Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬಲ್ಲವನೇ ಬಲ್ಲ ಕಿತ್ತಳೆ ಪಲಾವ್ ರುಚಿಯ
ಈಗಾಗಲೇ ಬಗೆಬಗೆಯ ಪಲಾವ್ಗಳನ್ನು ಸವಿದಿರಬಹುದು. ಆದರೆ ಪಂಚೇಂದ್ರಿಯಗಳನ್ನು ಪ್ರೇರಿಪಿಸುವ ಕಿತ್ತಳೆ ಪಲಾವನ್ನುಸವಿದಿರುವವರು ಬಹಳ ಅಪರೂಪ. ಎಲ್ಲ ಪಲಾವ್ಗಳಂತೆ ಇದನ್ನು ತಯಾರಿಸುವುದು ತುಂಬಾ ಸುಲಭ.ಈ ಪಲಾವ್ಗೆ ಬಳಸುವ ಪದಾರ್ಥಗಳಲ್ಲಿ ಕಿತ್ತಳೆ ಹಣ್ಣು ಬಹಳ ಪ್ರಮುಖ. ಸ್ವಲ್ಪ ಸಿಹಿ, ಒಂಚೂರು ಹುಳಿ,ಖಾರ ಎಲ್ಲವೂ ಬೆರೆತ ಪಲಾವ್ನಾಲಿಗೆ ಮೇಲೆ ಹೊರಳುತ್ತಿದ್ದರೆ...ಬಲ್ಲವನೇ ಬಲ್ಲ ಪಲಾವ್ರುಚಿಯ!
*ಪುಷ್ಪಮಾಲಾ, ಮೈಸೂರು
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ: 1 ಲೋಟ
ಹಣ್ಣಾದ ಕಿತ್ತಳೆ: 3
ಬೀಜ ರಹಿತ ದ್ರಾಕ್ಷಿ: ¼ ಕಪ್
ಗೋಡಂಬಿ: 1 ಚಮಚ
ತಾಜಾ ತೆಂಗಿನಕಾಯಿ ತುರಿ: ¼ ಕಪ್
ಏಲಕ್ಕಿ:2
ದಾಲ್ಚಿನ್ನಿ: 1 ಇಂಚಿನ ತುಂಡು
ಪಲಾವ್ ಎಲೆ: 1
ಕಿತ್ತಳೆ ಕೆಂಪು ಬಣ್ಣ: 1 ಚುಟುಕೆ
ಈರುಳ್ಳಿ: 2
ಹಸಿರು ಮೆಣಸಿನಕಾಯಿ: 4 ಅಥವಾ 5
ಬೆಳ್ಳ್ಳುಳ್ಳಿ: 5 ತೊಳೆ
ತುಪ್ಪ; 3 ಚಮಚ
ಶುಂಠಿ: ¼ ಇಂಚಿನ ಒಂದು ತುಂಡು
ಕೊತ್ತಂಬರಿ ಸೊಪ್ಪು: ' ಕಟ್ಟು
ಉಪ್ಪು: ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೆಳ್ಳಗೆ ಉದ್ದುದ್ದವಾಗಿ ಸೀಳಿರಿ. ತೆಂಗಿನಕಾಯಿ ತುರಿಯಿಂದ, ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ. 1 ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಪಕ್ಕಕ್ಕಿಡಿ. ಇನ್ನೆರಡು ಕಿತ್ತಳೆ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ, ರಸ ಕಿವುಚಿಕೊಳ್ಳಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ನಂತರ ಪ್ರೆಜರ್ ಪ್ಯಾನಿನಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದರಲ್ಲಿ ಮಸಾಲೆ ಪದಾರ್ಥಗಳು,ಹೆಚ್ಚಿಕೊಂಡ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ರುಬ್ಬಿಟ್ಟುಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಗೂ ಅಕ್ಕಿಯನ್ನು ಸೇರಿಸಿ. 2 ನಿಮಿಷ ಹುರಿಯಿರಿ. ನಂತರ ಕಿತ್ತಳೆ ರಸ, ತೆಂಗಿನಕಾಯಿ ಹಾಲನ್ನು ನೀರಿನೊಂದಿಗೆ ಬೆರೆಸಿ 2 ಲೋಟ ಆಗುವಂತೆ ಮಾಡಿ ಇದನ್ನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಅನ್ನದ ಮೇಲೆ ಸಾಕಷ್ಟು ಉಪ್ಪು ಮತ್ತು ಬಣ್ಣದೊಂದಿಗೆ ಸುರಿಯಿರಿ. ಸಣ್ಣ ಉರಿಯಲ್ಲಿ ಕಲಕಿ 10 ನಿಮಿಷ ಪ್ರೆಜರ್ ಪ್ಯಾನಿನಲ್ಲಿ ಬೇಯಿಸಿರಿ. ಒಲೆಯಿಂದ ಇಳಿಸಿದ ನಂತರ ಹುರಿದ ಗೋಡಂಬಿ, ಕಿತ್ತಳೆ ತೊಳೆಗಳು,ದ್ರಾಕ್ಷಿ ಮತ್ತು ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಹೀಗೆ ತಯಾರಾದ ಪಲಾವನ್ನು ಮಸಾಲೆ ಮೊಸರು ಬಜ್ಜಿ ಅಥವಾ ತರಕಾರಿ ಮೊಸರು ಬಜ್ಜಿಯೊಂದಿಗೆ ಬಡಿಸಿಕೊಂಡು ಸವಿಯಬಹುದು.



Click it and Unblock the Notifications