Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪಾಕಶಾಲೆ: ಮಾವಿನಹಣ್ಣಿನ ಸಾರಿನ ಸವಿ
ಈಗ ಹಣ್ಣುಗಳ ರಾಜ ಮಾವು ಸಮೃದ್ಧವಾಗಿ ದೊರೆಯುವ ಕಾಲ. ಮಾವಿನಹಣ್ಣನ್ನು ಉಪಯೋಗಿಸಿ ಹಲವಾರು ತಿಂಡಿ-ತಿನಿಸು, ಪಾನೀಯಗಳನ್ನು ಮಾಡಿ ಸವಿಯಬಹುದು. ಹಾಗೆಯೇ ರುಚಿಯಾದ ಮಾವಿನ ಸಾರು ಮಾಡುವುದು ಸಹ ತುಂಬ ಸುಲಭ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ತೊಗರಿ ಬೇಳೆ : 1 ಕಪ್ (ನೀರಿನಲ್ಲಿ ತೊಳೆದು 30 ನಿಮಿಷಗಳ ಕಾಲ ನೆನಸಿ)
ಹುಣಸೆ ಹಣ್ಣು : ನಿಂಬೆ ಹಣ್ಣು ಗಾತ್ರದ್ದು (5ನಿಮಿಷಗಳ ಕಾಲ ನೀರಿನಲ್ಲಿ ನೆನಸಿ)
ಸಿಪ್ಪೆ ತೆಗೆದ ಮಾವಿನಹಣ್ಣು : ಒಂದೂವರೆ ಹಣ್ಣು (ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಬೇಕು)
ಸಾಂಬಾರ್ ಮಸಾಲ: 2 ಟೇಬಲ್ ಚಮಚ
ಹರಿಶಿಣ ಪುಡಿ: ಕಾಲು ಟೇಬಲ್ ಚಮಚ
ಧನಿಯ ಪುಡಿ: 1 ಟೇಬಲ್ ಚಮಚ
ಕೆಂಪು ಮೆಣಸಿನಕಾಯಿ ಪುಡಿ: 1 ಟೇಬಲ್ ಚಮಚ
ಜೀರಿಗೆ ಮತ್ತು ಸಾಸಿವೆ: ಅರ್ಧ ಟೇಬಲ್ ಚಮಚ
ಕೆಂಪು ಮೆಣಸಿನ ಕಾಯಿ: 3
ಕರಿಬೇವು: ಒಗ್ಗರಣೆಗೆ
ಈರುಳ್ಳಿ: 4
ಕುಂಬಳಕಾಯಿ: ಅರ್ಧ ಕಪ್ಪು (ಸಣ್ಣಗೆ ಹೆಚ್ಚಿಕೊಳ್ಳ ಬೇಕು)
ಟಮಾಟೋ: 1
ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು: 1 ಟೇಬಲ್ ಚಮಚ
ಬೆಳ್ಳುಳ್ಳಿ: 2-3 ಎಸಳು
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: 2 ಟೇಬಲ್ ಚಮಚ
ಸಾರು ಮಾಡುವ ವಿಧಾನ:
ತೊಗರಿ ಬೇಳೆಗೆ ಹುಣಸೆ ಹಣ್ಣು, ಸಣ್ಣಗೆ ಹೆಚ್ಚಿಕೊಂಡ ಅರ್ಧ ಟಮಾಟೋ ಹಾಗೂ ಒಂದು ಈರುಳ್ಳಿಯನ್ನು ಹಾಕಿ. ಇದಿಷ್ಟನ್ನು ಕುಕ್ಕರ್ನಲ್ಲಿ ಹಾಕಿ ನಾಲ್ಕು ಸಲ ಕೂಗಿದ ಮೇಲೆ ಕೆಳಗಿಳಿಸಿ. ಸ್ವಲ್ಪ ಸಮಯದ ನಂತರ ಕುಕ್ಕರನ್ನು ತೆರೆದು ಬೆಂದ ತೊಗರಿ ಬೇಳೆಯನ್ನು ನುಣ್ಣಗೆ ಮಾಡಿಕೊಳ್ಳಿ. ನಂತರ ಎಲ್ಲ ಮಸಾಲೆ ಹಾಗೂ ಒಂದು ಈರುಳ್ಳಿ,ಕಾಲು ಟಮಾಟೋ, ಬೆಳ್ಳುಳ್ಳಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಈರುಳ್ಳಿ ಮತ್ತು ಟಮಾಟೋಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಈಗ ಕಾದ ಎಣ್ಣೆಗೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ. ಸಣ್ಣಗೆ ಹೆಚ್ಚಿಕೊಂಡ ಕುಂಬಳಕಾಯಿ , ಈರುಳ್ಳಿ, ಟಮಾಟೋ ಹಾಗೂ ಮಾವಿನಕಾಯಿಯನ್ನು ಹಾಕಿ 2 ನಿಮಿಷಗಳ ಕಾಲ ಬೇಯಿಸಬೇಕು. ಈ ಮಿಶ್ರಣಕ್ಕೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಂಡ ಮಸಾಲೆಗಳನ್ನು ಹಾಕಿ ಮತ್ತೆರಡು ನಿಮಿಷಗಳ ಕಾಲ ಬೇಯಿಸಿ. ನಂತರ ತೊಗರಿ ಬೇಳೆಯನ್ನು ಹಾಕಿ ದೊಡ್ಡ ಹುರಿಯಲ್ಲಿ ಕುದಿಸಬೇಕು. ಸಾರಿಗೆ ಬೇಕಾದಷ್ಟು ನೀರನ್ನು ಸೇರಿಸಿ. ಎಲ್ಲ ಮಸಾಲೆಗಳು ಸರಿಯಾಗಿವೆ ಎಂದು ಬಾಯಿಗೆ ಹಾಕಿಕೊಂಡು ನೋಡಿ.
ನಂತರ ಸಣ್ಣ ಉರಿಯಲ್ಲಿ 15 ನಿಮಿಷಗಳ ಕಾಲ ಕುದಿಸಿ. ಸಾಂಬಾರಿನ ಘಮಘಮ ಮೂಗಿಗೆ ಬಡಿಯುತ್ತಿದ್ದಂತೆ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಮಾವಿನಕಾಯಿ ಸಾರು ಸಿದ್ಧವಾದಂತೆ. ಬಿಸಿಬಿಸಿ ಇಡ್ಲಿ, ಅನ್ನದೊಂದಿಗೆ ಮಾವಿನಕಾಯಿಯ ಸಾರನ್ನು ಸವಿಯಬಹುದು.
(ದಟ್ಸ್ಕನ್ನಡ ಪಾಕಶಾಲೆ)



Click it and Unblock the Notifications