Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಸಂತೋಷದ ಸಂಸಾರಕ್ಕೆ ಬೇಕು ಆರೋಗ್ಯಕರ ದಾಂಪತ್ಯ

ಮದುವೆಯ ನಂತರ ಮನೆಯವರು ಸಂತೋಷವಾಗಿದ್ದೀರ ಅಂತ ವಿಚಾರಿಸುತ್ತಾರೆ, ಆದರೆ ನೀವು ಮಾತ್ರ ನಿಮ್ಮ ಸಂಸಾರ ಆರೋಗ್ಯಕರವಾಗಿದೆಯೇ ಎಂದು ಗಮನಿಸಬೇಕು! ಮದುವೆಯಾದ ಶುರುವಿನಲ್ಲಿ ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ, ಆದರೆ ನಂತರ ಸಣ್ಣ ಪುಟ್ಟ ಸಮಸ್ಯೆಗಳು ಕಂಡು ಬರುತ್ತದೆ. ಅದನ್ನೇ ಬೆಳೆಯಲು ಬಿಟ್ಟರೆ ಆ ಸಂತೋಷವೆಂಬುದು ಇಲ್ಲವಾಗುತ್ತದೆ. ಅದಕ್ಕೆ ಸಂಸಾರ ಆರೋಗ್ಯಕರವಾಗಿದೆಯೇ ಎಂದು ನೋಡಿಕೊಳ್ಳಿ. ಆರೋಗ್ಯಕರವಾಗಿದ್ದ ಸಂಸಾರದಲ್ಲಿ ಸಂತೋಷ ಮತ್ತು ನೆಮ್ಮದಿ ನೆಲೆಸಿರುತ್ತದೆ.
ಮದುವೆಯ ನಂತರ ತಾನು ಅಂತ ಯೋಚಿಸದೆ ನಾವು ಅಂತ ಯೋಚಿಸಬೇಕು ಅಂತ ಹಿರಿಯರು ಹೇಳುತ್ತಾರೆ. ನಾವು ಅಂತ ಯೋಚಿಸಿದಾಗ ಅಲ್ಲಿ ಇಬ್ಬರ ಭಾವನೆಗಳಿಗೆ ಬೆಲೆ ಇರುತ್ತದೆ. ನಾವು, ನಮ್ಮದು ಅಂತ ಯೋಚಿಸುವ ಬದಲು ನಾನು, ನನ್ನದು ಎಂಬ ಭಾವನೆ ದಂಪತಿಗಳಲ್ಲಿ ಒಬ್ಬರಿಗೆ ಇದ್ದರೆ ಸಾಕು ಆ ಸಂಸಾರ ಸುಖಕರವಾಗಿರುವುದಿಲ್ಲ. ಅಲ್ಲಿ ಪ್ರೀತಿಗಿಂತ ಅಹಂ ಹೆಚ್ಚಾಗುವುದು.
ಮತ್ತೊಂದು ಮುಖ್ಯವಾದ ಅಂಶವೆಂದರೆ ಇಬ್ಬರಿಗೂ ತಮ್ಮದೇ ಆದ ಸಮಯ ಕಳೆಯುವ ಸ್ವಾತಂತ್ರ್ಯ ಇರಬೇಕು. ಫ್ರೆಂಡ್ಸ್ ಜೊತೆ ಕಳೆಯಲು, ಮನೆಯವರ ಜೊತೆ ಕಳೆಯಲು ಅವಕಾಶ ಮತ್ತು ಸ್ವಾತಂತ್ರ್ಯ ಕೊಡಬೇಕು. ಗಂಡ ಗೆಳೆಯರ ಜೊತೆ ಪಾರ್ಟಿಗೆ ಹೋದ ಎಂದು ಹೆಂಡತಿ ರಂಪಾಟ ಮಾಡುವುದು, ತಾಯಿಗೆ ಮನೆಗೆ ಅಥವಾ ಫ್ರೆಂಡ್ಸ್ ಜೊತೆ ಹೊರಗಡೆ ಹೋಗಬೇಡವೆಂದು ಗಂಡ ಹೆಂಡತಿಗೆ ನಿರ್ಬಂಧ ಹಾಕುವುದು ಮಾಡಿದರೆ ಅಂತಹ ಸಂಸಾರ ಆರೋಗ್ಯಕರವಾಗಿರಲು ಸಾಧ್ಯವಿಲ್ಲ.
ಅದರಲ್ಲೂ ಸಂಸಾರವೆಂದ ಮೇಲೆ ನಂಬಿಕೆ ಮುಖ್ಯ. ಇವತ್ತು ಎಷ್ಟೋ ಸಂಸಾರಗಳು ಕೋರ್ಟಿಗೆ ಬರಲು ಕಾರಣ 'ಸಂಶಯ'. ಆದ್ದರಿಂದ ಪ್ರತಿಯೊಂದು ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದರೆ ಅಲ್ಲಿ ಸಂಶಯವೆಂಬುದು ಇರುವುದಿಲ್ಲ. ದಂಪತಿಗಳ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಕೆಲಸ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ಗಂಡ-ಹೆಂಡತಿಯ ನಡುವೆ ಯಾವುದೇ ಕಾರಣಕ್ಕೂ ಬಿರುಕು ಬರಲು ಬಿಡಬಾರದು. ದಂಪತಿಗಳಲ್ಲಿ ಅತೃಪ್ತಿ, ಅಹಂ, ಮುಚ್ಚುಮರೆಯ ಗುಣಗಳಿದ್ದರರ ಮಾತ್ರ ಮೂರನೆಯ ವ್ಯಕ್ತಿ ಅವರಿಬ್ಬರ ಮಧ್ಯದಲ್ಲಿ ಪ್ರವೇಶಿಸುತ್ತಾನೆ/ತ್ತಾಳೆ. ಆ ರೀತಿ ಆಗದಿರಲು ಸಂಸಾರವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು, ಆಗ ಸಂತೋಷ ದಾಂಪತ್ಯ ಜೀವನ ನಿಮ್ಮದಾಗುವುದು.



Click it and Unblock the Notifications