Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉಪ್ಪಿಟ್ಟು ಬೇಡ ಅಂದೋರು ಕೂಡ ಮತ್ತೊಮ್ಮೆ ಸವಿಯೋದು ಖಚಿತ: ಈ ರೀತಿ ಮಾಡಿ ತರಕಾರಿ ಉಪ್ಪಿಟ್ಟು!
ಬೆಳಗ್ಗೆ ತಿಂಡಿಯ ಸಮಯದಲ್ಲಿ ನೀವು ಬಹಳಷ್ಟು ಬಾರಿ ರುಚಿ ರುಚಿಯ ತಿಂಡಿಯನ್ನು ಮಾಡಲು ಬಯಸುತ್ತೀರಿ. ಅದ್ರಲ್ಲು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ರುಚಿ ರುಚಿಯ ತಿಂಡಿಗಳು ಅಂದ್ರೆ ಇಷ್ಟವಾಗುತ್ತೆ. ಹಾಗೆ ಮಧ್ಯಾಹ್ನದ ಬಾಕ್ಸ್ಗಾಗಿಯೂ ನೀವು ತಿಂಡಿ ಮಾಡಬೇಕಾಗಿದ್ದರೆ ಎರಡು ಸಮಯದಲ್ಲಿ ಸವಿಯಲು ಇಷ್ಟವಾಗುವ ತಿಂಡಿಗಳ ಮಾಡುವುದು ಸಹಜ.
ಇಂತಹ ತಿಂಡಿಗಳಲ್ಲಿ ಉಪ್ಪಿಟ್ಟು ಕೂಡ ಒಂದು. ನೀವು ತಿಂಡಿಯ ಸಮಯದಲ್ಲಿ ಮಾಡುವ ಉಪ್ಪಿಟ್ಟನ್ನು ಮಧ್ಯಾಹ್ನದ ಊಟದ ಸಮಯಕ್ಕೆ ಬಾಕ್ಸ್ನಲ್ಲಿ ಸವಿಯಬಹುದು. ಆದ್ರೆ ಕೆಲವರಿಗೆ ಉಪ್ಪಿಟ್ಟು ಸವಿಯೋದು ಅಂದ್ರೆ ಇಷ್ಟವಾಗಲ್ಲ. ಉಪ್ಪಿನಲ್ಲಿ ಹಲವು ಬಗೆಗಳಿವೆ. ನೀವು ವಿಶೇಷ ರೀತಿಯ ಉಪ್ಪಿಟ್ಟು ಮಾಡಿದ್ರೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ.
ಆದ್ರೆ ಉಪ್ಪಿಟ್ಟನ್ನು ಎಲ್ಲರಿಗೂ ಇಷ್ಟವಾಗುವಂತೆ ರುಚಿ ರುಚಿಯಾಗಿ ಮಾಡಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ತರಕಾರಿ ಉಪ್ಪಿಟ್ಟು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಪಲಾವ್ನಂತೆ ಉಪ್ಪಿಟ್ಟಿಗೂ ಕೂಡ ರುಚಿ ರುಚಿಯಾದ ತರಕಾರಿಗಳ ಬಳಸಿಕೊಂಡು ಮಾಡಬಹುದು. ಹಾಗಾದ್ರೆ ತರಕಾಿ ಉಪ್ಪಿಟ್ಟು ಮಾಡುವ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ತರಕಾರಿ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
- ಉಪ್ಪಿಟ್ಟು ರವೆ
- ಬಟಾಣಿ
- ಕ್ಯಾರೆಟ್
- ಬೀನ್ಸ್
- ಉದ್ದಿನ ಬೇಳೆ
- ಕಡಲೆ ಬೇಳೆ
- ನಿಂಬೆ ರಸ
- ತೆಂಗಿನ ಕಾಯಿ ತುರಿ
- ತುಪ್ಪ
- ಎಣ್ಣೆ
- ಕರಿಬೇವು
- ಸಾಸಿವೆ
- ಉಪ್ಪು
- ಹಸಿ ಮೆಣಸು
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಗೋಡಂಬಿ ಇದ್ದರೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 1 ನಿಮಿಷದ ಬಳಿಕ ಹಸಿ ಮೆಣಸು, ಶುಂಠಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಚಿಟಿಕೆ ಇಂಗು ಹಾಕಿ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿ ಫ್ರೈ ಮಾಡಿ.
ಈಗ ಕತ್ತರಿಸಿಕೊಂಡಿರುವ ತರಕಾರಿ ಹಾಕಬೇಕು. ಕ್ಯಾರೆಟ್, ಬೀನ್ಸ್, ಬಟಾಣಿ, ಹಾಗೆ ನಿಮಗೆ ಇಷ್ಟವಾಗುವ ತರಕಾರಿಗಳನ್ನು ಈ ಉಪ್ಪಿಟ್ಟು ಮಾಡುವಾಗ ಬಳಸಬಹುದು. ಈ ತರಕಾರಿಗಳು ಚೆನ್ನಾಗಿ ಫ್ರೈ ಆಗಬೇಕು. ಈಗ ಒಂದು ಕಪ್ನಲ್ಲಿ ಉಪ್ಪಿಟ್ಟು ರವೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ.
4ರಿಂದ 5 ನಿಮಿಷ ಹುರಿದ ಬಳಿಕ ಅಳತೆ ಕಪ್ನಲ್ಲಿ ಮೂರು ಕಪ್ ಬಿಸಿ ಬೀರು ಹಾಕಬೇಕು. ನೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಕಾಯಿ ತುರಿ, ನಿಂಬೆ ರಸ, ತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. ನಿಧಾನಕ್ಕೆ ಗಟ್ಟಿಯಾಗುವಾಗ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬಿಡಿ.
ಇದು ಮೃದುವಾಗಿದ್ದಾಗಲೇ ಒಲೆ ಆಫ್ ಮಾಡಿ ಆದ್ರೆ ಮುಚ್ಚಳ ತೆಗೆಯದೆ ಇಟ್ಟುಬಿಡಿ. 1 ನಿಮಿಷ ಹಾಗೆಯೇ ಬಿಟ್ಟು ಮುಚ್ಚಳ ತೆರೆದು ಒಮ್ಮೆ ಮಿಕ್ಸ್ ಮಾಡಿ ಸವಿಯಲು ಬೀಡಿ. ಇದು ಬಿಸಿ ಬಿಸಿ ಇದ್ದಾಗಲೇ ಸವೊಯಲು ಬಹಳ ರುಚಿ ನೀಡಲಿದೆ. ನೀವು ಸಹ ಈ ವಿಧಾನದಲ್ಲಿ ಉಪ್ಪಿಟ್ಟು ಮಾಡಿ ಸವಿದು ನೋಡಿ. ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗೆ ಎಲ್ಲರು ಈ ಉಪ್ಪಿಟ್ಟು ಸವಿಯಲು ಇಷ್ಟಪಡುತ್ತಾರೆ.



Click it and Unblock the Notifications
