Latest Updates
-
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ!
ಸಿಹಿ ತಿನಿಸುಗಳ ರಾಜ ಶ್ರೀಖಂಡ

ಇನ್ನು ಇದರ ರುಚಿಯೋ... ಭೇಷ್ ಭೇಷ್ ಅನ್ನುವಷ್ಟು ಸಖತ್ತಾಗಿರುತ್ತದೆ. ಈ ಸಿಹಿಯನ್ನು ಊಟದ ಜೊತೆ ಮಾತ್ರವಲ್ಲ ತಿಂಡಿಯೊಡನೆಯೂ ತಿನ್ನಬಹುದು. ಅದರಲ್ಲೂ ಪೂರಿಯೊಂದಿಗೆ ಶ್ರೀಖಂಡ ಹೇಳಿ ಮಾಡಿಸಿದ ಜೋಡಿ. ತಿಂದರೆ ಪೂರಿಗಳ ಲೆಕ್ಕ ಸಿಗಲಿಕ್ಕಿಲ್ಲ, ಬಿಟ್ಟರೆ ಶ್ರೀಖಂಡದ ರುಚಿ ದಕ್ಕಲಿಕ್ಕಿಲ್ಲ.
ಇದನ್ನು ತಯಾರಿಸುವ ಬಗೆ ತುಂಬಾ ಕ್ಲಿಷ್ಟಕರವಾಗಿರಬಹುದೆಂದೇನಾದರೂ ನೀವು ಊಹಿಸಿದ್ದರೆ, ನಿಮ್ಮ ಊಹೆಯನ್ನು ಪಕ್ಕಕ್ಕಿಡಿ. ಬೇರೆ ಯಾವುದೇ ಸಿಹಿಯನ್ನು ತಯಾರಿಸುವುದಕ್ಕಿಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದನ್ನು ನಂಬಲು ಒಮ್ಮೆ ಮನೆಯಲ್ಲಿಯೇ ಶ್ರೀಖಂಡ ತಯಾರಿಸಿ ನೋಡಿ.
ಬೇಕಾಗುವ ಪದಾರ್ಥಗಳು
* ಗಟ್ಟಿ ಮೊಸರು 6 ಬಟ್ಟಲು
* ಸಕ್ಕರೆ 3 ಬಟ್ಟಲು
* ಕೇಸರಿ ಬಣ್ಣ
* ಏಲಕ್ಕಿ ಪುಡಿ
* ಗೋಡಂಬಿ, ಒಣದ್ರಾಕ್ಷಿ, ಬಾದಾಮಿ
ಮಾಡುವ ವಿಧಾನ
ಉತ್ತಮ ಗುಣಮಟ್ಟದ ಹಾಲು ತಂದು ಬೆಳಿಗ್ಗೆಯೇ ಹೆಪ್ಪು ಹಾಕಿ. ಸಾಯಂಕಾಲದ ಹೊತ್ತಿಗೆ ಮೊಸರಾಗುತ್ತಿದ್ದಂತೆ ಅದನ್ನು ತೆಳ್ಳನೆಯ ಬಟ್ಟೆಯಲ್ಲಿ ಸುರಿದು ಗಂಟುಕಟ್ಟಿ ಗೂಟಕ್ಕೆ ನೇತು ಹಾಕಿ. ಬೆಳಗಿನ ಜಾವಕ್ಕೆ ನೀರೆಲ್ಲ ಬಸಿದನಂತರ ಒಂದು ಪಾತ್ರೆಗೆ ತೆಗೆದು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ. ಜೊತೆಜೊತೆಗೇ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಹಾಕಿ ಕೈಯಾಡಿಸಿ. ಮೊಸರು ಹುಳಿಯಾಗಿರುವುದರಿಂದ ರುಚಿಗೆ ತಕ್ಕಷ್ಟು ಸಕ್ಕರೇ ಸೇರಿಸಿ. ದಟ್ಸಾಲ್! ಸಿಹಿಸಿಹಿ ಶ್ರೀಖಂಡ ರೆಡಿ.
ಇದನ್ನು ಪೂರಿ ಅಥವಾ ಚಪಾತಿಯೊಂದಿಗೆ ತಾಜಾ ಇರುವಾಗಲೇ ತಿನ್ನಬಹುದು. ಅಥವಾ ಬೇಸಿಗೆಯಲ್ಲಿ ಅದನ್ನು ಫ್ರಿಜ್ಜಲ್ಲಿ ಇಟ್ಟು ತಣ್ಣಗಾದ ನಂತರ ಮೆಲ್ಲಬಹುದು.
ಮರೆತ ಮಾತು : ಕೆಲ ಓದುಗರು ತಿಳಿಸಿದಂತೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳನ್ನು ಶ್ರೀಖಂಡಕ್ಕೆ ಸೇರಿದರೆ ಅದರ ರುಚಿ ಮತ್ತಷ್ಟು ಜಾಸ್ತಿಯಾಗುತ್ತದೆ.
ಇದನ್ನೂ ಓದಿರಿ



Click it and Unblock the Notifications