Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಹಯಗ್ರೀವ ನೆನೆಯದ ನರಜನ್ಮವೇಕೆ!

* ಚಂದ್ರಿಕಾ ಗುರುರಾಜ್, ಚೆನ್ನೈ
ಕಲಿಯುಗದ ಏಕೈಕ ದೇವರು ಎಂದೇ ಖ್ಯಾತರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಯಾವುದೇ ಕುಲ, ಜಾತಿ, ಅಂತಸ್ತನ್ನು ಮೀರಿದ ಯತಿವರೇಣ್ಯರು. ಅನೇಕ ರಾಯರ ಮಠಗಳಲ್ಲಿ ಮೂರುದಿನಗಳ ಕಾಲವೂ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಲಕ್ಷಾನುಲಕ್ಷ ಭಕ್ತರು ಮಠಗಳಿಗೆ ಬಂದು ರಾಯರಿಗೆ ಭಕ್ತಿಪೂರ್ವಕವಾಗಿ ನಮಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.
ಈ ಅನ್ನಸಂತರ್ಪಣೆಗಳಲ್ಲಿ ಮತ್ತು ಮಾಧ್ವ ಬ್ರಾಹ್ಮಣರ ಮನೆಗಳಲ್ಲಿ ಶ್ರೀ ಮಧ್ವಾಚಾರ್ಯರಿಗೆ ಅತ್ಯಂತ ಪ್ರಿಯವಾದ ಹಯಗ್ರೀವ ಸಿಹಿ ಪದಾರ್ಥವನ್ನು ತಯಾರಿಸದೆ ಆರಾಧನೆ ಪೂರ್ಣಗೊಳ್ಳುವುದಿಲ್ಲ. ತಿಂದಷ್ಟೂ ತೃಪ್ತಿಯನ್ನು ತಂದುಕೊಡುವ ಸಿಹಿ ಹಯಗ್ರೀವ. ಮಧ್ವನವಮಿಯಂದು ತಪ್ಪದೆ ತಯಾರಾಗುವ ಈ ಸಿಹಿಯನ್ನು ರಾಯರ ಆರಾಧನೆಯಂದೂ ಮಾಡುತ್ತಾರೆ.
ಪುರಾಣ ಕಾಲದಲ್ಲಿ ಶ್ರೀ ವಾದಿರಾಜರು ತಲೆಯ ಮೇಲೆ ಕಡಲೆಬೇಳೆ ಮತ್ತು ಬೆಲ್ಲದ ಹೂರಣವನ್ನು ನೈವೇದ್ಯರೂಪದಲ್ಲಿ ತಲೆಯ ಮೇಲೆ ಹೊತ್ತುಕುಳಿತಿದ್ದಾಗ ವಿಷ್ಣು ಹಯ ಅಂದರೆ ಕುದುರೆಯ ರೂಪದಲ್ಲಿ ಬಂದು ನೈವೇದ್ಯ ಸ್ವೀಕರಿಸಿ ಹೋಗುತ್ತಾರೆ. ಈ ಕಾರಣದಿಂದಲೇ ಈ ಸಿಹಿ ತಿನಿಸಿಗೆ ಹಯಗ್ರೀವ ಅಂತ ಹೆಸರು ಬಂದಿದೆ ಎಂಬುದು ಒಂದು ವಾದ. ಈ ವಿವರಣೆಯಲ್ಲಿ ತಪ್ಪಿದ್ದರೆ ಅಥವಾ ತಿದ್ದುಪಡಿಯಿದ್ದರೆ ಬಲ್ಲವರು ತಿಳಿಸಬೇಕೆಂದು ವಿನಂತಿ.
ಹಯಗ್ರೀವದ ರುಚಿಯನ್ನು ತಿಂದವನೇ ಬಲ್ಲ. ಇದನ್ನು ಯಾರು ಬೇಕಾದರೂ ಯಾವ ಸಂದರ್ಭದಲ್ಲಿಯಾದರೂ ತಯಾರಿಸಿ ತಿನ್ನಬಹುದು. ಈಗ ಈ ಸಿಹಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು
ಕಡಲೆಬೇಳೆ 1 ಕಪ್
ಬೆಲ್ಲ 1 ಕಪ್
ಒಣ ಕೊಬ್ಬರಿ ಅರ್ಧ ಕಪ್
ಗಸಗಸೆ 5 ಚಮಚದಷ್ಟು
ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿ
ತುಪ್ಪ, ಏಲಕ್ಕಿ ಪುಡಿ, ಲವಂಗ
ಮಾಡುವ ವಿಧಾನ
* ಮೊದಲಿಗೆ ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಇಟ್ಟು ಬೇಯಿಸಿ ತೆಗೆದಿಟ್ಟುಕೊಳ್ಳಬೇಕು. ಕುಕ್ಕರು ತಣ್ಣಗಾದನಂತರ ಬೇಳೆಯಲ್ಲಿದ್ದ ನೀರನ್ನು ಬಸಿಯಬೇಕು.
* ಒಣಹಣ್ಣುಗಳನ್ನು ಒಂದು ತವಾದಲ್ಲಿ ಚಮಚದಷ್ಟು ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ಗಸಗಸೆಯನ್ನು ಕೂಡ ಅರ್ಧ ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ನಂತರ ಹೆರಿದಿಟ್ಟುಕೊಂಡಿದ್ದ ಅಥವಾ ಕುಟ್ಟಿಪುಡಿ ಮಾಡಿಟ್ಟುಕೊಂಡಿದ್ದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ನೀರು ಪಾಕವಾಗುವತನಕ ಕಾಯಿಸಬೇಕು.
* ಬೆಲ್ಲದ ಪಾಕ ತಯಾರುಗಾತ್ತಿದ್ದಂತೆ ಅದಕ್ಕೆ ಬೇಯಿಸಿ ನೀರು ಬಸಿದ ಕಡಲೆಬೇಳೆಯನ್ನು ಸುರಿಯಬೇಕು. ಅದಕ್ಕೆ ತುರಿದಿಟ್ಟುಕೊಂಡು ಒಣಕೊಬ್ಬರಿ, ಗಸಗಸೆ, ಡ್ರೈ ಫ್ರುಟ್ಸ್, ಏಲಕ್ಕಿ ಪುಡಿ, ಲವಂಗಗಳನ್ನು ಸೇರಿಸಿ ಮತ್ತೆ ಬೇಯಿಸಬೇಕು. ಈ ಮಿಶ್ರಣ ಎಲ್ಲೂ ತಳಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು. ಇಲ್ಲದಿದ್ದರೆ ಬೇಗನೆ ಹೊತ್ತಿ ರುಚಿಯೆಲ್ಲ ಕೆಟ್ಟುಹೋಗುತ್ತದೆ.
ಊಟ ಮಾಡುವಾಗ ರಾಯರನ್ನು ಮನದಲ್ಲೇ ನೆನೆದು ಹಯಗ್ರೀವವನ್ನು ಮೆಲ್ಲಿರಿ.



Click it and Unblock the Notifications











