Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು

ಬೇಕಾದ ಸಾಮಗ್ರಿಗಳು:
ಕಡಲೆ ಹಿಟ್ಟು (ಕಡಲೆ ಬೇಳೆ ಬೀಸಿಸಿ ಮಾಡಿದ್ದು) : ಒಂದು ಕಪ್
ಪುಡಿ ಮಾಡಿದ ಸಕ್ಕರೆ: ಮುಕ್ಕಾಲು ಕಪ್
ತುಪ್ಪ: ಅರ್ಧ ಕಪ್
ಏಲಕ್ಕಿ: ಒಂದೆರಡು
ಕೇಸರಿ : 8-10 ದಳ
ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ: ಒಂದು ಕಪ್
ಮಾಡುವ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಒಂದೆರಡು ಚಮಚ ತುಪ್ಪ ಹಾಕಿ ಒಣ ದ್ರಾಕ್ಷಿ, ಅರೆ ಬರೆ ಕುಟ್ಟಿದ ಗೋಡಂಬಿ, ಬಾದಾಮಿಯನ್ನು ಕರಿದು ಇಟ್ಟುಕೊಳ್ಳಬೇಕು. ಇದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಹಾಕಿ ಕಡಲೆ ಹಿಟ್ಟನ್ನು ಮಂದ ಉರಿಯಲ್ಲಿ ಹುರಿಯಬೇಕು. ಕಡಲೆ ಹಿಟ್ಟು ಸೀಯದ ಹಾಗೆ ಒಂದೇ ಸಮನೆ ಮಗುಚುವ ಕೈಯಿಂದ ಬಾಣಲೆಯಲ್ಲಿ ಕೈಯಾಡಿಸುತ್ತಿರಬೇಕು. ಹಿಟ್ಟು ತುಸು ಕಂದು ಬಣ್ಣಕ್ಕೆ, ಘಮ್ಮೆನ್ನುವ ಪರಿಮಳ ಬಂದಾಗ ಉಳಿದ ತುಪ್ಪವನ್ನು ಬೆರೆಸಿ ಒಲೆಯ ಮೇಲಿಂದ ಇಳಿಸಬೇಕು. ಏಲಕ್ಕಿ ಬೆರೆಸಿ ಪುಡಿ ಮಾಡಿದ ಸಕ್ಕರೆ, ಕೇಸರಿ ದಳ, ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಬೆರೆಸಿ ಮಿಶ್ರಣ ಮಾಡಬೇಕು. ಮಿಶ್ರಣ ಆರಿದ ನಂತರ ಉಂಡೆ ಕಟ್ಟಬೇಕು.
(ಗಮನಿಸಿ: ಕಡಲೆ ಹಿಟ್ಟನ್ನು ಜರಡಿ ಹಿಡಿದುಕೊಂಡರೆ ಗಂಟಾಗುವುದಿಲ್ಲ, ಹುರಿಯಲು ಸುಲಭ.)
ಎಲ್ಲ ದಟ್ಸ್ ಕನ್ನಡ ಓದುಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.



Click it and Unblock the Notifications