Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೃಹಸಚಿವರಿಗೆ ಕೆಲ ಕಿಚನ್ ಟಿಪ್ಸ್
* ನಿವೇದಿತಾ ಪ್ರಭಾಕರ್, ಬೆಂಗಳೂರು
* ಥರ್ಮಾಸ್ ಫ್ಲಾಸ್ಕ್ ಗಬ್ಬು ವಾಸನೆ ಹೊಡೆಯುತ್ತಿದ್ದರೆ ಬಿಸಿನೀರಲ್ಲಿ ತುಸು ತಿನ್ನುವ ಸೋಡಾ ಹಾಕಿ ಕೆಲಕಾಲ ಬಿಟ್ಟು ತೊಳೆಯಿರಿ. ಗಬ್ಬು ವಾಸನೆ ಮಂಗಮಾಯ.
* ಮಗು ಶಾಲೆಗೊಯ್ಯುವ ನೀರಿನ ಬಾಟಲಿ ದುರ್ವಾಸನೆ ಸೂಸುತ್ತಿದ್ದರೆ ಸ್ವಲ್ಪೇ ಸ್ವಲ್ಪ ಟೂತ್ ಪೇಸ್ಟ್ ಬಳಸಿ ಗಲಗಲ ಮಾಡಿ ತೊಳೆಯಿರಿ.
* ಹೆಚ್ಚಿಟ್ಟ ಸೇಬು ಫ್ರಿಜ್ಜಲ್ಲಿಟ್ಟರೂ ಕಂದು ಬಣ್ಣಕ್ಕೆ ತಿರುಗಬಾರದಿರಲು ಸೇಬಿಗೆ ನಿಂಬೆರಸ ಅಥವಾ ಉಪ್ಪು ಅಥವಾ ಸಕ್ಕರೆ ಬಳಿಯಿರಿ. ದಿನಕಳೆದರೂ ಬಣ್ಣ ಹಂಗೇ ಇರುತ್ತದೆ.
* ಅಡುಗೆ ಹೊತ್ತಿ ಕರಕಲಾಗಿದ್ದರೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಬಿಸಿನೀರಲ್ಲಿ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಹೊತ್ತಿದ ಪಾತ್ರೆಯಲ್ಲಿ ಸುರಿದು ಐದಾರು ನಿಮಿಷ ಬಿಟ್ಟು ತೊಳೆಯಿರಿ. ಪಾತ್ರೆ ಲಕಲಕ.
* ಜಿರಳೆಗಳು ಅಡುಗೆಮನೆಯಲ್ಲಿ ತರಲೆ ಮಾಡುತ್ತಿದ್ದರೆ ಹಿಟ್ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಉದುರಿಸಿ. ಮರುದಿನ ಜಿರಳೆಗಳು ಪಲಾಯನಗೈದಿರುತ್ತವೆ.
* ಬೆಳ್ಳುಳ್ಳಿ ಸಿಪ್ಪೆಸುಲಿಯಲು ತಡಕಾಡುತ್ತಿದ್ದರೆ ತುಸು ಬಿಸಿಮಾಡಿ ಸಿಪ್ಪೆ ಸುಲಿಯಿರಿ, ಸಿಪ್ಪೆ ಸಲೀಸಾಗಿ ಬರುತ್ತದೆ.
* ಗೋಬಿ ಮಂಚೂರಿ ಮಾಡುವ ಮುನ್ನ ಹೂಕೋಸನ್ನು ಉಪ್ಪಿ ನೀರಲ್ಲಿ ಮುಳುಗಿಸಿ ಅಥವಾ ನೀರಲ್ಲಿ ಅರಿಷಿಣ ಹಾಕಿ ಕೆಲಹೊತ್ತು ಬಿಟ್ಟು ತೆಗೆಯಿರಿ. ಹುಳುಗಳು ಸತ್ತಿರುತ್ತವೆ.
* ಯಾವುದೇ ಅಡುಗೆಗಾಗಿ ಟೊಮೇಟೊ ಸಿಪ್ಪೆ ಸುಲಿಯಬೇಕಿದ್ದರೆ ತುಸುಹೊತ್ತು ಬಿಸಿನೀರಲ್ಲಿ ಅವನ್ನು ಮುಳುಗಿಸಿಡಿ. ನಂತರ ಸಲಭವಾಗಿ ಸಿಪ್ಪೆ ಸುಲಿಯಬಹುದು.
* ತರಕಾರಿಯನ್ನು ಒಗ್ಗರಣೆಯಲ್ಲಿ ತಾಳಿಸುವಾಗ ತರಕಾರಿ ಎಣ್ಣೆಯಲ್ಲಿ ಹಾಕುವ ಮೊದಲೇ ಅರಿಷಿಣ ಹಾಕಿದರೆ ತರಕಾರಿಗಳು ನೈಜ ಬಣ್ಣ ಕಳೆದುಕೊಳ್ಳುವುದಿಲ್ಲ.
* ನಿಂಬೆಹಣ್ಣುಗಳು ಫ್ರಿಜ್ಜಲ್ಲಿಟ್ಟರೂ ತಾಜಾ ಆಗಿರಬೇಕೆಂದಿದ್ದರೆ ಒಂದು ಪಾತ್ರೆಯಲ್ಲಿ ನೀರುಹಾಕಿ ಅದರಲ್ಲಿಡಿ. ಬಹಳ ದಿನಗಳವರೆಗೆ ತಾಜಾ ಆಗಿರುತ್ತವೆ.
ಸೂಚನೆ : ಓದುಗರೆ, ಇಂಥ ಕಿಚನ್ ಟಿಪ್ಸ್ ನಿಮಗೆ ಗೊತ್ತಿದ್ದರೆ ಒಂದು ಕಡತದಲ್ಲಿ ಟೈಪಿಸಿ ಕಳಿಸಿರಿ. ಉಳಿದ ಅಡುಗೆಮನೆ ಸಾರಥಿಗಳಿಗೆ ಸಹಾಯವಾಗಲಿ.