Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕರಿಬೇವು ಸೊಪ್ಪಿನ ಚಟ್ನಿಪುಡಿ.. ಆಹಾ!

* ಕರುಣಾ, ಮಣಿಪಾಲ.
ಬೇಕಾಗುವ ಪದಾರ್ಥಗಳು
ಬಲಿತ ಕರಿಬೇವಿನ ಸೊಪ್ಪು - 3 ಹಿಡಿ
ಉದ್ದಿನಬೇಳೆ - 150 ಗ್ರಾಂ
ಕಡಲೆಬೇಳೆ - 200 ಗ್ರಾಂ
ಒಣ ಕೊಬ್ಬರಿ - 150 ಗ್ರಾಂ
ಒಣಮೆಣಸಿನಕಾಯಿ - 75 ಗ್ರಾಂ
ತುಪ್ಪ - 2 ಟೀ ಚಮಚ
ಉಪ್ಪು - ರುಚಿಗೆ ಸಮನಾದಷ್ಟು
ಇಂಗು - ಚಿಟಿಕೆ
ಹುಣಿಸೇಹಣ್ಣು - ಎರಡು ತೊಲೆ
ಬೆಲ್ಲ - ಸಣ್ಣ ಉಂಡೆ ಗಾತ್ರದ್ದು
ವಿಧಾನ : ಒಳ್ಳೆ ಗರಿಗರಿ ಬ್ಯಾಡಗಿ ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆಯನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಬೇಕು. ಚೆನ್ನಾಗಿ ಬಲಿತ ಕರಿಬೇವಿನ ಸೊಪ್ಪನ್ನು ತೊಳೆದು ಒಣಗಿಸಿದ ನಂತರ ಕಾದ ತವಕ್ಕೆ ತುಪ್ಪ ಹಾಕಿ ಸೊಪ್ಪನ್ನು ಸುರಿದು ಬಾಡಿಸಿಬೇಕು. ಸೊಪ್ಪು ಸೀಯಬಾರದು ಎಚ್ಚರ. ಆನಂತರ ಇವಿಷ್ಟಕ್ಕೂ ಹುಣಿಸೇಹಣ್ಣು, ಉಪ್ಪು, ಒಣ ಕೊಬ್ಬರಿ ತುರಿ, ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಪುಡಿಪುಡಿ ಮಾಡಬೇಕು. ಪುಡಿ ತೀರಾ ನುಣ್ಣಗೆ ಆಗಬಾರದು. ಸ್ಪಲ್ಪ ತರಿತರಿ ಇರಲಿ.
ಆಮೇಲೆ, ಪ್ರತ್ಯೇಕವಾಗಿ ತುಪ್ಪ ಸಾಸಿವೆ ಬ್ಯಾಡಗಿ ಮೆಣಸಿನಕಾಯಿ ಒಗ್ಗರಣೆ ಮಾಡಿಕೊಂಡು ಪುಡಿಗೆ ಬೆರೆಸಿರಿ. ಶ್ರದ್ಧೆಯಿಂದಲೂ, ಒಳ್ಳೆ ಪದಾರ್ಥಗಳಿಂದಲೂ ತಯಾರಿಸಿದ ಕರಿಬೇವಿನ ಚಟ್ನಿಪುಡಿ ಊಟದ ಜತೆ, ತಿಂಡಿಯ ಜತೆ ನೆಂಚಲು ಚೆನ್ನಾಗಿರತ್ತೆ ಮಾತ್ರವಲ್ಲ, ನಾಲಗೆ ಕೆಟ್ಟಿದೆ ಎನ್ನುವವರು ಒಂದು ಚಮಚ ಹಾಗೆ ಬಾಯಿಗೆ ಹಾಕಿಕೊಂಡರೆ ನವನವೋನ್ಮೇಷಶಾಲಿನಿ ಆಗಿರುತ್ತದೆ.



Click it and Unblock the Notifications