Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರಾಗಿ ಹಾಲಿನ ರೆಸಿಪಿ: ಉರಿಮೂತ್ರ ಶಮನಕ್ಕೆ ತುಂಬಾ ಒಳ್ಳೆಯದು
ಬೇಸಿಗೆ ಕಾಲಕ್ಕೆ ಸೂಕ್ತವಾದ ಪಾನೀಯ ರೆಸಿಪಿ ಇದಾಗಿದೆ. ಈ ಪಾನೀಯ ದೇಹವನ್ನು ತಂಪಾಗಿ ಇಡುತ್ತದೆ, ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ, ಉರಿ ಮೂತ್ರದಂಥ ಸಮಸ್ಯೆ ತಡೆಗಟ್ಟುತ್ತದೆ, ಅಲ್ಲದೆ ಈ ಪಾನೀಯವನ್ನು ಟೀ-ಕಾಫಿ ಬದಲಿಗೆ ಮಾಡಿ ಸವಿಯಬಹುದು, ರೆಸಿಪಿಯಂತೂ ತುಂಬಾ ಸುಲಭವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಲೋಟ ರಾಗಿ
1 ಏಲಕ್ಕಿ
ಒಂದು ದುಂಡು ಬೆಲ್ಲ
ಚಿಟಿಕೆಯಷ್ಟು ಉಪ್ಪು
ಮಾಡುವ ವಿಧಾನ
- ಒಂದು ಲೋಟ ರಾಗಿಯನ್ನು ತೊಳೆದು ನೆನೆ ಹಾಕಿ
- ನಂತರ ರಾಗಿಗೆ ಅದೇ ನೀರು ಹಾಕಿ, 1 ಏಲಕ್ಕಿ ಹಾಕಿ ನುಣ್ಣನೆ ರುಬ್ಬಿ ಆ ರಾಗಿ ನೀರನ್ನು ಒಂದು ಪಾತ್ರೆಗೆ ಸೋಸಿ
- ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
- ಈಗ ಈ ರಾಗಿ ಹಾಲನ್ನು ಬಿಸಿ ಮಾಡಿ
- ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ
- ಒಂದು ತುಂಡು ಬೆಲ್ಲ ಹಾಕಿ
- ಈ ಪಾನೀಯ ಬಿಸಿಯಾಗುವಾಗ ಸೌಟ್ನಿಂದ ಆಡಿಸುತ್ತಾ ಇರಿ
- ರಾಗಿ ಬೇಯುತ್ತಾ ಬರುವಾಗ ಹಾಲನ್ನು ಹಾಕಿ
- ರಾಗಿ ಪಾನೀಯ ಬಿಸಿ ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ಮೇಲೆ ಕೂಡ ಕುಡಿಯಬಹುದು.
- ಬೇಸಿಗೆಗೆ ಇಂಥ ಪಾನೀಯ ಕುಡಿಯಬಹುದು ತುಂಬಾ ಒಳ್ಳೆಯದು, ಕೆಲವರಿಗೆ ಬೇಸಿಗೆಯಲ್ಲಿ ತುಂಬಾನೇ ಉರಿಮೂತ್ರದ ಸಮಸ್ಯೆ ಕಂಡು ಬರುತ್ತದೆ, ಅದನ್ನು ತಡೆಗಟ್ಟಲು ಈ ಪಾನೀಯ ತುಂಬಾನೇ ಸಹಕಾರಿ.
- ಉರಿಮೂತ್ರದ ಸಮಸ್ಯೆ ಇರುವವರು ಇದನ್ನು ಪ್ರತಿನಿತ್ಯ 1-2 ಲೋಟ ಕುಡಿಯಿರಿ.
ಇನ್ನು ಸಿಹಿ ಬೇಡ, ಹಾಲು ಬೇಡ ಎನ್ನುವವರು ರಾಗಿ ಹಾಲಿಗೆ ಸ್ವಲ್ಪ ಉಪ್ಪು ಹಾಕಿ ಕಾಯಿಸಿ ಕುಡಿಯಬಹುದು, ಆದರೆ ರುಚಿಯಾಗಿ ಬೇಕೆಂದರೆ ಮೇಲೆ ಹೇಳಿದಂತೆ ಮಾಡಬೇಕು.
ರಾಗಿ ಹಾಲು ಈ ಸಮಸ್ಯೆ ಇರುವವರೆಗೆ ತುಂಬಾೇ ಒಳ್ಳೆಯದು
ಮಧುಮೇಹಿಗಳಿಗೆ ಅತ್ಯುತ್ತಮ ಆಹಾರ: ಬೆಲ್ಲ ಸೇರಿಸದೆ ಬರಿ ಉಪ್ಪು ಮಾತ್ರ ಹಾಕಿ
ಮಾಡಿದ ಪಾನೀಯ ಕುಡಿಯಿರಿ
ರಕ್ತ ಹೀನತೆ ಸಮಸ್ಯೆ ತಡೆಗಟ್ಟಲು ಸಹಕಾರಿ: ರಕ್ತಹೀನತೆ ಸಮಸ್ಯೆ ಇರುವವರು ಈ
ಪಾನೀಯ ಕುಡಿಯುವುದರಿಂದ ದೇಹದಲ್ಲಿ ಹೀಮೋಗ್ಲೋಬಿನ್ ಸಮಸ್ಯೆ ಹೆಚ್ಚಾಗುವುದು
ಬಾಣಂತಿಯರಿಗೆ ಒಳ್ಳೆಯದು: ಬಾಣಂತಿಯರಿಗೆ ಎದೆ ಹಾಲಿನ ಉತ್ಪತ್ತಿಗೆ, ದೇಹಕ್ಕೆ
ಶಕ್ತಿಗೆ ತುಂಬಾನೇ ಒಳ್ಳೆಯುದ.
ರೋಗ ನಿರೋಧಕ ಶಕ್ತಿ ಹೆಚ್ಚಿದೆ: ಇದರಲ್ಲಿ ಪೋಷಕಾಂಶ ಅಧಿಕವಿರುವುದರಿಂದ ರೋಗ
ನಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ
ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.



Click it and Unblock the Notifications