Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಿಹಿ ಅಲ್ಲ, ಖಾರ! ದಿಲ್ಲಿ ಫೇಮಸ್ ರಾಮ ಲಡ್ಡು.. ಮಾಡೋದು ಹೇಗೆ ಗೊತ್ತಾ?
ಇದು ಸಿಹಿ ಅಲ್ಲ, ಖಾರದ ಲಡ್ಡು. ರಾಷ್ಟ್ರ ರಾಜಧಾನಿ ದೆಹಲಿಯ ತುಂಬಾನೇ ಫೇಮಸ್ ಇದು. ಒಮ್ಮೆ ರುಚಿ ನೋಡಿದ ಬಳಿಕ, ಜನರು ಇದರ ಬಗ್ಗೆ ಮತ್ತೆ ಮಾತನಾಡದೇ ಇರಲು ಸಾಧ್ಯವಿಲ್ಲ. ಹೌದು, ನೀವು ಎಂದಾದರೂ ಸಿಹಿ ಲಡ್ಡು ಬದಲಿಗೆ ಖಾರವಾದ ಲಡ್ಡು ಮಾಡಿದ್ದೀರಾ? ಒಮ್ಮೆ ಸಿಹಿ ಲಡ್ಡುಗಳ ಬದಲಿಗೆ ಖಾರದ ಲಡ್ಡುಗಳನ್ನು ಟ್ರೈ ಮಾಡಿ. ಹೆಸರು ಬೇಳೆ, ಬಂಗಾಳ ಕಡಲೆ ಬೇಳೆ ಮತ್ತು ಉದ್ದಿನ ಬೇಳೆ ಬಳಸಿ ಈ ಲಡ್ಡು ತಯಾರಿಸಬಹುದು. ಅದುವೇ, ರಾಮ ಲಡ್ಡು (Ram Laddu). ಬನ್ನಿ, ಮನೆಯಲ್ಲಿ ರಾಮ ಲಡ್ಡುವನ್ನು ಹೇಗೆ ತಯಾರಿಸಬೇಕು ಅನ್ನೋದನ್ನು ನೋಡೋಣ.
ಲಡ್ಡು ಎಲ್ಲರಿಗೂ ಇಷ್ಟ. ಆದರೆ, ದೆಹಲಿಯ ಬೀದಿಗಳಲ್ಲಿ ಸಿಗುವ ಈ ರಾಮ ಲಡ್ಡು ಬಹಳ ಪ್ರಸಿದ್ಧ. ಈ ಬಗ್ಗೆ ನಿಮಗೆ ತಿಳಿದಿದೆಯೇ? ಇದನ್ನು ತಿನ್ನಲು ಜನರು ದೂರದೂರದಿಂದ ಬರುತ್ತಾರೆ. ಈ ಲಡ್ಡುವಿನ ವಿಶೇಷವೆಂದರೆ, ಇದು ಉಪ್ಪಾಗಿರುತ್ತದೆ. ಜನರು ಇದನ್ನು ಹಸಿರು ಚಟ್ನಿಯೊಂದಿಗೆ ಬಾಯಿ ಚಪ್ಪರಿಸುತ್ತಾ ತಿನ್ನುತ್ತಾರೆ. ಇದರಲ್ಲಿ ಮೂಲಂಗಿಯನ್ನು ಬಳಸಲಾಗುತ್ತದೆ. ಮಕ್ಕಳು ಸಹ ಇದನ್ನು ತುಂಬಾ ಇಷ್ಟಪಡುತ್ತಾರೆ. ರಾಮ ಲಡ್ಡು (Ram Laddu Recipe) ತಯಾರಿಸಲು ಬೇಕಾಗುವ ಸಾಮಗ್ರಿಗಳು ಮತ್ತು ಸುಲಭ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.

ರಾಮ ಲಡ್ಡು ತಯಾರಿಸಲು ಬೇಕಾಗುವ ಪದಾರ್ಥಗಳು
• ಹೆಸರು ಬೇಳೆ - ¾ ಕಪ್
• ಕಡಲೆ ಬೇಳೆ - ¼ ಕಪ್
• ಉದ್ದಿನ ಬೇಳೆ - 1 ಸ್ಪೂನ್
• ಹಸಿ ಮೆಣಸಿನಕಾಯಿ - 4
• ಮಾವಿನ ಪುಡಿ - 2 ಚಿಟಿಕೆ
• ನೀರು - ಅಗತ್ಯಕ್ಕೆ ತಕ್ಕಂತೆ
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ - ಹುರಿಯಲು
ತುರಿಯಲು ಮತ್ತು ಚಟ್ನಿ ಮಾಡಲು
• ಮೂಲಂಗಿ ಎಲೆಗಳು - 1 ಕಪ್
• ನಿಂಬೆ ರಸ - 1 ಸ್ಪೂನ್
• ಹಸಿ ಮೆಣಸಿನಕಾಯಿ - 5
• ಕೊತ್ತಂಬರಿ ಸೊಪ್ಪು - ಸ್ವಲ್ಪ (¼ ಕಪ್)
• ಪುದೀನ ಎಲೆಗಳು - ¼ ಕಪ್
• ಸೇವ್ - ½ ಕಪ್
• ನೀರು - ಅಗತ್ಯಕ್ಕೆ ತಕ್ಕಂತೆ
ರಾಮ ಲಡ್ಡು ತಯಾರಿಸುವ ವಿಧಾನ
ಮೊದಲು, ಬ್ಯಾಟರ್ ತಯಾರಿಸಬೇಕು. ಹೆಸರು ಬೇಳೆ, ಉದ್ದಿನ ಬೇಳೆ, ಕಡಲೆ ಬೇಳೆಯನ್ನು ರಾತ್ರಿ ನೆನೆಯಲು ಬಿಡಿ. ಬಳಿಕ ಅದನ್ನು ಮಿಕ್ಸರ್ನಲ್ಲಿ ಹಾಕಿ ಪೇಸ್ಟ್ ತಯಾರಿಸಬೇಕು. ಇದು ತುಂಬಾ ತೆಳ್ಳಗಾಗಲಿ ಅಥವಾ ಹೆಚ್ಚು ದಪ್ಪವಾಗಲಿ ಇರಬಾರದು. ಇದಾದ ಬಳಿಕ, ಅದು ಮೃದುವಾಗುವವರೆಗೆ ನೀವು ಬಿಡಬೇಕು. ಮೃದುವಾದ ನಂತರ, ಅದು ಊದಿಕೊಳ್ಳಲು ಪ್ರಾರಂಭಿಸುತ್ತದೆ. ಆಗ ನೀವು ಅದನ್ನು ಪಕ್ಕಕ್ಕೆ ಇಡಿ.

ಈ ಹಸಿರು ಚಟ್ನಿ ತಯಾರಿಸಬೇಕು. ಕೊತ್ತಂಬರಿ ಸೊಪ್ಪು ಮತ್ತು ಪುದೀನ ಎಲೆಗಳನ್ನು ಚೆನ್ನಾಗಿ ತೊಳೆದು ಮಿಕ್ಸರ್ಗೆ ಹಾಕಿ. ಈಗ ಅದಕ್ಕೆ ಹಸಿ ಮೆಣಸಿನಕಾಯಿ, ನಿಂಬೆ ರಸ, ಉಪ್ಪು ಮತ್ತು ನೀರು ಹಾಕಿ ಚಟ್ನಿ ಮಾಡಿ. ಚಟ್ನಿ ಸಿದ್ಧವಾದಾಗ, ಅದಕ್ಕೆ ಒಂದು ಚಿಟಿಕೆ ಒಣ ಮಾವಿನ ಪುಡಿ ಹಾಕಿ, ಪಕ್ಕಕ್ಕೆ ಇಡಿ. ಚಟ್ನಿ ತಯಾರಿಸಿದ ಬಳಿಕ, ಮೊದಲು ರಾಮ ಲಡ್ಡು ತಯಾರಿಸಲು ತುರಿದ ಮೂಲಂಗಿಯನ್ನು ತಯಾರಿಸಿಕೊಳ್ಳಿ. ಇದಕ್ಕಾಗಿ, ಮೂಲಂಗಿಯ ಎಲೆಗಳನ್ನು ಬಿಡಿಸಿ. ಬಳಿಕ ಅದರ ಸಿಪ್ಪೆ ತೆಗೆದು ತುರಿಯುವ ಮಣೆಯಲ್ಲಿ ತೆಳುವಾಗಿ ತುರಿದುಕೊಳ್ಳಿ. ಮೂಲಂಗಿ ಜೊತೆಗೆ, ಚಟ್ನಿಯನ್ನು ಸಹ ಇದರಲ್ಲಿ ಬಳಸಲಾಗುತ್ತದೆ.
ಲಡ್ಡುಗಳನ್ನು ತಯಾರಿಸಿ
ಗ್ಯಾಸ್ ಮೇಲೆ ಬಾಣಲೆ ಇಟ್ಟು ಬಿಸಿ ಮಾಡಿ. ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಇದು ಬಿಸಿಯಾದಾಗ, ರುಬ್ಬಿದ ಬೇಳೆಗೆ ಉಪ್ಪು ಮತ್ತು 1 ಸ್ಪೂನ್ ಹಸಿರು ಚಟ್ನಿ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ ಬಿಸಿಯಾದ ಬಳಿಕ, ಅದರಲ್ಲಿ ಸಣ್ಣ ಸಣ್ಣ ಬೇಳೆ ಉಂಡೆಗಳನ್ನು ಮಾಡಿ. ಅವು ಗೋಲ್ಡನ್ ಕಲರ್ ಬರುವವರೆಗೆ ಫ್ರೈ ಮಾಡಿ. ಇದಾದ ಬಳಿಕ, ಅದನ್ನು ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ಬಿಡಿ. ಅದನ್ನು ನೀರಿನಿಂದ ತೆಗೆದು ಹಿಂಡಿ. ಹಸಿರು ಚಟ್ನಿ ಮತ್ತು ತುರಿದ ಮೂಲಂಗಿಯನ್ನು ಹಾಕಿ. ಇಷ್ಟು ಮಾಡಿದರೆ, ರಾಮ ಲಡ್ಡು ತಯಾರಾಗುತ್ತದೆ.



Click it and Unblock the Notifications