Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆರೋಗ್ಯಕರ ಅಡುಗೆಗಾಗಿ ಈ ನಿಯಮಗಳು ತಿಳಿದಿರಲಿ
ಆರೋಗ್ಯಕ್ಕೆ ತಿನ್ನುವ ಅಡುಗೆ ಎಷ್ಟು ಮುಖ್ಯವೋ ಅದನ್ನು ತಯಾರಿಸುವ ವಿಧಾನ ಕೂಡ ಅಷ್ಟೇ ಮುಖ್ಯ ಎಂದು ಹೇಳಬೇಕಾಗಿಲ್ಲ. ಬರೀ ಅಡುಗೆ ಕಲಿತು ಪ್ರಯೋಜನವಿಲ್ಲ, ಸ್ಪೆಷಲ್ ಸ್ಕಿಲ್ ಅಂತಾರಲ್ಲ ಹಾಗೇ ಅಡುಗೆ ಟಿಪ್ಸ್ ಗೊತ್ತಿದ್ದರೆ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ, ಆರೋಗ್ಯಕರವಾಗಿ ಮಾಡಬಹುದು.
ಅಡುಗೆ ಮಾಡುವಾಗ ಕೆಲವೊಂದು ನಿಯಮಗಳಿವೆ, ಅವುಗಳನ್ನು ಯಾವುದೇ ಕಾರಣಕ್ಕೆ ಮರೆಯಬಾರದು. ಆ ನಿಯಮಗಳಾವುವು, ಅವುಗಳನ್ನು ಏಕೆ ಪಾಲಿಸಬೇಕು ಅನ್ನುವುದನ್ನು ಸ್ಲೈಡ್ ನಲ್ಲಿ ವಿವರಿಸಿದ್ದೇವೆ ನೋಡಿ:

ಎಣ್ಣೆಯ ಪ್ರಮಾಣ
ಅಡುಗೆಯ ಬಳಸುವ ಎಣ್ಣೆಯ ಪ್ರಮಾಣದ ಪ್ರಭಾವ ನೇರವಾಗಿ ನಮ್ಮ ದೇಹದ ಮೇಲೆ ಬೀರುತ್ತದೆ. ಆದ್ದರಿಂದ ಎಣ್ಣೆಗೆ ಯಾವ ಎಣ್ಣೆ ಬಳಸುತ್ತಿದ್ದೇವೆ, ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದೇವೆ ಎನ್ನುವುದನ್ನು ಗಮನಿಸುವುದು ಒಳ್ಳೆಯದು. ಅಲ್ಲದೆ ಒಮ್ಮೆ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡದಿರುವುದು ಒಳ್ಳೆಯದು.

ತಾಜಾ ತರಕಾರಿಗಳು
ಅಡುಗೆಗೆ ಫ್ರಿಜ್ ನಲ್ಲಿಟ್ಟು ಶೀತಲೀಕರಣ ಮಾಡಿದ ಆಹಾರಗಳಿಗಿಂತ ತಾಜಾ ತರಕಾರಿಗಳನ್ನು ಬಳಸುವುದು ಒಳ್ಳೆಯದು.

ಪ್ರೆಶರ್ ಕುಕ್ಕರ್
ಅಡುಗೆ ಮಾಡುವಾಗ ಆಹಾರದಲ್ಲಿನ ಪೋಷಕಾಂಶ ಹಾಳಾಗದಂತೆ ಬೇಯಿಸಿ ತಿನ್ನುವುದು ಒಳ್ಳೆಯದು. ಪೋಷಕಾಂಶ ಹಾಳಾಗದಿರಲು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವುದು ಕೂಡ ಒಂದು ಉತ್ತಮ ವಿಧಾನ.

ಉಳಿದ ಪದಾರ್ಥಗಳು
ಪದಾರ್ಥಗಳು ಉಳಿದರೆ ಅದನ್ನು ಹಾಗೇ ಇಟ್ಟು ಹಾಳು ಮಾಡುವ ಬದಲು ಅದರಿಂದ ಸೂಪ್, ಪಲ್ಯ ಅಂತ ಮಾಡಿ ತಿನ್ನುವುದು ಒಳ್ಳೆಯದು.

ಧಾನ್ಯಗಳನ್ನು ನೆನೆ ಹಾಕಿ
ಧಾನ್ಯಗಳನ್ನು ಅಡುಗೆ ಮಾಡುವ ಮುನ್ನ ಒಂದು ರಾತ್ರಿ ನೆನೆ ಹಾಕಿ. ಹೀಗೆ ಮಾಡಿದರೆ ಅದು ಬೇಯಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ ಸಮಯ ಉಳಿಸಿದಂತಾಗುವುದು ಅಲ್ಲದೆ ಧಾನ್ಯದಲ್ಲಿರುವ ಬೇಡದ ರಾಸಾಯನಿಕಗಳು ತುಂಬಾ ಹೊತ್ತು ನೆನೆ ಹಿಟ್ಟು ತೊಳೆದಾಗ ಸಂಪೂರ್ಣವಾಗಿ ಹೋಗುವುದು.

ಸಿಪ್ಪೆ
ನಾವು ತುಂಬಾ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಸೇಬು, ದ್ರಾಕ್ಷಿ, ಸೀಬೆಕಾಯಿ ಈ ರೀತಿಯ ಹಣ್ಣುಗಳಲ್ಲಿ ಹಾಗೂ ಆಲೂಗಡ್ಡೆ, ಸೌತೆಕಾಯಿಯಂತಹ ತರಕಾರಿಗಳ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶ ಇರುತ್ತದೆ. ಆದ್ದರಿಂದ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ.

ಆಹಾರಗಳ ಆಯ್ಕೆ
ಯಾವ ರೀತಿಯ ಆಹಾರ ತಿನ್ನಬೇಕೆಂಬ ನಿಮ್ಮ ಆಯ್ಕೆ ಕೂಡ ಆರೊಗ್ಯದ ಮೇಲೆ ನೇರ ಪರಿಣಾಮ ಬೀಳುತ್ತದೆ. ವಿಟಮಿನ್ , ಪ್ರೊಟೀನ್, ನಾರಿನಂಶ, ಸ್ವಲ್ಪ ಕಾರ್ಬೋಹೈಡ್ರೇಟ್ ಈ ರೀತಿ ಎಲ್ಲಾ ಬಗೆಯ ಪೋಷಕಾಂಶವಿರುವ ಆಹಾರಗಳು ನಿಮ್ಮ ಅಡುಗೆಯಲ್ಲಿರಲಿ.



Click it and Unblock the Notifications