Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು

* ವೈಶಾಲಿ ಹೆಗಡೆ, ಬೋಸ್ಟನ್
ಪದಾರ್ಥಗಳು:
1/4 ಕಪ್ ಉದ್ದಿನಬೇಳೆ
1/4 ಕಪ್ ಹೆಸರುಬೇಳೆ
1/2 ಕಪ್ ತೊಗರಿಬೇಳೆ
1/4 ಕಪ್ ಹುರುಳಿಕಾಳು
1/4 ಕಪ್ ರಾಜ್ಮ ಅಥವಾ ಕಿಡ್ನಿ ಬೀನ್ಸ್
1/4 ಕಪ್ ಅಲಸಂದೆ ಕಾಳು
1-2 ಟೊಮೇಟೊ
1 ಈರುಳ್ಳಿ
1 ಚಮಚ ಸಾರಿನಪುಡಿ
1/2 ಚಮಚ ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು, ಸ್ವಲ್ಪ
3-4 ಕೆಂಪು ಅಥವಾ ಹಸಿಮೆಣಸಿನಕಾಯಿ, ಖಾರಕ್ಕೆ ತಕ್ಕಂತೆ
ಒಗ್ಗರಣೆಗೆ ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ
ಚಿಟಿಕೆ ಉಪ್ಪು, ಸಕ್ಕರೆ ರುಚಿಗೆ ತಕ್ಕಂತೆ
ಮಾಡುವ ವಿಧಾನ:
ಎಲ್ಲ ಕಾಳುಗಳನ್ನು 3-4 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಎಲ್ಲ ಬೇಳೆ ಕಾಳುಗಳನ್ನು ಒಟ್ಟಿಗೆ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ, ಸ್ವಲ್ಪ ಅರಿಶಿನ, 1/4 ಚಮಚ ಎಣ್ಣೆ ಸೇರಿಸಿದರೆ ಚೆನ್ನಾಗಿ ಅರಳಿ ಬೇಯುತ್ತವೆ.
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಸಾರಿನಪುಡಿ, ಗರಂ ಮಸಾಲ ಪುಡಿ ಸೇರಿಸಿ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ ಮುಚ್ಚಿ ಬೇಯಿಸಿ. ಈ ಮಿಶ್ರಣ ಮೆತ್ತಗೆ ಪೇಸ್ಟ್ನಂತೆ ಬೆಂದಾಗ ಬೆಂದ ಬೇಳೆ ಕಾಲಿನ ಮಿಶ್ರಣ ಸೇರಿಸಿ. ನಿಮ್ಮ ಹದಕ್ಕೆ ತಕ್ಕಂತೆ ನೀರು ಸೇರಿಸಿ (ತುಂಬಾ ತೆಳ್ಳಗಿರದಂತೆ ನೋಡಿಕೊಳ್ಳಿ) ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬಿಸಿ ಅನ್ನ ಅಥವ ಘೀ ರೈಸ್, ಜೀರಾ ರೈಸ್ನೊಂದಿಗೆ ಬಡಿಸಿದರೆ ಚೆನ್ನಾಗಿರುತ್ತದೆ.



Click it and Unblock the Notifications