Latest Updates
-
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಅಸಲಿ ಅಯ್ಯಂಗಾರರ ಅಪ್ಪಟ ಪುಳಿಯೋಗರೆ

ಬೆಟ್ಟದಪುರದಲ್ಲಿರುವ ನಮ್ಮ ತಾಯಿ ಮಂಗಮ್ಮ ಅವರಿಂದ ಪುಳಿಯೋಗರೆ ರೆಸಿಪಿಯನ್ನು ಫೋನಿನಲ್ಲಿ ಕೇಳಿ ಬರೆದುಕೊಂಡು ನಿಮಗೆ ಬರೆಯುತ್ತಿದ್ದೇನೆ. ಮೊದಮೊದಲು ನಾನು ಮಾಡಿದ್ದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ಈಗೀಗ ಹದ ಸಿಕ್ಕಿದೆ. ಪಾಟ್ ಲಕ್ , ವೀಕ್ ಎಂಡ್ ಪಾರ್ಟಿಗಳಿಗೆ ನಮ್ಮ ಮನೆಯಿಂದ ಪುಳಿಯೋಗರೆ ಹಾಟ್ ಕೇಸ್ ನಲ್ಲಿ ಹೋಗಲೇಬೇಕು ಎನ್ನುವುದು ಇಲ್ಲಿ ಮನೆಮಾತಾಗಿದೆ. ನನ್ನಂತೆ ನೀವೂ ಪುಳಿಯೋಗರೆ ಮಾಡಿ, ಸವಿಯಿರಿ. 5-6 ಜನ ಊಟಕ್ಕೆ ಅಗತ್ಯವಾದ ಪ್ರಮಾಣದಲ್ಲಿ ರೆಸಿಪಿ ನಿರೂಪಿಸಲಾಗಿದೆ. ಪುಳಿಯೋಗರೆಗೆ ಸಿದ್ಧ ಮಾಡಿಕೊಳ್ಳಲು ಐದು ಹಂತಗಳಿವೆ:
ಅ) 100 ಗ್ರಾಮ್ ಹುಣಿಸೆಹಣ್ಣನ್ನು ನೆನೆಸಿಟ್ಟು ಅದರ ರಸಹಿಂಡಿಕೊಂಡು ಅದಕ್ಕೆ ನಿಂಬೆಹಣ್ಣಿನ ಗಾತ್ರದಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.
ಆ) ಆರು ಚಮಚ ಕರಿಎಳ್ಳನ್ನು ಲೈಟಾಗಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಬೇಕು. ಅರ್ಧ ಗಿಟುಕು ಒಣ ಕೊಬ್ಬರಿಯನ್ನು ತುರಿದು ರೆಡಿ ಮಾಡಿಟ್ಟುಕೊಂಡಿರಬೇಕು.
ಇ) ಒಂದು ಚಮಚ ಮೆಂತ್ಯ, ಎರಡು ಚಮಚ ಕರಿ ಮೆಣಸು, ಮೂರು ಚಮಚ ಕೊತ್ತಂಬರಿ ಬೀಜ, ಎರಡು ಚಮಚ ಜೀರಿಗೆ, 5-6 ಬಳ್ಳಿ ಒಣಮೆಣಸಿನಕಾಯಿ, 4-5 ಗುಂಟೂರು ಮೆಣಸಿನಕಾಯಿ (ಬಳ್ಳಿಕಾಯಿ ಬಣ್ಣಕ್ಕೆ, ಗುಂಟೂರು ಕಾಯಿ ಖಾರಕ್ಕೆ): ಇವಿಷ್ಟನ್ನೂ ಎರಡೋ ಮೂರೋ ಚಮಚ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಗರಿಗರಿ ಹುರಿದು ಆನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು.
ಈ) ಒಗ್ಗರಣೆಗೆ 75 ಮಿಲಿಲೀಟರ್ ಎಣ್ಣೆ, ಒಂದು ಚಮಚ ಸಾಸಿವೆ, ಎರಡು ಚಮಚ ಉದ್ದಿನಬೇಳೆ, ಎರಡು ಚಮಚ ಕಡಲೆಬೇಳೆ, 50 ಗ್ರಾಂ ಕಡಲೆಕಾಯಿ ಬೀಜ, ಮಾಗಿದ ಕರಿಬೇವಿನ ಎಲೆಗಳು ಮತ್ತು ಅರ್ಧ ಚಮಚ ಇಂಗು.
(ಉ)ಉದುರು ಉದುರಾಗಿ ಮಾಡಿದ ಅನ್ನ. ಕುಕ್ಕರ್ ಧಿಕ್ಕರಿಸಿ ಬಸಿದ ಅನ್ನ ಮಾಡಿದರೆ ಗುಡ್.
ಮಾಡುವ ವಿಧಾನ :
ಹುಣಿಸೆ ಬೆಲ್ಲದ ರಸವನ್ನು(ಅ) ಬಾಣಲೆಗೆ ಹಾಕಿ ಬೆಚ್ಚಗಾದ ನಂತರ ಅದಕ್ಕೆ ಮಸಾಲೆ ಪುಡಿಯನ್ನು(ಇ) ಬೆರೆಸಿ ಮರದ ಸೌಟಿನಲ್ಲಿ ಚೆನ್ನಾಗಿ ಹದಬರುವ ತನಕ ಸಂಸ್ಕರಿಬೇಕು. ಮಸಾಲೆ ಕೂಡಿಕೊಂಡ ನಂತರ ಎಳ್ಳು, ಕೊಬ್ಬರಿ(ಆ) ಪುಡಿಯನ್ನು ಬೆರೆಸಿ ಹಿತವಾಗಿ ಕಲಸಬೇಕು. ಈ ಗೊಜ್ಜನ್ನು(ಅ+ಆ+ಇ) ಹರಿವಾಣದಲ್ಲಿ ಆರುತ್ತಿರುವ ಅನ್ನದ ಮೇಲೆ ಹಾಕಬೇಕು. ಒಗ್ಗರಣೆಯನ್ನು(ಈ) ಪ್ರತ್ಯೇಕವಾಗಿ ಮಾಡಿ ಅದನ್ನು ಹರಿವಾಣಕ್ಕೆ ಸುರಿಯಿರಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಅನ್ನ(ಉ) ಕಲಸಿದರೆ ಪುಳಿಯೋಗರೆ ಸಿದ್ಧವಾಗುತ್ತದೆ. ಕಲಸುವಾಗ ರುಚಿಗೆ ತಕ್ಕಷ್ಟು ಐಯೋಡೈಸ್ಡ್ ಉಪ್ಪು ಬೆರೆಸಬೇಕು. (ಬರೆಯುವಾಗ ಮರೆತುಬಿಟ್ಟಿದ್ದೆ, ಕ್ಷಮಿಸಿ.)
ವಿಶೇಷ ಸೂಚನೆ :
*ಅಕ್ಕಿ ದಪ್ಪ ಅಥವಾ ಸಣ್ಣಗಿದ್ದರೆ ಪರವಾಗಿಲ್ಲ. ಆದರೆ ಹಳೆ ಅಕ್ಕಿಯಾಗಿರಬೇಕು.
*ಹುಣಿಸೆಹಣ್ಣನ್ನೇ ಉಪಯೋಗಿಸಬೇಕು. ಪೇಸ್ಟ್ ಬೇಡ.
*ಖಾರ ಹೆಚ್ಚು ಇಷ್ಟಪಡುವವರು ಗುಂಟೂರು ಮೆಣಸಿನಕಾಯಿ ಎರಡು ಹೆಚ್ಚಿಗೆ ಬಳಸಬಹುದು.
*ಒಗ್ಗರಣೆ ಮಾಡುವಾಗ ಬೇಳೆಗಳು, ಕಡಲೆಕಾಯಿ ಬೀಜ ಮತ್ತು ಕರಿಬೇವು ಸೀದು ಕಪ್ಪಗಾಗದಂತೆ ಎಚ್ಚರವಹಿಸಬೇಕು.
* ಪುಳಿಯೋಗರೆ ಉಳಿದರೆ ಅಥವಾ ಉಳಿಸಿ ಭದ್ರವಾಗಿ ಮುಚ್ಚಿಟ್ಟರೆ ಎರಡುದಿನವಾದರೂ ಕೆಡುವುದಿಲ್ಲ. ಬದಲಾಗಿ ಒಳ್ಳೆ ರುಚಿ ಬಂದಿರುತ್ತದೆ. ನಾರಾಯಣಮಸ್ತು.



Click it and Unblock the Notifications