Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಕರಿಬೇವು ಸೊಪ್ಪಿನ ಚಟ್ನಿಪುಡಿ.. ಆಹಾ!

* ಕರುಣಾ, ಮಣಿಪಾಲ.
ಬೇಕಾಗುವ ಪದಾರ್ಥಗಳು
ಬಲಿತ ಕರಿಬೇವಿನ ಸೊಪ್ಪು - 3 ಹಿಡಿ
ಉದ್ದಿನಬೇಳೆ - 150 ಗ್ರಾಂ
ಕಡಲೆಬೇಳೆ - 200 ಗ್ರಾಂ
ಒಣ ಕೊಬ್ಬರಿ - 150 ಗ್ರಾಂ
ಒಣಮೆಣಸಿನಕಾಯಿ - 75 ಗ್ರಾಂ
ತುಪ್ಪ - 2 ಟೀ ಚಮಚ
ಉಪ್ಪು - ರುಚಿಗೆ ಸಮನಾದಷ್ಟು
ಇಂಗು - ಚಿಟಿಕೆ
ಹುಣಿಸೇಹಣ್ಣು - ಎರಡು ತೊಲೆ
ಬೆಲ್ಲ - ಸಣ್ಣ ಉಂಡೆ ಗಾತ್ರದ್ದು
ವಿಧಾನ : ಒಳ್ಳೆ ಗರಿಗರಿ ಬ್ಯಾಡಗಿ ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆಯನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಚೆನ್ನಾಗಿ ಬಲಿತ ಕರಿಬೇವಿನ ಸೊಪ್ಪನ್ನು ತೊಳೆದು ಒಣಗಿಸಿದ ನಂತರ ಕಾದ ತವಕ್ಕೆ ತುಪ್ಪ ಹಾಕಿ ಸೊಪ್ಪನ್ನು ಸುರಿದು ಬಾಡಿಸಿಬೇಕು. ಸೊಪ್ಪು ಸೀಯಬಾರದು ಎಚ್ಚರ. ಆನಂತರ ಇವಿಷ್ಟಕ್ಕೂ ಹುಣಿಸೇಹಣ್ಣು, ಉಪ್ಪು, ಒಣ ಕೊಬ್ಬರಿ ತುರಿ, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಪುಡಿಪುಡಿ ಮಾಡಬೇಕು. ಪುಡಿ ತೀರಾ ನುಣ್ಣಗೆ ಆಗಬಾರದು. ಸ್ಪಲ್ಪ ತರಿತರಿ ಇರಲಿ.
ಆಮೇಲೆ, ಪ್ರತ್ಯೇಕವಾಗಿ ತುಪ್ಪ ಸಾಸಿವೆ ಬ್ಯಾಡಗಿ ಮೆಣಸಿನಕಾಯಿ ಒಗ್ಗರಣೆ ಮಾಡಿಕೊಂಡು ಪುಡಿಗೆ ಬೆರೆಸಿರಿ. ಶ್ರದ್ಧೆಯಿಂದಲೂ, ಒಳ್ಳೆ ಪದಾರ್ಥಗಳಿಂದಲೂ ತಯಾರಿಸಿದ ಕರಿಬೇವಿನ ಚಟ್ನಿಪುಡಿ ಊಟದ ಜತೆ, ತಿಂಡಿಯ ಜತೆ ನೆಂಚಲು ಚೆನ್ನಾಗಿರತ್ತೆ ಮಾತ್ರವಲ್ಲ, ನಾಲಗೆ ಕೆಟ್ಟಿದೆ ಎನ್ನುವವರು ಒಂದು ಚಮಚ ಹಾಗೆ ಬಾಯಿಗೆ ಹಾಕಿಕೊಂಡರೆ ನವನವೋನ್ಮೇಷಶಾಲಿನಿ ಆಗಿರುತ್ತದೆ.



Click it and Unblock the Notifications
