Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲದಲ್ಲಿ ಆಗಾಗ ಕಾಡುವ ಕೆಮ್ಮು-ಶೀತ ತಡೆಗಟ್ಟಲು ಬೆಸ್ಟ್ ಈ ಕಷಾಯ
ಮಳೆಗಾಲದಲ್ಲಿ ಶೀತ, ಕೆಮ್ಮು ಈ ಬಗೆಯ ಸಮಸ್ಯೆ ಸಾಮಾನ್ಯ, ಅದರಲ್ಲಿಯೂ ಶಾಲೆಗೆ ಹೋಗುವ ಮಕ್ಕಳಿದ್ದರೆ ವಾರದಲ್ಲಿ ಒಂದು ಬಾರಿಯಾದರೂ ಈ ಬಗೆಯ ಸಮಸ್ಯೆ ಕಾಡುವುದು, ನೀವು ಈ ಸಮಯದಲ್ಲಿ ಮನೆಯಲ್ಲಿ ಕಷಾಯ ಮಾಡಿಡುವುದು ಒಳ್ಳೆಯದು. ಈ ಕಷಾಯ ಪುಡಿಯನ್ನು ಹಾಲಿನಲ್ಲಿ ಹಾಕಿ ಕೊಡುವುದರಿಂದ ಶೀತ, ಕೆಮ್ಮು, ಗಂಟಲು ಕೆರೆತ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಬೇಕಾಗುವ ಸಾಮಗ್ರಿ
1/2 ಕಪ್ ಕೊತ್ತಂಬರಿ ಬೀಜ
1/4 ಕಪ್ ಜೀರಿಗೆ
2 ಚಮಚ ಕಾಳು ಮೆಣಸು
1 ಚಮಚ ಸೋಂಪು
5-6 ಏಲಕ್ಕಿ
10 ಲವಂಗ
1/2 ಚಮಚ ಅರಿಶಿಣ ಪುಡಿ
1/2 ಚಮಚ ಶುಂಠಿ ಪುಡಿ
ಸರ್ವ್ ಮಾಡುವಾಗ
ಎರಡೂವರೆ ಕಪ್ ನೀರು
2 ಚಮಚ ಬೆಲ್ಲದ ಪುಡಿ
1/4 ಕಪ್ ಹಾಲು
ಮಾಡುವ ವಿಧಾನ
ಒಂದು ಪ್ಯಾನ್ ತೆಗೆದು 1/2 ಕಪ್ ಕೊತ್ತಂಬರಿ ಬೀಜ, 1/4 ಕಪ್ ಜೀರಿಗೆ, 2 ಚಮಚ
ಕಾಳು ಮೆಣಸು, 1 ಚಮಚ ಸೋಂಪು , ಏಲಕ್ಕಿ, ಲವಂಗ ಸೇರಿಸಿ ಕಡಿಮೆ ಉರಿಯಲ್ಲಿ
ಹುರಿಯಿರಿ.
ಈ ಮಸಾಲೆ ಸಾಮಗ್ರಿಯನ್ನು ಉರಿದಾಗ ತುಂಬಾ ಒಳ್ಳೆಯ ಸುವಾಸನೆ ಬರುತ್ತದೆ, ರೋಸ್ಟ್
ಮಾಡಿ ಆದರೆ ಅದು ಮಸಿಯಾಗುವಂತೆ ರೋಸ್ಟ್ ಮಾಡಬೇಡಿ.
ನಂತರ ಅವುಗಳನ್ನು ಒಂದು ತಟ್ಟೆಗೆ ಹಾಕಿ
ಸ್ವಲ್ಪ ತಣ್ಣಗಾದ ಮೇ ಅರಿಶಿಣ ಪುಡಿ, ಸ್ವಲ್ಪ ಶುಂಠಿ ಪುಡಿ ಸೇರಿಸಿ ಪುಡಿ ಮಾಡಿ,
ಯಾವುದೇ ನೀರು ಸೇರಿಸಬಾರದು, ಅಲ್ಲದೆ ಬ್ಲೆಂಡರ್ಗೆ ಹಾಕುವಾಗ ಅದರಲ್ಲಿ ಸ್ವಲ್ಪವೂ
ನೀರಿನಂಶ ಇರಬಾರದು, ಬ್ಲೆಂಡರ್ ಒರೆಸಿ ನಂತರ ರೋಸ್ಟ್ ಮಾಡಿದ ಸಾಮಗ್ರಿ ಹಾಕಿ
ಪುಡಿ ಮಾಡಿ.
ಈ ಪುಡಿಯನ್ನು ಗಾಜಿನ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿಡಿ.
ಕಷಾಯ ಮಾಡುವಾಗ
ನೀವು ನೀರು, ಹಾಲು, ಬೆಲ್ಲ ಹಾಕಿ ಕುದಿಸಿ, ನಂತರ ಈ ಮಿಶ್ರಣ ಕುದಿ ಬರುವಾಗ
ಒಂದೂವರೆ ಚಮಚ ಕಷಾಯ ಪುಡಿ ಹಾಕಿ ಮಿಕ್ಸ್ ಮಾಡಿ, ಮತ್ತೆ ಎರಡು ನಿಮಿಷ ಕುದಿಸಿ,
ಉರಿಯಿಂದ ಇಳಿಸಿ ಸ್ವಲ್ಪ ತಣ್ಣಗಾದ ಮೇಲೆ ಕುಡಿಯಿರಿ.
ಮಳೆಗಾಲ ಮತ್ತು ಚಳಿಗಾಲದಲ್ಲಿ ನೀವು ಇದನ್ನು ಟೀ, ಕಾಫಿ ಬದಲಿಗೆ ಒಂದು ಹೊತ್ತು ಕುಡಿಯುವುದರಿಂದ ಸಾಮಾನ್ಯ ಶೀತ, ಕೆಮ್ಮು ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಬಹುದು.



Click it and Unblock the Notifications