Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಸಿಹಿ ತಿನಿಸುಗಳ ರಾಜ ಶ್ರೀಖಂಡ

ಇನ್ನು ಇದರ ರುಚಿಯೋ... ಭೇಷ್ ಭೇಷ್ ಅನ್ನುವಷ್ಟು ಸಖತ್ತಾಗಿರುತ್ತದೆ. ಈ ಸಿಹಿಯನ್ನು ಊಟದ ಜೊತೆ ಮಾತ್ರವಲ್ಲ ತಿಂಡಿಯೊಡನೆಯೂ ತಿನ್ನಬಹುದು. ಅದರಲ್ಲೂ ಪೂರಿಯೊಂದಿಗೆ ಶ್ರೀಖಂಡ ಹೇಳಿ ಮಾಡಿಸಿದ ಜೋಡಿ. ತಿಂದರೆ ಪೂರಿಗಳ ಲೆಕ್ಕ ಸಿಗಲಿಕ್ಕಿಲ್ಲ, ಬಿಟ್ಟರೆ ಶ್ರೀಖಂಡದ ರುಚಿ ದಕ್ಕಲಿಕ್ಕಿಲ್ಲ.
ಇದನ್ನು ತಯಾರಿಸುವ ಬಗೆ ತುಂಬಾ ಕ್ಲಿಷ್ಟಕರವಾಗಿರಬಹುದೆಂದೇನಾದರೂ ನೀವು ಊಹಿಸಿದ್ದರೆ, ನಿಮ್ಮ ಊಹೆಯನ್ನು ಪಕ್ಕಕ್ಕಿಡಿ. ಬೇರೆ ಯಾವುದೇ ಸಿಹಿಯನ್ನು ತಯಾರಿಸುವುದಕ್ಕಿಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದನ್ನು ನಂಬಲು ಒಮ್ಮೆ ಮನೆಯಲ್ಲಿಯೇ ಶ್ರೀಖಂಡ ತಯಾರಿಸಿ ನೋಡಿ.
ಬೇಕಾಗುವ ಪದಾರ್ಥಗಳು
* ಗಟ್ಟಿ ಮೊಸರು 6 ಬಟ್ಟಲು
* ಸಕ್ಕರೆ 3 ಬಟ್ಟಲು
* ಕೇಸರಿ ಬಣ್ಣ
* ಏಲಕ್ಕಿ ಪುಡಿ
* ಗೋಡಂಬಿ, ಒಣದ್ರಾಕ್ಷಿ, ಬಾದಾಮಿ
ಮಾಡುವ ವಿಧಾನ
ಉತ್ತಮ ಗುಣಮಟ್ಟದ ಹಾಲು ತಂದು ಬೆಳಿಗ್ಗೆಯೇ ಹೆಪ್ಪು ಹಾಕಿ. ಸಾಯಂಕಾಲದ ಹೊತ್ತಿಗೆ ಮೊಸರಾಗುತ್ತಿದ್ದಂತೆ ಅದನ್ನು ತೆಳ್ಳನೆಯ ಬಟ್ಟೆಯಲ್ಲಿ ಸುರಿದು ಗಂಟುಕಟ್ಟಿ ಗೂಟಕ್ಕೆ ನೇತು ಹಾಕಿ. ಬೆಳಗಿನ ಜಾವಕ್ಕೆ ನೀರೆಲ್ಲ ಬಸಿದನಂತರ ಒಂದು ಪಾತ್ರೆಗೆ ತೆಗೆದು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ. ಜೊತೆಜೊತೆಗೇ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಹಾಕಿ ಕೈಯಾಡಿಸಿ. ಮೊಸರು ಹುಳಿಯಾಗಿರುವುದರಿಂದ ರುಚಿಗೆ ತಕ್ಕಷ್ಟು ಸಕ್ಕರೇ ಸೇರಿಸಿ. ದಟ್ಸಾಲ್! ಸಿಹಿಸಿಹಿ ಶ್ರೀಖಂಡ ರೆಡಿ.
ಇದನ್ನು ಪೂರಿ ಅಥವಾ ಚಪಾತಿಯೊಂದಿಗೆ ತಾಜಾ ಇರುವಾಗಲೇ ತಿನ್ನಬಹುದು. ಅಥವಾ ಬೇಸಿಗೆಯಲ್ಲಿ ಅದನ್ನು ಫ್ರಿಜ್ಜಲ್ಲಿ ಇಟ್ಟು ತಣ್ಣಗಾದ ನಂತರ ಮೆಲ್ಲಬಹುದು.
ಮರೆತ ಮಾತು : ಕೆಲ ಓದುಗರು ತಿಳಿಸಿದಂತೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳನ್ನು ಶ್ರೀಖಂಡಕ್ಕೆ ಸೇರಿದರೆ ಅದರ ರುಚಿ ಮತ್ತಷ್ಟು ಜಾಸ್ತಿಯಾಗುತ್ತದೆ.
ಇದನ್ನೂ ಓದಿರಿ



Click it and Unblock the Notifications