Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ನರಕ ಚತುರ್ದಶಿಯಂದು ಮಾಡು ಬೇಸನ್ ಲಾಡು

ಬೇಕಾದ ಸಾಮಗ್ರಿಗಳು:
ಕಡಲೆ ಹಿಟ್ಟು (ಕಡಲೆ ಬೇಳೆ ಬೀಸಿಸಿ ಮಾಡಿದ್ದು) : ಒಂದು ಕಪ್
ಪುಡಿ ಮಾಡಿದ ಸಕ್ಕರೆ: ಮುಕ್ಕಾಲು ಕಪ್
ತುಪ್ಪ: ಅರ್ಧ ಕಪ್
ಏಲಕ್ಕಿ: ಒಂದೆರಡು
ಕೇಸರಿ : 8-10 ದಳ
ಗೋಡಂಬಿ, ಒಣ ದ್ರಾಕ್ಷಿ, ಬಾದಾಮಿ: ಒಂದು ಕಪ್
ಮಾಡುವ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಒಂದೆರಡು ಚಮಚ ತುಪ್ಪ ಹಾಕಿ ಒಣ ದ್ರಾಕ್ಷಿ, ಅರೆ ಬರೆ ಕುಟ್ಟಿದ ಗೋಡಂಬಿ, ಬಾದಾಮಿಯನ್ನು ಕರಿದು ಇಟ್ಟುಕೊಳ್ಳಬೇಕು. ಇದೇ ಬಾಣಲೆಗೆ ಒಂದೆರಡು ಚಮಚ ತುಪ್ಪ ಹಾಕಿ ಕಡಲೆ ಹಿಟ್ಟನ್ನು ಮಂದ ಉರಿಯಲ್ಲಿ ಹುರಿಯಬೇಕು. ಕಡಲೆ ಹಿಟ್ಟು ಸೀಯದ ಹಾಗೆ ಒಂದೇ ಸಮನೆ ಮಗುಚುವ ಕೈಯಿಂದ ಬಾಣಲೆಯಲ್ಲಿ ಕೈಯಾಡಿಸುತ್ತಿರಬೇಕು. ಹಿಟ್ಟು ತುಸು ಕಂದು ಬಣ್ಣಕ್ಕೆ, ಘಮ್ಮೆನ್ನುವ ಪರಿಮಳ ಬಂದಾಗ ಉಳಿದ ತುಪ್ಪವನ್ನು ಬೆರೆಸಿ ಒಲೆಯ ಮೇಲಿಂದ ಇಳಿಸಬೇಕು. ಏಲಕ್ಕಿ ಬೆರೆಸಿ ಪುಡಿ ಮಾಡಿದ ಸಕ್ಕರೆ, ಕೇಸರಿ ದಳ, ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ, ಬಾದಾಮಿಯನ್ನು ಬೆರೆಸಿ ಮಿಶ್ರಣ ಮಾಡಬೇಕು. ಮಿಶ್ರಣ ಆರಿದ ನಂತರ ಉಂಡೆ ಕಟ್ಟಬೇಕು.
(ಗಮನಿಸಿ: ಕಡಲೆ ಹಿಟ್ಟನ್ನು ಜರಡಿ ಹಿಡಿದುಕೊಂಡರೆ ಗಂಟಾಗುವುದಿಲ್ಲ, ಹುರಿಯಲು ಸುಲಭ.)
ಎಲ್ಲ ದಟ್ಸ್ ಕನ್ನಡ ಓದುಗರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.



Click it and Unblock the Notifications











