Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಳಿಮೊಸರಿನ ಹಸಿಮಜ್ಜಿಗೆ ಹುಳಿ
ಅಡುಗೆ ಮಾಡಿ ಯಾರಾದರೂ ತಂದು ಮುಂದಿಟ್ಟರೆ ತಿನ್ನುವುದಕ್ಕೆ ಅಷ್ಟೇನು ಕಷ್ಟವಾಗದು. ಆದರೆ, ನಾವೇ ಅಡುಗೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಾಗ ತೊಂದರೆ ಎನ್ನುವುದಕ್ಕಿಂತ, ಒಪ್ಪತ್ತಿನ ಊಟದ ಸವಾಲಾಗಿ ಬೃಹದಾಕಾರ ಸಮಸ್ಯೆಯಾಗಿ ಸ್ಟೌವ್ ಮುಂದೆ ಬಂದು ನಿಲ್ಲುತ್ತದೆ. ಮೊನ್ನೆ ಮತ್ತೆ ಹೀಗಾಯಿತು. ಹೆಪ್ಪು ಹಾಕಿಟ್ಟಿದ್ದ ಮೊಸರು ಎರಡು ದಿನವಾದರೂ ಹಾಗೇ ಇತ್ತು. ಹುಳಿಯಾಗಿದೆ, ಲೊಟಲೊಟ ಅಂತಾಯಿತ್ತು. ಚೆಲ್ಲುವುದಕ್ಕೆ ಮನಸ್ಸಾಗುವುದಿಲ್ಲ, ಉಪಯೋಗಿಸುವಂತಿಲ್ಲ. ಕೆಟ್ಟಹುಳಿ ಪದಾರ್ಥ ತಿಂದರೆ ಮತ್ತೆ ಗಂಟಲು ಬೇನೆ ಆಗಿ ಮತ್ತೆ ಆಂಟಿ ಬಯೋಟಿಕ್.
ದಟ್ಸ್ ಕನ್ನಡ ಅಡುಗೆ ಶಾಲೆಯಲ್ಲಿ ಏನಾದರೂ ಐಡಿಯಾ ಸಿಗತ್ತಾ ಅಂತ ಹುಡುಕಾಡಿದರೆ ನಿರ್ದಿಷ್ಟವಾದ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ನನ್ನ ತಂಗಿಗೆ ಫೋನು ಮಾಡಿದೆ. ಉತ್ತರ ಸಿಕ್ಕಿತು ಆದರೆ ಅದು ಪರಿಹಾರ ಅಲ್ಲ. ಯಾಕೆಂದರೆ, ಮಿಕ್ಸಿ ಇಲ್ಲದೆ ಇದ್ದರೆ ಈಗಿನ ಕಾಲದಲ್ಲಿ ವೆರೈಟಿ ವೆರೈಟಿ ಅಡುಗೆ ಮಾಡುವುದು ಸಾಧ್ಯವಿಲ್ಲ ಎಂಬ ಆದೇಶ ತಂಗಿಕಡೆಯಿಂದ ಬಂತು. ಅಂತೂ ಒಂದು ಚಮಚ ಮೊಸರಿಗೆ ಒಂದು ಬಕೆಟು ನೀರು ಬೆರೆಸಿ ಹುಳಿಯನ್ನು ಒದ್ದೋಡಿಸಿ ಅದಕ್ಕೆ ಹುರಿದ ಒಂದು ಡೊಣ್ಣೆ ಮೆಣಸಿನಕಾಯಿ ಚೂರುಗಳು ಮತ್ತು ಉಪ್ಪು ಬೆರೆಸಿ ಆವತ್ತಿನ ಊಟದ ಕತೆಯನ್ನು ಸಕ್ಸ್ ಫುಲ್ ಆಗಿ ಮುಗಿಸಿದೆ.
ಮಿಕ್ಸಿ ಇದ್ದರೆ ಹಸಿ ಮಜ್ಜಿಗೆ ಹುಳಿ ಮಾಡಿಕೊಳ್ಳಬಹುದು. ಸ್ವಲ್ಪ ಪುಟಾಣಿ, ತೆಂಗಿನಕಾಯಿ ತುರಿ, ನಾಕಾರು ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಚಿಟಿಕೆ ಇಂಗು ಹಾಕಿ ಗಡಗಡ ರುಬ್ಬಿಕೊಳ್ಳಬೇಕು. ಮಿಕ್ಸಿ ಓಡುತ್ತಿದ್ದರೆ ಫ್ಲಾಟಿಗೆಲ್ಲ ಕೇಳಿಸುತ್ತದೆ. ಬೆಂಗಳೂರಿನ ಟೂ ಸ್ಟ್ರೋಕ್ ಇಂಜಿನ್ ಆಟೋ ಥರ ಸೌಂಡು ಬರ್ತಾಯಿರತ್ತೆ. ಆದ್ದರಿಂದ 4 stroke Engine ಇರುವ mixi ಕೊಂಡರೆ ಲೇಸು.
ಒಂಟಿ ಬರ್ನರ್ ಗ್ಯಾಸ್ ಸಿಲಿಂಡರಿನ ಮೇಲೆ ತವ ಪ್ರತಿಷ್ಠಾಪನೆ ಮಾಡಿ ಒಂದೇ ಒಂದು ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ, ಚಿಟಿಕೆ ಅರಿಶಿನ, ಸಾಸಿವೆ, ಕರಿಬೇವು ಮತ್ತು ಒಣ ಮೆಣಸಿನಕಾಯಿ ಚೂರುಗಳನ್ನು ಬೆರೆಸಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ರುಬ್ಬಿಕೊಂಡ ಚಟ್ನಿ ಹಾಕಿ ಹದವಾಗುವ ತನಕ ಸ್ವಲ್ಪ ಹೊತ್ತು ಅಲ್ಲೇ ಸುಮ್ಮನೆ ನಿಂತಿರಬೇಕು. ಆಕಸ್ಮಾತ್ ತರಕಾರಿ ರೆಡಿ ಇದ್ದರೆ ಸೌತೆಕಾಯಿ ಅಥವಾ ಸೀಮೆ ಬದನೆಕಾಯಿ ಏನಿಲ್ಲಾ ಅಂದರೆ ಡೊಣ್ಣ ಮೆಣಸಿನಕಾಯಿ ಹೆಚ್ಚಿ ಹಾಕಬಹುದು.
ಆನಂತರ ಅದಕ್ಕೆ ಹುಳಿ ಮೊಸರು ಕಡೆದು ತೆಗೆದ ಗಟ್ಟಿ ಮಜ್ಜಿಗೆ ಒಂದೆರಡು ಲೋಟದಷ್ಟು ಸುರಿದು ಮತ್ತೆ ಕಾಯಬೇಕು. ಒಂದು ಕುದಿ ಬಂದನಂತರ ಉಪ್ಪು ಬೆರೆಸಿ ಕೆಳಗಿಳಿಸಬೇಕು. ಒಲೆ ಮೇಲೆ ಅಡುಗೆ ಯಜ್ಞ ನಡೆಯುತ್ತಿರುವಾಗ ಫೋನು ಬಂದರೆ ರಿಸೀವ್ ಮಾಡಬಾರದು. ಹಸಿ ಮಜ್ಜಿಗೆ ಹುಳಿ ಯಾವತ್ತೂ ಜಾಸ್ತಿ ಕುದಿಯಬಾರದು. ಹೈ ವೋಲ್ಟೇಜ್ ಶಾಖಕ್ಕೆ ಮೊಸರು ಒಡೆದು ಪಕಳೆಗಳು ಹೊರಬರುತ್ತವೆ.



Click it and Unblock the Notifications











