Latest Updates
-
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ! -
ಪುಣೆಯಲ್ಲಿ ಮಳೆ ರಜೆ: ವರ್ಕ್ ಫ್ರಮ್ ಹೋಮ್ ಜೊತೆಗೆ ಮಕ್ಕಳನ್ನು ನಿಭಾಯಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್ -
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ!
ಸಂಜೆಯ ಟೀ ಸಂಗಾತಿ ಈರುಳ್ಳಿ ನಿಪ್ಪಟ್ಟು

* ವಾಣಿ ನಾಯಿಕ, ಬೆಂಗಳೂರು
ಬೇಕಾಗುವ ಸಾಮಗ್ರಿಗಳು
ಈರುಳ್ಳಿ : 2 (ಸಣ್ಣಗೆ ಹೆಚ್ಚಿದ್ದು)
ಕಡಲೆ ಹಿಟ್ಟು : 1/2 ಕಪ್
ಅಕ್ಕಿ ಹಿಟ್ಟು : 1/2 ಕಪ್
ಚಿರೋಟಿ ರವೆ : 1/2 ಕಪ್
ಮೈದಾ ಹಿಟ್ಟು : 2 ಟೀಸ್ಪೂನ್
ಕೊತ್ತಂಬರಿಸೊಪ್ಪು : 1/4 ಕಪ್ (ಸಣ್ಣಗೆ ಹೆಚ್ಚಿದ್ದು)
ಅಚ್ಚಖಾರದ ಪುಡಿ ಅಥವಾ ಹಸಿಮೆಣಸಿನಕಾಯಿ ಪೇಸ್ಟ್ ಕೂಡ ಬಳಸಬಹುದು
ಕರಿಬೇವು, ಜೀರಿಗೆ, ಉಪ್ಪು ರುಚಿಗೆ ಬೇಕಾಗುವಷ್ಟು
ಮಾಡುವ ವಿಧಾನ
ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಚಿರೋಟಿರವೆ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಒಂದು ಬಾಣಲೆಯಲ್ಲಿ ಸೇರಿಸಿಕೊಂಡು ಅದಕ್ಕೆ ಉಪ್ಪು, ಖಾರದಪುಡಿ, ಜೀರಿಗೆ ಹಾಕಿ ಚೆನ್ನಾಗಿ ಕೈಯಾಡಿಸಬೇಕು. ನಂತರ ಕರಿಬೇವು, ಕೊತ್ತಂಬರಿ, ಈರುಳ್ಳಿ ಹಾಗು ಸ್ಪಲ್ಪ ಕಾದ ಎಣ್ಣೆಯನ್ನು ಮಿಶ್ರಣಮಾಡಿ ನೀರಿನಿಂದ ಹಿಟ್ಟನ್ನು ಸ್ಪಲ್ಪ ಗಟ್ಟಿಯಾಗಿ ಕಲಿಸಿಕೊಳ್ಳಬೇಕು.
ಹೀಗೆ ಕಲಿಸಿದ ಹಿಟ್ಟನ್ನು ತೆಗೆದುಕೊಂಡು ದುಂಡಾಕಾರಗೆ ಮಾಡಿ ಅಂಗೈಗೆ ಸ್ಪಲ್ಪ ಎಣ್ಣೆ ಹಚ್ಚಿಕೊಂಡು ತಟ್ಟಿ ಕಾದಎಣ್ಣೆಯಲ್ಲಿ ಕರೆಯಬೇಕು. ಕಂದುಬಣ್ಣ ಬರುವವರೆಗೆ ಕರೆದು ತೆಗೆದರೆ ಬಿಸಿಬಿಸಿಯಾದ ಈರುಳ್ಳಿ ನಿಪ್ಪಟ್ಟು ತಯಾರ್. ಈರುಳ್ಳಿ ನಿಪ್ಪಟ್ಟನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೆ ತುಂಬಾ ರುಚಿಯಾಗಿರುತ್ತದೆ.



Click it and Unblock the Notifications