Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲೂ ಶೀತ ಕಾಡುತ್ತಿದ್ಯಾ..? ಈ ಜೀರಿಗೆ ರಸಂ ಮಾಡಿ ಸವಿಯಿರಿ..!!
ಬೇಸಿಗೆ ಆರಂಭದಲ್ಲಿ ಹಲವು ರೀತಿ ಅನಾರೋಗ್ಯ ಸಮಸ್ಯೆ ಎದುರಿಸುವುದು ಕಾಮನ್, ಅದ್ರಲ್ಲೂ ವಾತಾವರಣ ನಿತ್ಯ ಬದಲಾಗುವುದರಿಂದ ನಿಮ್ಮ ಆರೋಗ್ಯ ಕೂಡ ಬದಲಾಗುತ್ತಿರುತ್ತೆ. ಬೇಸಿಗೆಯ ನಡುವೆಯು ಹಲವು ರೀತಿಯ ಹಾಗೆ ಆರಂಭದಲ್ಲಿ ಒಂದಿಷ್ಟು ಅನಾರೋಗ್ಯ ಕಾಡುವುದು ನೋಡಬಹುದು. ಅದರಲ್ಲೂ ನೀವು ಶೀತ ಹಾಗೂ ಒಣ ಕೆಮ್ಮಿನಂತಹ ಸಮಸ್ಯೆಗೆ ಒಳಗಾಗುವುದು ನೋಡಬಹುದು.
ಈ ರೀತಿಯ ಸಮಸ್ಯೆಗೆ ಮನೆಯಲ್ಲೇ ಪರಿಹಾರ ಅಂದ್ರೆ ಅದು ಜೀರಿಗೆ ರಸ. ನೀವು ಊಟದ ಜೊತೆಗೆ ಸವಿಯಬಹುದಾದ ಈ ಜೀರಿಗೆ ರಸವು ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಇದರಿಂದ ನಿಮ್ಮ ಕಾಲೋಚಿತ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ಜೀರಿಗೆ ಎಲ್ಲಾ ಅಡುಗೆಯಲ್ಲು ಬಳಸುವುದು ಇದೇ ಕಾರಣಕ್ಕೆ.

ಜೀರಿಗೆಯಲ್ಲಿನ ಆರೋಗ್ಯಕರ ಅಂಶವು ನಿಮ್ಮ ದೇಹಕ್ಕೆ ಬಹಳ ಉತ್ತಮ. ಹೀಗಾಗಿ ಅಡುಗೆಯಲ್ಲಿ ಹೆಚ್ಚಾಗಿ ಜೀರಿಗೆ ಬಳಸುವುದು ನೋಡಬಹುದು. ಹಾಗಾದ್ರೆ ಜೀರಿಗೆ ರಸ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಜೀರಿಗೆ ರಸ ಮಾಡಲು ಬೇಕಾಗುವ ವಸ್ತುಗಳು
- ಜೀರಿಗೆ
- ತೊಗರಿಬೇಳೆ
- ಒಣ ಮೆಣಸು
- ಬ್ಯಾಡಗಿ ಮೆಣಸಿನಕಾಯಿ
- ಟೊಮೊಟೊ
- ಹುಣಸೆಹಣ್ಣು
- ಸಾಸಿವೆ
- ಇಂಗು
- ಬೆಳ್ಳುಳ್ಳಿ
- ಅರಿಶಿನ ಪುಡಿ
- ಬೆಲ್ಲ
- ಕೊತ್ತಂಬರಿ ಸೊಪ್ಪು
- ಕರಿಬೇವಿನ ಸೊಪ್ಪು
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ
ಜೀರಿಗೆ ರಸ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ ನೀರು ಹಾಕಿ ಅದಕ್ಕೆ ಜಿರಿಗೆ, ಒಣ ಮೆಣಸು, ಬ್ಯಾಡಗಿ ಮೆಣಸು, ತೊಗರಿ ಬೇಳೆ ಹಾಕಿ ನೀರು ಹಾಕಿ ನೆನೆಸಿಡಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟು ಬಳಿಕ ಅದನ್ನು ತೆಗೆದು ನೀರು ಸಮೇತವಾಗಿ ಒಂದು ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ಖಾರದಂತೆ ರುಬ್ಬಿಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಇಂಗು, ಜಜ್ಜಿರುವ ಬೆಳ್ಳುಳ್ಳಿ, ಕರಿಬೇವು ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ನಂತರ ಇದಕ್ಕೆ ಒಂದು ಟೊಮೆಟೋ ಹಾಕಿ 2 ನಿಮಿಷ ಫ್ರೈ ಮಾಡಿ, ಅನಂತರ ರುಬ್ಬಿಕೊಂಡಿದ್ದ ಪೇಸ್ಟ್ ಇದಕ್ಕೆ ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
ಈಗ ಹುಣಸೆ ಹಣ್ಣಿನ ಹುಳಿಯನ್ನು ಹಾಕಿಕೊಳ್ಳಿ. ಹಾಗೆ ಅರಶಿಣ ಪುಡಿ, ಬೆಲ್ಲದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಅರ್ಧ ಲೀಟರ್ ನೀರು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ಮುಚ್ಚಳ ಮುಚ್ಚಿ ಕುದಿಬರಲು ಬಿಡಬೇಕು.
ಸಣ್ಣ ಉರಿಯಲ್ಲಿ ಕುದಿ ಬರಲು ಬಿಟ್ಟು 4ರಿಂದ 5 ನಿಮಿಷದಲ್ಲಿ ಜೀರಿಗೆ ರಸಂ ಆಗುತ್ತದೆ. ಕೊನೆಯದಾಗಿ ಇದಕ್ಕೆ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪುನ್ನು ಹಾಕಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಘಮ ಘಮ ಎನ್ನುವಂತಹ ಜೀರಿಗೆ ರಸಂ ರೆಡಿಯಾಗುತ್ತದೆ. ಇದನ್ನು ಊಟದ ಜೊತೆಗೆ ಸವಿಯಲು ನೀಡಿದರೆ ಬಹಳ ರುಚಿ ನೀಡಲಿದೆ. ಹಾಗೆ ನಿಮ್ಮ ಆರೋಗ್ಯಕ್ಕೂ ಕೂಡ ಬಹಳ ಉತ್ತಮ ಸಾರು ಇದಾಗಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಬಹಳ ಸುಲಭವಾಗಿ ಮಾಡಿ ಮುಗಿಸಬಹುದಾದ ರೆಸಿಪಿ ಇದು.
ಇದಕ್ಕೆ ನೀವು ಈರುಳ್ಳಿ ಬಳಸದೆ ಮಾಡುವುದರಿಂದ ರುಚಿ ಕೂಡ ಅದ್ಭುತವಾಗಿರುತ್ತೆ. ಊಟದ ಜೊತೆಗೆ ಮಾತ್ರವಲ್ಲ ಹಾಗೆ ಒಂದು ಲೋಟಕ್ಕೆ ಹಾಕಿಕೊಂಡು ಕುಡಿಯಬಹುದು, ಇದು ಶೀತ, ಕೆಮ್ಮು, ಒಣ ಕೆಮ್ಮಿನಂತಹ ಸಮಸ್ಯೆಗಳ ನಿವಾರಣೆಗೆ ಅದ್ಭುತ ಪರಿಹಾರವಾಗಿದೆ.



Click it and Unblock the Notifications