Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ

ಮದುವೆಯ ನಂತರ ಮನೆಯವರು ಸಂತೋಷವಾಗಿದ್ದೀರ ಅಂತ ವಿಚಾರಿಸುತ್ತಾರೆ, ಆದರೆ ನೀವು ಮಾತ್ರ ನಿಮ್ಮ ಸಂಸಾರ ಆರೋಗ್ಯಕರವಾಗಿದೆಯೇ ಎಂದು ಗಮನಿಸಬೇಕು! ಮದುವೆಯಾದ ಶುರುವಿನಲ್ಲಿ ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ, ಆದರೆ ನಂತರ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ. ಅದನ್ನೇ ಬೆಳೆಯಲು ಬಿಟ್ಟರೆ ಆ ಸಂತೋಷವೆಂಬುದು ಇಲ್ಲವಾಗುತ್ತದೆ. ಅದಕ್ಕೆ ಸಂಸಾರ ಆರೋಗ್ಯಕರವಾಗಿದೆಯೇ ಎಂದು ನೋಡಿಕೊಳ್ಳಿ. ಆರೋಗ್ಯಕರವಾಗಿದ್ದ ಸಂಸಾರದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸಿರುತ್ತದೆ.
ಮದುವೆಯ ನಂತರ ತಾನು ಅಂತ ಯೋಚಿಸದೆ ನಾವು ಅಂತ ಯೋಚಿಸಬೇಕು ಅಂತ ಹಿರಿಯರು ಹೇಳುತ್ತಾರೆ. ನಾವು ಅಂತ ಯೋಚಿಸಿದಾಗ ಅಲ್ಲಿ ಇಬ್ಬರ ಭಾವನೆಗಳಿಗೆ ಬೆಲೆ ಇರುತ್ತದೆ. ನಾವು, ನಮ್ಮದು ಅಂತ ಯೋಚಿಸುವ ಬದಲು ನಾನು, ನನ್ನದು ಎಂಬ ಭಾವನೆ ದಂಪತಿಗಳಲ್ಲಿ ಒಬ್ಬರಿಗೆ ಇದ್ದರೆ ಸಾಕು ಆ ಸಂಸಾರ ಸುಖಕರವಾಗಿರುವುದಿಲ್ಲ. ಅಲ್ಲಿ ಪ್ರೀತಿಗಿಂತ ಅಹಂ ಹೆಚ್ಚಾಗುವುದು.
ಮತ್ತೊಂದು ಮುಖ್ಯವಾದ ಅಂಶವೆಂದರೆ ಇಬ್ಬರಿಗೂ ತಮ್ಮದೇ ಆದ ಸಮಯ ಕಳೆಯುವ ಸ್ವಾತಂತ್ರ್ಯ ಇರಬೇಕು. ಫ್ರೆಂಡ್ಸ್ ಜೊತೆ ಕಳೆಯಲು, ಮನೆಯವರ ಜೊತೆ ಕಳೆಯಲು ಅವಕಾಶ ಮತ್ತು ಸ್ವಾತಂತ್ರ್ಯ ಕೊಡಬೇಕು. ಗಂಡ ಗೆಳೆಯರ ಜೊತೆ ಪಾರ್ಟಿಗೆ ಹೋದ ಎಂದು ಹೆಂಡತಿ ರಂಪಾಟ ಮಾಡುವುದು, ತಾಯಿಗೆ ಮನೆಗೆ ಅಥವಾ ಫ್ರೆಂಡ್ಸ್ ಜೊತೆ ಹೊರಗಡೆ ಹೋಗಬೇಡವೆಂದು ಗಂಡ ಹೆಂಡತಿಗೆ ನಿರ್ಬಂಧ ಹಾಕುವುದು ಮಾಡಿದರೆ ಅಂತಹ ಸಂಸಾರ ಆರೋಗ್ಯಕರವಾಗಿರಲು ಸಾಧ್ಯವಿಲ್ಲ.
ಅದರಲ್ಲೂ ಸಂಸಾರವೆಂದ ಮೇಲೆ ನಂಬಿಕೆ ಮುಖ್ಯ. ಇವತ್ತು ಎಷ್ಟೋ ಸಂಸಾರಗಳು ಕೋರ್ಟಿಗೆ ಬರಲು ಕಾರಣ 'ಸಂಶಯ'. ಆದ್ದರಿಂದ ಪ್ರತಿಯೊಂದು ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದರೆ ಅಲ್ಲಿ ಸಂಶಯವೆಂಬುದು ಇರುವುದಿಲ್ಲ. ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಕೆಲಸ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಗಂಡ-ಹೆಂಡತಿಯ ನಡುವೆ ಯಾವುದೇ ಕಾರಣಕ್ಕೂ ಬಿರುಕು ಬರಲು ಬಿಡಬಾರದು. ದಂಪತಿಗಳಲ್ಲಿ ಅತೃಪ್ತಿ, ಅಹಂ, ಮುಚ್ಚುಮರೆಯ ಗುಣಗಳಿದ್ದರರ ಮಾತ್ರ ಮೂರನೆಯ ವ್ಯಕ್ತಿ ಅವರಿಬ್ಬರ ಮಧ್ಯದಲ್ಲಿ ಪ್ರವೇಶಿಸುತ್ತಾನೆ/ತ್ತಾಳೆ. ಆ ರೀತಿ ಆಗದಿರಲು ಸಂಸಾರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು, ಆಗ ಸಂತೋಷ ದಾಂಪತ್ಯ ಜೀವನ ನಿಮ್ಮದಾಗುವುದು.



Click it and Unblock the Notifications