು ವೇಳೆ ಈ ರೀತಿಯದ್ದಾಗಿದ್ದರೆ ಇದು ಪತಿ ಪತ್ನಿಯರಿಗಿಂತ ಹೆಚ್ಚಾಗಿ ಗುಲಾಮ-ಮಾಲಿಕನ ಸಂಬಂಧವಾಗುತ್ತದೆ. ಆದ್ದರಿಂದ ಇಬ್ಬರೂ ಪರಸ್ಪರರ ಪ್ರೀತಿಪಾತ್ರರಾಗಬೇಕೇ ವಿನಃ ಮಾಲಿಕ ಗುಲಾಮರಾಗಕೂಡದು. ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ
ಮಾನಸಿಕವಾಗಿಯೂ ಹತ್ತಿರವಾಗಿರಿ
ಸಂಬಂಧ ಕೇವಲ ದೈಹಿಕವಾಗಿ ಅಲ್ಲ, ಮಾನಸಿಕವಾಗಿಯೂ ಇರಬೇಕು. ಅಂದರೆ ಮಾನಸಿಕವಾಗಿ ಎಷ್ಟು ಹತ್ತಿರಾಗುತ್ತೀರೋ ದೈಹಿಕವಾಗಿಯೂ ಹತ್ತಿರಾಗುವುದು ಅಗತ್ಯ. ಆದರೆ ಎರಡಕ್ಕೂ ಮಿತಿಗಳಿವೆ. ವಾಸ್ತವವಾಗಿ ದೈಹಿಕ ಆಕರ್ಷಣೆ ವಿವಾಹದ ಪ್ರಾರಂಭದಲ್ಲಿ ಹೆಚ್ಚಾಗಿದ್ದು ಕ್ರಮೇಣ ಕಡಿಮೆಯಾಗುತ್ತಾ ಹೋದರೂ ಮಾನಸಿಕವಾಗಿ ಹೆಚ್ಚು ಹೆಚ್ಚು ಹತ್ತಿರಾಗುತ್ತಾ ಹೋಗಬೇಕು.
ಇಲ್ಲಿ ಇಬ್ಬರೂ ಸಮಾನರು ನೆನಪಿಡಿ
ಸಂಬಂಧದಲ್ಲಿ ಇಬ್ಬರೂ ಸಮಾನರಾಗಿದ್ದು ಯಾರೂ ಮೇಲಲ್ಲ. ಯಾವಾಗ ನಾನೇ ಮೇಲೆ, ನಾನು ಹೇಳಿದಂತೆ ಕೇಳಿಕೊಂಡಿರಬೇಕು ಎಂಬ ಭಾವನೆ ಮೂಡಿತೋ ಆಗ ಸಂಬಂಧ ಏಕಮುಖವಾಗಿದ್ದು ನಿರಾಸೆ ಮತ್ತು ಹತಾಷೆಯಿಂದ ಕೂಡಿದ ಸಂಬಂಧವಾಗಿರುತ್ತದೆ. ಆದರೆ ಪರಸ್ಪರ ಗೌರವಿಸುವ ಸಂಬಂಧ ಜೀವನವನ್ನು ಸುಖಮಯವಾಗಿಸುತ್ತದೆ. ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು
ನಿರ್ಮಲ ಮನಸ್ಸಿನ ಪ್ರೀತಿ
"ನನ್ನ ಜೀವನದಲ್ಲಿ ನೀನೇ ಮುಖ್ಯ, ನಾನು ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ" ಎಂದು ಬಾಯಿಮಾತಿನಲ್ಲಿ ಹೇಳಬೇಕಾಗಿಯೇ ಇಲ್ಲ. ಮನಸ್ಸಿನಲ್ಲಿ ಈ ಭಾವನೆಯನ್ನು ಬಲವಾಗಿ ಮೂಡಿಸಿಕೊಂಡು ಆ ಪ್ರಕಾರ ನಿಮ್ಮ ಸಂಗಾತಿಯನ್ನು ಯಾವುದೇ ಪ್ರತಿಫಲವಿಲ್ಲದೇ ಪ್ರೀತಿಸಿದರೆ ನಿಮ್ಮ ಸಂಗಾತಿಯಿಂದಲೂ ಇದೇ ರೀತಿಯ ಪ್ರೀತಿ ಹರಿದು ಬರುತ್ತದೆ. ಈ ಪ್ರೀತಿ ಜೀವನದ ಯಾವುದೇ ಐಶ್ವರ್ಯಕ್ಕೂ ಮಿಗಿಲಾದ ಐಶ್ವರ್ಯವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಕೂಡದು.



Click it and Unblock the Notifications















