Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಗೃಹಸಚಿವರಿಗೆ ಕೆಲ ಕಿಚನ್ ಟಿಪ್ಸ್

* ನಿವೇದಿತಾ ಪ್ರಭಾಕರ್, ಬೆಂಗಳೂರು
* ಥರ್ಮಾಸ್ ಫ್ಲಾಸ್ಕ್ ಗಬ್ಬು ವಾಸನೆ ಹೊಡೆಯುತ್ತಿದ್ದರೆ ಬಿಸಿನೀರಲ್ಲಿ ತುಸು ತಿನ್ನುವ ಸೋಡಾ ಹಾಕಿ ಕೆಲಕಾಲ ಬಿಟ್ಟು ತೊಳೆಯಿರಿ. ಗಬ್ಬು ವಾಸನೆ ಮಂಗಮಾಯ.
* ಮಗು ಶಾಲೆಗೊಯ್ಯುವ ನೀರಿನ ಬಾಟಲಿ ದುರ್ವಾಸನೆ ಸೂಸುತ್ತಿದ್ದರೆ ಸ್ವಲ್ಪೇ ಸ್ವಲ್ಪ ಟೂತ್ ಪೇಸ್ಟ್ ಬಳಸಿ ಗಲಗಲ ಮಾಡಿ ತೊಳೆಯಿರಿ.
* ಹೆಚ್ಚಿಟ್ಟ ಸೇಬು ಫ್ರಿಜ್ಜಲ್ಲಿಟ್ಟರೂ ಕಂದು ಬಣ್ಣಕ್ಕೆ ತಿರುಗಬಾರದಿರಲು ಸೇಬಿಗೆ ನಿಂಬೆರಸ ಅಥವಾ ಉಪ್ಪು ಅಥವಾ ಸಕ್ಕರೆ ಬಳಿಯಿರಿ. ದಿನಕಳೆದರೂ ಬಣ್ಣ ಹಂಗೇ ಇರುತ್ತದೆ.
* ಅಡುಗೆ ಹೊತ್ತಿ ಕರಕಲಾಗಿದ್ದರೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಬಿಸಿನೀರಲ್ಲಿ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಹೊತ್ತಿದ ಪಾತ್ರೆಯಲ್ಲಿ ಸುರಿದು ಐದಾರು ನಿಮಿಷ ಬಿಟ್ಟು ತೊಳೆಯಿರಿ. ಪಾತ್ರೆ ಲಕಲಕ.
* ಜಿರಳೆಗಳು ಅಡುಗೆಮನೆಯಲ್ಲಿ ತರಲೆ ಮಾಡುತ್ತಿದ್ದರೆ ಹಿಟ್ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಉದುರಿಸಿ. ಮರುದಿನ ಜಿರಳೆಗಳು ಪಲಾಯನಗೈದಿರುತ್ತವೆ.
* ಬೆಳ್ಳುಳ್ಳಿ ಸಿಪ್ಪೆಸುಲಿಯಲು ತಡಕಾಡುತ್ತಿದ್ದರೆ ತುಸು ಬಿಸಿಮಾಡಿ ಸಿಪ್ಪೆ ಸುಲಿಯಿರಿ, ಸಿಪ್ಪೆ ಸಲೀಸಾಗಿ ಬರುತ್ತದೆ.
* ಗೋಬಿ ಮಂಚೂರಿ ಮಾಡುವ ಮುನ್ನ ಹೂಕೋಸನ್ನು ಉಪ್ಪಿ ನೀರಲ್ಲಿ ಮುಳುಗಿಸಿ ಅಥವಾ ನೀರಲ್ಲಿ ಅರಿಷಿಣ ಹಾಕಿ ಕೆಲಹೊತ್ತು ಬಿಟ್ಟು ತೆಗೆಯಿರಿ. ಹುಳುಗಳು ಸತ್ತಿರುತ್ತವೆ.
* ಯಾವುದೇ ಅಡುಗೆಗಾಗಿ ಟೊಮೇಟೊ ಸಿಪ್ಪೆ ಸುಲಿಯಬೇಕಿದ್ದರೆ ತುಸುಹೊತ್ತು ಬಿಸಿನೀರಲ್ಲಿ ಅವನ್ನು ಮುಳುಗಿಸಿಡಿ. ನಂತರ ಸಲಭವಾಗಿ ಸಿಪ್ಪೆ ಸುಲಿಯಬಹುದು.
* ತರಕಾರಿಯನ್ನು ಒಗ್ಗರಣೆಯಲ್ಲಿ ತಾಳಿಸುವಾಗ ತರಕಾರಿ ಎಣ್ಣೆಯಲ್ಲಿ ಹಾಕುವ ಮೊದಲೇ ಅರಿಷಿಣ ಹಾಕಿದರೆ ತರಕಾರಿಗಳು ನೈಜ ಬಣ್ಣ ಕಳೆದುಕೊಳ್ಳುವುದಿಲ್ಲ.
* ನಿಂಬೆಹಣ್ಣುಗಳು ಫ್ರಿಜ್ಜಲ್ಲಿಟ್ಟರೂ ತಾಜಾ ಆಗಿರಬೇಕೆಂದಿದ್ದರೆ ಒಂದು ಪಾತ್ರೆಯಲ್ಲಿ ನೀರುಹಾಕಿ ಅದರಲ್ಲಿಡಿ. ಬಹಳ ದಿನಗಳವರೆಗೆ ತಾಜಾ ಆಗಿರುತ್ತವೆ.
ಸೂಚನೆ : ಓದುಗರೆ, ಇಂಥ ಕಿಚನ್ ಟಿಪ್ಸ್ ನಿಮಗೆ ಗೊತ್ತಿದ್ದರೆ ಒಂದು ಕಡತದಲ್ಲಿ ಟೈಪಿಸಿ ಕಳಿಸಿರಿ. ಉಳಿದ ಅಡುಗೆಮನೆ ಸಾರಥಿಗಳಿಗೆ ಸಹಾಯವಾಗಲಿ.



Click it and Unblock the Notifications