Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುರುಳಿಕಾಳಿನ ಚಟ್ನಿ: ಸಿಂಪಲ್ ರೆಸಿಪಿ, ಆದರೆ ರುಚಿ ಸಿಂಪಲ್ ಅಲ್ವೇ ಅಲ್ಲ
ನೀವು ಹುರುಳಿಕಾಳಿನ ಚಟ್ನಿ ಮಾಡಿದ್ದೀರಾ, ಇಲ್ಲಾಂದ್ರೆ ಟ್ರೈ ಮಾಡಿ ನೋಡಿ, ಸೂಪರ್ ರುಚಿಯಾಗಿರುತ್ತೆ, ಅಲ್ಲದೆ ಈ ಚಟ್ನಿಯಿಂದ ಆರೋಗ್ಯಕ್ಕೂ ಅಷ್ಟೊಂದು ಪ್ರಯೋಜನಗಳಿವೆ. ಈ ಚಟ್ನಿ ರೆಸಿಪಿ ಸಿಂಪಲ್ ಆದರೆ ಟೇಸ್ಟ್ ಅಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ತೆಂಗಿನ ತುರಿ
1/4ಕಪ್ ಹುರುಳಿಕಾಳು
(ಹುರುಳಿಕಾಳನ್ನು ನೀವು ತೊಳೆದು ಒಣಗಿಸಿ ಇಟ್ಟಿರಿ)
ಸ್ವಲ್ಪ ಹುಣಸೆ ಹಣ್ಣು (ಹುಣಸೆಹಣ್ಣಿನ ಬೀಜದ ಗಾತ್ರದಷ್ಟು ಎರಡು ಸಲ ಹಾಕಿದರೆ
ಸಾಕಾಗುತ್ತೆ)
3-4 ಹಸಿ ಮೆಣಸು
1 ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಹುರುಳಿಕಾಳನ್ನು ಒಂದು ತವಾದಲ್ಲಿ ಹಾಕಿ ರೋಸ್ಟ್ ಮಾಡಿ,ಹುರುಳಿ ಕಾಳು
ಹುರಿದಾಗ ಒಳ್ಳೆಯ ಸುವಾಸನೆ ಬರುತ್ತದೆ ಅಲ್ಲಿಯವರೆಗೆ ರೋಸ್ಟ್ ಮಾಡಿ.
ಈಗ ಅದನ್ನು ಮಿಕ್ಸಿ ಜಾರ್ಗೆ ಸೇರಿಸಿ
ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು, ಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆ ಹಾಕಿದರೆ ಹುರುಳಿಕಾಳಿನ ಚಟ್ನಿ ರೆಡಿ.
ಇತರ ಸಲಹೆ
ಹುರುಳಿಕಾಳಿನ ಚಟ್ನಿಗೆ ನೀವು ಹಸಿ ಮೆಣಸು ಬದಲಿಗೆ ಒಣ ಮೆಣಸು ಹಾಕಬಹುದು.
ಈ ಚಟ್ನಿ ಗಂಜಿ ಅಥವಾ ಅನ್ನಕ್ಕೆ ತರಿತರಿ ರುಬ್ಬಿದರೆ ಚೆನ್ನಾಗಿರುತ್ತದೆ.
ದೋಸೆ, ಇಡ್ಲಿಗೆ ನುಣ್ಣನೆ ರುಬ್ಬಿ
ಹುರುಳಿಕಾಳಿನ ಪ್ರಯೋಜನಗಳು
ಹುರುಳಿಕಾಳಿಗೆ ಮಧುಮೇಹ ನಿಯಂತ್ರಿಸುವ ಶಕ್ತಿ ಇದೆ
ಇದು ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ
ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
ಇದರಲ್ಲಿ Antioxidants ಅಧಿಕವಿದೆ: ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ.
ಮೂತ್ರ ಚೆನ್ನಾಗಿ ಹೋಗಲು ಸಹಾಯ ಮಾಡುತ್ತದೆ: ವಾರಕ್ಕೆ ಎರಡು ಬಾರಿಯಾದರೂ
ಹುರುಳಿಕಾಳು ಸೇವಿಸಬೇಕು, ಇದು ಮೂತ್ರದ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಾಯ
ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ಅಸ್ತಮಾ ರೋಗಿಗಳಿಗೆ ಒಳ್ಳೆಯದು: ಹುರುಳಿಕಾಳು ಅಸ್ತಮಾ ರೋಗಿಗಳಿಗೆ ತುಂಬಾನೇ
ಪ್ರಯೋಜನಕಾರಿ, ಇದು ಉಸಿರಟದ ತೊಂದರೆ ಉಂಟಾಗದಂತೆ ತಡೆಗಟ್ಟಲು ಸಹಾಯ
ಮಾಡುತ್ತದೆ.



Click it and Unblock the Notifications