Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಈ ಸಮಯದಲ್ಲಿ ಮಾಡಿ ಹಲಸಿನ ಕಾಯಿ ಕಬಾಬ್

ಆದ್ದರಿಂದ ಈ ಸಮಯದಲ್ಲಿ ಊರಿಗೆ ಹೋದರೆ ಗುಜ್ಜೆ (ಎಳೆ ಹಲಸಿನ ಕಾಯಿ) ತರಲು ಮರೆಯಬೇಡಿ. ಇದರಿಂದ ಅನೇಕ ರುಚಿಕರ ಖಾದ್ಯಗಳನ್ನು ತಯಾರಿಸುವ ವಿಧಾನ ಬಗ್ಗೆ ಕನ್ನಡ ಬೊಲ್ಡ್ ಸ್ಕೈ ನಿಮಗೆ ತಿಳಿಸಿ ಕೊಡಲಿದೆ. ಇವತ್ತು ನಾವು ಹಲಸಿನ ಕಾಯಿಯಿಂದ ಕಬಾಬ್ ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಾಗ್ರಿಗಳು:
1. ಚಿಕ್ಕ ಗಾತ್ರದ ಎಳೆ ಹಲಸಿನ ಕಾಯಿ 1(ಎಳೆ ತೊಳೆಗಳಿರಬೇಕು)
2. 1/2 ಕಪ್ ಬೇಳೆ
3. ಒಂದು ಬೆಳ್ಳುಳ್ಳಿ
4. ಸ್ವಲ್ಪ ಚಕ್ಕೆ ಮತ್ತು ಲವಂಗ
5. 1/2 ಕಪ್ ಕಡಲೆ ಹಿಟ್ಟು
6. 1 ಚಮಚ ಮೆನಸಿನ ಪುಡಿ (ಖಾರ ಬೇಕಿದ್ದರೆ ಇನ್ನೂ ಸ್ವಲ್ಪ ಹಾಕಿ)
7. ರುಚಿಗೆ ತಕ್ಕ ಉಪ್ಪು
8. ಎಣ್ಣೆ
9. ಶುಂಠಿ (ಎರಡು ಇಂಚಿನಷ್ಟು)
10. ಕತ್ತರಿಸಿದ ಈರುಳ್ಳಿ
11. ಅರಿಶಿಣ
ತಯಾರಿಸುವ ವಿಧಾನ:
1. ಹಲಸಿನ ಕಾಯಿಯ ಸಿಪ್ಪೆಯನ್ನು ಕೆತ್ತಿ ಬಿಸಾಡಬೇಕು. ಈಗ ಅದನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ ( ಸಾರಿಗೆ ಆಲೂಗಡ್ಡೆ ಕತ್ತರಿಸಿ ಹಾಕುವಷ್ಟು ಗಾತ್ರದಲ್ಲಿ).
2. ಈಗ ಅದನ್ನು ಬೇಳೆ ಜೊತೆ ಹಾಕಿ ಸವಲ್ಪ ನೀರು ಹಕಿ ಚೆನ್ನಾಗಿ ಬೇಯಿಸಿ. ಬೆಂದ ಮೇಲೆ ಚಿಟಿಕೆಯಷ್ಟು ಉಪ್ಪು 2-3 ನಿಮಿಷ ಬೇಯಿಸಿ. ನಂತರ ಅದರಲ್ಲಿರುವ ಅಧಿಕ ನೀರನ್ನು ಸೋಸಿ ತೆಗೆಯಬೇಕು.
3. ಬೆಂದ ಹಲಸಿನ ಕಾಯಿ ಮತ್ತು ಬೇಳೆಗೆ ಬೆಳ್ಳುಳ್ಳಿ, ಚಕ್ಕೆ, ಲವಂಗ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸಿಯಲ್ಲಿ ಅರೆಯಬೇಕು (ತುಂಬಾ ನುಣ್ಣಗೆ ಅರೆಯಬಾರದು)
4. ಈಗ ಅರೆದ ಮಿಶ್ರಣಕ್ಕೆ ಮೆಣಸಿನ ಪುಡಿ, ಅರಿಶಿಣ ಹಾಕಿ, ಕತ್ತರಿಸಿದ ಈರುಳ್ಳಿ, ಜಜ್ಜಿದ ಶುಂಠಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು.
6. ನಂತರ ಆ ಮಿಶ್ರಣದಿಂದ ಕಬಾಬ್ ಉಂಡೆಗಳನ್ನು ಮಾಡಿ ಅದನ್ನು ಸ್ವಲ್ಪ ಚಪ್ಪಟೆಯಾಗಿ ತಟ್ಟಬೇಕು.
7. ಮೊದಲೆ ಕಡಲೆಹಿಟ್ಟನ್ನು ಸ್ವಲ್ಪ ನೀರು ಹಾಕಿ ಕಲೆಸಿರಬೇಕು. ಈ ಹಿಟ್ಟಿಗೆ ಕಬಾಬ್ ಉಂಡೆಯನ್ನು ಅದ್ದಿ ಎಣ್ಣೆಯಲ್ಲಿ ಹಾಕಿ ಹುರಿದರೆ ಹಲಸಿನ ಕಾಯಿ ಕಬಾಬ್ ರೆಡಿ.



Click it and Unblock the Notifications











