Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು

* ವೈಶಾಲಿ ಹೆಗಡೆ, ಬೋಸ್ಟನ್
ಪದಾರ್ಥಗಳು:
1/4 ಕಪ್ ಉದ್ದಿನಬೇಳೆ
1/4 ಕಪ್ ಹೆಸರುಬೇಳೆ
1/2 ಕಪ್ ತೊಗರಿಬೇಳೆ
1/4 ಕಪ್ ಹುರುಳಿಕಾಳು
1/4 ಕಪ್ ರಾಜ್ಮ ಅಥವಾ ಕಿಡ್ನಿ ಬೀನ್ಸ್
1/4 ಕಪ್ ಅಲಸಂದೆ ಕಾಳು
1-2 ಟೊಮೇಟೊ
1 ಈರುಳ್ಳಿ
1 ಚಮಚ ಸಾರಿನಪುಡಿ
1/2 ಚಮಚ ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು, ಸ್ವಲ್ಪ
3-4 ಕೆಂಪು ಅಥವಾ ಹಸಿಮೆಣಸಿನಕಾಯಿ, ಖಾರಕ್ಕೆ ತಕ್ಕಂತೆ
ಒಗ್ಗರಣೆಗೆ ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ
ಚಿಟಿಕೆ ಉಪ್ಪು, ಸಕ್ಕರೆ ರುಚಿಗೆ ತಕ್ಕಂತೆ
ಮಾಡುವ ವಿಧಾನ:
ಎಲ್ಲ ಕಾಳುಗಳನ್ನು 3-4 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಎಲ್ಲ ಬೇಳೆ ಕಾಳುಗಳನ್ನು ಒಟ್ಟಿಗೆ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ, ಸ್ವಲ್ಪ ಅರಿಶಿನ, 1/4 ಚಮಚ ಎಣ್ಣೆ ಸೇರಿಸಿದರೆ ಚೆನ್ನಾಗಿ ಅರಳಿ ಬೇಯುತ್ತವೆ.
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಸಾರಿನಪುಡಿ, ಗರಂ ಮಸಾಲ ಪುಡಿ ಸೇರಿಸಿ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ ಮುಚ್ಚಿ ಬೇಯಿಸಿ. ಈ ಮಿಶ್ರಣ ಮೆತ್ತಗೆ ಪೇಸ್ಟ್ನಂತೆ ಬೆಂದಾಗ ಬೆಂದ ಬೇಳೆ ಕಾಲಿನ ಮಿಶ್ರಣ ಸೇರಿಸಿ. ನಿಮ್ಮ ಹದಕ್ಕೆ ತಕ್ಕಂತೆ ನೀರು ಸೇರಿಸಿ (ತುಂಬಾ ತೆಳ್ಳಗಿರದಂತೆ ನೋಡಿಕೊಳ್ಳಿ) ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬಿಸಿ ಅನ್ನ ಅಥವ ಘೀ ರೈಸ್, ಜೀರಾ ರೈಸ್ನೊಂದಿಗೆ ಬಡಿಸಿದರೆ ಚೆನ್ನಾಗಿರುತ್ತದೆ.



Click it and Unblock the Notifications











