Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ
ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು.....
ವರ್ಷವಿಡೀ ಕಾಯುವ ದೀಪಾವಳಿ ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ಈ ಸಮಯದಲ್ಲಿ ಮನೆಯವರೆಲ್ಲರೂ ಜೊತೆಗೂಡಿ ಕೊಂಚ ಸಮಯವನ್ನು ಸಂತೋಷವನ್ನು ಹಂಚಿಕೊಳ್ಳಲು, ಪಟಾಕಿ, ದೀಪ, ಸಿಹಿತಿಂಡಿಗಳ ಸಂಭ್ರಮವನ್ನು ಅನುಭವಿಸಲು ಸುಸಮಯವಾಗಿದೆ.
ಈ ದಿನಕ್ಕೆಂದೇ ಪ್ರತಿ ಮನೆಯಲ್ಲಿಯೂ ವಿವಿಧ ಸಿಹಿತಿಂಡಿಗಳು ತಯಾರಾಗುತ್ತವೆ. ಕಾಜು ಕಟ್ಲಿ, ಲಾಡು ಇಲ್ಲದ ದೀಪಾವಳಿಯನ್ನು ಊಹಿಸಲು ಸಾಧ್ಯವೇ? ಅದಿರಲಿ, ಸಿಹಿತಿಂಡಿಗಳ ಹೊರತಾದ ದೀಪಾವಳಿಯನ್ನು ಸಂಭ್ರಮಿಸಲು ಸಾಧ್ಯವೇ ಇಲ್ಲ. ಈ ಬಾರಿಯ ದೀಪಾವಳಿಯ ಸೊಗಸನ್ನು ಮನೆಯಲ್ಲಿಯೇ ಮಾಡಬಹುದಾದ ಸಿಹಿ ಶಂಕರಪೋಳಿಯ ಮೂಲಕ ಏಕೆ ಹೆಚ್ಚಿಸಿಕೊಳ್ಳಬಾರದು? ಬನ್ನಿ, ಈ ಸಕ್ಕರೆ ಪಾರೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ: ಖಾರ ಮತ್ತು ಸಿಹಿ ಶಂಕರಪೋಳಿ
*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಅರ್ಧ ಗಂಟೆ
*ತಯಾರಿಕಾ ಸಮಯ: ಐವತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
1) ಗೋಧಿ ಹಿಟ್ಟು - ಎರಡು ಕಪ್ (ಮೈದಾ ಬೇಡ)
2) ತುಪ್ಪ - ಎರಡು ದೊಡ್ಡ ಚಮಚ
3) ನೀರು = ಅಗತ್ಯವೆನಿಸಿದಷ್ಟು
4) ಗೋಧಿ ರವೆ - ಕಾಲು ಕಪ್ (ಚಿರೋಟಿ ರವೆ ಆದರೆ ಇನ್ನೂ ಉತ್ತಮ)
5) ಹುರಿಯಲು ಎಣ್ಣೆ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ
ಸಕ್ಕರೆ ಪಾಕಕ್ಕೆ
1) ಪುಡಿ ಮಾಡಿದ ಸಕ್ಕರೆ- ಒಂದು ಕಪ್
2) ನೀರು - ಅರ್ಧ ಕಪ್
3) ಕೇಸರಿ ದಳಗಳು - ಕೆಲವಾರು (ಐಚ್ಚಿಕ)
ತಯಾರಿಸುವ ವಿಧಾನ:
1) ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿ ಇದಕ್ಕೆ ತುಪ್ಪ, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ.
2) ಇದಕ್ಕೆ ಕೊಂಚ ನೀರು ಸೇರಿಸಿ ಗಂಟುಗಳಿಲ್ಲದಂತೆ ನಾದಿ.
3) ಈ ಉಂಡೆಯನ್ನು ಎರಡು ಭಾಗಗಳಾಗಿಸಿ ಕೊಂಚ ಹೊತ್ತು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಿ.
4) ಕೆಲವು ನಿಮಿಷಗಳ ಬಳಿಕ ಈ ಉಂಡೆಯನ್ನು ಹೊರತೆಗೆದು ದಪ್ಪನಾಗಿ ಲಟ್ಟಿಸಿ
5) ಈ ಚಪಾತಿಯನ್ನು ಅಡ್ಡಲಾಗಿ ಮತ್ತು ಅಡ್ಡಲಾಗಿ ಚಾಕುವಿನಿಂದ ಕತ್ತರಿಸಿ. ಈ ಆಕೃತಿ ವಜ್ರಾಕೃತಿಯಲ್ಲಿರಲಿ.
6) ಈಗ ಒಂದು ಬಾಣಲೆಯಲ್ಲಿ ಹುರಿಯುವ ಎಣ್ಣೆಯನ್ನು ಬಿಸಿಮಾಡಿ
7) ಹುರಿಯುವಷ್ಟು ಬಿಸಿಯಾದ ಬಳಿಕ ಈ ತುಂಡುಗಳನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
8) ಎಲ್ಲಾ ತುಂಡುಗಳನ್ನು ಏಕಕಾಲದಲ್ಲಿ ಹಾಕಬೇಡಿ. ಎರಡು ತುಂಡುಗಳ ನಡುವೆ ಹುರಿಯುವಾಗ ಕೊಂಚ ಅಂತರವಿರುವಷ್ಟು ಮಾತ್ರ ಬಳಸಿ
9) ಹುರಿದ ಬಳಿಕ ಈ ತುಂಡುಗಳನ್ನು ಎಣ್ಣೆಸೌಟು ಬಳಸಿ ಎಣ್ಣೆಹೀರುವ ಕಾಗದದ ಮೇಲೆ ಹರಡಿ. ಇದರ ಮೇಲೆ ಇನ್ನೊಂದು ಕಾಗದವನ್ನು ಹರಡಿ ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ. ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ
ಸಕ್ಕರೆ ಪಾಕ ತಯಾರಿಸಲು:
1) ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಸಕ್ಕರೆ ಕರಗುವಂತೆ ಕಲಕಿ.
2) ಈ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಕುದಿಸಿ.
3) ನೀರು ಆವಿಯಾಗಿ ಸಕ್ಕರೆನೀರು ಕೊಂಚ ಗಾಢವಾಗುವಷ್ಟು ಕುದಿಸಿ.
4) ಕೆಲವು ಎಸಳು ಕೇಸರಿಗಳನ್ನು ಹಾಕಿ ಇನ್ನೂ ಕೊಂಚ ಹೊತ್ತು ಕುದಿಸಿ.
5) ಕಡೆಯದಾಗಿ ಹರಡಿಟ್ಟಿದ್ದ ತುಂಡುಗಳ ಮೇಲೆ ಈ ಪಾಕವನ್ನು ಸುರಿದು ಒಣಗಲು ಬಿಡಿ. ಪ್ರತಿ ತುಂಡನ್ನೂ ಮಗುಚಿ ಈ ಬದಿಯಲ್ಲಿಯೂ ಸಕ್ಕರೆಯ ಪಾಕವನ್ನು ಸುರಿಯಿರಿ. ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು
ಎಚ್ಚರಿಕೆ
ಈ ಪಾಕವನ್ನು ಎಂದಿಗೂ ಬಿಸಿಯಾಗಿದ್ದ ತುಂಡುಗಳ ಮೇಲೆ ಹಾಕಬಾರದು, ಕೊಂಚ ತಣಿದ ಬಳಿಕವೇ ಹಾಕಬೇಕು. ಇಲ್ಲದಿದ್ದರೆ ಸಕ್ಕರೆ ಹರಳುಗಟ್ಟಿ ಸಿಹಿತಿಂಡಿಯ ಸೊಗಸೇ ಇಲ್ಲವಾಗುತ್ತದೆ.



Click it and Unblock the Notifications