Just In
- 49 min ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪಂದಿರ ದಿನಾಚರಣೆ 2023: ಅಪ್ಪಂದಿರೆ, ಮಗಳ ಮದುವೆ ವಿಚಾರದಲ್ಲಿ ಎಡವದಿರಿ ಜೋಕೆ!
"ಜೂನ್ 18 ಭಾನುವಾರ ಅಪ್ಪಂದಿರ ದಿನಾಚರಣೆ. ಈ ದಿನದ ವಿಶೇಷ ಎಲ್ಲಾ ತಂದೆಯರಿಗೆ ಈ ಲೇಖನ ಅರ್ಪಣೆ".
ಹೆಚ್ಚಿನ ಅಪ್ಪಂದಿರು ಹೆಣ್ಣು ಮಗಳು ಹುಟ್ಟಿದ ತಕ್ಷಣ ಆಕೆಯ ಭವಿಷ್ಯದ ಬಗ್ಗೆ ತುಂಬಾನೇ ಯೋಚಿಸುತ್ತಾರೆ. ಆಕೆಗೆ ಉತ್ತಮ ಜೀವನದ ರೂಪಿಸಿ ಕೊಡಲು ಹಗಲು ರಾತ್ರಿ ಶ್ರಮ ಪಡುತ್ತಾರೆ. ಅದ್ರಲ್ಲು ಅಪ್ಪಂದಿರು ಹೆಚ್ಚು ಚಿಂತಿಸೋದು ಮಗಳನ್ನು ಮದುವೆ ಮಾಡಿ ಕೊಡುವ ವಿಚಾರವಾಗಿ. ಒಂದು ಕಡೆಯಿಂದ ಮಗಳ ಮದುವೆ ಹಣ ಕೂಡಿಡಬೇಕು. ಮತ್ತೊಂದು ಕಡೆಯಿಂದ ಉತ್ತಮ ಹುಡುಗನೊಂದಿಗೆ ಮದುವೆ ಮಾಡಬೇಕೆಂಬ ಒತ್ತಡ ಇದ್ದೇ ಇರುತ್ತದೆ.
ಹೆಣ್ಣು ಸಂಸಾರದ ಕಣ್ಣು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಕಲಿತ ಹೆಣ್ಣು ಮನೆಯ ಕಣ್ಣು ಹೀಗೆ ಸಾಕಷ್ಟು ನಾಣ್ಣುಡಿಗಳು ಹೆಣ್ಣಿನ ಮೌಲ್ಯ ತಿಳಿಸುತ್ತದೆ, ಆಕೆಯ ಸಾಮರ್ಥ್ಯವನ್ನು ಸಾರುತ್ತಿದೆ. ಆದರೆ ಹೆಣ್ಣು ಎಷ್ಟೇ ಓದಿದರೂ, ಎಂತಹ ಸ್ಥಾನಮಾನದಲ್ಲಿದ್ದರೂ ಅಂದಿಗೂ ಇಂದಿಗೂ ಹೆತ್ತವರಿಗೆ ಭಾರವೇ ಎಂಬುದು ಮಾತ್ರ ವಿಷಾದನೀಯ!
ಅದರಲ್ಲೂ ಭಾರತದಲ್ಲಿ ಮಧ್ಯಮ ವರ್ಗದ ಜನರು ಸಮಾಜದಲ್ಲಿ ಗೌರವ-ಸ್ಥಾನಮಾನಗಳಿಗೆ ಅಂಜುತ್ತಾರೆ. ಹೆಣ್ಣು ಮಕ್ಕಳಿದ್ದರೆ ಮಗಳ ವಿವಾಹ ಮಾಡುವುದೇ ಇವರ ಜೀವನದ ಬಹುದೊಡ್ಡ ಸಾಧನೆ ಎಂಬಂತೆ ತಮ್ಮೆಲ್ಲಾ ಆಸೆಗಳನ್ನು ಬದಿಗೊತ್ತಿ ಕಾಸಿಗೆ ಕಾಸು ಕೂಡಿಸುತ್ತಾರೆ. ಮಗಳಿಗೆ ಹೊಂದುವಂಥ ಪರಿಪೂರ್ಣ ಹುಡುಗನನ್ನು ಪತ್ತೆ ಮಾಡಲು, ವರನ ಎಲ್ಲಾ ಬೇಡಿಕೆಗಳನ್ನು ಪೂರೈಸಲು, ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಅದ್ಧೂರಿ ವಿವಾಹ ಮಾಡಲು ತಮ್ಮ ಅರ್ಧ ಜೀವನವನ್ನೇ ಮುಡಿಪಾಗಿಡುತ್ತಾರೆ.
ಆದರೆ ಪ್ರೀತಿಯ ಅಪ್ಪಂದಿರೇ ನೆನಪಿರಲಿ ನಿಮ್ಮ ಎಲ್ಲಾ ಆಸೆಗಳನ್ನು ಬದಿಗೊತ್ತಿ, ಮಗಳಿಗೆ ಮದುವೆ ಎನ್ನುವ ಪದದ ಅರ್ಥವೇ ಗೊತ್ತಿರದ ಸಮಯದಿಂದಲೇ ಹಣ ಕೂಡಿಡುವುದನ್ನು ಆರಂಭಿಸಿ ಮದುವೆ ಮಾಡುವುದು ಯಾವ ಹೆಣ್ಣು ಮಕ್ಕಳೂ ಒಪ್ಪುವುದಿಲ್ಲ. ನಿಮ್ಮ ಮಗಳ ಮದುವೆ ವಿಚಾರದಲ್ಲಿ ನೀವು ಇಂಥಾ ಯಾವುದೇ ತ್ಯಾಗ ಅಥವಾ ಸಮಾಜಕ್ಕೆ ಹೆದರಿ ನಿರ್ಧಾರ ತೆಗೆದುಕೊಳ್ಳುವುದನ್ನು ನಿಮ್ಮ ಮಗಳು ಎಂದಿಗೂ ಬಯಸುವುದಿಲ್ಲ.
ನಲ್ಮೆಯ ಅಪ್ಪಂದಿರೇ ನಿಮ್ಮ ಮಗಳ ಮದುವೆಗೆ ನೀವು ಇಂಥಾ ತ್ಯಾಗ, ನಿರ್ಧಾರಗಳನ್ನು ಮಾಡದಿರಿ.....
ನಿನ್ನ ಆಸೆ ಬದಿಗೊತ್ತಿ ಹಣ ಉಳಿಸಬೇಡ
ಭಾರತದಲ್ಲಿನ ಮಧ್ಯಮ ಹಾಗೂ ಕಳೆ ವರ್ಗದ ಬಹುತೇಕ ಪೋಷಕರು ಮಗಳು ಹುಟ್ಟಿದ ಕೂಡಲೇ ಅವಳ ಮದುವೆಗಾಗಿ ಹಣವನ್ನು ಕೂಡಿಡಲು ಆರಂಭಿಸುತ್ತಾರೆ. ತಮ್ಮ ಆರಾಮವನ್ನು ಲೆಕ್ಕಿಸದೇ, ಜಾಲಿ ಪ್ರವಾಸಗಳನ್ನು ಮಾಡದೇ, ಮನೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸದೇ ಏಳಂಕಿಯ ಹಣವನ್ನು ಹೊಂದಿಸಲು ಸಾಕಷ್ಟು ಶ್ರಮಪಡುತ್ತಾರೆ. ಇಂತಹ ತ್ಯಾಗ ನೀವು ಮಾಡಬೇಡಿ. ಬದಲಾಗಿ ಈ ಹಣವನ್ನು ಅವಳ ಉನ್ನತ ಶಿಕ್ಷಣಕ್ಕೆ ಬಳಸಿ, ಆಕೆಯನ್ನು ಸ್ವಾವಲಂಬಿಯಾಗಿ ಮಾಡಿ.
ಪರಿಪೂರ್ಣ ವರನ ಹುಡುಕಾಟ ಅಗತ್ಯವಿಲ್ಲ
ಮಗಳಿಗೆ ಪರಿಪೂರ್ಣನಾದ ವರನನ್ನು ಹುಡುಕಬೇಕು ಎಂಬ ಹಂಬಲ ಪ್ರತಿ ತಂದೆಯಲ್ಲೂ ಇರುತ್ತದೆ. ಆದರೆ ಪರಿಪೂರ್ಣ ಎಂಬ ಪದಕ್ಕೆ ಅರ್ಥ ತಂದೆ ಹಾಗೂ ಮಗಳಲ್ಲಿ ವಿಭಿನ್ನತೆ ಇರುತ್ತದೆ. ತಂದೆ ಪ್ರಕಾರ ಪರಿಪೂರ್ಣ ಎಂದರೆ ಆರ್ಥಿಕವಾಗಿ ಸದೃಢರಾಗಿರಬೇಕು, ಉತ್ತಮ ಕೌಟುಂಬಿಕ ಹಿನ್ನೆಲೆ ಹೊಂದಿರಬೇಕು ಮತ್ತು ಸಮಾಜ ಈ ಎಲ್ಲಾ ಗುಣಗಳನ್ನು ಒಪ್ಪುವಂತಿರಬೇಕು. ಆದರೆ ಮಗಳ ಪ್ರಕಾರ ಇದು ಭಿನ್ನವಿದೆ, ತನ್ನ ವೃತ್ತೀಯ ಜೀವನಕ್ಕೆ ಪತಿ ಬೆಂಬಲಿಸುವಂತವನಾಗಿರಬೇಕು, ಭಾವನಾತ್ಮಕವಾಗಿ ಕುಗ್ಗಿದಾಗ ನನ್ನ ಶಕ್ತಿಯ ಸ್ತಂಭವಾಗಿರಬೇಕು ಎಂದು ನಾನು ಬಯಸುತ್ತೇನೆ.
ವಿವಾಹಕ್ಕೆ ಗಡುವು ನೀಡಬೇಡಿ
ಭಾರತದಲ್ಲಿರುವ ಮತ್ತೊಂದು ಸಾಮಾಜಿಕ ಪರಿಸ್ಥಿತಿ ಎಂದರೆ, ಹೆಣ್ಣಿಗೆ 30 ವರ್ಷವಾಗಿದ್ದು ಇನ್ನೂ ಮದುವೆ ಆಗಿಲ್ಲ ಎಂದಾದರೆ ವೃದ್ಧಕನ್ಯೆ ಎಂಬಂತೆ ಬಿಂಬಿಸುತ್ತಾರೆ. ಸಮಾಜ ನಿಗದಿ ಮಾಡಿರುವ ವಯಸ್ಸಿಗೆ ಹೆಣ್ಣಿಗೆ ಮದುವೆ ಮಾಡಬೇಕೆಂಬ ಒತ್ತಡ ಪೋಷಕರಿಗೆ ಸಮಾನವಾದಂತೆ ಹೆಣ್ಣಿಗೂ ಇರುತ್ತದೆ. ಮಗಳಿಗೆ ಗೊತ್ತಿದೆ ಸಮಾಜದ ಕಟ್ಟುಪಾಡುಗಳಿಗೆ ತಕ್ಕಂತೆ ಮಗಳ ವಿವಾಹ ಮಾಡಬೇಕೆಂಬ ಬಯಕೆ ನಿಮಗಿದೆ ಹಾಗೂ ಇದು ಸಾಧ್ಯವಾಗದಿದ್ದಾಗ ನೀವು ಸಮಾಜದಲ್ಲಿ ಜನರನ್ನು ಎದುರಿಸಬೇಕು ಎಂದು. ಆದರೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ, ಮದುವೆ ಆಗಲು ನನಗೆ ನನ್ನದೇ ಆಸಕ್ತಿ ಬೇಕಿದೆ, ಕೇವಲ ವಯಸ್ಸಾಗುತ್ತಿದೆ ಎಂಬ ಕಾರಣಕ್ಕೆ ವಿವಾಹವಾಗುವುದು ಸರಿಯಲ್ಲ.
ವರನ ಕಡೆಯವರ ಬೇಡಿಕೆಗಳಿಗೆ ಬೆಂಬಲಿಸಬೇಡಿ
ನಮಗೆಲ್ಲರಿಗೂ ಗೊತ್ತಿದೆ ವರದಕ್ಷಿಣೆ ಕೇಳುವುದು ಕಾನೂನಾತ್ಮಕ ಅಪರಾಧ ಹಾಗೂ ಕೆಟ್ಟ ಪ್ರವೃತ್ತಿ ಎಂದು. ಆದರೆ ಭಾರತದಲ್ಲಿ ಇಂದಿಗೂ ಈ ಹಾವಳಿ ತಪ್ಪಿಲ್ಲ. ಅದರಲ್ಲೂ ಸುಶಿಕ್ಷಿತ ಕುಟುಂಬದವರೇ ವರದಕ್ಷಿಣೆ ಬೇಡ ಎನ್ನುತ್ತಾರೆ, ಹಾಗೆಯೇ ಹೆಣ್ಣಿನ ಕಡೆಯವರಿಂದ ಕಾರು, ಮನೆ , ಸೈಟು, ಐಷಾರಾಮಿ ಮನೆಯ ವಸ್ತುಗಳನ್ನು ಅಂಜಿಕೆ ಇಲ್ಲದೆ ಪರೋಕ್ಷವಾಗಿ ಕೇಳುತ್ತಾರೆ. ಇದು ಇಂದಿಗೂ ಎಲ್ಲಾ ಕುಟುಂಬಗಳಲ್ಲೂ ನಡೆಯುತ್ತಿರುವ ಸತ್ಯ ಸಂಗತಿಯೂ ಹೌದು. ಆದರೆ ನೀವು ಸಹ ಇದೇ ತಪ್ಪನ್ನು ಮಾಡಬೇಡಿ. ಮನುಷ್ಯನಿಗೆ ಆಸೆ ಎಂದಿಗೂ ಅಂತ್ಯವಾಗುವುದಿಲ್ಲ. ನೀವು ನಿಮ್ಮ ಮಗಳಿಗೆ ಅತ್ಯುತ್ತಮವಾದ ಶಿಕ್ಷಣದ ಉಡುಗೊರೆಯನ್ನು ನೀಡಿದ್ದೀರಿ, ಇದು ಪತಿಯ ಕುಟುಂಬದವರಿಗೆ ಸಾಕಾಗುವಷ್ಟಾಗುತ್ತದೆ, ಇಷ್ಟಕ್ಕೆ ಅಂತ್ಯವಾಗಲಿ.
ಎಲ್ಲರಂತೆ ಅದ್ಧೂರಿ ಮದುವೆಗೆ ಯೋಜಿಸಬೇಡಿ
ಇತ್ತೀಚಿನ ದಿನಗಳಲ್ಲಿ ಅದ್ಧೂರಿ ಮದುವೆಗಳು ಸಾಮಾನ್ಯವಾಗಿದೆ, ಎಲ್ಲರೂ ಇಷ್ಟಪಡುತ್ತಾರೆ ಸಹ. ಅಲ್ಲದೆ ಮದುವೆ ಪ್ರತಿಷ್ಠೆಯ ಸಂಕೇತವಾಗಿದೆ. ಅದ್ಧೂರಿ ಮದುವೆ ಆಮಂತ್ರಣ ಪತ್ರ, ಧಿರುಸುಗಳು, ಒಡವೆ, ಊಟ ಅಬ್ಬಬ್ಬಾ ಹಣ ನೀರಿನಂತೆ ಹರಿಯುತ್ತಿರುತ್ತದೆ. ನೀವು ಹೀಗೆ ಹಣವನ್ನು ಪೋಲು ಮಾಡುವುದು ಅನವಶ್ಯ. ಇಲ್ಲಿ ಎರಡು ಮನಸ್ಸುಗಳು ಒಂದಾಗುವ ಸಮಯ, ಇದಕ್ಕೆ ಆತ್ಮೀಯ ಸ್ನೇಹಿತರು, ಕುಟುಂಬಸ್ಥರು ಇದ್ದರೆ ಸಾಕು. ಸರಳ ವಿವಾಹವಾದರೂ ನೆಮ್ಮದಿ ಇರುತ್ತದೆ. ವಿವಾಹ ಹೇಗೆ ಆಗಿದ್ದೇವೆ ಎನ್ನುವುದಕ್ಕಿಂತ ಹೇಗೆ ಜೀವನ ನಡೆಸುತ್ತೇವೆ ಎಂಬುದು ಮಾತ್ರ ಎಣಿಕೆಗೆ ಬರುವುದು. ಹಣವನ್ನು ವ್ಯರ್ಥ ಮಾಡುವ ಬದಲು ಮಗಳ ಮುಂದಿನ ಜೀವನದ ಅವಶ್ಯಕತೆಗಳಿಗೆ ಮೀಸಲಿಡಿ.
ಮದುವೆಯ ನಂತರ ನನ್ನನ್ನು ಅತಿಥಿಯೆಂದು ಭಾವಿಸಬೇಡಿ
ಹಲವು ಕುಟುಂಬಗಳಲ್ಲಿ ಮದುವೆಯ ನಂತರ ಮಗಳು ಮನೆಗೆ ಬಂದರೆ ಅತಿಥಿಯಂತೆ ಆಧರಿಸುತ್ತಾರೆ. ಮಗಳ ಮನೆಗೆ ಆಗಾಗ್ಗೆ ಬರಲು ಸಹ ಹಿಂದೇಟು ಹಾಕುತ್ತಾರೆ. ಆದರೆ ನೀವು ಈ ತಪ್ಪನ್ನು ಮಾಡದಿರಿ. ಅವಳು ನಿಮ್ಮ ಮಗಳು, ಎಂದಿಗೂ ಮಗಳಾಗಿಯೇ ಉಳಿಯುತ್ತಾರೆ. ಮದುವೆ ಎನ್ನುವ ಸಂಬಂಧ ತಂದೆ-ತಾಯಿಯ ಸ್ಥಾನವನ್ನು ಕಸಿಯುವಂತೆ ಅಥವಾ ಬದಲಾಯಿಸುವಂತೆ ಇರಬಾರದು.