Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ
ಎಲ್ಲೆಂದರಲ್ಲಿ ಬಾಯಿಗೆ ಕೆಲಸ ನೀಡುವ ಮತ್ತು ತಿಂಡಿಪೋತರ ಹಸಿವನ್ನು ನೀಗುವ ಕುರುಕಲು ತಿಂಡಿಯೇ ಶಂಕರಪೋಳಿ. ಹಬ್ಬಹರಿದಿನಗಳಲ್ಲಿ ಡಬ್ಬದಲ್ಲಿ ಮಾಡಿಟ್ಟುಕೊಂಡರೆ ತಿಂಗಳಾನುಗಟ್ಟಲೆ ತಿನ್ನಬಹುದು.....
ವರ್ಷವಿಡೀ ಕಾಯುವ ದೀಪಾವಳಿ ಇನ್ನೇನು ಕೆಲವೇ ದಿನಗಳ ದೂರದಲ್ಲಿದೆ. ಈ ಸಮಯದಲ್ಲಿ ಮನೆಯವರೆಲ್ಲರೂ ಜೊತೆಗೂಡಿ ಕೊಂಚ ಸಮಯವನ್ನು ಸಂತೋಷವನ್ನು ಹಂಚಿಕೊಳ್ಳಲು, ಪಟಾಕಿ, ದೀಪ, ಸಿಹಿತಿಂಡಿಗಳ ಸಂಭ್ರಮವನ್ನು ಅನುಭವಿಸಲು ಸುಸಮಯವಾಗಿದೆ.
ಈ ದಿನಕ್ಕೆಂದೇ ಪ್ರತಿ ಮನೆಯಲ್ಲಿಯೂ ವಿವಿಧ ಸಿಹಿತಿಂಡಿಗಳು ತಯಾರಾಗುತ್ತವೆ. ಕಾಜು ಕಟ್ಲಿ, ಲಾಡು ಇಲ್ಲದ ದೀಪಾವಳಿಯನ್ನು ಊಹಿಸಲು ಸಾಧ್ಯವೇ? ಅದಿರಲಿ, ಸಿಹಿತಿಂಡಿಗಳ ಹೊರತಾದ ದೀಪಾವಳಿಯನ್ನು ಸಂಭ್ರಮಿಸಲು ಸಾಧ್ಯವೇ ಇಲ್ಲ. ಈ ಬಾರಿಯ ದೀಪಾವಳಿಯ ಸೊಗಸನ್ನು ಮನೆಯಲ್ಲಿಯೇ ಮಾಡಬಹುದಾದ ಸಿಹಿ ಶಂಕರಪೋಳಿಯ ಮೂಲಕ ಏಕೆ ಹೆಚ್ಚಿಸಿಕೊಳ್ಳಬಾರದು? ಬನ್ನಿ, ಈ ಸಕ್ಕರೆ ಪಾರೆಯನ್ನು ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ: ಖಾರ ಮತ್ತು ಸಿಹಿ ಶಂಕರಪೋಳಿ
*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಅರ್ಧ ಗಂಟೆ
*ತಯಾರಿಕಾ ಸಮಯ: ಐವತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
1) ಗೋಧಿ ಹಿಟ್ಟು - ಎರಡು ಕಪ್ (ಮೈದಾ ಬೇಡ)
2) ತುಪ್ಪ - ಎರಡು ದೊಡ್ಡ ಚಮಚ
3) ನೀರು = ಅಗತ್ಯವೆನಿಸಿದಷ್ಟು
4) ಗೋಧಿ ರವೆ - ಕಾಲು ಕಪ್ (ಚಿರೋಟಿ ರವೆ ಆದರೆ ಇನ್ನೂ ಉತ್ತಮ)
5) ಹುರಿಯಲು ಎಣ್ಣೆ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ
ಸಕ್ಕರೆ ಪಾಕಕ್ಕೆ
1) ಪುಡಿ ಮಾಡಿದ ಸಕ್ಕರೆ- ಒಂದು ಕಪ್
2) ನೀರು - ಅರ್ಧ ಕಪ್
3) ಕೇಸರಿ ದಳಗಳು - ಕೆಲವಾರು (ಐಚ್ಚಿಕ)
ತಯಾರಿಸುವ ವಿಧಾನ:
1) ಒಂದು ಪಾತ್ರೆಯಲ್ಲಿ ಗೋಧಿಹಿಟ್ಟನ್ನು ಹಾಕಿ ಇದಕ್ಕೆ ತುಪ್ಪ, ಸಕ್ಕರೆ ಸೇರಿಸಿ ಮಿಶ್ರಣ ಮಾಡಿ.
2) ಇದಕ್ಕೆ ಕೊಂಚ ನೀರು ಸೇರಿಸಿ ಗಂಟುಗಳಿಲ್ಲದಂತೆ ನಾದಿ.
3) ಈ ಉಂಡೆಯನ್ನು ಎರಡು ಭಾಗಗಳಾಗಿಸಿ ಕೊಂಚ ಹೊತ್ತು ಹತ್ತಿಯ ಬಟ್ಟೆಯಲ್ಲಿ ಸುತ್ತಿಡಿ.
4) ಕೆಲವು ನಿಮಿಷಗಳ ಬಳಿಕ ಈ ಉಂಡೆಯನ್ನು ಹೊರತೆಗೆದು ದಪ್ಪನಾಗಿ ಲಟ್ಟಿಸಿ
5) ಈ ಚಪಾತಿಯನ್ನು ಅಡ್ಡಲಾಗಿ ಮತ್ತು ಅಡ್ಡಲಾಗಿ ಚಾಕುವಿನಿಂದ ಕತ್ತರಿಸಿ. ಈ ಆಕೃತಿ ವಜ್ರಾಕೃತಿಯಲ್ಲಿರಲಿ.
6) ಈಗ ಒಂದು ಬಾಣಲೆಯಲ್ಲಿ ಹುರಿಯುವ ಎಣ್ಣೆಯನ್ನು ಬಿಸಿಮಾಡಿ
7) ಹುರಿಯುವಷ್ಟು ಬಿಸಿಯಾದ ಬಳಿಕ ಈ ತುಂಡುಗಳನ್ನು ಎಣ್ಣೆಯಲ್ಲಿ ಬಿಟ್ಟು ಮಧ್ಯಮ ಉರಿಯಲ್ಲಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
8) ಎಲ್ಲಾ ತುಂಡುಗಳನ್ನು ಏಕಕಾಲದಲ್ಲಿ ಹಾಕಬೇಡಿ. ಎರಡು ತುಂಡುಗಳ ನಡುವೆ ಹುರಿಯುವಾಗ ಕೊಂಚ ಅಂತರವಿರುವಷ್ಟು ಮಾತ್ರ ಬಳಸಿ
9) ಹುರಿದ ಬಳಿಕ ಈ ತುಂಡುಗಳನ್ನು ಎಣ್ಣೆಸೌಟು ಬಳಸಿ ಎಣ್ಣೆಹೀರುವ ಕಾಗದದ ಮೇಲೆ ಹರಡಿ. ಇದರ ಮೇಲೆ ಇನ್ನೊಂದು ಕಾಗದವನ್ನು ಹರಡಿ ಹೆಚ್ಚಿನ ಎಣ್ಣೆಯನ್ನು ಹೀರಿಕೊಳ್ಳುವಂತೆ ಮಾಡಿ. ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ
ಸಕ್ಕರೆ ಪಾಕ ತಯಾರಿಸಲು:
1) ಸಕ್ಕರೆ ಮತ್ತು ನೀರನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಸಕ್ಕರೆ ಕರಗುವಂತೆ ಕಲಕಿ.
2) ಈ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಕುದಿಸಿ.
3) ನೀರು ಆವಿಯಾಗಿ ಸಕ್ಕರೆನೀರು ಕೊಂಚ ಗಾಢವಾಗುವಷ್ಟು ಕುದಿಸಿ.
4) ಕೆಲವು ಎಸಳು ಕೇಸರಿಗಳನ್ನು ಹಾಕಿ ಇನ್ನೂ ಕೊಂಚ ಹೊತ್ತು ಕುದಿಸಿ.
5) ಕಡೆಯದಾಗಿ ಹರಡಿಟ್ಟಿದ್ದ ತುಂಡುಗಳ ಮೇಲೆ ಈ ಪಾಕವನ್ನು ಸುರಿದು ಒಣಗಲು ಬಿಡಿ. ಪ್ರತಿ ತುಂಡನ್ನೂ ಮಗುಚಿ ಈ ಬದಿಯಲ್ಲಿಯೂ ಸಕ್ಕರೆಯ ಪಾಕವನ್ನು ಸುರಿಯಿರಿ. ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು
ಎಚ್ಚರಿಕೆ
ಈ ಪಾಕವನ್ನು ಎಂದಿಗೂ ಬಿಸಿಯಾಗಿದ್ದ ತುಂಡುಗಳ ಮೇಲೆ ಹಾಕಬಾರದು, ಕೊಂಚ ತಣಿದ ಬಳಿಕವೇ ಹಾಕಬೇಕು. ಇಲ್ಲದಿದ್ದರೆ ಸಕ್ಕರೆ ಹರಳುಗಟ್ಟಿ ಸಿಹಿತಿಂಡಿಯ ಸೊಗಸೇ ಇಲ್ಲವಾಗುತ್ತದೆ.



Click it and Unblock the Notifications