Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಗೃಹಸಚಿವರಿಗೆ ಕೆಲ ಕಿಚನ್ ಟಿಪ್ಸ್

* ನಿವೇದಿತಾ ಪ್ರಭಾಕರ್, ಬೆಂಗಳೂರು
* ಥರ್ಮಾಸ್ ಫ್ಲಾಸ್ಕ್ ಗಬ್ಬು ವಾಸನೆ ಹೊಡೆಯುತ್ತಿದ್ದರೆ ಬಿಸಿನೀರಲ್ಲಿ ತುಸು ತಿನ್ನುವ ಸೋಡಾ ಹಾಕಿ ಕೆಲಕಾಲ ಬಿಟ್ಟು ತೊಳೆಯಿರಿ. ಗಬ್ಬು ವಾಸನೆ ಮಂಗಮಾಯ.
* ಮಗು ಶಾಲೆಗೊಯ್ಯುವ ನೀರಿನ ಬಾಟಲಿ ದುರ್ವಾಸನೆ ಸೂಸುತ್ತಿದ್ದರೆ ಸ್ವಲ್ಪೇ ಸ್ವಲ್ಪ ಟೂತ್ ಪೇಸ್ಟ್ ಬಳಸಿ ಗಲಗಲ ಮಾಡಿ ತೊಳೆಯಿರಿ.
* ಹೆಚ್ಚಿಟ್ಟ ಸೇಬು ಫ್ರಿಜ್ಜಲ್ಲಿಟ್ಟರೂ ಕಂದು ಬಣ್ಣಕ್ಕೆ ತಿರುಗಬಾರದಿರಲು ಸೇಬಿಗೆ ನಿಂಬೆರಸ ಅಥವಾ ಉಪ್ಪು ಅಥವಾ ಸಕ್ಕರೆ ಬಳಿಯಿರಿ. ದಿನಕಳೆದರೂ ಬಣ್ಣ ಹಂಗೇ ಇರುತ್ತದೆ.
* ಅಡುಗೆ ಹೊತ್ತಿ ಕರಕಲಾಗಿದ್ದರೆ ಒಂದೆರಡು ಎಸಳು ಈರುಳ್ಳಿ ಮತ್ತು ಬಿಸಿನೀರು ಹಾಕಿ ಐದು ನಿಮಿಷ ಬಿಟ್ಟು ತೊಳೆಯಿರಿ. ಅಥವಾ ಬಿಸಿನೀರಲ್ಲಿ ಅಕ್ಕಿಹಿಟ್ಟು ಮಿಕ್ಸ್ ಮಾಡಿ ಹೊತ್ತಿದ ಪಾತ್ರೆಯಲ್ಲಿ ಸುರಿದು ಐದಾರು ನಿಮಿಷ ಬಿಟ್ಟು ತೊಳೆಯಿರಿ. ಪಾತ್ರೆ ಲಕಲಕ.
* ಜಿರಳೆಗಳು ಅಡುಗೆಮನೆಯಲ್ಲಿ ತರಲೆ ಮಾಡುತ್ತಿದ್ದರೆ ಹಿಟ್ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಉದುರಿಸಿ. ಮರುದಿನ ಜಿರಳೆಗಳು ಪಲಾಯನಗೈದಿರುತ್ತವೆ.
* ಬೆಳ್ಳುಳ್ಳಿ ಸಿಪ್ಪೆಸುಲಿಯಲು ತಡಕಾಡುತ್ತಿದ್ದರೆ ತುಸು ಬಿಸಿಮಾಡಿ ಸಿಪ್ಪೆ ಸುಲಿಯಿರಿ, ಸಿಪ್ಪೆ ಸಲೀಸಾಗಿ ಬರುತ್ತದೆ.
* ಗೋಬಿ ಮಂಚೂರಿ ಮಾಡುವ ಮುನ್ನ ಹೂಕೋಸನ್ನು ಉಪ್ಪಿ ನೀರಲ್ಲಿ ಮುಳುಗಿಸಿ ಅಥವಾ ನೀರಲ್ಲಿ ಅರಿಷಿಣ ಹಾಕಿ ಕೆಲಹೊತ್ತು ಬಿಟ್ಟು ತೆಗೆಯಿರಿ. ಹುಳುಗಳು ಸತ್ತಿರುತ್ತವೆ.
* ಯಾವುದೇ ಅಡುಗೆಗಾಗಿ ಟೊಮೇಟೊ ಸಿಪ್ಪೆ ಸುಲಿಯಬೇಕಿದ್ದರೆ ತುಸುಹೊತ್ತು ಬಿಸಿನೀರಲ್ಲಿ ಅವನ್ನು ಮುಳುಗಿಸಿಡಿ. ನಂತರ ಸಲಭವಾಗಿ ಸಿಪ್ಪೆ ಸುಲಿಯಬಹುದು.
* ತರಕಾರಿಯನ್ನು ಒಗ್ಗರಣೆಯಲ್ಲಿ ತಾಳಿಸುವಾಗ ತರಕಾರಿ ಎಣ್ಣೆಯಲ್ಲಿ ಹಾಕುವ ಮೊದಲೇ ಅರಿಷಿಣ ಹಾಕಿದರೆ ತರಕಾರಿಗಳು ನೈಜ ಬಣ್ಣ ಕಳೆದುಕೊಳ್ಳುವುದಿಲ್ಲ.
* ನಿಂಬೆಹಣ್ಣುಗಳು ಫ್ರಿಜ್ಜಲ್ಲಿಟ್ಟರೂ ತಾಜಾ ಆಗಿರಬೇಕೆಂದಿದ್ದರೆ ಒಂದು ಪಾತ್ರೆಯಲ್ಲಿ ನೀರುಹಾಕಿ ಅದರಲ್ಲಿಡಿ. ಬಹಳ ದಿನಗಳವರೆಗೆ ತಾಜಾ ಆಗಿರುತ್ತವೆ.
ಸೂಚನೆ : ಓದುಗರೆ, ಇಂಥ ಕಿಚನ್ ಟಿಪ್ಸ್ ನಿಮಗೆ ಗೊತ್ತಿದ್ದರೆ ಒಂದು ಕಡತದಲ್ಲಿ ಟೈಪಿಸಿ ಕಳಿಸಿರಿ. ಉಳಿದ ಅಡುಗೆಮನೆ ಸಾರಥಿಗಳಿಗೆ ಸಹಾಯವಾಗಲಿ.



Click it and Unblock the Notifications
