Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹಯಗ್ರೀವ ನೆನೆಯದ ನರಜನ್ಮವೇಕೆ!

* ಚಂದ್ರಿಕಾ ಗುರುರಾಜ್, ಚೆನ್ನೈ
ಕಲಿಯುಗದ ಏಕೈಕ ದೇವರು ಎಂದೇ ಖ್ಯಾತರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಯಾವುದೇ ಕುಲ, ಜಾತಿ, ಅಂತಸ್ತನ್ನು ಮೀರಿದ ಯತಿವರೇಣ್ಯರು. ಅನೇಕ ರಾಯರ ಮಠಗಳಲ್ಲಿ ಮೂರುದಿನಗಳ ಕಾಲವೂ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಲಕ್ಷಾನುಲಕ್ಷ ಭಕ್ತರು ಮಠಗಳಿಗೆ ಬಂದು ರಾಯರಿಗೆ ಭಕ್ತಿಪೂರ್ವಕವಾಗಿ ನಮಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.
ಈ ಅನ್ನಸಂತರ್ಪಣೆಗಳಲ್ಲಿ ಮತ್ತು ಮಾಧ್ವ ಬ್ರಾಹ್ಮಣರ ಮನೆಗಳಲ್ಲಿ ಶ್ರೀ ಮಧ್ವಾಚಾರ್ಯರಿಗೆ ಅತ್ಯಂತ ಪ್ರಿಯವಾದ ಹಯಗ್ರೀವ ಸಿಹಿ ಪದಾರ್ಥವನ್ನು ತಯಾರಿಸದೆ ಆರಾಧನೆ ಪೂರ್ಣಗೊಳ್ಳುವುದಿಲ್ಲ. ತಿಂದಷ್ಟೂ ತೃಪ್ತಿಯನ್ನು ತಂದುಕೊಡುವ ಸಿಹಿ ಹಯಗ್ರೀವ. ಮಧ್ವನವಮಿಯಂದು ತಪ್ಪದೆ ತಯಾರಾಗುವ ಈ ಸಿಹಿಯನ್ನು ರಾಯರ ಆರಾಧನೆಯಂದೂ ಮಾಡುತ್ತಾರೆ.
ಪುರಾಣ ಕಾಲದಲ್ಲಿ ಶ್ರೀ ವಾದಿರಾಜರು ತಲೆಯ ಮೇಲೆ ಕಡಲೆಬೇಳೆ ಮತ್ತು ಬೆಲ್ಲದ ಹೂರಣವನ್ನು ನೈವೇದ್ಯರೂಪದಲ್ಲಿ ತಲೆಯ ಮೇಲೆ ಹೊತ್ತುಕುಳಿತಿದ್ದಾಗ ವಿಷ್ಣು ಹಯ ಅಂದರೆ ಕುದುರೆಯ ರೂಪದಲ್ಲಿ ಬಂದು ನೈವೇದ್ಯ ಸ್ವೀಕರಿಸಿ ಹೋಗುತ್ತಾರೆ. ಈ ಕಾರಣದಿಂದಲೇ ಈ ಸಿಹಿ ತಿನಿಸಿಗೆ ಹಯಗ್ರೀವ ಅಂತ ಹೆಸರು ಬಂದಿದೆ ಎಂಬುದು ಒಂದು ವಾದ. ಈ ವಿವರಣೆಯಲ್ಲಿ ತಪ್ಪಿದ್ದರೆ ಅಥವಾ ತಿದ್ದುಪಡಿಯಿದ್ದರೆ ಬಲ್ಲವರು ತಿಳಿಸಬೇಕೆಂದು ವಿನಂತಿ.
ಹಯಗ್ರೀವದ ರುಚಿಯನ್ನು ತಿಂದವನೇ ಬಲ್ಲ. ಇದನ್ನು ಯಾರು ಬೇಕಾದರೂ ಯಾವ ಸಂದರ್ಭದಲ್ಲಿಯಾದರೂ ತಯಾರಿಸಿ ತಿನ್ನಬಹುದು. ಈಗ ಈ ಸಿಹಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು
ಕಡಲೆಬೇಳೆ 1 ಕಪ್
ಬೆಲ್ಲ 1 ಕಪ್
ಒಣ ಕೊಬ್ಬರಿ ಅರ್ಧ ಕಪ್
ಗಸಗಸೆ 5 ಚಮಚದಷ್ಟು
ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿ
ತುಪ್ಪ, ಏಲಕ್ಕಿ ಪುಡಿ, ಲವಂಗ
ಮಾಡುವ ವಿಧಾನ
* ಮೊದಲಿಗೆ ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಇಟ್ಟು ಬೇಯಿಸಿ ತೆಗೆದಿಟ್ಟುಕೊಳ್ಳಬೇಕು. ಕುಕ್ಕರು ತಣ್ಣಗಾದನಂತರ ಬೇಳೆಯಲ್ಲಿದ್ದ ನೀರನ್ನು ಬಸಿಯಬೇಕು.
* ಒಣಹಣ್ಣುಗಳನ್ನು ಒಂದು ತವಾದಲ್ಲಿ ಚಮಚದಷ್ಟು ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ಗಸಗಸೆಯನ್ನು ಕೂಡ ಅರ್ಧ ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ನಂತರ ಹೆರಿದಿಟ್ಟುಕೊಂಡಿದ್ದ ಅಥವಾ ಕುಟ್ಟಿಪುಡಿ ಮಾಡಿಟ್ಟುಕೊಂಡಿದ್ದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ನೀರು ಪಾಕವಾಗುವತನಕ ಕಾಯಿಸಬೇಕು.
* ಬೆಲ್ಲದ ಪಾಕ ತಯಾರುಗಾತ್ತಿದ್ದಂತೆ ಅದಕ್ಕೆ ಬೇಯಿಸಿ ನೀರು ಬಸಿದ ಕಡಲೆಬೇಳೆಯನ್ನು ಸುರಿಯಬೇಕು. ಅದಕ್ಕೆ ತುರಿದಿಟ್ಟುಕೊಂಡು ಒಣಕೊಬ್ಬರಿ, ಗಸಗಸೆ, ಡ್ರೈ ಫ್ರುಟ್ಸ್, ಏಲಕ್ಕಿ ಪುಡಿ, ಲವಂಗಗಳನ್ನು ಸೇರಿಸಿ ಮತ್ತೆ ಬೇಯಿಸಬೇಕು. ಈ ಮಿಶ್ರಣ ಎಲ್ಲೂ ತಳಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು. ಇಲ್ಲದಿದ್ದರೆ ಬೇಗನೆ ಹೊತ್ತಿ ರುಚಿಯೆಲ್ಲ ಕೆಟ್ಟುಹೋಗುತ್ತದೆ.
ಊಟ ಮಾಡುವಾಗ ರಾಯರನ್ನು ಮನದಲ್ಲೇ ನೆನೆದು ಹಯಗ್ರೀವವನ್ನು ಮೆಲ್ಲಿರಿ.



Click it and Unblock the Notifications