Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಗೃಹಸಚಿವರಿಗೆ ಕೆಲ ಕಿಚನ್ ಟಿಪ್ಸ್

* ನಿವೇದಿತಾ ಪ್ರಭಾಕರ್, ಬೆಂಗಳೂರು
* ಥರ್ಮಾಸ್ ಫ್ಲಾಸ್ಕ್ ಗಬ್ಬು ವಾಸನೆ ಹೊಡೆಯುತ್ತಿದ್ದರೆ ಬಿಸಿನೀರಲ್ಲಿ ತುಸು ತಿನ್ನುವ ಸೋಡಾ ಹಾಕಿ ಕೆಲಕಾಲ ಬಿಟ್ಟು ತೊಳೆಯಿರಿ. ಗಬ್ಬು ವಾಸನೆ ಮಂಗಮಾಯ.
* ಮಗು ಶಾಲೆಗೊಯ್ಯುವ ನೀರಿನ ಬಾಟಲಿ ದುರ್ವಾಸನೆ ಸೂಸುತ್ತಿದ್ದರೆ ಸ್ವಲ್ಪೇ ಸ್ವಲ್ಪ ಟೂತ್ ಪೇಸ್ಟ್ ಬಳಸಿ ಗಲಗಲ ಮಾಡಿ ತೊಳೆಯಿರಿ.
* ಹೆಚ್ಚಿಟ್ಟ ಸೇಬು ಫ್ರಿಜ್ಜಲ್ಲಿಟ್ಟರೂ ಕಂದು ಬಣ್ಣಕ್ಕೆ ತಿರುಗಬಾರದಿರಲು ಸೇಬಿಗೆ ನಿಂಬೆರಸ ಅಥವಾ ಉಪ್ಪು ಅಥವಾ ಸಕ್ಕರೆ ಬಳಿಯಿರಿ. ದಿನಕಳೆದರೂ ಬಣ್ಣ ಹಂಗೇ ಇರುತ್ತದೆ.
* ಅಡುಗೆ ಹೊತ್ತಿ ಕರಕಲಾಗಿದ್ದರೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಬಿಸಿನೀರಲ್ಲಿ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಹೊತ್ತಿದ ಪಾತ್ರೆಯಲ್ಲಿ ಸುರಿದು ಐದಾರು ನಿಮಿಷ ಬಿಟ್ಟು ತೊಳೆಯಿರಿ. ಪಾತ್ರೆ ಲಕಲಕ.
* ಜಿರಳೆಗಳು ಅಡುಗೆಮನೆಯಲ್ಲಿ ತರಲೆ ಮಾಡುತ್ತಿದ್ದರೆ ಹಿಟ್ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಉದುರಿಸಿ. ಮರುದಿನ ಜಿರಳೆಗಳು ಪಲಾಯನಗೈದಿರುತ್ತವೆ.
* ಬೆಳ್ಳುಳ್ಳಿ ಸಿಪ್ಪೆಸುಲಿಯಲು ತಡಕಾಡುತ್ತಿದ್ದರೆ ತುಸು ಬಿಸಿಮಾಡಿ ಸಿಪ್ಪೆ ಸುಲಿಯಿರಿ, ಸಿಪ್ಪೆ ಸಲೀಸಾಗಿ ಬರುತ್ತದೆ.
* ಗೋಬಿ ಮಂಚೂರಿ ಮಾಡುವ ಮುನ್ನ ಹೂಕೋಸನ್ನು ಉಪ್ಪಿ ನೀರಲ್ಲಿ ಮುಳುಗಿಸಿ ಅಥವಾ ನೀರಲ್ಲಿ ಅರಿಷಿಣ ಹಾಕಿ ಕೆಲಹೊತ್ತು ಬಿಟ್ಟು ತೆಗೆಯಿರಿ. ಹುಳುಗಳು ಸತ್ತಿರುತ್ತವೆ.
* ಯಾವುದೇ ಅಡುಗೆಗಾಗಿ ಟೊಮೇಟೊ ಸಿಪ್ಪೆ ಸುಲಿಯಬೇಕಿದ್ದರೆ ತುಸುಹೊತ್ತು ಬಿಸಿನೀರಲ್ಲಿ ಅವನ್ನು ಮುಳುಗಿಸಿಡಿ. ನಂತರ ಸಲಭವಾಗಿ ಸಿಪ್ಪೆ ಸುಲಿಯಬಹುದು.
* ತರಕಾರಿಯನ್ನು ಒಗ್ಗರಣೆಯಲ್ಲಿ ತಾಳಿಸುವಾಗ ತರಕಾರಿ ಎಣ್ಣೆಯಲ್ಲಿ ಹಾಕುವ ಮೊದಲೇ ಅರಿಷಿಣ ಹಾಕಿದರೆ ತರಕಾರಿಗಳು ನೈಜ ಬಣ್ಣ ಕಳೆದುಕೊಳ್ಳುವುದಿಲ್ಲ.
* ನಿಂಬೆಹಣ್ಣುಗಳು ಫ್ರಿಜ್ಜಲ್ಲಿಟ್ಟರೂ ತಾಜಾ ಆಗಿರಬೇಕೆಂದಿದ್ದರೆ ಒಂದು ಪಾತ್ರೆಯಲ್ಲಿ ನೀರುಹಾಕಿ ಅದರಲ್ಲಿಡಿ. ಬಹಳ ದಿನಗಳವರೆಗೆ ತಾಜಾ ಆಗಿರುತ್ತವೆ.
ಸೂಚನೆ : ಓದುಗರೆ, ಇಂಥ ಕಿಚನ್ ಟಿಪ್ಸ್ ನಿಮಗೆ ಗೊತ್ತಿದ್ದರೆ ಒಂದು ಕಡತದಲ್ಲಿ ಟೈಪಿಸಿ ಕಳಿಸಿರಿ. ಉಳಿದ ಅಡುಗೆಮನೆ ಸಾರಥಿಗಳಿಗೆ ಸಹಾಯವಾಗಲಿ.



Click it and Unblock the Notifications