Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ

ಮದುವೆಯ ನಂತರ ಮನೆಯವರು ಸಂತೋಷವಾಗಿದ್ದೀರ ಅಂತ ವಿಚಾರಿಸುತ್ತಾರೆ, ಆದರೆ ನೀವು ಮಾತ್ರ ನಿಮ್ಮ ಸಂಸಾರ ಆರೋಗ್ಯಕರವಾಗಿದೆಯೇ ಎಂದು ಗಮನಿಸಬೇಕು! ಮದುವೆಯಾದ ಶುರುವಿನಲ್ಲಿ ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ, ಆದರೆ ನಂತರ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ. ಅದನ್ನೇ ಬೆಳೆಯಲು ಬಿಟ್ಟರೆ ಆ ಸಂತೋಷವೆಂಬುದು ಇಲ್ಲವಾಗುತ್ತದೆ. ಅದಕ್ಕೆ ಸಂಸಾರ ಆರೋಗ್ಯಕರವಾಗಿದೆಯೇ ಎಂದು ನೋಡಿಕೊಳ್ಳಿ. ಆರೋಗ್ಯಕರವಾಗಿದ್ದ ಸಂಸಾರದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸಿರುತ್ತದೆ.
ಮದುವೆಯ ನಂತರ ತಾನು ಅಂತ ಯೋಚಿಸದೆ ನಾವು ಅಂತ ಯೋಚಿಸಬೇಕು ಅಂತ ಹಿರಿಯರು ಹೇಳುತ್ತಾರೆ. ನಾವು ಅಂತ ಯೋಚಿಸಿದಾಗ ಅಲ್ಲಿ ಇಬ್ಬರ ಭಾವನೆಗಳಿಗೆ ಬೆಲೆ ಇರುತ್ತದೆ. ನಾವು, ನಮ್ಮದು ಅಂತ ಯೋಚಿಸುವ ಬದಲು ನಾನು, ನನ್ನದು ಎಂಬ ಭಾವನೆ ದಂಪತಿಗಳಲ್ಲಿ ಒಬ್ಬರಿಗೆ ಇದ್ದರೆ ಸಾಕು ಆ ಸಂಸಾರ ಸುಖಕರವಾಗಿರುವುದಿಲ್ಲ. ಅಲ್ಲಿ ಪ್ರೀತಿಗಿಂತ ಅಹಂ ಹೆಚ್ಚಾಗುವುದು.
ಮತ್ತೊಂದು ಮುಖ್ಯವಾದ ಅಂಶವೆಂದರೆ ಇಬ್ಬರಿಗೂ ತಮ್ಮದೇ ಆದ ಸಮಯ ಕಳೆಯುವ ಸ್ವಾತಂತ್ರ್ಯ ಇರಬೇಕು. ಫ್ರೆಂಡ್ಸ್ ಜೊತೆ ಕಳೆಯಲು, ಮನೆಯವರ ಜೊತೆ ಕಳೆಯಲು ಅವಕಾಶ ಮತ್ತು ಸ್ವಾತಂತ್ರ್ಯ ಕೊಡಬೇಕು. ಗಂಡ ಗೆಳೆಯರ ಜೊತೆ ಪಾರ್ಟಿಗೆ ಹೋದ ಎಂದು ಹೆಂಡತಿ ರಂಪಾಟ ಮಾಡುವುದು, ತಾಯಿಗೆ ಮನೆಗೆ ಅಥವಾ ಫ್ರೆಂಡ್ಸ್ ಜೊತೆ ಹೊರಗಡೆ ಹೋಗಬೇಡವೆಂದು ಗಂಡ ಹೆಂಡತಿಗೆ ನಿರ್ಬಂಧ ಹಾಕುವುದು ಮಾಡಿದರೆ ಅಂತಹ ಸಂಸಾರ ಆರೋಗ್ಯಕರವಾಗಿರಲು ಸಾಧ್ಯವಿಲ್ಲ.
ಅದರಲ್ಲೂ ಸಂಸಾರವೆಂದ ಮೇಲೆ ನಂಬಿಕೆ ಮುಖ್ಯ. ಇವತ್ತು ಎಷ್ಟೋ ಸಂಸಾರಗಳು ಕೋರ್ಟಿಗೆ ಬರಲು ಕಾರಣ 'ಸಂಶಯ'. ಆದ್ದರಿಂದ ಪ್ರತಿಯೊಂದು ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದರೆ ಅಲ್ಲಿ ಸಂಶಯವೆಂಬುದು ಇರುವುದಿಲ್ಲ. ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಕೆಲಸ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಗಂಡ-ಹೆಂಡತಿಯ ನಡುವೆ ಯಾವುದೇ ಕಾರಣಕ್ಕೂ ಬಿರುಕು ಬರಲು ಬಿಡಬಾರದು. ದಂಪತಿಗಳಲ್ಲಿ ಅತೃಪ್ತಿ, ಅಹಂ, ಮುಚ್ಚುಮರೆಯ ಗುಣಗಳಿದ್ದರರ ಮಾತ್ರ ಮೂರನೆಯ ವ್ಯಕ್ತಿ ಅವರಿಬ್ಬರ ಮಧ್ಯದಲ್ಲಿ ಪ್ರವೇಶಿಸುತ್ತಾನೆ/ತ್ತಾಳೆ. ಆ ರೀತಿ ಆಗದಿರಲು ಸಂಸಾರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು, ಆಗ ಸಂತೋಷ ದಾಂಪತ್ಯ ಜೀವನ ನಿಮ್ಮದಾಗುವುದು.



Click it and Unblock the Notifications
