Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಊಟದ ರುಚಿ ಹೆಚ್ಚಿಸುವ ಆಲೂ ರಾಯತ
Palya
oi-Staff
By * ನಿವೇದಿತಾ ಪ್ರಭಾಕರ್, ಬೆಂಗಳೂರು

ಬಿಸಿಬಿಸಿ ತುಪ್ಪ ಅನ್ನದೊಡನೆ ಕಲಿಸಿ ತಿನ್ನಬಹುದಾದ ಆಲೂ ರಾಯತ ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.
ಬೇಕಾದ ಪದಾರ್ಥಗಳು
ಆಲೂಗಡ್ಡೆ ಎರಡು
ಮೊಸರು ಎರಡು ಬಟ್ಟಲು
ಕೊತ್ತಂಬರಿ
ಒಗ್ಗರಣೆಗೆ ನಾಲ್ಕು ಚಮಚ ಎಣ್ಣೆ, ಹಸಿಮೆಣಸಿನಕಾಯಿ, ಜೀರಿಗೆ, ಐದು ಎಸಳು ಕರಿಬೇವು, ಇಂಗು
ರುಚಿಗೆ ಉಪ್ಪು
ತಯಾರಿಸುವ ವಿಧಾನ
ಆಲೂಗಡ್ಡೆಯನ್ನು ಕುಕ್ಕರಿನಲ್ಲಿಟ್ಟು ಚೆನ್ನಾಗಿ ಬೇಯಿಸಿಕೊಳ್ಳಿ. ಸ್ವಲ್ಪ ಆರಿದ ನಂತರ ಅದರ ಸಿಪ್ಪೆಯನ್ನು ಸುಲಿದು ಪುಡಿಪುಡಿ ಮಾಡಿಟ್ಟುಕೊಳ್ಳಿ. ಪೂರ್ತಿ ಆರಲು ಒಂದು ತಟ್ಟೆಯಲ್ಲಿ ಹರಿವಿಡಿ. ಅದಕ್ಕೆ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಒಗ್ಗರಣೆಯನ್ನು ತಯಾರಿಸಿ ಆಲೂ ಮೊಸರಿನ ಮಿಶ್ರಣದ ಮೇಲೆ ಹಾಕಿ ಮತ್ತೊಮ್ಮೆ ಕೈಯಾಡಿಸಿ.
ಅಷ್ಟೇ ಆಲೂ ರಾಯತ ತಯಾರ್. ಮೇಲೆ ತಿಳಿಸಿದಂತೆ ಬಿಸಿಬಿಸಿ ಅನ್ನಕ್ಕೆ ಎರಡು ಚಮಚ ತುಪ್ಪ ಸುರಿದು ಸಾರು ಅನ್ನ ಉಣ್ಣುವ ಮೊದಲು ಆಲೂ ರಾಯತದಿಂದ ಕಲಿಸಿ ಹೊಟ್ಟೆಗಿಳಿಸಿ ನೋಡಿ. ಜೊತೆಗೊಂದಿಷ್ಟು ಮಾವಿನಕಾಯಿ ಉಪ್ಪಿನಕಾಯಿ ಇದ್ದರಂತೂ ಕೇಳುವುದೇ ಬೇಡ.
Comments
Read more about: ಆಲೂ ರಾಯತ ಹೊಸರುಚಿ ನಿವೇದಿತಾ ಕರ್ನಾಟಕದ ಅಡುಗೆ ಮೊಸರು ಊಟಕ್ಕೆ ಮೊದಲು ಉಪ್ಪಿನಕಾಯಿ ಸೈಡ್ ಡಿಶ್ aloo raita curd pickle side dish karnataka kitchen niveditha prabhakar
Story first published: Saturday, December 19, 2009, 17:51 [IST]
Other articles published on Dec 19, 2009



Click it and Unblock the Notifications